Home namma chikmagalur chikamagalur ಬಿ.ಎಲ್.ಶಂಕರ್ ರ ರಾಜಕೀಯ ಹಪ ಹಪಿಗೆ ಮತ್ತೆ ಮತ್ತೆ ತಣ್ಣೀರು !
chikamagalurHomeLatest Newsnamma chikmagalurPolitical News

ಬಿ.ಎಲ್.ಶಂಕರ್ ರ ರಾಜಕೀಯ ಹಪ ಹಪಿಗೆ ಮತ್ತೆ ಮತ್ತೆ ತಣ್ಣೀರು !

Share
DAYANANDApressss-CHIKMAGG<0,,
Share

ಬಿ.ಎಲ್.ಶಂಕರ್ ಕಾಂಗ್ರೆಸ್ ನ ರಾಜ್ಯ ನಾಯಕರು ನಿಜ,ಆದರೆ ಇವರು ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ನಲ್ಲಿ ಕಡ್ಡಿ ಆಡಿಸುವುದರಲ್ಲಿ ನಿಪುಣ.

ಕಾಂಗ್ರೆಸ್ ಸೇರಿ ಎಲ್ಲಾ ಚುನಾವಣೆಯಲ್ಲಿ ಸೋತು ದಾಖಲೆ ಮಾಡಿದ್ದಾರೆ.ಚಿತ್ರಕಲಾ ಪರಿಷತ್ತಗೆ ಗೂಟಾ ಹೊಡೆದುಕೊಂಡು ಸಮಯಕ್ಕೆ ,ವಿಷಯಕ್ಕೆ ಸರಿಯಾಗಿ ಭಾಷಣದ ಕಲೆ ಕರಗತ ಮಾಡಿಕೊಂಡು ಮಾತನಾಡುವ ಶಂಕರ್ ಹೆಸರು ಮತ್ತೊಮ್ಮೆ ಪೇಪರ್ ನಲ್ಲಿ ಬರುವುದು ಖಚಿತ .

ಜಿಲ್ಲೆಯ ಶಾಸಕರಲ್ಲಿ ಶೃಂಗೇರಿಯ ಶಾಸಕ ಟಿ.ಡಿ.ರಾಜೇಗೌಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ತಮ್ಮಯ್ಯ ಅನಿವಾರ್ಯವಾಗಿ ನಿಲ್ಲುತ್ತಾರೆ.ಆದರೆ ಶಾಸಕಿ ನಯನ ಮೋಟಮ್ಮ ಮಾತ್ರ ಶಂಕರ್ ಯಾರು ಎಂದು ಪ್ರಶ್ನಿಸಿದರೆ, ತರೀಕೆರೆ ಶಾಸಕ ಶ್ರೀನಿವಾಸ್‌ ಮತ್ತು ಕೆಡೂರು ಕ್ಷೇತ್ರದ ಶಾಸಕ ಆನಂದ್ ಸಾಲು ಸಾಲು ಸೋತ ಮುಖ ಇಟ್ಟುಕೊಂಡು ಸ್ಥಾನ ಮಾನ ಕೇಳವುದಾರೂ ಹೇಗೆ ಎಂಬ ಪ್ರಶ್ನೆ ಕಾಡುತ್ತದೆ.

ನಮ್ಮ ಕುಟುಂಬದವರು ಎಷ್ಟು ಕಷ್ಟ ಪಟ್ಟು ಜನಸೇವೆ ಮಾಡುತ್ತಿದ್ದಾರೆ ನಮಗೆ ಕೊಡಲಿ ಎನ್ನುತ್ತಿದ್ದಾರಂತೆ.ಇನ್ನೂ ಕಡೂರು ಶಾಸಕ ಆನಂದ್ ಶಂಕರ್ ಗೂ ನಮಗೂ ಸಂಬಂಧವಿಲ್ಲ ಎಂದು ಒಂದೇ ಮಾತಿನಲ್ಲಿ ಹೇಳುತ್ತಾರೆ .

