Home ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಡಾ.ಎ.ಎಸ್.ಶಂಕರ್ ನಾರಾಯಣ್
HomeLatest Newsnamma chikmagalurTarikere

ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಡಾ.ಎ.ಎಸ್.ಶಂಕರ್ ನಾರಾಯಣ್

Share
Share

ತರೀಕೆರೆ: ತರೀಕೆರೆ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬೆಂಗಳೂರು ಆಕಾಶ ವಾಣಿ ಕಾರ್ಯಕ್ರಮ ನಿರ್ದೇಶಕರಾದ ಡಾ.ಎ.ಎಸ್.ಶಂಕರ್ ನಾರಾಯಣ್‌ ಆಯ್ಕೆ ಮಾಡಲಾಗಿದೆ ಸಾಹಿತ್ಯ ಪರಿಷತ್ ತಡವಾಗಿಯಾದರು ಅರ್ಹರನ್ನು ಗುರ್ತಿಸಿದ್ದಾರೆ.

ಭದ್ರಾವತಿ ಆಕಾಶವಾಣಿ ಯಲ್ಲಿ ವೃತ್ತಿ ಆರಂಭಿಸಿ ತಮ್ಮ ಕಂಚಿನ ಕಂಠದಿಂದ ಹಲವು ಪ್ರತಿಭೆಗಳನ್ನು ಎಕ್ಕಿ ತೆಗೆದಿರುವುದನ್ನು ಇಂದು ಕೂಡ ಕಲಾವಿದರು, ಹೋರಾಟಗಾರರು ಸಾಹಿತಿಗಳು, ಪತ್ರಕರ್ತರು ಮತ್ತು ವಿಶೇಷವಾಗಿ ಜಾನಪದ ಕಲಾವಿದರು ಬೆಳವಣಿಗೆಗೆ ಕಾರಣರಾಗಿದ್ದಾರೆ.

ಸಪೂರ ದೇಹ ಮೃದು ಮಾತು ಸರಳತೆಯನ್ನು ಮೈಗೂಡಿಸಿಕೊಂಡಿರುವ ಶಂಕರ್ ನಾರಾಯಣ್ ಕಾರ್ಯಕ್ರಮ ನಡೆಸಿಕೊಡುವಾಗ ಕಂಚಿನ ಕಂಠದಿಂದ ಪ್ರಶ್ನೆ ಮಾಡುವಾಗ ಅವರ ಪ್ರತಿಭೆ ಅನಾವರಣಗೊಳ್ಳುತ್ತದೆ.

ಭರವಸೆ ಮೂಡಿಸುವಂತೆ ಆನೇಕ ಜಾನಪದ ಕಲಾವಿದರು ಮತ್ತು ಹಾಡುಗಾರರನ್ನು ಹುಡುಕಿ,ಹುಡುಕಿ ಆಕಾಶವಾಣಿ ಕಲಾವಿದರು ಎಂದು ಎದೆ ತಟ್ಟಿಕೊಳ್ಳುವಂತೆ ಮಾಡಿದ್ದು ಹೆಗ್ಗಳಿಕೆಯ ಕೆಲಸ.
ಕಳೆದ ಮೂವತ್ತೈದು ವರ್ಷಗಳಿಂದ ಸಾಮಾನ್ಯ ವಿಷಯಗಳಿಂದ ಹಿಡಿದು ಮಹತ್ವದ ವಿಷಯಗಳನ್ನು ತರ್ಕ ಬದ್ದವಾಗಿ ಮಂಡಿಸಿ ಆಕಾಶವಾಣಿಯನ್ನು ಆಕರ್ಷಕ ವಾಣಿಯಾಗಿಸಿದವರು.

ನವ ಮಾಧ್ಯಮಗಳು, ಪತ್ರಿಕೆಗಳ ಅಬ್ಬರದಲ್ಲಿ ಆಕಾಶವಾಣಿ ಕಥೆ ಮುಗಿಯುತ್ತದೆ ಎನ್ನುವ ದಿನಗಳಲ್ಲಿ ಹೊಸ,ಹೊಸ ಕಾರ್ಯಕ್ರಮ ಕಟ್ಟಿಕೊಟ್ಟು ಇನ್ನೂ ಆಕಾಶವಾಣಿಗೆ ಕಿವಿ ಕೊಡುವಂತಹ ಹೆಗ್ಗಳಿಕೆ ಶಂಕರ್ ನಾರಾಯಣ್ ಗೆ ಸಲ್ಲುತ್ತದೆ.

ಸುದ್ದಿ ಅಕ್ಷಯ ಪತ್ರಿಕೆ ಪ್ರಾರಂಭಿಸಿದಾಗ ತಿದ್ದಿ ತಿಡುವದರಿಂದ ಹಿಡಿದು ಕಥೆ ಕವನ ಬರೆದು ಉರಿದುಂಭಿಸಿದವರು ಅಂದಿನಿಂದ ಇಂದಿನವರೆಗೂ ಸ್ನೇಹಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳುವ ಸದ್ಗುಣಗಳನ್ನು ಹೊಂದಿರುವ ಶಂಕರ್ ನಾರಾಯಣ್ ಆಯ್ಕೆ ಗೆ ಮೆಚ್ಚಲೇ ಬೇಕು.

