Home namma chikmagalur chikamagalur ಬಿ.ಎಲ್.ಶಂಕರ್ ರ ರಾಜಕೀಯ ಹಪ ಹಪಿಗೆ ಮತ್ತೆ ಮತ್ತೆ ತಣ್ಣೀರು !
chikamagalurHomeLatest Newsnamma chikmagalurPolitical News

ಬಿ.ಎಲ್.ಶಂಕರ್ ರ ರಾಜಕೀಯ ಹಪ ಹಪಿಗೆ ಮತ್ತೆ ಮತ್ತೆ ತಣ್ಣೀರು !

Share
DAYANANDApressss-CHIKMAGG<0,,
Share

ಬಿ.ಎಲ್.ಶಂಕರ್ ಕಾಂಗ್ರೆಸ್ ನ ರಾಜ್ಯ ನಾಯಕರು ನಿಜ,ಆದರೆ ಇವರು ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ನಲ್ಲಿ ಕಡ್ಡಿ ಆಡಿಸುವುದರಲ್ಲಿ ನಿಪುಣ.

ಕಾಂಗ್ರೆಸ್ ಸೇರಿ ಎಲ್ಲಾ ಚುನಾವಣೆಯಲ್ಲಿ ಸೋತು ದಾಖಲೆ ಮಾಡಿದ್ದಾರೆ.ಚಿತ್ರಕಲಾ ಪರಿಷತ್ತಗೆ ಗೂಟಾ ಹೊಡೆದುಕೊಂಡು ಸಮಯಕ್ಕೆ ,ವಿಷಯಕ್ಕೆ ಸರಿಯಾಗಿ ಭಾಷಣದ ಕಲೆ ಕರಗತ ಮಾಡಿಕೊಂಡು ಮಾತನಾಡುವ ಶಂಕರ್ ಹೆಸರು ಮತ್ತೊಮ್ಮೆ ಪೇಪರ್ ನಲ್ಲಿ ಬರುವುದು ಖಚಿತ .

ಜಿಲ್ಲೆಯ ಶಾಸಕರಲ್ಲಿ ಶೃಂಗೇರಿಯ ಶಾಸಕ ಟಿ.ಡಿ.ರಾಜೇಗೌಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ತಮ್ಮಯ್ಯ ಅನಿವಾರ್ಯವಾಗಿ ನಿಲ್ಲುತ್ತಾರೆ.ಆದರೆ ಶಾಸಕಿ ನಯನ ಮೋಟಮ್ಮ ಮಾತ್ರ ಶಂಕರ್ ಯಾರು ಎಂದು ಪ್ರಶ್ನಿಸಿದರೆ, ತರೀಕೆರೆ ಶಾಸಕ ಶ್ರೀನಿವಾಸ್‌ ಮತ್ತು ಕೆಡೂರು ಕ್ಷೇತ್ರದ ಶಾಸಕ ಆನಂದ್ ಸಾಲು ಸಾಲು ಸೋತ ಮುಖ ಇಟ್ಟುಕೊಂಡು ಸ್ಥಾನ ಮಾನ ಕೇಳವುದಾರೂ ಹೇಗೆ ಎಂಬ ಪ್ರಶ್ನೆ ಕಾಡುತ್ತದೆ.

ನಮ್ಮ ಕುಟುಂಬದವರು ಎಷ್ಟು ಕಷ್ಟ ಪಟ್ಟು ಜನಸೇವೆ ಮಾಡುತ್ತಿದ್ದಾರೆ ನಮಗೆ ಕೊಡಲಿ ಎನ್ನುತ್ತಿದ್ದಾರಂತೆ.ಇನ್ನೂ ಕಡೂರು ಶಾಸಕ ಆನಂದ್ ಶಂಕರ್ ಗೂ ನಮಗೂ ಸಂಬಂಧವಿಲ್ಲ ಎಂದು ಒಂದೇ ಮಾತಿನಲ್ಲಿ ಹೇಳುತ್ತಾರೆ .

ಸಂಕರಣ್ಣ ಮಾತ್ರ ಎಲ್ಲಾ ಸ್ವಾಭಿಮಾನ ಬದಿಗಿಟ್ಟು ಜುಬ್ಬಾ,ಪ್ಯಾಂಟ್ ಜೊತೆಗೆ ಸೆಂಟ್ ಹಾಕಿಕೊಂಡು ಭಾಷಣ ಮಾಡಲು ತಯಾರಿ ನಡೆಸಿಕೊಂಡು ಬಂದು ಚಪ್ಪಾಳೆ ತಟ್ಟಿಸಿಕೊಂಡು ಸಮಾಧಾನ ಪಡುತ್ತಿದ್ದಾರೆ.

ಜನತಾ ಪರಿವಾರ ತೊರೆದು ಬಂದವರು ಒಮ್ಮೆ ಲೋಕಸಭೆ ಮೂರು ಬಾರಿ ವಿದಾನ ಸಭಾ ಚುನಾವಣೆಗೆ ಸ್ಪರ್ಧಿಸಿ ಸೋತು ಗೌರವಾನ್ವಿತವಾಗಿ ಬದುಕು ಸಾಗಿಸುವ ಬದಲಿಗೆ ರಾಜ್ಯಸಭೆ,ಆಥವಾ ವಿಧಾನ ಪರಿಷತ್ ಗೆ ಒಳ ಹೋಗಲು ರಾಜಕೀಯ ಸಂಚಿಗೆ ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ,ಮತ್ತೊಂದು ಕಡೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹದವಾಗಿ ಕಾಯಿಸಿದ ಕಬ್ಬಿಣದ ಬರೆ ಹಾಕುತ್ತಿದ್ದಾರೆ.

