ಚಿಕ್ಕಮಗಳೂರು : ಬೆಳ್ಳಂಬೆಳಗ್ಗೆ ವಾಮಾಚಾರಕ್ಕೆ ಮೂಡಿಗೆರೆಯ ಹೆಡದಾಳು ಗ್ರಾಮದ ಜನರು ಬೆಚ್ಚಿಬಿದ್ದಿದ್ದಾರೆ. ಮೂರು ದಾರಿ ಕೂಡಿರುವ ಸ್ಥಳದಲ್ಲಿ ಕಿಡಿಗೇಡಿಗಳ ಇಂದು ಬೆಳಗಿನ ಜಾವ ವಾಮಾಚಾರ ನಡೆಸಿದ್ದಾರೆ. ಹಸಿರು ಬಳೆಗಳ ಮೇಲೆ ಮಣ್ಣಿನ ಬೊಂಬೆ ಇಟ್ಟು ವಾಮಾಚಾರ ಮಾಡಲಾಗಿದೆ.
ಮಡಿಕೆಗೆ ಮನುಷ್ಯನ ರೂಪ ನೀಡಿ ಭಯಂಕರ ವಾಮಾಚಾರ ಮಾಡಿ ಹೋಗಿದ್ದಾರೆ ಸಾಮಾನ್ಯವಾಗಿ
ವಾಮಾಚಾರ ಮಾಡೋರು ಪ್ರಾಣಿ ಬಲಿ ಕೊಟ್ಟು ವಾಮಾಚಾರ ಮಾಡೋದು ಹೆಚ್ಚು ಆದರೆ ಬಾಳೆ ಎಲೆ, ಹಸಿರು ಬಳೆ, ಮಡಿಕೆಗೆ ಕಾಳಿಯ ರೂಪ ನೀಡಿ ಮಾಟ ಮಾಡಿದ್ದಾರೆ. ಮೂಡಿಗೆರೆ ತಾಲೂಕಿನ ಹೆಡದಾಳು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೆಡದಾಳು ಗ್ರಾಮದ ಚೇತನ್ ಎಂಬುವವರ ಮನೆಯ ಮುಂದೆಯೇ ಈ ವಾಮಾಚಾರ ಮಾಡಲಾಗಿದೆ. ಬೆಳಗಿನ ಜಾವ 4-5 ಗಂಟೆಗೆ ಐವರು ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ. ವಾಮಾಚಾರ ಮಾಡುವುದನ್ನ ಮನೆಯೊಳಗಿಂದ ಹಳ್ಳಿಗರು ಕಣ್ಣಾರೆ ನೋಡಿದ್ದಾರೆ.
ಆದರೆ ಮನೆಯಿಂದ ಹೊರಬರಲು ಭಯಗೊಂಡು ಯಾರೂ ಕೂಡಾ ಹೊರಬಂದಿಲ್ಲ, ಮಾಟ ಮಾಡಿದ ಸ್ಥಳದಲ್ಲಿ ಅರಿಶಿನ-ಕುಂಕುಮ, ಕಾಯಿ, ಹಣ್ಣು ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿವೆ. ಸದ್ಯ ಗ್ರಾಮದ ತುಂಬೆಲ್ಲ ಇದೇ ಚರ್ಚೆ ನಡೆಯುತ್ತಿದ್ದ ಏಕೆ ಈ ವಾಮಾಚಾರ ಮಾಡಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ.
Leave a comment