ಸಂಕರಣ್ಣ ಮಾತ್ರ ಎಲ್ಲಾ ಸ್ವಾಭಿಮಾನ ಬದಿಗಿಟ್ಟು ಜುಬ್ಬಾ,ಪ್ಯಾಂಟ್ ಜೊತೆಗೆ ಸೆಂಟ್ ಹಾಕಿಕೊಂಡು ಭಾಷಣ ಮಾಡಲು ತಯಾರಿ ನಡೆಸಿಕೊಂಡು ಬಂದು ಚಪ್ಪಾಳೆ ತಟ್ಟಿಸಿಕೊಂಡು ಸಮಾಧಾನ ಪಡುತ್ತಿದ್ದಾರೆ.

ಜನತಾ ಪರಿವಾರ ತೊರೆದು ಬಂದವರು ಒಮ್ಮೆ ಲೋಕಸಭೆ ಮೂರು ಬಾರಿ ವಿದಾನ ಸಭಾ ಚುನಾವಣೆಗೆ ಸ್ಪರ್ಧಿಸಿ ಸೋತು ಗೌರವಾನ್ವಿತವಾಗಿ ಬದುಕು ಸಾಗಿಸುವ ಬದಲಿಗೆ ರಾಜ್ಯಸಭೆ,ಆಥವಾ ವಿಧಾನ ಪರಿಷತ್ ಗೆ ಒಳ ಹೋಗಲು ರಾಜಕೀಯ ಸಂಚಿಗೆ ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ,ಮತ್ತೊಂದು ಕಡೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹದವಾಗಿ ಕಾಯಿಸಿದ ಕಬ್ಬಿಣದ ಬರೆ ಹಾಕುತ್ತಿದ್ದಾರೆ.

ಎಪ್ಪತ್ತು ವರ್ಷಗಳಾದರೂ ಬುದ್ದಿ ಕಲಿಯದ ಬಿ.ಎಲ್.ಶಂಕರ್ ಅಧಿಕಾರಕ್ಕೆ ಹಾತೊರೆಯುತ್ತಿರುವುದು ನೋಡಿ ಕಾಂಗ್ರೆಸ್ ನಲ್ಲಿ ಗೇಲಿ ಮಾಡುತ್ತಿರುವುದು ನಿಜತಾನೇ. ವಯಸ್ಸು ಆದ ನಂತರ ರಾಜಕೀಯ ಮಾರ್ಗದರ್ಶನ ಮಾಡ ಬೇಕು,ಇಲ್ಲದಿದ್ದರೆ ಮನೆ ಸೇರಿಕೋ ಬೇಕು ಅದು ಬಿಟ್ಟು ಅಧಿಕಾರಕ್ಕಾಗಿ ಹಪಹಪಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಾಂಗ್ರೆಸ್ ನಲ್ಲಿ ಲೇವಡಿಗೆ ಒಳಗಾಗುತ್ತಿರುವಾಗ ಕನಿಷ್ಟ ಪಕ್ಷ ” ಜೆನ್ ಝೀ”ಗಳಿಂದಾಗುತ್ತಿರುವ.

ಬದಲಾವಣೆಗಳನ್ನು ನೋಡಿ ಕಲಿಯಬೇಕು. ವೇದಿಕೆ ಮೇಲೆ ನಿಂತು ಭಾಷಣ ಮಾಡುವುದು ಸುಲುಭ ಆದರೆ ಅನುಸರಿಸದಿರುವುದು ಎಷ್ಟರ ಮಟ್ಟಿಗೆ ಸರಿ. ರಾಜಕೀಯ ಅರಿದು ಕುಡಿದು, ಹಾಸಿ,ಹೊದ್ದು ಮಲಗಿದ ಅಸಾಮಿ ಬಿ.ಎಲ್.ಶಂಕರ್ ರಾಜಕೀಯ ತೂಕ ಕಳೆದುಕೊಂಡಿದ್ದಾರೆ ಎಂಬುದನ್ನು ಅರಿಯುವ ಬದಲಿಗೆ ಮತ್ತೆ,ಮತ್ತೆ ಎಡವಿ ಬೀಳುತ್ತಿದ್ದಾರೆ.ಎಚ್ಚರಿಕೆ ವಹಿಸದಿದ್ದರೆ ಹಾದಿ,ಬೀದಿಯಲ್ಲಿ ನಗೆಪಾಟಲಿಗೆ ಒಳಗಾಗುವುದು ಖಚಿತ.

