ಚಿಕ್ಕಮಗಳೂರು : ನಗರ ಸಮೀಪದ ಗೌಡನಹಳ್ಳಿ ವಾಸಿ ಮಂಜುನಾಥ್ ಯಾನೆ ಹೇಮಂತ್ ಎಂಬುವವರಿಗೆ ಸೇರಿದ ಜೆ.ಸಿ.ಬಿ ಯನ್ನು ಹೆಚ್.ಡಿ.ಎಫ್.ಸಿ ಬ್ಯಾಂಕ್ ಸೀಜ್ ಮಾಡಿ ಅಕ್ರಮ ಮಾರಾಟ ಮಾಡಿದ್ದು, ಕಳೆದ ೧ ತಿಂಗಳಿನಿಂದ ಪ್ರತಿಭಟನೆ ಮಾಡುತ್ತಿದ್ದರೂ ಹೋರಾಟಗಾರರನ್ನು ನಿರ್ಲ್ಯಕ್ಷಿಸುತ್ತಿರುವ ಜಿಲ್ಲಾಡಳಿತ, ಬ್ಯಾಂಕ್ ಅಧಿಕಾರಿಗಳು, ಪೊಲೀಸ್ ಇಲಾಖೆ, ಜನ ಪ್ರತಿನಿಧಿಗಳ ನಡೆಯನ್ನು ಖಂಡಿಸಿ ವಿಭಿನ್ನ ಚಳುವಳಿ ನಡೆಸಲು ನಿರ್ಧರಿಸಲಾಗಿದೆ ಎಂದು ದಲಿತ ಮುಖಂಡ ಮರ್ಲೆಅಣ್ಣಯ್ಯ ತಿಳಿಸಿದರು.
ನಗರದ ಪ್ರೆಸ್ಕ್ಲಬ್ನಲ್ಲಿಂದು ಕರೆದಿದ್ದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ನೊಂದ ಮಂಜುನಾಥ್ ಪರವಾಗಿ ನಗರದ ಎಂ.ಜಿ ರಸ್ತೆಯ ಹೆಚ್.ಡಿ.ಎಫ್.ಸಿ ಬ್ಯಾಂಕ್ ಎದುರು ಸುಮಾರು ೧ ತಿಂಗಳಿಂದ ನೊಂದವರು ಮತ್ತು ಹೋರಾಟಗಾರರು ಹಗಲು-ರಾತ್ರಿ ಧರಣಿ ಮಾಡಲಾಗುತ್ತಿದ್ದರು ಸಹ ಯಾವುದೇ ಅಧಿಕಾರಿಗಳಿಂದಾಗಲೀ, ಮತ್ತು ಇಲಾಖೆಗಳಿಂದಾಗಲೀ ಹಾಗೂ ಜನ ಪ್ರತಿನಿಧಿಗಳಿಂದಾಗಲೀ ನ್ಯಾಯ ದೊರಕಿರುವುದಿಲ್ಲಎಂದು ಕಿಡಿ ಕಾರಿದರು.
ಮಂಜುನಾಥ್ ಯಾನೆ ಹೇಮಂತ ಒಳ್ಳೆ ರೀತಿ ಬದುಕು ಕಟ್ಟಿಕೊಳ್ಳುವ ಕನಸ್ಸು ಕಟ್ಟಿಕೊಂಡು ಸಾಲ ಮಾಡಿ ೭ಲಕ್ಷ ಮುಂಗಡ ಹಣವನ್ನು ಬ್ಯಾಂಕ್ಗೆ ಪಾವತಿಸಿ, ಸುಮಾರು ೧೭ ತಿಂಗಳ ಕಂತುಗಳನ್ನು ಒಟ್ಟು ೧೮ ಲಕ್ಷ ಜೆ.ಸಿ.ಬಿ ಖರೀದಿಗಾಗಿ ಭರಿಸಿದ್ದಾರೆ.
