Home Latest News ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಿಗೆ ಬಂಪರ್ ಫಾರಿನ್ ಟೂರ್ ಭಾಗ್ಯ
Latest News

ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಿಗೆ ಬಂಪರ್ ಫಾರಿನ್ ಟೂರ್ ಭಾಗ್ಯ

Share
Share

ಚಿಕ್ಕಮಗಳೂರು :

ಡಿ,ಸಿ,ಸಿ ಬ್ಯಾಂಕ್ ನ”ಭಾಗ್ಯವಂತ”ಪ್ರವಾಸಿಗರು.
ಚಿಕ್ಕಮಗಳೂರು ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕರು ಮತ್ತು ಬಿಜೆಪಿ ಕೆಲ ಮುಖಂಡರು ನಿಜಕ್ಕೂ ಅದೃಷ್ಟ ಮಾಡಿದ್ದಾರೆ.
ಡಿ,ಸಿ,ಸಿ ಬ್ಯಾಂಕ್ ಅಸ್ತಿತ್ವಕ್ಕೆ ಬಂದಾಗಿನಿಂದ ಇಷ್ಟು ಪ್ರವಾಸ ಮಾಡುವುದಿರಲಿ ಬೆಂಗಳೂರಿನ ಅಪೆಕ್ಸ್ ಬ್ಯಾಂಕ್ ಮೆಟ್ಟಿಲು ಕೂಡ ನೋಡಲು ಸಾಧ್ಯವಾಗಿರಲಿಲ್ಲ.ಆದರೆ ಕಡೂರಿನ ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದರು ನೋಡಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ನ ನಿರ್ದೇಶಕರು ಸೇರಿದಂತೆ ಬಿಜೆಪಿಯ ಪ್ರಮುಖರಿಗೆ ಪ್ರವಾಸ ಭಾಗ್ಯದ ಬಾಗಿಲು ತೆರೆದಿದೆ.
ಕಳೆದ ಮೂರ ವರ್ಷಗಳಲ್ಲಿ ಐದಕ್ಕೂ ಹೆಚ್ಚು ದೇಶದ ಪ್ರವಾಸ ಮಾಡಿ ಅಲ್ಲಿನ ಸಹಕಾರ ತತ್ವ ಮತ್ತು ಬೇಸಾಯ ಪದ್ದತಿ ತಿಳಿದುಕೊಂಡು ಬಂದು ಜಾಗೃತಿ ಮೂಡಿಸುತ್ತಿದ್ದಾರೆ.
ದುಬೈ,ಅಜರ್ ಬೈಜಾನ್ ನ ಬಾಕ, ಮತ್ತೊಂದು ದೇಶ ಪ್ರಸ್ತುತ ಶ್ರೀಲಂಕಾ ಪ್ರವಾಸದಲ್ಲಿ ತಲೀನರಾಗಿದ್ದಾರೆ.
ಬೆಳ್ಳಿ ಪ್ರಕಾಶ್ ಎಂಬ ಗಟ್ಟಿಗ ದೊರೆಯ ದಿಲ್ ನಿಂದ ಹಲವು ದೇಶಗಳ ನೋಡುವ ಭಾಗ್ಯ ಪಡೆದಿದ್ದಾರೆ.
ಮಾಜಿ ಶಾಸಕ ಸರೇಶ್ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರ ಜೊತೆಗೆ ನಿರ್ದೇಶಕರುಗಳಾದ ಆನಂದಪ್ಪ,ಗಿರೀಶ್ ಚಾವಾಣ್,ಟಿ,ಎಲ್.ರಮೇಶ್, ನಿರಂಜನ,ಪರಮೇಶ್ವರಪ್ಪ,ರಾಮಸ್ವಾಮಿ,ಬಸವರಾಜಪ್ಪ,ಸತೀಸ್ ಇನ್ನೂ ಮುಂತಾದವರ ಜೊತೆಗೆ ಬಿಜೆಪಿ ಅಧ್ಯಕ್ಷ ದೇವರಾಜಶೆಟ್ಟಿ,ಮಾಜಿ ಅಧ್ಯಕ್ಷ ರಾದ ಕಲ್ಮರಡಪ್ಪ ಕೆಲವು ಬಿಜೆಪಿ ಮುಖಂಡರು ಪ್ರವಾಸದ ಜಾಲಿ ಮುಡ್ ನಲ್ಲಿದ್ದಾರೆ.ಆದರೆ ಚಿಕ್ಕಮಗಳೂರು ಶಾಸಕರು ಕಾಂಗ್ರೆಸ್ ನಲ್ಲಿ ಇರುವುದರಿಂದ ಪ್ರವಾಸ ಭಾಗ್ಯ ವಂಚಿತರಾಗಿದ್ದಾರೆ.ಬಿಜೆಪಿಯಲ್ಲಿದ್ದಾಗ ಇವರು ಪ್ರವಾಸದ ಭಾಗ್ಯದರರಾಗಿದ್ದರು. ಜೈ ಪ್ರಕಾಶ್,ಜೈ ಸಹಕಾರ ಮತ್ತೆ,ಮತ್ತೆ ಪ್ರವಾಸ ಭಾಗ್ಯ ಕೂಡಿಬರಲಿ ಸಹಕಾರ ಕ್ಷೇತ್ರ ಬೆಳೆಯಲಿ.

