Home namma chikmagalur chikamagalur ಯುದ್ಧ ನಿಲ್ಲಿಸಬೇಕಾದವರು ಮೌನವಾಗಿರುವುದು ಮಾನವತೆಯ ಸೋಲು
chikamagalurHomeLatest Newsnamma chikmagalur

ಯುದ್ಧ ನಿಲ್ಲಿಸಬೇಕಾದವರು ಮೌನವಾಗಿರುವುದು ಮಾನವತೆಯ ಸೋಲು

Share
Share

ಚಿಕ್ಕಮಗಳೂರು: ಯುದ್ಧದ ಬೆಂಕಿ ವಿಶ್ವವನ್ನು ಸುಡುತ್ತಿರುವಾಗ, ಶಾಂತಿಯ ಮಾತುಗಳನ್ನು ಹೇಳಬೇಕಾದ ಸಂಘಟನೆಗಳು ರಾಜಕೀಯ ಲಾಭ-ನ?ದ ಲೆಕ್ಕಾಚಾರದಲ್ಲಿ ಮೌನವಾಗಿರುವುದು ಮಾನವೀಯತೆಯ ಸೋಲು ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ ಎಸ್.ಶೆಟ್ಟಿ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕಾಲದಲ್ಲಿ ಯುದ್ಧ ಎಂದರೆ ಸೈನಿಕರ ನಡುವಿನ ನೇರ ಹೋರಾಟವಾಗಿತ್ತು. ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ನಿರ್ದಿಷ್ಠ ಯುದ್ಧಭೂಮಿಯಲ್ಲಿ ಮುಖಾಮುಖಿಯಾಗುತ್ತಿದ್ದವು. ಆದರೆ ಇಂದಿನ ಯುದ್ಧದ ಸ್ವರೂಪ ಸಂಪೂರ್ಣ ಬದಲಾಗಿದೆ. ಈಗ ಯುದ್ಧ ಗಡಿಗಳೊಳಗೆ ಸೀಮಿತವಾಗಿಲ್ಲ. ನಗರಗಳು ಗುರಿಯಾಗುತ್ತಿವೆ. ಸಾಮಾನ್ಯ ಜನರು ಬಲಿಯಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದಿನ ಜಗತ್ತು ಒಂದು ಅಪಾಯಕಾರಿ ತಿರುವಿನಲ್ಲಿದೆ. ಕ್ಷಿಪಣಿಗಳು, ಡ್ರೋನ್‌ಗಳು, ಬಾಂಬ್‌ಗಳು ಮತ್ತು ಆಧುನಿಕ ಯುದ್ಧ ತಂತ್ರಜ್ಞಾನಗಳು ಕೆಲವೇ ನಿಮಿ?ಗಳಲ್ಲಿ ಸಾವಿರಾರು ಜನ ಜೀವವನ್ನು ಕಳೆದುಕೊಳ್ಳುವ? ಭಯಾನಕವಾಗಿವೆ. ಇದರ ದು?ರಿಣಾಮವನ್ನು ಹೆಚ್ಚು ಅನುಭವಿಸುವವರು ಅಭಿವೃದ್ಧಿಶೀಲ ರಾಷ್ಟ್ರಗಳ ನಿರಪರಾಧಿ ನಾಗರಿಕರು. ಕಳೆದ ಕೆಲವು ವಾರಗಳು ಜಾಗತಿಕ ಶಾಂತಿಯ ನಾಜೂಕನ್ನು ಮತ್ತೆ ನೆನಪಿಸಿವೆ. ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಭೀತಿ, ಅಸ್ಥಿರತೆ ಮತ್ತು ಅನಿಶ್ಚಿತತೆಯನ್ನು ಉಂಟುಮಾಡಿದೆ. ಕ್ಷಿಪಣಿ ದಾಳಿ, ವಾಯು ದಾಳಿ ಮತ್ತು ಯುದ್ಧದ ಬೆದರಿಕೆಗಳು ಈಗ ಕೇವಲ ಸುದ್ದಿಗಳಲ್ಲ. ಅವು ನಿಜವಾದ ಸ್ಥಿತಿಯಾಗಿದೆ ಎಂದರು.

ಯುದ್ಧದಿಂದಾಗಿ ತೈಲ ಮಾರುಕಟ್ಟೆಗಳು ಅಸ್ಥಿರವಾಗುತ್ತಿವೆ. ಜಾಗತಿಕ ವ್ಯಾಪಾರ ಮಾರ್ಗಗಳು ಅಪಾಯದಲ್ಲಿವೆ. ಇಂಧನದ ಬೆಲೆ ಏರಿಕೆ, ವಸ್ತುಗಳ ಸರಬರಾಜು ಸರಪಳಿ ವ್ಯತ್ಯಯ ಮತ್ತು ಆರ್ಥಿಕ ಒತ್ತಡವು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತಿದೆ. ಭಾರತದಂಥ ದೇಶಗಳು ಇಂಧನದ ಬೆಲೆ ಏರಿಕೆ ಮತ್ತು ಆರ್ಥಿಕ ಒತ್ತಡವನ್ನು ಅನುಭವಿಸುವ ಪರಿಸ್ಥಿತಿಯನ್ನು ಎದುರಿಸುತ್ತಿವೆ ಎಂದು ಹೇಳಿದರು.

