Home namma chikmagalur chikamagalur ಷೇರುದಾರರಿಗೆ ಅನುಕೂಲಕ್ಕೆ ಆಡಳಿತ ವ್ಯವಸ್ಥೆ ಡಿಜಿಟಲೀಕರಣ
chikamagalurHomeLatest Newsnamma chikmagalur

ಷೇರುದಾರರಿಗೆ ಅನುಕೂಲಕ್ಕೆ ಆಡಳಿತ ವ್ಯವಸ್ಥೆ ಡಿಜಿಟಲೀಕರಣ

Share
Oplus_16908288
Share

ಚಿಕ್ಕಮಗಳೂರು: ಚಿಕ್ಕಮಗಳೂರು ಟೌನ್ ಕೋ-ಆಪರೇಟಿವ್ ಸೊಸೈಟಿಯ ಆಡಳಿತ ವ್ಯವಸ್ಥೆಯನ್ನು ಷೇರುದಾರರಿಗೆ ಅನುಕೂಲ ಆಗುವಂತೆ ಡಿಜಿಟಲೀಕರಣಗೊಳಿಸಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ವರಸಿದ್ದಿ ವೇಣುಗೊಪಾಲ ಹೇಳಿದರು.

ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಹಿಂದೆ ಚೆಕ್ ಮೂಲಕ ಸಾಲವಿತರಣೆ ಮಾಡುತ್ತಿದ್ದು ಇದೀಗ ನೇರವಾಗಿ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್, ನೆಫ್ಟ್ ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ಸಾಲಗಳ ವಸೂಲಾತಿಯನ್ನು ಮೊಬೈಲ್ ಆಪ್ ಬಳಸಿ ಪಾರದರ್ಶಕವಾದ ವಸೂಲಾತಿ ನಡೆಯುತ್ತಿದೆ. ಕಳೆದ ವರ್ಷ ನಮ್ಮ ಆಡಳಿತ ಮಂಡಳಿ ನೀಡಿದ್ದ ಭರವಸೆಯನ್ನು ಸಂಪೂರ್ಣ ಈಡೇರಿಸಿದೆ ಎಂದು ತಿಳಿಸಿದರು.

ಕಳೆದ ೧೫ ವರ್ಷದಲ್ಲಿ ಬಾಕಿ ಇದ್ದ ೧.೫ ಕೋಟಿ ರೂ ಸಾಲವನ್ನು ವಸೂಲಿ ಮಾಡಲಾಗಿದೆ. ಸುಮಾರು ೧೨೫ ಮಂದಿ ಸಾಲಗಾರರನ್ನು ಕಚೇರಿಗೆ ಕರೆಸಿ ತಿಳಿಹೇಳಿ ಸಾಲ ಕಟ್ಟುವಂತೆ ಮನವೊಲಿಸಿದ್ದೇವೆ. ಪುನಾ ಈ ವರ್ಷ ೧೦೦ ಮಂದಿ ಷೇರುದಾರರಿಗೆ ಸಾಲ ವಿತರಿಸಿದ್ದೇವೆ. ಸಂಘಕ್ಕೆ ೧೫೦ ಕ್ಕೂ ಅಧಿಕ ಸದಸ್ಯರನ್ನು ನೊಂದಾಯಿಸಿಕೊಳ್ಳಲಾಗಿದೆ. ಷೇರುದಾರರಿಂದ ಸಂಘದ ಬಂಡವಾಳ ವೃದ್ದಿಸಿಕೊಳ್ಳಲಾಗಿದೆ ಎಂದರು.

ನಮ್ಮ ಸಂಸ್ಥೆಯಲ್ಲಿ ಸಂಘದ ಹಿರಿಯ ಸದಸ್ಯರಿಗೆ ಅಧಿಕ ಬಡ್ಡಿ ನೀಡಲಾಗುತ್ತಿದೆ. ಸಂಘದ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ ಅವರು, ಸಂಘದ ಷೇರು ೫೦೦ ರೂ.ಗಳಿದ್ದು ಇದನ್ನು ೨ ಸಾವಿರ ರೂ. ಗೆ ಹೆಚ್ಚಿಸಲು ಕಾರ್ಯಕಾರಿ ಮಂಡಳಿ ತೀರ್ಮಾನಿಸಿ ಮಹಾಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ. ಹಿಗಾಗಿ ಎಲ್ಲ ಸದಸ್ಯರು ೨ ಸಾವಿರ ರೂ. ಷೇರು ಹಣವನ್ನು ಭರ್ತಿಮಾಡುವಂತೆ ವಿನಂತಿಸುತ್ತೇನೆ ಎಂದು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಉಪಾಧ್ಯಕ್ಷೆ ಹಾಲಮ್ಮ ರಾಮಚಂದ್ರ, ನಿರ್ದೇಶಕರಾದ ರಘು, ಗಂಗಾಧರ, ಪ್ರಶಾಂತ್, ಕುಮಾರ್, ರವಿ ಕುಮಾರ್, ಈಶ್ವರಪ್ಪ ಕೋಟೆ, ಕೇಶವ ಮೂರ್ತಿ , ಕಾರ್ಯದರ್ಶಿ ಗಾಯತ್ರಿ ಉಪಸ್ಥಿತರಿದ್ದರು.

