Home namma chikmagalur chikamagalur ಪ್ರಾಣೇಶ್ ಗೆ ತಿಂಗಳ “ಕುರ್ಚಿ ? ಉಳಿದ ಅವಧಿ ಗಾಯಿತ್ರಿಗೆ ಗ್ಯಾರಂಟಿ ?
chikamagalurHomeLatest Newsnamma chikmagalur

ಪ್ರಾಣೇಶ್ ಗೆ ತಿಂಗಳ “ಕುರ್ಚಿ ? ಉಳಿದ ಅವಧಿ ಗಾಯಿತ್ರಿಗೆ ಗ್ಯಾರಂಟಿ ?

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಆಕ್ರಮ ನಡೆದಿದೆ ಎಂದು ಕಳೆದ ನಾಲ್ಕುವರೆ ವರ್ಷಗಳಿಂದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗೆ ಸುತ್ತಿ,ಸುತ್ತಿ ಸುಸ್ತಾದವರಿಗೆ ಫಲಿತಾಂಶ ಗಾಯಿತ್ರಿ ಶಾಂತೇಗೌಡರ ಪರ ಬಂದಿತು.

ಈಗಾಗಲೇ ಎರಡು ಬಾರಿ ಪಟಾಕಿ ಸಿಡಿಸಿ ಜೈಕಾರ ಕೂಗಿದವರು ಅಂತಿಮವಾಗಿ ನಿನ್ನೆ ವಿಜಯೋತ್ಸವ ಆಚರಿಸಿದರು.ಅಂತಿಮವಾದ ತೀರ್ಪು ಬಂದರೂ ಒಂದು ತಿಂಗಳು ಮುಂದುವರೆಯಲು ಹಾಲಿ ಸದಸ್ಯ ಎಂ.ಕೆ.ಪ್ರಾಣೇಶ್ ಗೆ ಅವಕಾಶ ಕೊಡಲಾಗಿದೆ.ಇದರಿಂದ ಗಾಯತ್ರಿ ಶಾತೇಗೌಡ ಹಾರ,ತರಾಯಿಯಲ್ಲಿ ಕಾಲ ಕಳೆಯಬೇಕು.

ಬಿಜೆಪಿ ವಲಯದಲ್ಲಿ ಕೂಡ ಇದೇ ತರಹ ಲೆಕ್ಕಾಚಾರ ನಡೆದಿತ್ತು.ಆಗಸ್ಟ್ ಮೊದಲ ವಾರದ ಅಧಿವೇಶನ ಮುಗಿಯಲಿ ಎನ್ನುತ್ತಿದ್ದವರೆಗೆ ವರದಾನವಾಗಿದೆ. ಎಂ.ಕೆ.ಪ್ರಾಣೇಶ ಸುಪ್ರೀಂ ಕೋರ್ಟ್ ನ ತೀರ್ಪು ಜೊತೆಗೆ ನೈತಿಕ ಹೊಣೆ ಇದ್ದರೆ ರಾಜೀನಾಮೆ ನೀಡುವುದು ಒಳ್ಳೆಯದು ಇಲ್ಲದಿದ್ದರೆ ಭಂಡತನ ಎನ್ನುವ ಕಾಂಗ್ರೆಸ್ ನವರ ಒತ್ತಾಯ ಖಚಿತ.ಸುಪ್ರೀಂ ಕೋರ್ಟ್ ಇನ್ನೊಂದು ತಿಂಗಳು ಎಂದು ತೀರ್ಪು ಕೂಡ ಯಕ್ಷ ಪ್ರಶ್ನೆ ಯಾಗಿ ಉಳಿಯುತ್ತದೆ.

ಯಾರದ್ದು ಸರಿ ಎಂಬ ಪ್ರಶ್ನೆ ಮಧ್ಯೆ ಕಳೆದ ನಾಲ್ಕೂವರೆ ವರ್ಷಗಳಿಂದ ಕೋರ್ಟ್ ತಿರುಗಿದ್ದ ವೆಚ್ಚವಾಗಿರುವ ಹಣದ ವಹಿವಾಟು ಕೋಟ್ಯಂತರ ಎನ್ನಲಾಗುತ್ತಿದೆ.ಇಷ್ಟೊಂದು ಪ್ರತಿಷ್ಠೆ ಏಕೆ ಎಂದರೆ ಆದೇ “ಕುರ್ಚಿ” ಮಹಾತ್ಮೆ ಎನ್ನಬಹುದು.

