Home Political News ಎಸ್ ಎಲ್ ಭೋಜೇಗೌಡ ಗುಡುಗಿದರೆ ಅಧಿಕಾರಿಗಳು ನಡುಗುವರು
Political News

ಎಸ್ ಎಲ್ ಭೋಜೇಗೌಡ ಗುಡುಗಿದರೆ ಅಧಿಕಾರಿಗಳು ನಡುಗುವರು

Share
Share

ಚಿಕ್ಕಮಗಳೂರು :

ಎಸ್.ಎಲ್.ಬೋಜೇಗೌಡ ಎರಡನೇ ಭಾರಿ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತರಾಗಿ ದಾಖಲೆ ಮಾಡಿದ್ದಾರೆ.ಮಂಗಳೂರಿನವರಿಗೆ ಮಾತ್ರ ಸೀಮಿತವಾಗಿದ್ದ ಈ ಕ್ಷೇತ್ರದಲ್ಲಿ ಚಿಕ್ಕಮಗಳೂರಿನವರು ಅದರಲ್ಲೂ ಜನತಾದಳದ ಎಸ್.ಎಲ್.ಬಿ.ಜಯಭೇರಿ ಬಾರಿಸಿದ್ದು ಮಾತ್ರ ದಾಖಲೆ.

ನಗರಸಭೆ ಅಧ್ಯಕ್ಷರಾಗಿ ಅವಧಿಯನ್ನು ಮುಗಿಸದೆ ಅವಿಶ್ವಾಸದಿಂದ ಅಧಿಕಾರ ಕಳೆದುಕೊಂಡಿದ್ದ ಬೋಜೇಗೌಡ ಇನ್ನೂ ಯಾವ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದವರೇ ಹೆಚ್ಚು ವಿಧಾನ ಸಭಾ ಚುನಾವಣೆಯಲ್ಲಿ ಸೋತಿದ್ದರು ಜೊತೆಗೆ ರಾಜಕೀಯ ವಿರೋಧಿಗಳ ಪಡೆ ಇದರ ಮಧ್ಯೆ ಮಂಗಳೂರಿನ ಬುದ್ದಿವಂತ ಜನರ ಮಧ್ಯೆ ಒರಟು ನಡೆಯ ಬೋಜೇಗೌಡ ಯಶಸ್ವಿ ರಾಜಕಾರಣ ನಡೆಸುತ್ತಿರುವುದನ್ನು ಮೆಚ್ಚಲೇ ಬೇಕು.
ಕೇಂದ್ರ ಸಚಿವ ಕುಮಾರಸ್ವಾಮಿಯವರ ಒಡ್ಡೋಲಗ ಬಳಗದ ಖಾಯಂ ಸದಸ್ಯರು ಆದರೆ ಇತ್ತೀಚಿಗೆ ಅಷ್ಟಾಗಿ ಠಳಾಯಿಸುತ್ತಿಲ್ಲ ಅಂತರ ಕಾಯ್ದುಕೊಂಡಂತೆ ಕಾಣುತ್ತಿದ್ದಾರೆ.
ವೈಯುಕ್ತಿಕವಾಗಿ ರಾಜಕಾರಣದಲ್ಲಿ ಬಲಿಷ್ಠರಾದರೂ ಜಿಲ್ಲೆಯಲ್ಲಿ ಜನತಾದಳ ನೆಲಕಚ್ಚತ್ತಿರುವಾಗ ಇದಕ್ಕೂ ನನಗೂ ಸಂಬಂಧ ಇಲ್ಲವೇನೋ ಎಂಬಂತೆ ಇರುವುದು ಸೋಜಿಗದ ಸಂಗತಿ ಎನ್ನವ ಇವರ ರಾಜಕೀಯ ವಿರೋಧಿಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ.ಆಡಳಿತ ಪಕ್ಷದವರಿಗಿಂತ ಬೋಜೇಗೌಡರ ಧ್ವನಿಗೆ ಅಧಿಕಾರಿಗಳು ಮತ್ತು ಸರ್ಕಾರಿ ವ್ಯವಸ್ಥೆ ನಡುಗುವುದನ್ನು ಯಾರು ತಳ್ಳಿಹಾಕುವಂತಿಲ್ಲ.ಬಿಜೆಪಿ ಅಧಿಕಾರದಲ್ಲಿ ಇರಲಿ ಪ್ರಸ್ತುತ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ ಬೋಜೇಗೌಡರ ದಾಳಕ್ಕೆ ಮಹತ್ವ ಸಿಗುವಂತಹ ವಾತಾವರಣ ನಿರ್ಮಿಸಿಕೊಂಡಿರುವ ಬೋಜೇಗೌಡರ ಕುದುರೆನ ಕಟ್ಟಿ ಹಾಕುವ ಜೀನಾವು ಸದ್ಯಕ್ಕೆ ಸಿಗುತ್ತಿಲ್ಲ.