ಕೇವಲ ೨ ಕಂತು ಹಣ ಕಟ್ಟಿದ ಕಾರಣ ಬ್ಯಾಂಕ್ನವರು ಏಕಾ ಏಕಿ ನೊಟೀಸ್ ನೀಡದೆ, ಜೆ.ಸಿ.ಬಿಯನ್ನು ಸೀಜ್ ಮಾಡಿ ಅಕ್ರಮ ಮಾರಾಟ ಮಾಡಿರುತ್ತಾರೆ. ೩೩ ಲಕ್ಷ ಬೆಲೆಬಾಳುವ ಕೇವಲ ೧ ವರೆ ವರ್ಷದ ಜೆ.ಸಿ.ಬಿಯನ್ನು ಕೇವಲ ೨೨ ಲಕ್ಷ ರೂ.ಗಳಿಗೆ ಬೇರೆಯವರಿಗೆ ಮಾರಾಟ ಮಾಡಿದ್ದು, ಆರ್.ಬಿ.ಐ ನಿಯಮಗಳನ್ನು ಉಲ್ಲಂಘಿಸಿ, ಮಂಜುನಾಥ್ ಯಾನೆ ಹೇಮಂತರವರ ಕುಟುಂಬಕ್ಕೆ ಜೆ.ಸಿ.ಬಿ ಮತ್ತು ಹಣವನ್ನೂ ಸಹ ಇಲ್ಲದಂತೆ ಮಾಡಿ ಸಾಲದ ಸುಳಿಗೆ ಸಿಲುಕಿಸಿದ್ದಾರೆ. ಆರ್ಥಿಕ ದುಸ್ಥಿತಿಗೆ ಕಾರಣರಾಗಿರುವ ಹೆಚ್.ಡಿ.ಎಫ್.ಸಿ ಬ್ಯಾಂಕ್ ಮಾನ್ಯತೆಯನ್ನು ಈ ಕೂಡಲೇ ರದ್ದುಪಡಿಸುವಂತೆ ಒಕ್ಕೂಟ ಒತ್ತಾಯಿಸುತ್ತದೆ ಎಂದರು.
ಮಾ.೦೪ರಂದುಬೆಳಿಗ್ಗೆ ೧೧ಗಂಟೆಗೆ ಹನುಮಂತಪ್ಪ ವೃತ್ತದಿಂದ ವೃತ್ತದಿಂದ ಮೆರವಣೆಗೆಯಲ್ಲಿ ಹೆಚ್.ಡಿ.ಎಫ್.ಸಿ ಬ್ಯಾಂಕ್ ಆಡಳಿತ ಮಂಡಳಿಯವರ ಪ್ರತಿಕೃತಿ ಶವ ಯಾತ್ರೆ ನಡೆಸಿ ಬ್ಯಾಂಕ್ ಮುಂದಿಟ್ಟು ಅನಿರ್ಧಿಷ್ಟ ಅವಧಿ ಮುಷ್ಕರದಲ್ಲಿನಡೆಸಲಾಗುವುದೆಂದರು.
ಜಿಲ್ಲಾ ಉಸ್ತುವಾರಿ ಕಛೇರಿ ಮುಂದೆ, ಚಿಕ್ಕಮಗಳೂರು ಶಾಸಕರ ಮನೆಯ ಮುಂದೆ ಮತ್ತು ಮೂಡಿಗೆರೆ ಶಾಸಕರ ಮನೆಯ ಮುಂದೆ ಅನಿರ್ಧಿಷ್ಟ ಅವಧಿ ಮುಷ್ಕರ, ತಮಟೆ ಚಳುವಳಿ, ಕರಪತ್ರ ಚಳುವಳಿ, ಪಂಚಿನ ಮೆರವಣಿಗೆ ಹಾಗೂ ಅರೆಬೆತ್ತಲೆ ಚೆಳುವಳಿ ಮಾಡಲು ಒಕ್ಕೂಟದ ಸಭೆಯು ನಿರ್ಧರಿಸಿದೆ ಎಂದರು.
ಗೋಷ್ಟಿಯಲ್ಲಿ ದಲಿತ ಮುಖಂಡರಾದ ದಂಟರಮಕ್ಕಿ ಶ್ರೀನಿವಾಸ್,ಭೀಮಯ್ಯ,ಕೃಷ್ಣಮೂರ್ತಿ,ರುದ್ರಮ್ಮ,ಬಾಲಕೃಷ್ಭ,ಟಿ.ಎಲ್ ಗಣೇಶ್,ರಘೂ ಇದ್ದರು.
A different struggle of the coalition of Dalit organizations
Leave a comment