Home namma chikmagalur chikamagalur ಸಬ್ಸಿಡಿ ಕೊಡಿಸುವುದಾಗಿ ನಂಬಿಸಿ 80 ರೈತರಿಗೆ ವಂಚನೆ
chikamagalurCrime NewsHomeLatest Newsnamma chikmagalur

ಸಬ್ಸಿಡಿ ಕೊಡಿಸುವುದಾಗಿ ನಂಬಿಸಿ 80 ರೈತರಿಗೆ ವಂಚನೆ

Share
Share
ಕಡೂರು : ಸರಕಾರದ ವಿವಿಧ ಇಲಾಖೆಗಳಡಿ ದೊರೆಯುವ ಸಬ್ಸಿಡಿ ಸವಲತ್ತುಗಳನ್ನು ಕೊಡಿಸುವುದಾಗಿ ನಂಬಿಸಿ ೮೦ ಜನ ರೈತರಿಂದ ೧.೩೪ ಕೋಟಿಗೂ ಹೆಚ್ಚು ಹಣವನ್ನು ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಬೆಂಗಳೂರಿನ ಕೆ. ಗಂಗಾಧರಗೌಡ ಎಂಬಾತ ವ್ಯಕ್ತಿಯು ರೈತರಿಂದ ವಂಚಿತ ಆರೋಪಿಯಾಗಿದ್ದು. ಕಳೆದ ೨೦೨೪ರ ಜೂನ್‌ನಲ್ಲಿ ವಿಧಾನಸೌಧದ ಬಳಿಯ ಪರಿಚಯವಾಗಿದ್ದ ಕೆ.ಗಂಗಾಧರಗೌಡ ಎಂಬಾತನು ರೈತರುಗಳಿಗೆ ಸರ್ಕಾರದ ಹೊಸ ಹೊಸ ಸ್ಕೀಮ್ ಗಳಲ್ಲಿ ಕೃಷಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಇನ್ನು ಇತರ ಇಲಾಖೆಗಳಿಂದ ಸಬ್ಸಿಡಿ ದರದಲ್ಲಿ ಸವಲತ್ತುಗಳನ್ನು ಕೊಡಿಸುತ್ತೇನೆಂದು, ರೈತರುಗಳು ೫೦ ಸಾವಿರ ಭರಿಸಿದರೆ, ಒಂದು ಟ್ರಾಕ್ಟರ್‌ಗೆ ೩ ಲಕ್ಷ ರೂಗಳ ಸಬ್ಸೀಡಿಯನ್ನು ಕೊಡಿಸುತ್ತೇನೆಂದು ನಂಬಿಸಿದ್ದು, ಇದನ್ನು ನಂಬಿ ಸ್ನೇಹಿತರಾದ ಕಲ್ಲೇಶ್ ಮತ್ತು ಚಂದ್ರಶೇಖರ್ ಮೂರು ಜನರು ಸೇರಿ ಒಟ್ಟು ಸುಮಾರು ೮೦ ಜನ ರೈತರಿಂದ ಪಡೆದಿದ್ದ ಒಟ್ಟು ೧,೩೪,೯೮,೪೦೦ ರೂ. ಹಣವನ್ನು ಗಂಗಾಧರ ಗೌಡಗೆ ಪಾವತಿಸಿದ್ದಾರೆ.
ಹಣ ಸಂದಾಯದ ದಾಖಲಾತಿಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದು ಹಾಗೂ ಇದೇ ರೀತಿ ಗಂಗಾಧರಗೌಡನು ಇತರೆ ರೈತರಿಂದಲೂ ಹಣ ಪಡೆದಿದದ್ದು,  ಇದುವರೆವಿಗೂ ಸರ್ಕಾರದ ಯಾವುದೇ ಸವಲತ್ತುಗಳನ್ನು ಮಾಡಿಸಿಕೊಡದ ಪರಿಣಾಮ ಅನುಮಾನಗೊಂಡು ಪದೇ ಪದೇ ಫೋನ್ ಕರೆ ಮಾಡಿ ವಿಚಾರಿಸಿದಾಗ ಬಜೆಟ್ ಅಧಿವೇಶನ, ಮತ್ತು ಬೆಳಗಾವಿಯ ಅಧಿವೇಶನ ಮುಗಿಯಲಿ, ಸಬ್ಡಿಡಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಕಡತಗಳು ವಿಲೇವಾರಿಗೊಂಡಿದ್ದು, ಶೀಘ್ರದಲ್ಲೇ ಸವಲತ್ತುಗಳು ದೊರೆಯುತ್ತದೆ ಎಂದು ಸಬೂಬು ಉತ್ತರ ಕೊಡುವ ಮೂಲಕ ನಂಬಿಸಿದ್ದಾನೆ.
ಬಳಿಕ ಯಾವುದೇ ಸಂಪರ್ಕಕ್ಕೆ ಸಿಗದ ಹಿನ್ನಲೆಯಲ್ಲಿ ತಾವು ಮೋಸಹೋಗಿರುವುದಾಗಿ ತಿಳಿದು ತಾಲ್ಲೂಕಿನ ವೈ.ಮಲ್ಲಾಪುರ ವಾಸಿ ಎಂ.ಬಿ. ಮಹೇಶ್ವರಪ್ಪ ಕೆ. ಗಂಗಾಧರಗೌಡ ವಿರುದ್ದ ದೂರು ದಾಖಲಿಸಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
80 farmers cheated by promising subsidy
Share