ಕಳೆದ ತಿಂಗಳು ಶೃಂಗೇರಿ ಕ್ಷೇತ್ರದಲ್ಲೂ ಇಂತಹ ಘಟನೆ ನಡೆದು ದಿನಕ್ಕೂಬ್ಬರು ಶಾಸಕರಾದರು.ಬಿಜೆಪಿ ಜೀವರಾಜ್ ಮತ್ತು ಟಿ.ಡಿ.ರಾಜೇಗೌಡರ ಮಧ್ಯೆ ಇಂತಹ ಪ್ರಹಸನ ನಡೆದು ಅಂತಿಮವಾಗಿ ಸುಪ್ರೀಂ ಕೋರ್ಟ್ ನಲ್ಲಿ ಟಿ.ಡಿ.ರಾಜೇಗೌಡ ಶಾಸಕರಾಗಿ ಮುಂದುವರೆದಿದ್ದಾರೆ.ಈಗ ತೀರ್ಪು ಬಂದರು ಗಾಯಿತ್ರಿ ಶಾಂತೇಗೌಡ ಇನ್ನೂ ತಿಂಗಳು ಕಾಯಬೇಕಾಗಿದೆ.

A monthly “chair” for Pranesh? A guarantee for Gayathri for the rest of the term?

Share

Leave a comment

Leave a Reply

Your email address will not be published. Required fields are marked *

Don't Miss

ಕಾಫಿ ತೋಟದಲ್ಲಿ ಗಂಡು ಹುಲಿಯ ಮೃತದೇಹ ಪತ್ತೆ

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲ್ಲೂಕಿನ ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಮುತ್ತೋಡಿ ಪ್ರಾದೇಶಿಕ ವಲಯದ ವ್ಯಾಪ್ತಿಯ ಹೊಸ ತೋಟ ಪ್ರದೇಶದ ಖಾಸಗಿ ಕಾಫಿ ತೋಟದಲ್ಲಿ ಗಂಡು ಹುಲಿಯ ಮೃತದೇಹ ಸೋಮವಾರ ಸಂಜೆ...

ವಾಹನ ಡಿಕ್ಕಿಗೆ ಬೈಕ್ ಸವಾರ ಸಾವು

ಬೀರೂರು: ಕಡೂರು ತಾಲ್ಲೂಕಿನ ಹೇಮಗಿರಿ ಗೇಟ್ ಬಳಿಯ ಜಮೀನಿನಲ್ಲಿ ಕೆಲಸ ಮುಗಿಸಿ, ಅಜ್ಜಂಪುರ ಕಡೆಗೆ ಬೀರೂರು ಬೈಪಾಸ್ ರಸ್ತೆ ಮೂಲಕ ತೆರಳುತ್ತಿದ್ದ ವ್ಯಕ್ತಿಯೊಬ್ಬರು, ವಾಹನ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೀರೂರು...

Related Articles

ಮೂಡಿಗೆರೆಯಲ್ಲಿ ಅಕ್ರಮ ಅಂದರ್-ಬಾಹರ್ ಜೂಜಾಟದ ಮೇಲೆ ಪೊಲೀಸರ ದಾಳಿ

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟು ಜೂಜಾಟ ನಡೆಸುತ್ತಿದ್ದ ಸ್ಥಳದ ಮೇಲೆ ಮೂಡಿಗೆರೆ...

ಪ್ರೀತಿಯ ನಿರಾಕರಿಸಿದ ಯುವಕನಿಗೆ ಚಾಕು ಇರಿತ

ಚಿಕ್ಕಮಗಳೂರು: ನಗರದ ಮಲ್ಲಂದೂರು ರಸ್ತೆಯ ಗೋಲ್ಡನ್ ಬಾರ್ ಮುಂಭಾಗ ತಡರಾತ್ರಿ ಚಾಕು ಇರಿತ ಹಾಗೂ ಅಪಹರಣ...

ಕೆಲ ಉದ್ಯಮಗಳ ಕನಿಷ್ಟ ವೇತನ ಕಾಯ್ದೆ ವ್ಯಾಪ್ತಿಗೆ ತರಲು ಎಐಟಿಯೂಸಿ ಹೋರಾಟ

ಚಿಕ್ಕಮಗಳೂರು: ಕನಿಷ್ಟ ವೇತನ ಕಾಯ್ದೆಯಡಿಯಲ್ಲಿ ೮೨ ಉದ್ಯಮಗಳನ್ನು ಸೇರಿಸಲಾಗಿದೆ ಆದರೆ ೧೯ ಉದ್ಯಮಗಳನ್ನು ಕೈಬಿಡಲಾಗಿದೆ. ಈ...

ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಸನ್ನದ್ಧರಾಗಿ ಸೂಚನೆ

ಚಿಕ್ಕಮಗಳೂರು: ಬರ ಪರಿಸ್ಥಿತಿ ಎದುರಿಸಲು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಜಿಲ್ಲೆಯ ಎಲ್ಲಾ ಇಲಾಖೆಗಳ...