Home namma chikmagalur chikamagalur ಅರವಿಂದ್ ಕೇಜ್ರವಾಲ್ ದೋಷಮುಕ್ತ ಪಕ್ಷಕ್ಕೆ ಸಂದ ಜಯ
chikamagalurHomeLatest Newsnamma chikmagalur

ಅರವಿಂದ್ ಕೇಜ್ರವಾಲ್ ದೋಷಮುಕ್ತ ಪಕ್ಷಕ್ಕೆ ಸಂದ ಜಯ

Share
Oplus_16908288
Share

ಚಿಕ್ಕಮಗಳೂರು : ಕೇಂದ್ರ ಸರ್ಕಾರದ ಪಿತೂರಿಯಿಂದ ದೆಹಲಿಯ ಅಬಕಾರಿ ಹಗರಣದಲ್ಲಿ ಸಿಲುಕಿಸಲಾಗಿದ್ದ ಅರವಿಂದ್ ಕೇಜ್ರವಾಲ್ ಮತ್ತು ಇತರ ೨೩ ನಾಯಕರನ್ನು ದೆಹಲಿಯ ನ್ಯಾಯಾಲಯವು ಕೋರ್ಟ್ ದೋಷಮುಕ್ತಗೊಳಿಸಿರುವುದು ಪಕ್ಷಕ್ಕೆ ಸಂದ ಜಯವಾಗಿದೆ ಎಂದು ಆಮ್ ಆದ್ಮ ಪಾರ್ಟಿ ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್ ಅವರು ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ಕರೆದಿದ್ದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ಮೂರು ವರ್ಷಗಳಿಂದ ಎದುರಿಸಿದ್ದ ಟೀಕೆಗಳಿಗೆ ನ್ಯಾಯಾಲಯದಿಂದ ಉತ್ತರ ಸಿಕ್ಕಿದ್ದು, ಇದು ಕೋಮುವಾದಿ ಮತ್ತು ಭ್ರಷ್ಟ ಶಕ್ತಿಯ ವಿರುದ್ಧ ಹೋರಾಡಲು ಸ್ಫೂರ್ತಿ ನೀಡಿದೆ ಎಂದರು.

ಆಮ್ ಆದ್ಮ ಪಕ್ಷದ ನೈತಿಕ ಶಕ್ತಿಯನ್ನು ಕುಗ್ಗಿಸಲು ಮತ್ತು ಅದರ ಹೆಸರನ್ನು ಹಾಳುಮಾಡಲು ಇಂತಹ ಸುಳ್ಳು ಹಗರಣಗಳನ್ನು ಸೃಷ್ಟಿಸಲಾಗಿತ್ತು ಎಂಬುದು ನ್ಯಾಯಾಲಯದ ಆದೇಶದಿಂದ ಸಾಬೀತಾಗಿದೆ ಎಂದು ಅವರು ತಿಳಿಸಿದರು.

ಕೇಂದ್ರ ಸರ್ಕಾರ ಪಿತೂರಿಯಿಂದ ಕೇಜ್ರವಾಲ್ ಸುಸೋಡಿಯಾಗೆ ಜೈಲಾಗಿದ್ದು, ಈಗ ದೆಹಲಿಯ ಸೊಕಾಲ್ಡ್ ಅಬಕಾರಿ ಹಗರಣ ಸಂಬಂಧ ಸಿ.ಬಿ.ಐ.ಚಾರ್ಜ್ ಶೀಟನ್ನು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ತಿರಸ್ಕರಿಸಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ಮತ್ತು ಇನ್ನಿತರ ೨೩ ನಾಯಕರನ್ನು ದೋಷಮುಕ್ತಗೊಳಿಸಿದೆ. ಕೋಮುವಾದಿ ಭ್ರಷ್ಟಶಕ್ತಿಯ ವಿರುದ್ಧ ಹೋರಾಟ ಮಾಡಲು ಸ್ಪೂರ್ತಿ ನೀಡಿದಂತಾಗಿದೆ ಎಂದರು.

ನಗರದ ಮೂರು ಕಣ್ಣಂತಿರುವ ಬಸವನಹಳ್ಳಿ ಕೆರೆ, ಶತಮಾನೋತ್ಸವ ಕ್ರೀಡಾಂಗಣ, ಕೋಟೆ ಕೆರೆ ಅವ್ಯವಸ್ಥೆಯ ಆಗರವಾಗಿದ್ದು, ಸಾರ್ವಜನಿಕರು ಮೂಗುಮುಚ್ಚಿಕೊಂಡು ಹೋಗುವಂತ ಪರಿಸ್ಥಿತಿಯಾಗಿದೆ ಇದರ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ ಉಪಯೋಗವಾಗಿಲ್ಲಾ ಎಂದರು.

ಮಲೆನಾಡಿನಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ನಾಶವಾಗಿದ್ದು, ಇಲ್ಲಿಯವರೆಗೂ ರೈತರಿಗೆ ಪರಿಹಾರ ಸಿಕ್ಕಿಲ್ಲ. ಪರಿಹಾರ ಶೀಘ್ರವಾಗಿ ಕೊಡಬೇಕೆಂದು ಆಗ್ರಹಿಸಿದರು.

