ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಮತ್ತೆ ಜಾರ್ಜ್ ರನ್ನು ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ.
ಕಳೆದ ಮೂರು ವರ್ಷಗಳಿಂದ ಜಿಲ್ಲೆಗೆ ಜಾರ್ಜ್ ಉಸ್ತುವಾರಿ ಯಾಗಿ ಬಂದೆ ಪುಟ್ಟ ಹೋದೆ ಪುಟ್ಟ ಎಂದು ಹೇಳುಬುದು ಬಿಟ್ಟು ಬೇರೇನೂ ಎಂದರೆ ಕಾಫಿ ತೋಟದ ಉಸ್ತುವಾರಿ ಮಾತ್ರ ಸುಲಲಿತವಾಗಿ ಸಾಗಿದೆ ಎನ್ನಿಸುತ್ತದೆ.
ಜಾರ್ಜ್ ಗೆ ವಯಸ್ಸಿನ ಸಮಸ್ಯೆ, ಭಾಷೆ ಸಮಸ್ಯೆ ಜಿಲ್ಲೆಯ ಉಸ್ತುವಾರಿ ಸರಿಯಾಗಿ ನಿಭಾಯಿಸಲು ಸಾಧ್ಯವಾಗಿಲ್ಲ. ಹೈಕಾಮ್ಯಾಂಡ್ ಶ್ರೀ ರಕ್ಷೆ,ಶ್ರೀ ಮಂತಿಕೆಯ ಬಲವಿರುವುದು ಕಾಂಗೈಗಳು ಜೈ ಹುಜೂರು ಎನ್ನುವುದು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ.
ಜಿಲ್ಲೆಗೆ ಜಾರ್ಜರಿಂದ ನಯಾ ಪೈಸೆ ಉಪಯೋಗ ಇಲ್ಲ ನಿಜ ಆದರೆ ಅವರ ಸ್ವಂತ ಕಾಫಿ ತೋಟ ವಿಸ್ತರಣೆಗೆ ತೊಂದರೆ ಇಲ್ಲ. ಕಳೆದ ಮೂರು ವರ್ಷಗಳಿಂದ ಯಾವುದೇ ಸಮಸ್ಯೆ ಬಗ್ಗೆ ಜನ ಅಳಲು ತೊಡಗಿಕೊಂಡರು ಅಧಕಾರಿಗಳ ಕಡೆ ಕೈ ತೋರಿಸುವ ಜಾರ್ಜ್ ಬಂದು ಹೋಗುವುದು ಹೆಲಿಕಾಪ್ಟರ್ ನಲ್ಲಿ ಈಗಾಗೀ ಜನರ ಸಮಸ್ಯೆ ಅರಿಯುವುದು ಸಾಧ್ಯವಿಲ್ಲ.
ಜಿಲ್ಲೆಯಲ್ಲಿ ಮಳೆ ಬಾರದೆ ರೈತರು,ಜನರು ಕಣ್ಣ್,ಕಣ್ಣ್ ಬಿಡುತ್ತಿದ್ದಾರೆ.ಏನಾಗಿದೆ ಎಂಬ ಸಾಮಾನ್ಯ ಸ್ಪಂದನೆ ಕೂಡ ಇಲ್ಲ. ಕಳೆದ ಮೂರು ತಿಂಗಳಿಂದ ನಾಪತ್ತೆಯಾಗಿದ್ದು ವಿದ್ಯುತ್ ಇಲಾಖೆ ಖಾಸಗಿಯವರಿಗೆ ಮಾರುವ ಹುನ್ನಾರಾ ನಡೆದಿರುವುದರಲ್ಲಿ ಎಷ್ಟು ಪಾಲು ದೊರೆಯುತ್ತದೆ ಎಂಬ ಲೆಕ್ಕಾಚಾರದಲದಲಿದ್ದಾರೆ ಎಂದು ಕಾಂಗ್ರೆಸ್ ನ ಮುಖಂಡರು ಮಾತನಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಜಿಲ್ಲೆಯಲ್ಲಿ ಒತ್ತುವರಿ ಸಮಸ್ಯೆ ಕಾಡು ಪ್ರಾಣಿಗಳ ಕಾಟ ಪ್ರವಾಸಿಗರಿಂದ ವ್ಯಬಿಚಾರ ಡ್ರಗ್ಸ್ ದಂಧೆ ಎಗ್ಗಿಲಗಲದೆ ನಡೆದರು ಕೇಳುವವರು ಇಲ್ಲ ಬಿಡಿ ಎನ್ನುವಂತಾಗಿದೆ.ಯಾಥಾ ರಾಜ ಥತಾ ಅಧಿಕಾರಿಗಳು ಎಂದು ಜನ ಹಿಡಿ ಶಾಪ ಹಾಕುತ್ತಿದ್ದಾರೆ
Two more years of trouble for George who turned his back on the district
Leave a comment