ಪದವೀಧರರಾಗಿ ಆಕಾಶವಾಣಿ ಸೇರದವರು ಸಾಹಿತ್ಯ ಕ್ಷೇತ್ರದ ಬಗ್ಗೆ ಹೆಚ್ಚಿನ ಒಲವು ಹೊಂದಿ “ಸ್ವಾಗತ” ಎಂಬ ಕವನ ಸಂಕಲನ ತಂದಿದ್ದಾರೆ. ಜನಪ್ರಿಯ ಕವಿ ಜಿ.ಎಸ್.ಶಿವರುದ್ರಪ್ಪರವರ “ಆಕಾಶ ದೀಪ” ಭಾನುಲಿ ಕೃತಿಗಳ ಸಂಗ್ರಹ ಮಾಡಿದ್ದಾರೆ.

ಕನ್ನಡ ಭಾನುಲಿಯಲ್ಲಿ ಭಾಷಣಕಾರರ ಬಗ್ಗೆ ಅಧ್ಯಯನ ನಡೆಸಿ ಡಾಕ್ಟರೇಟ್‌ ಪಡೆದಿದ್ದಾರೆ. ಪ್ರಚಾರಕ್ಕೆ ಎಂದು ಆಸೆ ಪಡದ ಶಂಕರ್ ನಾರಾಯಣ್ ರನ್ನು ತಡವಾಗಿ ಗುರ್ತಿಸಿದರೂ ಕೂಡ ಅರ್ಹ ಆಯ್ಕೆ ಆಗಿರುವುದು ಸಮ್ಮೇಳನಕ್ಕೆ ಮೆರಗು ತರುವುದರಲ್ಲಿ ಅನುಮಾನ ಇಲ್ಲ. ತರೀಕೆರೆ ಸಾಹಿತ್ಯ ಪರಿಷತ್ತಿಗೆ ಅಭಿನಂದನೆಗಳು. ಸಲ್ಲದವರಿಗೆ ಸಾಹಿತ್ಯ ಸಿರಿ,ಗರಿ,ಬೆಳಕು,ಕಿಂಡಿ ಎಂಬ ಪ್ರಶಸ್ತಿಗೆ ಕಡಿವಾಣ ಹಾಕುವ ಜೊತೆಗೆ ಉತ್ತಮರನ್ನು ಬೆನ್ನು ತಟ್ಟಿ.

Dr. A.S. Shankar Narayan as the President of the Sahitya Sammelan

Share

Leave a comment

Leave a Reply

Your email address will not be published. Required fields are marked *

Don't Miss

ಅಜ್ಜಂಪುರದ ಇಲಿಗೆ ‘ಹಣದ ಮೋಹ’

ಚಿಕ್ಕಮಗಳೂರು : ತುಮಕೂರಿನಲ್ಲಿ ಇತ್ತೀಚೆಗೆ ಇಲಿಯೊಂದು ಚಿನ್ನದ ಆಭರಣಗಳನ್ನು ಎಗರಿಸಿ ಸುದ್ದಿಯಾಗಿದ್ದರೆ, ಇತ್ತ ಚಿಕ್ಕಮಗಳೂರಿನಲ್ಲಿ ಮತ್ತೊಂದು ಚಾಣಾಕ್ಷ ಇಲಿ ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ಹಣವನ್ನೇ ಕದ್ದು ತನ್ನ ಸಾಮ್ರಾಜ್ಯ...

ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಹೆಸರಿನಲ್ಲಿಯೂ ನಕಲಿ ವಾಟ್ಸಪ್ ಖಾತೆ

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಹ್ಯಾಕರ್‌ಗಳು ಮತ್ತು ವಂಚಕರು ವಾಟ್ಸಪ್, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರನ್ನು...

Related Articles

ಮುಳ್ಳಯ್ಯನಗಿರಿ ಕ್ರಾಸ್ ಬಳಿ ಟಿಟಿ ವಾಹನ ಮರಕ್ಕೆ ಡಿಕ್ಕಿ

ಚಿಕ್ಕಮಗಳೂರು: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಕ್ರಾಸ್ ಬಳಿ ಶುಕ್ರವಾರ ಇನೋವಾ ಕಾರು ನಿಯಂತ್ರಣ...

ಹಾಸ್ಟೆಲ್‌ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು: ಸಮಗ್ರ ಗಿರಿಜನ ಕಲ್ಯಾಣ ಇಲಾಖೆ (ಐಟಿಡಿಪಿ) ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ...

ಮನೆಯ ಮೇಲ್ಛಾವಣಿಯ ಹೆಂಚು ತೆಗೆದು ನುಗ್ಗಿ ಸರಗಳ್ಳತನ

ನರಸಿಂಹರಾಜಪುರ: ಮನೆಯಲ್ಲಿ ದಂಪತಿ ಮಲಗಿದ್ದ ವೇಳೆ ಮೇಲ್ಛಾವಣಿಯ ಹೆಂಚು ತೆಗೆದು ಒಳನುಗ್ಗಿದ ಕಳ್ಳನೊಬ್ಬ ಮಹಿಳೆಯ ಕೊರಳಿನಲ್ಲಿದ್ದ...

ಕನಸು ಫೈನಾನ್ಸ್ ಹೆಸರಿನಲ್ಲಿ ₹1.60 ಲಕ್ಷ ವಂಚನೆ ಆರೋಪ

ಕಡೂರು: ಪ್ರತಿದಿನ ಉಳಿತಾಯದ ಹಣವನ್ನು ಸ್ವೀಕರಿಸಿ ಶೇ.7ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ, ಹಣವನ್ನು ವಾಪಸ್ ನೀಡದೆ...