Share

Leave a comment

Leave a Reply

Your email address will not be published. Required fields are marked *

Don't Miss

ವೈದ್ಯರ ಬೇಜವಾಬ್ದಾರಿತನಕ್ಕೆ ಮೂರು ತಿಂಗಳ ಹಸುಗೂಸು ಸಾವು

ಚಿಕ್ಕಮಗಳೂರು: ವೈದ್ಯರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ಆರೋಪಕ್ಕೆ ಮೂರು ತಿಂಗಳ ಹಸುಗೂಸೊಂದು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಸರ್ಕಾರಿ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದೆ...

ಜಿಲ್ಲೆಯಾದ್ಯಂತ ಮೊಹರಂ ಹಬ್ಬ ಆಚರಣೆ

ಚಿಕ್ಕಮಗಳೂರು: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಮುಸ್ಲಿಮರು ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ದಾಭಕ್ತಿಯಿಂದ ಆಚರಿಸಿದರು. ಕಳೆದ ಎರಡು ದಿನಗಳಿಂದ ಉಪವಾಸವಿದ್ದ ಭಕ್ತರು ನಗರದ ಬಡಾವಣೆಗಳ ವಿವಿಧ ಮಸೀದಿಗಳಿಗೆ ಬೆಳಿಗ್ಗೆಯೇ ತೆರಳಿ...

Related Articles

ನೀವು ಬೆಳಿಗ್ಗೆ ಕಸ ಗುಡಿಸದಿದ್ದರೆ ದೇಶವೇ ನಡೆಯಲ್ಲ ಧೈರ್ಯವಾಗಿ ಹಕ್ಕು ಕೇಳಿ

ಚಿಕ್ಕಮಗಳೂರು:  “ನೀವು ಬೆಳಿಗ್ಗೆ ಎದ್ದು ಕಸ ಗುಡಿಸದಿದ್ದರೆ ಈ ದೇಶದ ಯಾವುದೇ ನಗರ, ಪಟ್ಟಣ, ಊರುಗಳು...

ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಸ್ ಮೂಲಕವೇ ವ್ಯವಹರಿಸಿ

ಚಿಕ್ಕಮಗಳೂರು: ಪ್ರತೀ ಕಚೇರಿಗಳಲ್ಲೂ ಇ-ಆಫೀಸ್ ಮೂಲಕವೇ ಪತ್ರ ಹಾಗೂ ಕಡತಗಳನ್ನು ನಿರ್ವಹಿಸುವಂತೆ ಸರ್ಕಾರದ ಅಪರ ಮುಖ್ಯ...

ಕುಂದೂರು ಫಾರೆಸ್ಟ್‌ನ ಹೆಬ್ಬಾಳ ಗದ್ದೆಯಲ್ಲಿ ಗಂಡು ಕಾಡಾನೆ ಸಾವು

​ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಒಂಟಿ ಗಂಡು ಕಾಡಾನೆಯೊಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ...

ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ

ಶೃಂಗೇರಿ: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶುಕ್ರವಾರ  ಹಾಜರುಪಡಿಸಿದರು....