ಚಿಕ್ಕಮಗಳೂರು: ಕನ್ನಡ ನಾಮಫಲಕದಲ್ಲಿ ಶೇ. ೬೦ ಮತ್ತು ಆಂಗ್ಲಭಾಷೆಗೆ ಶೇ. ೪೦ ರಷ್ಟು ಇರಬೇಕೆಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ತಪ್ಪದೆ ಪಾಲಿಸುವಂತೆ ಆಗ್ರಹಿಸಿ ಬುಧವಾರ ಕನ್ನಡಸೇನೆ ಪದಾಧಿಕಾರಿಗಳು ಸಿರಸ್ತೆದಾರು ಮನು ರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ನಂತರ ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಗೆ ಧಕ್ಕೆ ತರುವ ಪ್ರಯತ್ನಗಳು ದೊರೆಯುತ್ತಿದ್ದು ಹಿಂದೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದ ತಾವು ೨೦೨೩ ರಲ್ಲಿ ಮುಖ್ಯ ಮಂತ್ರಿಗಳಾಗಿದ್ದ ಸಿದ್ಧರಾಮಯ್ಯ ರವರು ಕನ್ನಡ ನಾಮಫಲಕದಲ್ಲಿ ಶೇ. ೬೦/೪೦ ರ ಅನುಪಾತದಲ್ಲಿ ಕನ್ನಡ ಭಾಷೆ ಇರಬೇಕೆಂದು ತಿಳಿಸಿದ್ದೀರಿ.
ಇತ್ತೀಚೆಗೆ ಸರ್ಕಾರದ ಈ ಆದೇಶವನ್ನು ಗಾಳಿಗೆ ತೂರಿ ವಾಣಿಜ್ಯ ಉದ್ಯಮಗಳು ನಾಮಫಲಕದಲ್ಲಿ ಕನ್ನಡ ಕಡ್ಡಾಯ ಎಂಬುವುದನ್ನು ಮರೆತಿದ್ದಾರೆ, ಕೂಡಲೇ ಅಂತವರ ಉದ್ದಿಮೆ ಪರವಾನಿಗೆಯನ್ನು ರದ್ದುಗೊಳಿಸುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಬಗ್ಗೆ ನಗರಸಭಾ ಪೌರಾಯುಕ್ತರು, ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಕನ್ನಡ ಸೇನೆ ವತಿಯಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ರಾಜ್ಯದ ಎಲ್ಲಾ ಆಂಗ್ಲಮಾಧ್ಯಮ ಶಾಲಾ-ಕಾಲೇಜುಗಳಲ್ಲಿ ನಾಡ ಗೀತೆಯನ್ನು ಕಡ್ಡಾಯಗೊಳಿಸಬೇಕು, ಈ ಆದೇಶವನ್ನು ಪಾಲಿಸದ ಶಾಲಾ-ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜೊತೆಗೆ ಪೂರ್ಣಪ್ರಮಾಣದ ವೈದ್ಯರು, ದಾದಿಯರು ಹಾಗೂ ಎಲ್ಲಾ ರೀತಿಯ ಔಷಧಿಗಳನ್ನು ಸರಬರಾಜು ಮಾಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಆಟೋ ಅಧ್ಯಕ್ಷ ಜಯಪ್ರಕಾಶ್, ಎಂ.ಟಿ ಮರಬೈಲು ಜಗಧೀಶ್, ನಗರಾಧ್ಯಕ್ಷ ಸತೀಶ್, ಹರಿಶಂಕರ್, ಹುಣಸೆಮುಕ್ಕಿ ಲಕ್ಷ್ಮಣ್, ಪ್ರಸನ್ನ, ಹರೀಶ್, ಪಾಲಾಕ್ಷ, ಅನ್ವರ್, ಪಾಪಣ್ಣ, ಲವ, ನವೀನ್, ಸಂಜೀವ್, ಚೇತನ್ ಉಪಸ್ಥಿತರಿದ್ದರು.
Kannada Army appeals for Kannada to be mandatory on nameplates
Leave a comment