Home namma chikmagalur chikamagalur ಸಬ್ಸಿಡಿ ಕೊಡಿಸುವುದಾಗಿ ನಂಬಿಸಿ 80 ರೈತರಿಗೆ ವಂಚನೆ
chikamagalurCrime NewsHomeLatest Newsnamma chikmagalur

ಸಬ್ಸಿಡಿ ಕೊಡಿಸುವುದಾಗಿ ನಂಬಿಸಿ 80 ರೈತರಿಗೆ ವಂಚನೆ

Share
Share
ಕಡೂರು : ಸರಕಾರದ ವಿವಿಧ ಇಲಾಖೆಗಳಡಿ ದೊರೆಯುವ ಸಬ್ಸಿಡಿ ಸವಲತ್ತುಗಳನ್ನು ಕೊಡಿಸುವುದಾಗಿ ನಂಬಿಸಿ ೮೦ ಜನ ರೈತರಿಂದ ೧.೩೪ ಕೋಟಿಗೂ ಹೆಚ್ಚು ಹಣವನ್ನು ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಬೆಂಗಳೂರಿನ ಕೆ. ಗಂಗಾಧರಗೌಡ ಎಂಬಾತ ವ್ಯಕ್ತಿಯು ರೈತರಿಂದ ವಂಚಿತ ಆರೋಪಿಯಾಗಿದ್ದು. ಕಳೆದ ೨೦೨೪ರ ಜೂನ್‌ನಲ್ಲಿ ವಿಧಾನಸೌಧದ ಬಳಿಯ ಪರಿಚಯವಾಗಿದ್ದ ಕೆ.ಗಂಗಾಧರಗೌಡ ಎಂಬಾತನು ರೈತರುಗಳಿಗೆ ಸರ್ಕಾರದ ಹೊಸ ಹೊಸ ಸ್ಕೀಮ್ ಗಳಲ್ಲಿ ಕೃಷಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಇನ್ನು ಇತರ ಇಲಾಖೆಗಳಿಂದ ಸಬ್ಸಿಡಿ ದರದಲ್ಲಿ ಸವಲತ್ತುಗಳನ್ನು ಕೊಡಿಸುತ್ತೇನೆಂದು, ರೈತರುಗಳು ೫೦ ಸಾವಿರ ಭರಿಸಿದರೆ, ಒಂದು ಟ್ರಾಕ್ಟರ್‌ಗೆ ೩ ಲಕ್ಷ ರೂಗಳ ಸಬ್ಸೀಡಿಯನ್ನು ಕೊಡಿಸುತ್ತೇನೆಂದು ನಂಬಿಸಿದ್ದು, ಇದನ್ನು ನಂಬಿ ಸ್ನೇಹಿತರಾದ ಕಲ್ಲೇಶ್ ಮತ್ತು ಚಂದ್ರಶೇಖರ್ ಮೂರು ಜನರು ಸೇರಿ ಒಟ್ಟು ಸುಮಾರು ೮೦ ಜನ ರೈತರಿಂದ ಪಡೆದಿದ್ದ ಒಟ್ಟು ೧,೩೪,೯೮,೪೦೦ ರೂ. ಹಣವನ್ನು ಗಂಗಾಧರ ಗೌಡಗೆ ಪಾವತಿಸಿದ್ದಾರೆ.
ಹಣ ಸಂದಾಯದ ದಾಖಲಾತಿಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದು ಹಾಗೂ ಇದೇ ರೀತಿ ಗಂಗಾಧರಗೌಡನು ಇತರೆ ರೈತರಿಂದಲೂ ಹಣ ಪಡೆದಿದದ್ದು,  ಇದುವರೆವಿಗೂ ಸರ್ಕಾರದ ಯಾವುದೇ ಸವಲತ್ತುಗಳನ್ನು ಮಾಡಿಸಿಕೊಡದ ಪರಿಣಾಮ ಅನುಮಾನಗೊಂಡು ಪದೇ ಪದೇ ಫೋನ್ ಕರೆ ಮಾಡಿ ವಿಚಾರಿಸಿದಾಗ ಬಜೆಟ್ ಅಧಿವೇಶನ, ಮತ್ತು ಬೆಳಗಾವಿಯ ಅಧಿವೇಶನ ಮುಗಿಯಲಿ, ಸಬ್ಡಿಡಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಕಡತಗಳು ವಿಲೇವಾರಿಗೊಂಡಿದ್ದು, ಶೀಘ್ರದಲ್ಲೇ ಸವಲತ್ತುಗಳು ದೊರೆಯುತ್ತದೆ ಎಂದು ಸಬೂಬು ಉತ್ತರ ಕೊಡುವ ಮೂಲಕ ನಂಬಿಸಿದ್ದಾನೆ.
ಬಳಿಕ ಯಾವುದೇ ಸಂಪರ್ಕಕ್ಕೆ ಸಿಗದ ಹಿನ್ನಲೆಯಲ್ಲಿ ತಾವು ಮೋಸಹೋಗಿರುವುದಾಗಿ ತಿಳಿದು ತಾಲ್ಲೂಕಿನ ವೈ.ಮಲ್ಲಾಪುರ ವಾಸಿ ಎಂ.ಬಿ. ಮಹೇಶ್ವರಪ್ಪ ಕೆ. ಗಂಗಾಧರಗೌಡ ವಿರುದ್ದ ದೂರು ದಾಖಲಿಸಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
80 farmers cheated by promising subsidy
Share