Leave a comment

Leave a Reply

Your email address will not be published. Required fields are marked *

Don't Miss

ಕನ್ನಡದ ಸಂಯೋಜಕ ಪ್ರತಿಭೆ ತೇಜಸ್ವಿ

ಕೊಟ್ಟಿಗೆಹಾರ: ಪೋಟೋಗ್ರಾಫಿ, ಫಿಶಿಂಗ್, ಪೈಂಟಿಂಗ್, ಸಾಹಿತ್ಯ ಹೀಗೆ ನಾನಾ ಬಗೆಯ ಆಸಕ್ತಿ ಕುತೂಹಲಗಳಿದ್ದ ತೇಜಸ್ವಿ ಅವರು ಕನ್ನಡದ ಸಂಯೋಜಕ ಪ್ರತಿಭೆ ಎಂದು ವಿಮರ್ಶಕ, ಲೇಖಕ ಡಾ.ಎಚ್.ಎಸ್.ಸತ್ಯನಾರಾಯಣ ಹೇಳಿದರು. ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ...

ಜಿಲ್ಲೆಯಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮ ಯಶಸ್ಸಿಗೆ ಸೂಚನೆ

ಚಿಕ್ಕಮಗಳೂರು: ಮುಖ್ಯಮಂತ್ರಿಗಳು ಏಪ್ರಿಲ್ ೧೩ ರಂದು ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಸವಲತ್ತುಗಳ ವಿತರಣೆ ಮಾಡಲಿದ್ದಾರೆ ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ...

Related Articles

ಅಂಬೇಡ್ಕರ್ ಜಯಂತಿಗೆ ಅಡ್ಡಿ ಕ್ರಮಕ್ಕೆ ದಲಿತ ಸಂಘರ್ಷ ಸಮಿತಿ ಆಗ್ರಹ

ಚಿಕ್ಕಮಗಳೂರು: ಮರ್ಲೆಹೊಸಕೋಟೆಯಲ್ಲಿ ಕಂದಾಯ ಜಾಗದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲು ಮುಂದಾಗಿದ್ದಾಗ ಧ್ವಜಗಳನ್ನು ತೆರವುಗೊಳಿಸಿದ ಗ್ರಾಮಲೆಕ್ಕಿಗರು ಮತ್ತು...

ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ವಂಚನೆ

ಚಿಕ್ಕಮಗಳೂರು: ಕಡೂರು ತಾಲೂಕು ಪಂಚನಹಳ್ಳಿ ಹೋಬಳಿ ಡಿ.ಹೊಸಹಳ್ಳಿ ಗ್ರಾಮದ ತಮ್ಮ ಪಿತ್ರಾರ್ಜಿತ ಆಸ್ತಿಗೆ ನಕಲಿ ದಾಖಲೆಯನ್ನು...

ಸರ್ಫೇಸಿ ಕಾಯ್ದೆ ವಿರೋಧಿಸಿ ಏ. 22ರಂದು ಪ್ರತಿಭಟನೆ

ಚಿಕ್ಕಮಗಳೂರು: ಸರ್ಫೇಸಿ ಕಾಯ್ದೆ ವಿರೋಧಿಸಿ ಏ. 22ರಂದು ಬೆಳಿಗ್ಗೆ 11ಗಂಟೆಗೆ ನಗರದ ಸಂಸತ್ ಸದಸ್ಯರ ಕಚೇರಿ...

ನರ್ಸ್‌ನಿಂದ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ರೀಲ್ಸ್ ವೀಕ್ಷಣೆ

ಎನ್.ಆರ್.ಪುರ : ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರವೀಗ ರೀಲ್ಸ್ ಅಡ್ಡವಾಗಿ...