ಚಿಕ್ಕಮಗಳೂರು :
ಡಿ,ಸಿ,ಸಿ ಬ್ಯಾಂಕ್ ನ”ಭಾಗ್ಯವಂತ”ಪ್ರವಾಸಿಗರು.
ಚಿಕ್ಕಮಗಳೂರು ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕರು ಮತ್ತು ಬಿಜೆಪಿ ಕೆಲ ಮುಖಂಡರು ನಿಜಕ್ಕೂ ಅದೃಷ್ಟ ಮಾಡಿದ್ದಾರೆ.
ಡಿ,ಸಿ,ಸಿ ಬ್ಯಾಂಕ್ ಅಸ್ತಿತ್ವಕ್ಕೆ ಬಂದಾಗಿನಿಂದ ಇಷ್ಟು ಪ್ರವಾಸ ಮಾಡುವುದಿರಲಿ ಬೆಂಗಳೂರಿನ ಅಪೆಕ್ಸ್ ಬ್ಯಾಂಕ್ ಮೆಟ್ಟಿಲು ಕೂಡ ನೋಡಲು ಸಾಧ್ಯವಾಗಿರಲಿಲ್ಲ.ಆದರೆ ಕಡೂರಿನ ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದರು ನೋಡಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ನ ನಿರ್ದೇಶಕರು ಸೇರಿದಂತೆ ಬಿಜೆಪಿಯ ಪ್ರಮುಖರಿಗೆ ಪ್ರವಾಸ ಭಾಗ್ಯದ ಬಾಗಿಲು ತೆರೆದಿದೆ.
ಕಳೆದ ಮೂರ ವರ್ಷಗಳಲ್ಲಿ ಐದಕ್ಕೂ ಹೆಚ್ಚು ದೇಶದ ಪ್ರವಾಸ ಮಾಡಿ ಅಲ್ಲಿನ ಸಹಕಾರ ತತ್ವ ಮತ್ತು ಬೇಸಾಯ ಪದ್ದತಿ ತಿಳಿದುಕೊಂಡು ಬಂದು ಜಾಗೃತಿ ಮೂಡಿಸುತ್ತಿದ್ದಾರೆ.
ದುಬೈ,ಅಜರ್ ಬೈಜಾನ್ ನ ಬಾಕ, ಮತ್ತೊಂದು ದೇಶ ಪ್ರಸ್ತುತ ಶ್ರೀಲಂಕಾ ಪ್ರವಾಸದಲ್ಲಿ ತಲೀನರಾಗಿದ್ದಾರೆ.
ಬೆಳ್ಳಿ ಪ್ರಕಾಶ್ ಎಂಬ ಗಟ್ಟಿಗ ದೊರೆಯ ದಿಲ್ ನಿಂದ ಹಲವು ದೇಶಗಳ ನೋಡುವ ಭಾಗ್ಯ ಪಡೆದಿದ್ದಾರೆ.
ಮಾಜಿ ಶಾಸಕ ಸರೇಶ್ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರ ಜೊತೆಗೆ ನಿರ್ದೇಶಕರುಗಳಾದ ಆನಂದಪ್ಪ,ಗಿರೀಶ್ ಚಾವಾಣ್,ಟಿ,ಎಲ್.ರಮೇಶ್, ನಿರಂಜನ,ಪರಮೇಶ್ವರಪ್ಪ,ರಾಮಸ್ವಾಮಿ,ಬಸವರಾಜಪ್ಪ,ಸತೀಸ್ ಇನ್ನೂ ಮುಂತಾದವರ ಜೊತೆಗೆ ಬಿಜೆಪಿ ಅಧ್ಯಕ್ಷ ದೇವರಾಜಶೆಟ್ಟಿ,ಮಾಜಿ ಅಧ್ಯಕ್ಷ ರಾದ ಕಲ್ಮರಡಪ್ಪ ಕೆಲವು ಬಿಜೆಪಿ ಮುಖಂಡರು ಪ್ರವಾಸದ ಜಾಲಿ ಮುಡ್ ನಲ್ಲಿದ್ದಾರೆ.ಆದರೆ ಚಿಕ್ಕಮಗಳೂರು ಶಾಸಕರು ಕಾಂಗ್ರೆಸ್ ನಲ್ಲಿ ಇರುವುದರಿಂದ ಪ್ರವಾಸ ಭಾಗ್ಯ ವಂಚಿತರಾಗಿದ್ದಾರೆ.ಬಿಜೆಪಿಯಲ್ಲಿದ್ದಾಗ ಇವರು ಪ್ರವಾಸದ ಭಾಗ್ಯದರರಾಗಿದ್ದರು. ಜೈ ಪ್ರಕಾಶ್,ಜೈ ಸಹಕಾರ ಮತ್ತೆ,ಮತ್ತೆ ಪ್ರವಾಸ ಭಾಗ್ಯ ಕೂಡಿಬರಲಿ ಸಹಕಾರ ಕ್ಷೇತ್ರ ಬೆಳೆಯಲಿ.
Leave a comment