Share

Leave a comment

Leave a Reply

Your email address will not be published. Required fields are marked *

Don't Miss

ವೈದ್ಯರ ಬೇಜವಾಬ್ದಾರಿತನಕ್ಕೆ ಮೂರು ತಿಂಗಳ ಹಸುಗೂಸು ಸಾವು

ಚಿಕ್ಕಮಗಳೂರು: ವೈದ್ಯರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ಆರೋಪಕ್ಕೆ ಮೂರು ತಿಂಗಳ ಹಸುಗೂಸೊಂದು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಸರ್ಕಾರಿ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದೆ...

ಜಿಲ್ಲೆಯಾದ್ಯಂತ ಮೊಹರಂ ಹಬ್ಬ ಆಚರಣೆ

ಚಿಕ್ಕಮಗಳೂರು: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಮುಸ್ಲಿಮರು ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ದಾಭಕ್ತಿಯಿಂದ ಆಚರಿಸಿದರು. ಕಳೆದ ಎರಡು ದಿನಗಳಿಂದ ಉಪವಾಸವಿದ್ದ ಭಕ್ತರು ನಗರದ ಬಡಾವಣೆಗಳ ವಿವಿಧ ಮಸೀದಿಗಳಿಗೆ ಬೆಳಿಗ್ಗೆಯೇ ತೆರಳಿ...

Related Articles

ರಾಜಕಾರಣದಲ್ಲಿ ಮಠಗಳ, ಸಂಘಟನೆಗಳ “ಆರ್ಭಟ”

ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಠಗಳ ಪ್ರಭಾವ ಮತ್ತು ಸಂಘಟನೆಗಳು ಆರ್ಭಟ ಮಾಡುತ್ತಿರುವುದು ನೋಡಿದರೆ ಎತ್ತ...

ಜಿಲ್ಲೆಯಲ್ಲಿ ಗೂಟದ ಕಾರಿಗಾಗಿ “ಕೈ ಪಡೆ” ಯ ಕಸರತ್ತು !

ಚಿಕ್ಕಮಗಳೂರು: ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರಿಂದ ಉಳಿದ ಎರಡು ವರ್ಷಗಳ ಅವಧಿಗೆ ಡಿ.ಕೆ.ಮುಖ್ಯಮಂತ್ರಿಯಾಗಿ ದೇವಸ್ಥಾನ,...

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದ 13 ಸಚಿವರಿಗೆ ಖಾತೆ ಹಂಚಿಕೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಅವರು ತಮ್ಮ ಸಂಪುಟದ (Cabinet) ಮೊದಲ 13 ಸಚಿವರಿಗೆ ಖಾತೆಯನ್ನು...

ಡಿ.ಕೆ.ಗೆ ಪ್ರಾರಂಭದಲ್ಲಿ ಡಿಚ್ಚಿ ! ಹರಿ ಬ್ರೇಕ್, ಸಿದ್ದು ಸ್ಟೀರಿಂಗ್ ಯಾವ ಕಡೆ ತಿರುಗುತ್ತದೆ

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಯಾರನ್ನು ನಂಬಿದ್ದರು ಅವರೇ ಕೈ ಕೊಡುವ ಸೂಚನೆ ಅರಿತು ರಾಹುಲ್...