Leave a comment

Leave a Reply

Your email address will not be published. Required fields are marked *

Don't Miss

ನಕಲಿ “ಐ.ಎ.ಎಸ್” ಮಿಥುನ್ ಬಂಧನ

ಬೆಂಗಳೂರು: ಚಿಕ್ಕಮಗಳೂರು ಮೂಲದ ಮಿಥುನ್ ಎಂಬತಾ ಐ.ಎ.ಎಸ್.ನ ನಕಲಿ ದಾಖಲೆ ಸೃಷ್ಟಿ ಮಾಡಿ ಹಲವರಿಗೆ ವಂಚನೆ ಮಾಡಿದ್ದು ಬೆಂಗಳೂರಿನ ಅಮೃತಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಅರೋಗ್ಯ ಇಲಾಖೆಯ ಎನ್.ಹೆಚ್.ಎಮ್.ನ ಉಸ್ತುವಾರಿ ಎಂದು...

ನಗರದಲ್ಲಿ ಹಾಡುಹಗಲೇ ಶಿಕ್ಷಕಿಯ ಮಾಂಗಲ್ಯ ಸರ ಅಪಹರಣ

ಚಿಕ್ಕಮಗಳೂರು: ಹಾಡುಹಗಲೇ ಶಿಕ್ಷಕಿಯ ಕೊರಳಿಗೆ ಕೈ ಹಾಕಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದ ಘಟನೆ ಸೋಮವಾರ ಸಂಜೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಈ ಕುರಿತು ಚಿಕ್ಕಮಗಳೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ...

Related Articles

ಪ್ರಯಾಣಿಕರೇ ಬಸ್ ತಳ್ಳುವ ಕೆಎಸ್‌ಆರ್‌ಟಿಸಿ ಬಸ್‌

ಚಿಕ್ಕಮಗಳೂರು: ಸರ್ಕಾರದ ಉಚಿತ ಯೋಜನೆಗಳ ಆರ್ಭಟದ ನಡುವೆ ಸಾರಿಗೆ ಬಸ್‌ಗಳ ನಿರ್ವಹಣೆ ಅಧೋಗತಿಗೆ ತಲುಪಿದೆಯೇ? ಇಂತಹದೊಂದು ಪ್ರಶ್ನೆ...

ಏ.23ಕ್ಕೆ ಕರಾಳಕೃತ್ಯ ಖಂಡಿಸಿ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

ಚಿಕ್ಕಮಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಡೆಯದ ಅಪಚಾರ ಏಪ್ರಿಲ್ ೨೩ ರಂದು ಪಶ್ಚಿಮಬಂಗಾಳದಲ್ಲಿ ನಡೆಯುತ್ತಿದೆ. ಇದನ್ನು ವಿರೋಧಿಸಿ...

ಭದ್ರಾ ಅಭಯಾರಣ್ಯದಲ್ಲಿ ಭ್ರಷ್ಟಾಚಾರ

ಚಿಕ್ಕಮಗಳೂರು:ಭದ್ರಾ ಅಭಯಾರಣ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಮೌನವಹಿಸಿದ್ದಾರೆಂದು ದಲಿತ ಸಂಘರ್ಷಸಮಿತಿ ರಾಜ್ಯ ಸಂಘಟನಾ ಸಂಚಾಲಕ...

ಜನತೆ ಬಿಸಿಲಿನ ಬೇಗೆಗೆ ತತ್ತರಿಸಿ ಹೋದ ಕಾಫಿನಾಡಿನ ಜನತೆ

ಚಿಕ್ಕಮಗಳೂರು: ಮಲೆನಾಡಿನ ಮಡಿಲು, ತಂಪಾದ ಹವಾಮಾನಕ್ಕೆ ಹೆಸರಾದ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಈ ಬಾರಿ ಸೂರ್ಯನ ಪ್ರಖರತೆ...