ಚಿಕ್ಕಮಗಳೂರು : 2004 ರಿಂದ 2024 ರವರೆಗೆ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಬೇರೆ ಜಿಲ್ಲೆಯವರು ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಬಂದು ಹೋಗುತ್ತಿದ್ದಾರೆ.
1998 ರಿಂದ2004 ರವರೆಗೆ ಡಿ.ಬಿ.ಚಂದ್ರೇಗೌಡರು ಉಸ್ತುವಾರಿ ಸಚಿವರಾದ ನಂತರ ಜಿಲ್ಲೆಯ ಜೀವರಾಜ್ ಮತ್ತು ಸಿ.ಟಿ.ರವಿ ತಿಂಗಳುಗಳ ಲೆಕ್ಕದಲ್ಲಿ ಉಸ್ತುವಾರಿಯಾಗಿದ್ದರು.
2004ರಲ್ಲಿ ಹಾಸನ ಜಿಲ್ಲೆಯ ಗಂಡಸಿ ಶಿವರಾಂ ಜಿಲ್ಲಾಉಸ್ತುವಾರಿ ಸಚಿವರದಾಗಿನಿಂದ ಇಲ್ಲಿಯವರೆಗೆ ಬೇರೆ ಜಿಲ್ಲೆಯವರು ಸಚಿವರಾಗಿ ನೆಂಟರು ಹಬ್ಬಕ್ಕೆ ಬಂದು ಹೋದಂತೆ ಬರುತ್ತಾರೆ ಹೋಗುತ್ತಾರೆ.
ಕಳೆದ ಒಂದುವರೆ ವರ್ಷದಿಂದ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆ.ಜೆ.ಜಾರ್ಜ್ ಬಂದು ಹೋಗುತ್ತಿದ್ದಾರೆ.ಕಳೆದ ಸ್ವಾತಂತ್ರ್ಯ ದಿನಾಚರಣೆ ಬಾವುಟ ಹಾರಿಸಿ ಹೋದವರು ಕನ್ನಡ ರಾಜ್ಯೋತ್ಸವದ ಬಾವುಟ ಹಾರಿಸಲು ಬರುತ್ತಿದ್ದಾರೆ ಎಂಬ ಮಾಹಿತಿ ಇದೆ.
ಕಾಟಚಾರಕ್ಕೆನಡೆಯುವ ಕೆಡಿಪಿ ಸಭೆ ಬಿಟ್ಟರೆ ಬೇರೇನೂ ಕೆಳ ಬೇಡಿ ಜಿಲ್ಲೆಯಲ್ಲಿ ಸಮಸ್ಯೆ ಗಳ ಸರಮಾಲೆಗಳಿದ್ದು ಭೂಕುಸಿತ, ಒತ್ತುವರಿ ಸಮಸ್ಯೆ, ಕಸ್ತೂರಿ ರಂಗನ್ ವರದಿ ಎಂಬ ಭೂತ ಕಾಡುತ್ತಿದೆ,ಕಾಫಿ ಬೆಳೆಗಾರರ ಸಂಕಷ್ಟ, ಅಡಿಕೆ,ತೆಂಗಿಗೆ ಇರುವ ರೋಗಬಾದೆ,ನಿವೇಶನ ರಹಿತರ ಅಳಲು ನಿನ್ನೆ ಮೊನ್ನೆಯದಲ್ಲ ಈ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ.
ಶ್ರೀಮಂತ ರಾಜಕಾರಣಿ ಯಾಗಿರುವ ಜಾರ್ಜ್ ಜಿಲ್ಲೆಯಲ್ಲಿ ಐದಾರು ಸಾವಿರ ಕಾಫಿ ತೋಟ ಹೊಂದಿದ್ದವು ಜಿಲ್ಲೆಗೆ ಬರಬೇಕಾದರೆ ಹೆಲಿಕ್ಯಾಪ್ಟರ್ ನಲ್ಲಿ ಬಂದು ಒಂದೆರಡು ಗಂಟೆಗಳ ಕಾಲ ಸಭೆಯಲ್ಲಿ ಇದ್ದರೆ ಹೆಚ್ಚು.
ಜನರ ಸಮಸ್ಯೆಗಳನ್ನು ಕೇಳಲು ಸಮಯದ ಅಭಾವ ವಯಸ್ಸಿನ ಕಾರಣವು ಇರಬಹುದು. ಇಲ್ಲಿನ ಶಾಸಕರು ಜೈ,ಜೈ ಎನ್ನುವುದು ನೋಡಿ ಕಾಂಗ್ರೆಸ್ ಮುಖಂಡರು ಕೈ,ಕೈ ಹಿಚುಕಿಕೊಂಡು ನಿಲ್ಲುತ್ತಾರೆ.ಹೀಗಾಗಿ ಜಾರ್ಜ್ ರಿಂದ ಜಿಲ್ಲೆಗೆ ರೌಂಡಪ್ (ಕಳೆನಾಶಕ) ಅಗಿ ಹೋಗುತ್ತಿದ್ದಾರೆ.ಇನ್ನಾದರೂ ಶಾಸಕರುಗಳು ಮತ್ತು ಮುಖಂಡರು ಗಟ್ಟಿ ಮನಸ್ಸು ಮಾಡಿ ಜಿಲ್ಲೆಯ ಸಮಸ್ಯೆಗಳನ್ನು ಪರಿಹರಿಸಲು ಒತ್ತಡ ತರುವ ಜವಾಬ್ದಾರಿ ಇದೆ.ಇಲ್ಲದಿದ್ದರೆ ಬಂದ ಪುಟ್ಟ ,ಹೋದ ಪುಟ್ಟ ಆಟ ಮುಂದುವರೆಯುತ್ತದೆ.
ವಿರೋಧ ಪಕ್ಷದವರು ಮೌನ ಕೂಡ ಕಾರಣವಾಗಿದೆ.ಸಿ.ಟಿ.ರವಿ ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬರಿಸುತ್ತಾರೆ ಜಿಲ್ಲೆಗೆ ಬಂದ ತಕ್ಷಣವೇ ಧ್ವನಿ ಮೆತ್ತಗಾಗುವ ಮರ್ಮ ಗೊತ್ತಾಗುತ್ತಿಲ್ಲ ಇದು ಆಡಳಿತ ಪಕ್ಷದವರಿಗೆ ವರದಾನವಾಗಿದೆ.
Leave a comment