B.L. Shankar’s political ambitions have been met with cold water again and again!

Share

Leave a comment

Leave a Reply

Your email address will not be published. Required fields are marked *

Don't Miss

ಅಜ್ಜಂಪುರದ ಇಲಿಗೆ ‘ಹಣದ ಮೋಹ’

ಚಿಕ್ಕಮಗಳೂರು : ತುಮಕೂರಿನಲ್ಲಿ ಇತ್ತೀಚೆಗೆ ಇಲಿಯೊಂದು ಚಿನ್ನದ ಆಭರಣಗಳನ್ನು ಎಗರಿಸಿ ಸುದ್ದಿಯಾಗಿದ್ದರೆ, ಇತ್ತ ಚಿಕ್ಕಮಗಳೂರಿನಲ್ಲಿ ಮತ್ತೊಂದು ಚಾಣಾಕ್ಷ ಇಲಿ ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ಹಣವನ್ನೇ ಕದ್ದು ತನ್ನ ಸಾಮ್ರಾಜ್ಯ...

ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಹೆಸರಿನಲ್ಲಿಯೂ ನಕಲಿ ವಾಟ್ಸಪ್ ಖಾತೆ

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಹ್ಯಾಕರ್‌ಗಳು ಮತ್ತು ವಂಚಕರು ವಾಟ್ಸಪ್, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರನ್ನು...

Related Articles

ಮುಳ್ಳಯ್ಯನಗಿರಿ ಕ್ರಾಸ್ ಬಳಿ ಟಿಟಿ ವಾಹನ ಮರಕ್ಕೆ ಡಿಕ್ಕಿ

ಚಿಕ್ಕಮಗಳೂರು: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಕ್ರಾಸ್ ಬಳಿ ಶುಕ್ರವಾರ ಇನೋವಾ ಕಾರು ನಿಯಂತ್ರಣ...

ಹಾಸ್ಟೆಲ್‌ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು: ಸಮಗ್ರ ಗಿರಿಜನ ಕಲ್ಯಾಣ ಇಲಾಖೆ (ಐಟಿಡಿಪಿ) ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ...

ಮನೆಯ ಮೇಲ್ಛಾವಣಿಯ ಹೆಂಚು ತೆಗೆದು ನುಗ್ಗಿ ಸರಗಳ್ಳತನ

ನರಸಿಂಹರಾಜಪುರ: ಮನೆಯಲ್ಲಿ ದಂಪತಿ ಮಲಗಿದ್ದ ವೇಳೆ ಮೇಲ್ಛಾವಣಿಯ ಹೆಂಚು ತೆಗೆದು ಒಳನುಗ್ಗಿದ ಕಳ್ಳನೊಬ್ಬ ಮಹಿಳೆಯ ಕೊರಳಿನಲ್ಲಿದ್ದ...

ಕನಸು ಫೈನಾನ್ಸ್ ಹೆಸರಿನಲ್ಲಿ ₹1.60 ಲಕ್ಷ ವಂಚನೆ ಆರೋಪ

ಕಡೂರು: ಪ್ರತಿದಿನ ಉಳಿತಾಯದ ಹಣವನ್ನು ಸ್ವೀಕರಿಸಿ ಶೇ.7ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ, ಹಣವನ್ನು ವಾಪಸ್ ನೀಡದೆ...