Digitalization of the governance system for the benefit of shareholders

Share

Leave a comment

Leave a Reply

Your email address will not be published. Required fields are marked *

Don't Miss

ಬಸವಣ್ಣ ಸಮಾನತೆ ದಾರಿ ತೋರಿದ ಮಹಾನ್ ಮಾನವತಾವಾದಿ

ಚಿಕ್ಕಮಗಳೂರು: ಬಸವಣ್ಣನವರು ಕೇವಲ ಒಂದು ಧರ್ಮ ಅಥವಾ ಜಾತಿಗೆ ಸೀಮಿತರಾದವರಲ್ಲ, ಅವರು ಇಡೀ ಮಾನವಕುಲಕ್ಕೆ ಸಮಾನತೆಯ ದಾರಿ ತೋರಿದ ಮಹಾನ್ ಮಾನವತಾವಾದಿ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು. ನಗರದ ಕುವೆಂಪು ಕಲಾಮಂದಿರದಲ್ಲಿ...

ಸಾಕು ನಾಯಿ ದಾಳಿಯಿಂದ ಏಳು ವರ್ಷದ ಮಗುವಿಗೆ ಗಾಯ

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಕೆ. ಕೆಳಗೂರು ಗ್ರಾಮದ ಕಾಫಿ ಎಸ್ಟೇಟ್ ಒಂದರಲ್ಲಿ ಸಾಕು ನಾಯಿಯೊಂದು ಏಕಾಏಕಿ ಬಾಲಕನ ಮೇಲೆ ದಾಳಿ ನಡೆಸಿದ್ದು, ಏಳು ವರ್ಷದ ಮಗು ಸಾವು ಬದುಕಿನ ನಡುವೆ...

Related Articles

ಒಳ ಮೀಸಲಾತಿ ಜಾರಿಯಲ್ಲಿ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ಪಾಲಿಸಿಲ್ಲ

ಚಿಕ್ಕಮಗಳೂರು: ಒಳ ಮೀಸಲಾತಿ ಜಾರಿಯಲ್ಲಿ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ಪಾಲಿಸಿಲ್ಲ, ಎಸ್‌ಸಿಎಸ್‌ಟಿ ಮೀಸಲಾತಿಯನ್ನು ಕಡಿತಗೊಳಿಸಿರುವುದು...

ಜಿಲ್ಲಾ ಜಾನಪದ ಸಮ್ಮೇಳನದಲ್ಲಿ ಜಾನಪದ ಲೋಕ ಅನಾವರಣ

ಚಿಕ್ಕಮಗಳೂರು: ಕರ್ನಾಟಕ ಜಾನಪದ ಪರಿ?ತ್ತಿನಿಂದ ನಗರದ ಕುವೆಂಪು ಕಲಾಮಂ ದಿರದಲ್ಲಿ ಭಾನುವಾರ ನಡೆದ ೬ ನೇ...

ಚಾರ್ಮಾಡಿ ಘಾಟಿಯಲ್ಲಿ ಎರಡು ವಾಹನಗಳು ಪಲ್ಟಿ

ಮೂಡಿಗೆರೆ: ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿಯ ಎಂಟನೇ ತಿರುವಿನಲ್ಲಿ ಅಪಘಾತ...

ಮೊಬೈಲ್ ಸಂದೇಶ ಕಳುಹಿಸುವ ವಿಚಾರ – ಎರಡು ಕುಟುಂಬಗಳ ನಡುವೆ ಭೀಕರ ಮಾರಾಮಾರಿ

ಕಡೂರು: ಸಕ್ಕರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಕುನ್ನಾಳು ಗ್ರಾಮದಲ್ಲಿ ಮೊಬೈಲ್ ಸಂದೇಶ ಕಳುಹಿಸುವ ವಿಚಾರಕ್ಕೆ ಸಂಬಂಧಿಸಿದಂತೆ...