ಆದರೆ ಇದೇ ವೇಳೆ ಶಾಂತಿಯನ್ನು ಕಾಪಾಡಲು ಆರಂಭಗೊಂಡ ಜಾಗತಿಕ ಸಂಸ್ಥೆಗಳು ಎಲ್ಲಿವೆ?

ಜಗತ್ತು ಹೊತ್ತಿ ಉರಿಯುತ್ತಿರುವಾಗ ಅವು ಏನು ಮಾಡುತ್ತಿವೆ? ಎಂದು ಪ್ರಶ್ನಿಸಿದ ಅವರು, ಜಗತ್ತಿನಲ್ಲಿ ಹಲವಾರು ಶಕ್ತಿಶಾಲಿ ಸಂಘಟನೆಗಳಿವೆ. ಬ್ರಿಕ್ಸ್, ನ್ಯಾಟೋ, ಯುರೋಪಿಯನ್ ಯೂನಿಯನ್ ಮತ್ತು ಯುನೈಟೆಡ್ ನೇ?ನ್ಸ್ ಜಾಗತಿಕ ಭದ್ರತೆ, ಆರ್ಥಿಕ ಸ್ಥಿರತೆ ಮತ್ತು ಸಹಕಾರವನ್ನು ನಿರ್ಧರಿಸುವ ಪ್ರಮುಖ ಶಕ್ತಿಗಳಾಗಿವೆ. ನ್ಯಾಟೋ ಸಾಮೂಹಿಕ ರಕ್ಷಣೆಗೆ ಒಂದು ಸೈನಿಕ ಮೈತ್ರಿ. ಹೀಗಿದ್ದರೂ ಜಗತ್ತಿನಲ್ಲಿ ಸಂಘ?ಗಳು ಏಕೆ ಹೆಚ್ಚುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಬ್ರಿಕ್ಸ್ ಅಭಿವೃದ್ಧಿಶೀಲ ದೇಶಗಳ ಧ್ವನಿ ಎಂದು ಪರಿಗಣಿಸಲಾಗುತ್ತದೆ. ಹಾಗಿದ್ದರೆ ಗ್ಲೋಬಲ್ ಸೌತ್ ಮೇಲೆ ನಡೆಯುವ ಯುದ್ಧಗಳ ವಿರುದ್ಧ ಅದರ ಧ್ವನಿ ಇನ್ನ? ಗಟ್ಟಿಯಾಗಬೇಕಿಲ್ಲವೇ?. ಯುರೋಪಿಯನ್ ಒಕ್ಕೂಟ ಶಾಂತಿ ಮತ್ತು ಸಹಕಾರದ ಪ್ರತೀಕ. ಹಾಗಿದ್ದರೆ ಯುರೋಪ್ ಸುತ್ತಲಿನ ಉದ್ವಿಗ್ನತೆ ಏಕೆ ಕಡಿಮೆಯಾಗುತ್ತಿಲ್ಲ?. ಇವು ಕೇವಲ ರಾಜಕೀಯ ಪ್ರಶ್ನೆಗಳಲ್ಲ. ಮಾನವೀಯ ಕಾಳಜಿಯಾಗಿದೆ ಎಂದರು.

ಜಾಗತಿಕ ನಾಯಕತ್ವದ ಪಾತ್ರವೂ ಇಲ್ಲಿ ಮಹತ್ವದ್ದಾಗಿದೆ. ವಿಶ್ವದ ಪ್ರಮುಖ ಶಕ್ತಿಗಳ ನಿರ್ಧಾರಗಳು ದೂರವ್ಯಾಪಿ ಪರಿಣಾಮಗಳನ್ನು ಉಂಟುಮಾಡುತ್ತವೆ. ಅಮೆರಿಕದಂತಹ ರಾಷ್ಟ್ರ  ವಿದೇಶಾಂಗ ನೀತಿ, ಮಧ್ಯಪ್ರಾಚ್ಯದ ಪರಿಸ್ಥಿತಿಗಳು ಮತ್ತು ಪ್ರಾದೇಶಿಕ ಸಂಘ?ಗಳು ಜಾಗತಿಕ ಸಮತೋಲನವನ್ನು ಪ್ರಭಾವಿಸುತ್ತವೆ. ಯುದ್ಧದ ಸ್ವರೂಪ ಬದಲಾಗಿರುವುದರಿಂದ ಅದರ ಪರಿಣಾಮವೂ ಹೆಚ್ಚಾಗಿದೆ. ಹಿಂದಿನಂತೆ ಗಡಿಭಾಗಗಳಲ್ಲಿ ನಡೆಯುತ್ತಿದ್ದ ಯುದ್ಧಗಳು ಈಗ ನಾಗರಿಕ ಪ್ರದೇಶಗಳಿಗೆ ತಲುಪುತ್ತಿವೆ. ಡ್ರೋನ್ ದಾಳಿಗಳು, ಕ್ಷಿಪಣಿ ದಾಳಿಗಳು ಮತ್ತು ತಂತ್ರಜ್ಞಾನಾಧಾರಿತ ಯುದ್ಧ ಕ್ರಮಗಳು ಮಾನವೀಯ ದುರಂತವನ್ನು ಮತ್ತಷ್ಟು ಗಂಭೀರಗೊಳಿಸುತ್ತಿವೆ.

