Home namma chikmagalur chikamagalur ಪ್ರಾಣೇಶ್ ಗೆ ತಿಂಗಳ “ಕುರ್ಚಿ ? ಉಳಿದ ಅವಧಿ ಗಾಯಿತ್ರಿಗೆ ಗ್ಯಾರಂಟಿ ?
chikamagalurHomeLatest Newsnamma chikmagalur

ಪ್ರಾಣೇಶ್ ಗೆ ತಿಂಗಳ “ಕುರ್ಚಿ ? ಉಳಿದ ಅವಧಿ ಗಾಯಿತ್ರಿಗೆ ಗ್ಯಾರಂಟಿ ?

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಆಕ್ರಮ ನಡೆದಿದೆ ಎಂದು ಕಳೆದ ನಾಲ್ಕುವರೆ ವರ್ಷಗಳಿಂದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗೆ ಸುತ್ತಿ,ಸುತ್ತಿ ಸುಸ್ತಾದವರಿಗೆ ಫಲಿತಾಂಶ ಗಾಯಿತ್ರಿ ಶಾಂತೇಗೌಡರ ಪರ ಬಂದಿತು.

ಈಗಾಗಲೇ ಎರಡು ಬಾರಿ ಪಟಾಕಿ ಸಿಡಿಸಿ ಜೈಕಾರ ಕೂಗಿದವರು ಅಂತಿಮವಾಗಿ ನಿನ್ನೆ ವಿಜಯೋತ್ಸವ ಆಚರಿಸಿದರು.ಅಂತಿಮವಾದ ತೀರ್ಪು ಬಂದರೂ ಒಂದು ತಿಂಗಳು ಮುಂದುವರೆಯಲು ಹಾಲಿ ಸದಸ್ಯ ಎಂ.ಕೆ.ಪ್ರಾಣೇಶ್ ಗೆ ಅವಕಾಶ ಕೊಡಲಾಗಿದೆ.ಇದರಿಂದ ಗಾಯತ್ರಿ ಶಾತೇಗೌಡ ಹಾರ,ತರಾಯಿಯಲ್ಲಿ ಕಾಲ ಕಳೆಯಬೇಕು.

ಬಿಜೆಪಿ ವಲಯದಲ್ಲಿ ಕೂಡ ಇದೇ ತರಹ ಲೆಕ್ಕಾಚಾರ ನಡೆದಿತ್ತು.ಆಗಸ್ಟ್ ಮೊದಲ ವಾರದ ಅಧಿವೇಶನ ಮುಗಿಯಲಿ ಎನ್ನುತ್ತಿದ್ದವರೆಗೆ ವರದಾನವಾಗಿದೆ. ಎಂ.ಕೆ.ಪ್ರಾಣೇಶ ಸುಪ್ರೀಂ ಕೋರ್ಟ್ ನ ತೀರ್ಪು ಜೊತೆಗೆ ನೈತಿಕ ಹೊಣೆ ಇದ್ದರೆ ರಾಜೀನಾಮೆ ನೀಡುವುದು ಒಳ್ಳೆಯದು ಇಲ್ಲದಿದ್ದರೆ ಭಂಡತನ ಎನ್ನುವ ಕಾಂಗ್ರೆಸ್ ನವರ ಒತ್ತಾಯ ಖಚಿತ.ಸುಪ್ರೀಂ ಕೋರ್ಟ್ ಇನ್ನೊಂದು ತಿಂಗಳು ಎಂದು ತೀರ್ಪು ಕೂಡ ಯಕ್ಷ ಪ್ರಶ್ನೆ ಯಾಗಿ ಉಳಿಯುತ್ತದೆ.

ಯಾರದ್ದು ಸರಿ ಎಂಬ ಪ್ರಶ್ನೆ ಮಧ್ಯೆ ಕಳೆದ ನಾಲ್ಕೂವರೆ ವರ್ಷಗಳಿಂದ ಕೋರ್ಟ್ ತಿರುಗಿದ್ದ ವೆಚ್ಚವಾಗಿರುವ ಹಣದ ವಹಿವಾಟು ಕೋಟ್ಯಂತರ ಎನ್ನಲಾಗುತ್ತಿದೆ.ಇಷ್ಟೊಂದು ಪ್ರತಿಷ್ಠೆ ಏಕೆ ಎಂದರೆ ಆದೇ “ಕುರ್ಚಿ” ಮಹಾತ್ಮೆ ಎನ್ನಬಹುದು.

ಕಳೆದ ತಿಂಗಳು ಶೃಂಗೇರಿ ಕ್ಷೇತ್ರದಲ್ಲೂ ಇಂತಹ ಘಟನೆ ನಡೆದು ದಿನಕ್ಕೂಬ್ಬರು ಶಾಸಕರಾದರು.ಬಿಜೆಪಿ ಜೀವರಾಜ್ ಮತ್ತು ಟಿ.ಡಿ.ರಾಜೇಗೌಡರ ಮಧ್ಯೆ ಇಂತಹ ಪ್ರಹಸನ ನಡೆದು ಅಂತಿಮವಾಗಿ ಸುಪ್ರೀಂ ಕೋರ್ಟ್ ನಲ್ಲಿ ಟಿ.ಡಿ.ರಾಜೇಗೌಡ ಶಾಸಕರಾಗಿ ಮುಂದುವರೆದಿದ್ದಾರೆ.ಈಗ ತೀರ್ಪು ಬಂದರು ಗಾಯಿತ್ರಿ ಶಾಂತೇಗೌಡ ಇನ್ನೂ ತಿಂಗಳು ಕಾಯಬೇಕಾಗಿದೆ.

