ಶ್ರೀ ವೀರಶೈವ ಲಿಂಗಾಯತ ಸಂಘದ ಚುನಾವಣೆ ಐದು ಸ್ಥಾನಗಳಿಗೆ ನಡೆಯಿತು. ಚುನಾವಣೆ ಎಂಬ ಗಿಮಿಕ್ ನಲ್ಲಿ ನಕಲಿ ಮತದಾರರ ಹಾವಳಿ ಎದ್ದು ಕಾಣುತ್ತಿತ್ತು.
ಗೆಲ್ಲುವ ಕುದುರೆಗಳು ಅಖಾಡದಲ್ಲಿ ಇದ್ದರು ನಕಲಿ ಮತದಾನ ಮಾಡುವ ಅವಶ್ಯಕತೆ ಇತ್ತಾ ಎಂದು ಪ್ರಶ್ನೆ ಮಾಡುವವರಿಗೆ ಕೋರ್ಟ್ ಗೆ ಹೋಗಿ ಎಂಬ ಉಡಾಪೆ ಉತ್ತರ ಸುಲುಭವಾಗಿ ಹೇಳುತ್ತಿದ್ದ ಪದಾಧಿಕಾರಿಗಳ ಮಾತುಗಳು ಹೇಸಿಗೆ ತಿನ್ನುವ ಜನರಿಗೆ ಬುದ್ದಿ ಹೇಳಬಾರದು ಎನ್ನಿಸಿತು ಎಂದು ಹೇಳಲಾಗುತ್ತಿದೆ.
ಸಂಘದ ಗುತ್ತಿಗೆ ಹಿಡಿದವರು ದೊಡ್ಡ ಮನುಷ್ಯರಂತೆ ಮಾತನಾಡಿ ಇಷ್ಟು ಕೆಳಮಟ್ಟಕ್ಕೆ ಇಳಿದಿದ್ದು ನೋಡಿದರೆ ಸಂಘ ಮತ್ತು ಸಂಘದ ಸದಸ್ಯರು ಲೆಕ್ಕವಿಲ್ಲ ಎನ್ನುವಂತೆ ಇತ್ತು ಎಂದು ಹಲವರು ದೂರಿದ್ದಾರೆ.
372 ಸಂಖ್ಯೆಯ ಮತದಾರ ಸದಾನಂದ ಎಂಬುವರ ಮತವನ್ನು ಇನ್ನೊಬ್ಬ ಸದಾನಂದ ಎಂಬುವರು ಮತ ಚಲಾಯಿಸಿದ್ದು ಇದನ್ನು ಕೇಳಿದರೆ ಏನು ಮಾಡಲು ಸಾಧ್ಯವಿಲ್ಲ ಎಂದು ಚುನಾವಣಾ ಅಧಿಕಾರಿ ಉಡಾಪೆಯ ಉತ್ತರಕ್ಕೆ ಬಹುಮಾನ ಕೊಡಬೇಕು. ಇವರಿಗೆ ಕೋಲು ಹೊಯ್ಯುವ ಪದಾಧಿಕಾರಿಗಳು ಹೇಗಾದರೂ ಸರಿ ನಾವು ಗೆಲ್ಲ ಬೇಕೆಂಬ ಜನರು ಪಾಚಿ ಕಟ್ಟಿಕೊಂಡು ಓಡಾಡುತ್ತಿದ್ದರು.
ಅಂಬಳೆ ಕ್ಷೇತ್ರದಲ್ಲಿ ವಿಜಯಕುಮಾರ್ ಮತ್ತು ಯೋಗೀಶ್ ಮಧ್ಯೆ ಸ್ಪರ್ಧೆ ಮಾನವಂತರು ಒಪ್ಪಲು ಸಾಧ್ಯವಿಲ್ಲ. ಮೂರರಿಂದ ನಾಲ್ಕು ಸಾವಿರ ಹಣ ಹಂಚಿ ಚುನಾವಣೆ ನಡೆಸಿದ್ದು ನೋಡಿದರೆ ಅಸಹ್ಯ ಹುಟ್ಟಿಸುತ್ತದೆ ಎಂದು ಅಳಲು ತೊಡಿ ಕೊಳ್ಳುತ್ತಿದ್ದರು. ಇಂತಹ ಪರಿಸ್ಥಿತಿ ಸಂಘಗಳಿಗೆ ಬಂದು ನಿಂತಿರುವುದು ಏನು ಲಾಭ ಇರಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ.
ಒಟ್ಟಾರೆ ಸಂಘಕ್ಕೆ ಗಂಟು ಬಿದ್ದವರು ಈಗ ಸದಸ್ಯತ್ವದ ರೇಟ್ ಹೆಚ್ಚಿಸಲು ಯಾರ ಅಡಚಣೆ ಇಲ್ಲದಂತೆ ಆಗಿದೆ . ಇನ್ನೂ ಐದು ವರ್ಷಗಳು ಅರಾಧ್ಯ ಹಾರಾಟ,ಶಿವಶಂಕರ್ ಚೀರಾಟ,ಶಿವಾನಂದ ಸ್ವಾಮಿ ಕುಕಲಾಟಕ್ಕೆ ಇನ್ನುಳಿದವರು ಚಪ್ಪಾಳೆ ತಟ್ಟಲು ಆಡೆ ತಡೆ ಇಲ್ಲದಂತೆ ಆಯಿತು.
Election fraud plagues – five-year chair guarantee
Leave a comment