ಚಿಕ್ಕಮಗಳೂರು: ನಕಲಿ ಐಎಎಸ್ ಅಧಿಕಾರಿಯನ್ನು ಬೆಂಬಲಿಸಿ ಬೃಹತ್ ಮೊತ್ತದ ಹ ಣದ ವಹಿವಾಟು ನಡೆಸಿರುವ ಜಿಲ್ಲಾ ಸರ್ಜನ್ನನ್ನು ಕೂಡಲೇ ಅಮಾನತ್ತುಪಡಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ನಗರದ ಆಜಾದ್ಪಾರ್ಕ್ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಕುರಿತು ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ಶೆಟ್ಟಿ ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ ಅವರ ಬೆಂಬಲದಿಂದಲೇ ಈ ರೀತಿಯ ಭ್ರಷ್ಟಾಚಾರ ನಡೆಸಲು ಸರ್ಜನ್ಗೆ ಅವಕಾಶವಾಗಿದೆ. ಕೂ ಡಲೇ ಸರ್ಜನ್ ಚಂದ್ರಶೇಖರ್ ಅವರನ್ನು ಅಮಾನತ್ತುಪಡಿಸಿ ಬಂಧನಕ್ಕೆ ಒಳಪಡಿಸಬೇಕು ಎಂದರು.
ಪ್ರಸ್ತುತ ಬೆಂಗಳೂರು ಪೊಲೀಸರಿಂದ ನಕಲಿ ಐಎಎಸ್ ಅಧಿಕಾರಿ ಮಿಥುನ್ ಅವರನ್ನು ಬಂಧಿಸಲಾ ಗಿದೆ. ಈತನಿಗೆ ಬೆಂಬಲಿಸಿದ ಜಿಲ್ಲಾ ಸರ್ಜನ್ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ. ಈ ಹಗರಣವನ್ನು ಖಂ ಡನೀಯ ಎಂದು ತಿಳಿಸಿದರು.
ನಕಲಿ ಸೋಗಿನಲ್ಲಿ ಐಎಎಸ್ ಅಧಿಕಾರಿ ಮಿಥುನ್ ಎಂಬಾನು ಔಷಧಿಗಳ ಟೆಂಡರ್ ಕೂಗಿಸುವುದಾಗಿ ನಂಬಿಸಿ ಹಲವಾರಿಗೆ ವಂಚನೆ ನಡೆಸಿದ್ದಾನೆ. ಈ ದಂಧೆಯಲ್ಲಿ ಜಿಲ್ಲಾ ಸರ್ಜನ್ ಕೈಜೋಡಿಸಿರುವುದು ಗಂ ಭೀರವಾದ ವಿಚಾರ. ಈ ರೀತಿ ನಕಲಿ ಅಧಿಕಾರಿಗಳಿಂದ ಲಕ್ಷಗಟ್ಟಲೇ ಹಣ ಪೋಲಾಗಿದೆ ಎಂದರು.
ವಿಶೇಷವಾಗಿ ಜಿಲ್ಲಾಸ್ಪತ್ರೆ ಕಚೇರಿಯಲ್ಲಿ ನಕಲಿ ಅಧಿಕಾರಿಗೆ ಸಭೆ ನಡೆಸಲು ಸರ್ಜನ್ ಅವಕಾಶ ಮಾಡಿ ಕೊಟ್ಟಿದ್ದಾರೆ. ಅಲ್ಲದೇ ಸ್ಥಳೀಯ ಮೆಡಿಕಲ್ ಶಾಪ್ ಮಾಲೀಕರಿಗೆ ನಕಲಿ ಅಧಿಕಾರಿ ಪರಿಚಯಿಸಿ ಧಂಧೆಗೆ ಸಹಕರಿಸಿದ್ದಾರೆ. ಇಷ್ಟಲ್ಲೆ ನೋಡಿದರೆ ಸ್ಥಳೀಯರ ಕೈವಾಡವಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ ಔಷಧಿಗಳ ಟೆಂಡರ್ ವಿಚಾರದಲ್ಲಿ ದೊಡ್ಡಮಟ್ಟದ ಹಣಕಾಸಿನ ವಹಿವಾಟು ನಡೆದಿದೆ. ಇದರಲ್ಲಿ ಪ್ರಭಾವಿಗಳ ಹಸ್ತಕ್ಷೇವಿದೆ. ಒಂದು ವೇಳೆ ದೊಡ್ಡಮಟ್ಟಿನ ಪ್ರಭಾವಿಗಳ ಕೈವಾಡವಿಲ್ಲದ್ದಲ್ಲಿ ಮುನ್ನೆಡೆಸಲು ಸಾಧ್ಯವಿಲ್ಲ ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆ ನಕಲಿ ವಂಚಕನಿಗೆ ರಾಜಾತಿಥ್ಯ ನೀಡುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣ ವಾಗಿದೆ. ಬಡವರೇ ಹೆಚ್ಚು ಬರುವಂಥ ಆಸ್ಪತ್ರೆಗಳಲ್ಲಿ ಈ ರೀತಿ ವಂಚನೆ ನಡೆಸಿದರೆ, ಸಾಮಾನ್ಯರ ಜನರ ಗತಿ ಯೇನು. ಕೂಡಲೇ ಜಿಲ್ಲಾಡಳಿತ ಈ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರುಗಳಾದ ಪ್ರೇಮ್ಕುಮಾರ್, ಮಧುಅರಸ್, ರವೀಂದ್ರ ಬೆಳವಾಡಿ , ಕೇಶವಮೂರ್ತಿ, ಕೆ.ಸಿ.ನಿಶಾಂತ್, ಸಚಿನ್ಗೌಡ, ಜಸಂತಾ ಅನಿಲ್ಕುಮಾರ್, ಜೀವನ್, ಬಸವರಾಜ್, ಓಂ ಕಾರೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಸರ್ಜನ್ ಅಮಾನತ್ತಿಗೆ ಆಗ್ರಹಿಸಿ ಬಿಜೆಪಿ ಮುಖಂಡರ ಪ್ರತಿಭಟನೆ
Leave a comment