A monthly “chair” for Pranesh? A guarantee for Gayathri for the rest of the term?

Share

Leave a comment

Leave a Reply

Your email address will not be published. Required fields are marked *

Don't Miss

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ: 9.20 ಲಕ್ಷ ಗಣತಿ ನಮೂನೆಗಳ ವಿತರಣೆ

ಚಿಕ್ಕಮಗಳೂರು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (Special Intensive Revision – SIR) ಕಾರ್ಯವು ಚಿಕ್ಕಮಗಳೂರು ಜಿಲ್ಲೆಯಲ್ಲಿ ವೇಗವಾಗಿ ಸಾಗುತ್ತಿದೆ. ಜಿಲ್ಲೆಯ ಒಟ್ಟು 9,60,231 ಮತದಾರರಿಗೆ...

ಮೌಲ್ಯ – ಸೇವೆ ಮರೆತು ಹಣ ದೂಚಲು ಪ್ರಜಾಪ್ರಭುತ್ವದ ಕಗ್ಗೂಲೆ…

ಅದಲು-ಬದಲು ಯಾವ ಪಕ್ಷಗಳಿಗೆ ಸಿದ್ದಾಂತ, ನೈತಿಕತೆ ಇದೆ ಭಾರತದಲ್ಲಿ ಸಾಧ್ಯವಿಲ್ಲ. ಎಲ್ಲಾ ಪಕ್ಷಗಳು ಬೆರಿಕೆಯ ತುರಿಕೆಯಲ್ಲಿವೆ.ಅದರಲ್ಲೂ ನಾಯಕರುಗಳು,ಮುಖಂಡರು ಮತ್ತೆ ಜನ ಕೂಡ ಮತ್ತೆ, ಮತ್ತೆ ಬೇಲಿ ಹಾರುವ ಚಾಳಿಗೆ ಒಗ್ಗಿಹೋಗುತ್ತಿದ್ದಾರೆ.ಒಟ್ಟಾರೆ ಅಧಿಕಾರ...

Related Articles

2023ರ ಬೆಟ್ಟಿಂಗ್ ದಂಧೆಯಲ್ಲಿ ಸಿ.ಟಿ.ರವಿ-ತಮ್ಮಯ್ಯ ಕಿಂಗ್ – ಪಿನ್ ಗಳಾ ?

ಚಿಕ್ಕಮಗಳೂರು: ಕ್ರಿಕೆಟ್ ಬೆಟ್ಟಿಂಗ್ ಅಪ್ ಗಳು ನಾಯಿ ಕೊಡೆಗಳಂತೆ ದಿನವೂ ಬೆಳೆಯಿತ್ತಿವೆ.ಇದಕ್ಕೆ ಮುಖ್ಯವಾಗಿ ಕ್ರಿಕೆಟ್ ಕೇಜ್...

ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಮಗ್ರ ತನಿಖೆಗೆ ಶಾಸಕ ಹೆಚ್.ಡಿ. ತಮ್ಮಯ್ಯ ಮನವಿ

ಚಿಕ್ಕಮಗಳೂರು: ಕ್ರಿಕೆಟ್ ಬೆಟ್ಟಿಂಗ್ ಕಿಂಗ್ ಪಿನ್‌ಗಳು ಯಾರ್‍ಯಾರು, ಅವರೆಲ್ಲರೂ ಯಾರ ಮನೆಯಲ್ಲಿದ್ದವರು. ಬೆಟ್ಟಿಂಗ್ ದುಡ್ಡಲ್ಲಿ ಇವರು...

ಚೆನ್ನಮ್ಮ ಅವರ ನಿಧನಕ್ಕೆ ವೈಎಸ್‌ವಿ ದತ್ತ ತೀವ್ರ ಕಂಬನಿ

ಚಿಕ್ಕಮಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ಅವರ ಕುಟುಂಬದ ಆಪ್ತ,...

ಸ್ಕೌಟ್ಸ್‌ನ ಗುಣಾತ್ಮಕ ವಿಚಾರಗಳನ್ನು ಮಕ್ಕಳಿಗೆ ಪರಿಚಯಿಸಬೇಕು

ಚಿಕ್ಕಮಗಳೂರು: ಸ್ಕೌಟ್ಸ್‌ನ ಗುಣಾತ್ಮಕ ವಿಚಾರಗಳನ್ನು ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿ ಗಳಿಗೆ ಪರಿಚಯಿಸುವ ಕಾರ್ಯ ಶಿಕ್ಷಕರು ಮಾಡಬೇಕು....