ಆಮ್ ಆದ್ಮ ಪಾರ್ಟಿ ಆಗ್ರಹಿಸುತ್ತದೆ. ಮತ್ತು ಬಾಳೆಹೊನ್ನೂರಿನಲ್ಲಿ ರೈತರ ಮೇಲೆ ದೌರ್ಜನ್ಯ ಎಸಗಿದಂತಹ ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆಯ ದೌರ್ಜನ್ಯಕ್ಕೆ ಆಮ್ ಆದ್ಮ ಪಾರ್ಟಿ ಖಂಡಿಸುತ್ತದೆಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಮಾದ್ಯಮ ಸಂಚಾಲಕರು ಸುಂದರಗೌಡ, ಕಾರ್ಯದರ್ಶಿ ಅಂತೋಣಿ, ಯುವ ಘಟಕದ ಅಧ್ಯಕ್ಷ ಪ್ರಭು, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ವಾಸಿಮ್ ಮುಖಂಡರಾದ ವಿಲಿಯಮ್ ಪಿರೇರಾ ಇದ್ದರು.

A landslide victory for Arvind Kejriwal’s faultless party

Share

Leave a comment

Leave a Reply

Your email address will not be published. Required fields are marked *

Don't Miss

ಲೋಕಾಯುಕ್ತ ಬಲೆಗೆ ತಂಗಲಿ ಗ್ರಾಮ ಪಂಚಾಯಿತಿಯ ಪಿಡಿಒ

ಕಡೂರು : ಸೈಟ್ ಗೆ ಎನ್.ಒ.ಸಿ (NOC) ನೀಡಲು ಲಂಚದ ಬೇಡಿಕೆಯಿಟ್ಟಿದ್ದ ಕಡೂರು ತಾಲೂಕಿನ ತಂಗಲಿ ಗ್ರಾಮ ಪಂಚಾಯಿತಿಯ ಪಿಡಿಒ ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತಿಮ್ಮಶೆಟ್ಟಿ ಎಂಬುವವರಿಗೆ ಸೇರಿದ...

ಕಳಪೆ ಕಾಮಗಾರಿ ತಡೆಗಟ್ಟುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ

ಚಿಕ್ಕಮಗಳೂರು: ಕಡೂರು ತಾಲೂಕಿನ ಐತಿಹಾಸಿಕ ಮದಗದ ಕೆರೆ ಕಾಲುವೆಯ (ಚಾನಲ್) ಕಳಪೆ ಕಾಮಗಾರಿಯನ್ನು ತಡೆಗಟ್ಟುವಂತೆ ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ. ಅಪರ ಜಿಲ್ಲಾಧಿಕಾರಿ ನಾರಾಯಣ ರೆಡ್ಡಿ ಕನಕರೆಡ್ಡಿ...

Related Articles

ಶಾಸಕ ರಾಜೇಗೌಡರ ಕಣ್ಣೀರು ಕಾಂಗ್ರೆಸ್ ನವರ ಆಕ್ರೋಶ-ಬಿ.ಜೆ.ಪಿಯ ತಲ್ಲಣ

ಶೃಂಗೇರಿ: ಶೃಂಗೇರಿ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಶಾಸಕ ರಾಜೇಗೌಡರ ವಿರುದ್ಧ ಬಿಜೆಪಿ...

ದಲಿತ ಸಂಘಟನೆಗಳ ಒಕ್ಕೂಟದ ವಿಭಿನ್ನ ಹೋರಾಟ

ಚಿಕ್ಕಮಗಳೂರು : ನಗರ ಸಮೀಪದ ಗೌಡನಹಳ್ಳಿ ವಾಸಿ ಮಂಜುನಾಥ್ ಯಾನೆ ಹೇಮಂತ್ ಎಂಬುವವರಿಗೆ ಸೇರಿದ ಜೆ.ಸಿ.ಬಿ...

ಬಿಜೆಪಿ ಟಿಕೆಟ್ ಭ್ರಮೆಯಿಂದ ವೆಂಕಟೇಶ್ ಹೊರಬರಲಿ

ಚಿಕ್ಕಮಗಳೂರು : ಶಾಸಕ ಹೆಚ್.ಡಿ ತಮ್ಮಯ್ಯನವರನ್ನು ಪ್ರತಿ ನಿತ್ಯ ವಿರೋಧಿಸಿದರೆ ಮೂಡಿಗೆರೆ ಮೀಸಲು ಕ್ಷೇತ್ರಕ್ಕೆ ಬಿಜೆಪಿ...

ಕೈವಾರ ತಾತಯ್ಯ ವಿಶ್ವ ಶ್ರೇಷ್ಠ ಸಂತ

ಚಿಕ್ಕಮಗಳೂರು: ಮಹಾನ್ ಕಾಲಜ್ಞಾನಿ ಮತ್ತು ತತ್ವಜ್ಞಾನಿ ಶ್ರೀ ಯೋಗಿ ನಾರೇಯಣ ಯತೀಂದ್ರರು (ಕೈವಾರ ತಾತಯ್ಯ) ಕೇವಲ...