ಜಾಗತಿಕ ಸಂಸ್ಥೆಗಳು ಶಾಂತಿ ಕಾಪಾಡುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟಿದ್ದರೂ, ಅವುಗಳು ಅನೇಕ ಬಾರಿ ರಾಜಕೀಯ ಹಿತಾಸಕ್ತಿಗಳು ಮತ್ತು ಶಕ್ತಿ ಅಸಮತೋಲನದಿಂದ ದುರ್ಬಲವಾಗುತ್ತಿವೆ. ಉದಾಹರಣೆಗೆ, ಯುನೈಟೆಡ್ ನೇಶನ್ಸ್ ಭದ್ರತಾ ಮಂಡಳಿಯ ವೀಟೋ ಅಧಿಕಾರ ವ್ಯವಸ್ಥೆ ದೊಡ್ಡ ರಾ?ಗಳಿಗೆ ಹೆಚ್ಚಿನ ಪ್ರಭಾವವನ್ನು ನೀಡುತ್ತದೆ. ಇದರ ಪರಿಣಾಮವಾಗಿ ಅನೇಕ ಮಹತ್ವದ ನಿರ್ಧಾರಗಳು ರಾಜಕೀಯ ಅಡೆತಡೆಗಳಲ್ಲಿ ಸಿಲುಕುತ್ತವೆ ಎಂದು ವಿವರಿಸಿದರು .

The silence of those who should stop war is a defeat for humanity

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ

ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜುಲೈ ೧೧ ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ’ರಾಷ್ಟ್ರೀಯ ಲೋಕ್ ಅದಾಲತ್’ ಹಮ್ಮಿಕೊಳ್ಳಲಾಗಿದೆ ಎಂದು ಗೌ.ಪ್ರಧಾನ ಜಿಲ್ಲಾ...

ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ ಸಂಚಾರ) ಬಂದ ಕಾರೊಂದು ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ದುಡುಕುತನದಿಂದ ಡಿಕ್ಕಿ ಹೊಡೆದ ಪರಿಣಾಮ...

Related Articles

ಅಮೃತ್ 2.0 ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ

ಚಿಕ್ಕಮಗಳೂರು: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಮೃತ್ 2.0 ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಕುಡಿಯುವ ನೀರಿನ...

ವಿಕಲಚೇತನ ವ್ಯಕ್ತಿಯ ₹8 ಲಕ್ಷ ಬ್ಯಾಂಕ್ ಸಾಲ ಕೇವಲ ₹15,000 ಕ್ಕೆ ಇತ್ಯರ್ಥ

ಚಿಕ್ಕಮಗಳೂರು:  ಇಲ್ಲಿನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಮ್ಮಿಕೊಂಡಿದ್ದ ಮೆಗಾ ಲೋಕ ಅದಾಲತ್‌ನಲ್ಲಿ ನ್ಯಾಯಾಂಗದ ವಿಶೇಷ...

ಎಟಿಎಂ ಕಾರ್ಡ್ ಬದಲಿಸಿ ₹3.09 ಲಕ್ಷ ವಂಚನೆ

ಕಡೂರು: ಪಟ್ಟಣದ ಜೈನ್ ಟೆಂಪಲ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹಣ ಹಿಂಪಡೆಯಲು ಯತ್ನಿಸುತ್ತಿದ್ದ ವೇಳೆ...

ಕೆಪಿಟಿಸಿಎಲ್ ಸಿಎಸ್‌ಆರ್ ಅನುದಾನ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಕಣ್ಣಾವಲಿಗೆ ನೆರವು

ಚಿಕ್ಕಮಗಳೂರು: ಸರ್ಕಾರದ ಅನುದಾನದ ಕೊರತೆ ನಡುವೆ ಕೆಪಿಟಿಸಿಎಲ್ ಸಿಎಸ್‌ಆರ್ (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ) ಅನುದಾನ...