ಚಿಕ್ಕಮಗಳೂರು : ಔಷಧ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಸ್ಥಳೀಯ ಮೆಡಿಕಲ್ ಮಾಲೀಕರಿಗೆ ವಂಚಿಸಿರುವ ಆರೋಪದಡಿ ಬಂಧನವಾಗಿರುವ ಮಿಥುನ್ ಎಂಬ ವ್ಯಕ್ತಿಯೊಂದಿಗೆ ಜಿಲ್ಲಾ ಸರ್ಜನ್ ರ ಹೆಸರು ತಳುಕು ಹಾಕಿಕೊಂಡಿದ್ದು, ಈ ಪ್ರಕರಣವನ್ನು ಸಮಗ್ರ ತನಿಖೆ ನಡೆಸುವಂತೆ ಲೀಸಾ ಫೌಂಡೇಶನಿನ ಅಧ್ಯಕ್ಷೆ ಸಂಗೀತಾ ಪ್ರಸಾದ್ ಆಗ್ರಹಿಸಿದರು.
ನಗರದ ಪ್ರೆಸ್ಕ್ಲಬ್ನಲ್ಲಿಂದು ಕರೆದಿದ್ದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಸರ್ಕಾರಿ ಆಸ್ಪತ್ರೆಗಳಿಗೆ ೧.೮ ಕೋಟಿ ರೂ. ಗಳ ಔಷಧಿ ಸರಬರಾಜು ಮಾಡಲು ಆದೇಶ ಕೊಡಿಸುವುದಾಗಿ ೩೬ ಲಕ್ಷ ರೂ. ಗಳನ್ನು ಮಿಥುನ್ ಎಂಬುವವರು ಪಡೆದು ವಂಚಿಸಿದ್ದರು.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಣದ ವ್ಯವಹಾರ ನಕಲಿ ಐಎಎಸ್ ಅಧಿಕಾರಿ ಮಿಥುನ್ ವಿರುದ್ದ ಎಫ್ ಐ ಆರ್ ದಾಖಲಾಗಿದ್ದು, ಆ ಎಫ್ ಐ ಆರ್ ನಲ್ಲಿ ಮಲ್ಲೆಗೌಡ ಜಿಲ್ಲಾಸ್ಪತ್ರೆಯ ಸರ್ಜನ್ ಚಂದ್ರಶೇಖರ್ ರವರ ಹೆಸರು ಸಹ ಸೇರ್ಪಡೆಯಾಗಿದೆ ಎಂದು ಹೇಳಿದರು.
ಈ ವ್ಯವಹಾರಗಳು ಸಂಪೂರ್ಣವಾಗಿ ಡಾ. ಚಂದ್ರಶೇಖರ್ ರವರ ಸಮ್ಮುಖದಲ್ಲಿಯೇ ನಡೆದಿದ್ದು, ಈ ವ್ಯವಹಾರದ ಬಗ್ಗೆ ಚಂದ್ರಶೇಖರ್ ರವರನ್ನು ತನಿಖೆಗೊಳಪಡಿಸಬೇಕು ಎಂದು ಒತ್ತಾಯಿಸಿದ ಅವರು ಕೂಡಲೇ ಅವರನ್ನು ಅಮಾನತ್ತುಗೊಳಿಸಬೇಕು, ಪ್ರಕರಣದಲ್ಲಿ ಎ೨ ಆರೋಪಿಯನ್ನಾಗಿ ಸೇರಿಸಬೇಕು ಎಂದರು.
ಈ ಗೋಷ್ಟಿಯಲ್ಲಿ ಡಿಂಪಲ್, ಶರತ್, ಕೆಶವಮೂರ್ತಿ, ನರಸಿಂಹ ಮೂರ್ತಿ, ಮೋಹನ್ ಇದ್ದರು.
Demand for a comprehensive investigation against Mithun
Leave a comment