ಎಪ್ಪತ್ತು ವರ್ಷಗಳಾದರೂ ಬುದ್ದಿ ಕಲಿಯದ ಬಿ.ಎಲ್.ಶಂಕರ್ ಅಧಿಕಾರಕ್ಕೆ ಹಾತೊರೆಯುತ್ತಿರುವುದು ನೋಡಿ ಕಾಂಗ್ರೆಸ್ ನಲ್ಲಿ ಗೇಲಿ ಮಾಡುತ್ತಿರುವುದು ನಿಜತಾನೇ. ವಯಸ್ಸು ಆದ ನಂತರ ರಾಜಕೀಯ ಮಾರ್ಗದರ್ಶನ ಮಾಡ ಬೇಕು,ಇಲ್ಲದಿದ್ದರೆ ಮನೆ ಸೇರಿಕೋ ಬೇಕು ಅದು ಬಿಟ್ಟು ಅಧಿಕಾರಕ್ಕಾಗಿ ಹಪಹಪಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಾಂಗ್ರೆಸ್ ನಲ್ಲಿ ಲೇವಡಿಗೆ ಒಳಗಾಗುತ್ತಿರುವಾಗ ಕನಿಷ್ಟ ಪಕ್ಷ ” ಜೆನ್ ಝೀ”ಗಳಿಂದಾಗುತ್ತಿರುವ.

ಬದಲಾವಣೆಗಳನ್ನು ನೋಡಿ ಕಲಿಯಬೇಕು. ವೇದಿಕೆ ಮೇಲೆ ನಿಂತು ಭಾಷಣ ಮಾಡುವುದು ಸುಲುಭ ಆದರೆ ಅನುಸರಿಸದಿರುವುದು ಎಷ್ಟರ ಮಟ್ಟಿಗೆ ಸರಿ. ರಾಜಕೀಯ ಅರಿದು ಕುಡಿದು, ಹಾಸಿ,ಹೊದ್ದು ಮಲಗಿದ ಅಸಾಮಿ ಬಿ.ಎಲ್.ಶಂಕರ್ ರಾಜಕೀಯ ತೂಕ ಕಳೆದುಕೊಂಡಿದ್ದಾರೆ ಎಂಬುದನ್ನು ಅರಿಯುವ ಬದಲಿಗೆ ಮತ್ತೆ,ಮತ್ತೆ ಎಡವಿ ಬೀಳುತ್ತಿದ್ದಾರೆ.ಎಚ್ಚರಿಕೆ ವಹಿಸದಿದ್ದರೆ ಹಾದಿ,ಬೀದಿಯಲ್ಲಿ ನಗೆಪಾಟಲಿಗೆ ಒಳಗಾಗುವುದು ಖಚಿತ.

B.L. Shankar’s political ambitions have been met with cold water again and again!

Share

Leave a comment

Leave a Reply

Your email address will not be published. Required fields are marked *

Don't Miss

ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪುಂಡಾಟ

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹೆಬ್ಬೆ ವಲಯ ವ್ಯಾಪ್ತಿಯ ಭದ್ರಾ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಯುವಕರ ತಂಡವೊಂದು ಖಾಸಗಿ ಓಪನ್ ಜೀಪಿನಲ್ಲಿ ಅಕ್ರಮವಾಗಿ ಪ್ರವೇಶಿಸಿ ಕಾಡಾನೆಗಳನ್ನು ಕಾಡಿರುವ ಆರೋಪ ಕೇಳಿಬಂದಿದ್ದು,...

ರೈತ ಸಂಘದ ಡಿ.ರಾಮೇಗೌಡ ಕಲ್ಲಹಳ್ಳಿ ಆಯ್ಕೆ ಕ್ರಮಬದ್ಧ

ಚಿಕ್ಕಮಗಳೂರು: ತಾಲ್ಲೂಕು ಅಧ್ಯಕ್ಷರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ತಾಲ್ಲೂಕು ಸಮಿತಿಯ ಸಭೆಯಲ್ಲಿ ಹಾಜರಿದ್ದ ಪದಾಧಿಕಾರಿಗಳ ನಿರ್ಣಯದಂತೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಡಿ.ರಾಮೇಗೌಡ ಕಲ್ಲಹಳ್ಳಿ ಅವರ ಆಯ್ಕೆ ಕ್ರಮಬದ್ಧವಾಗಿದೆ ಎಂದು ಕರ್ನಾಟಕ ರಾಜ್ಯ...

Related Articles

ಜನಪ್ರತಿನಿಧಿ ನಿರ್ಲಕ್ಷ್ಯಕ್ಕೆ ಬೇಸತ್ತು ದಂಪತಿ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ

ಮೂಡಿಗೆರೆ: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ದಂಪತಿ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ....

ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ

ಚಿಕ್ಕಮಗಳೂರು: ರಾಜ್ಯದ ಅತ್ಯುನ್ನತ ಶಿಖರವಾದ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಹಾಗೂ...

ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಓಮಿನಿ ಪಲ್ಟಿ

ಚಿಕ್ಕಮಗಳೂರು : ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಓಮಿನಿ ಕಾರೊಂದು ಚಾಲಕನ ನಿರ್ಲಕ್ಷ್ಯದಿಂದ ಪಲ್ಟಿಯಾದ ಘಟನೆ ಚಿಕ್ಕಮಗಳೂರು...

ಆಲ್ದೂರು ಸಮೀಪ ಅಪರಿಚಿತ ವ್ಯಕ್ತಿ ಶವ ಪತ್ತೆ

ಚಿಕ್ಕಮಗಳೂರು: ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಾಣಿಮಕ್ಕಿ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ...