ಅಜ್ಜಂಪುರ: ಚಿಕ್ಕಮಗಳೂರು ಜಿಲ್ಲೆಯಲ್ಲಿ “ಬಯಲ ಬಂಗಾರದ ಬೆಳೆ ಬೆಳೆಯುವ ಕಪ್ಪು ಮಣ್ಣು ಅಜ್ಜಂಪುರ ಮತ್ತು ಕಡೂರು ತಾಲ್ಲೂಕಿನ ಕೆಲ ಭಾಗಗಳಲ್ಲಿ ಇದೆ.
ಅಜ್ಜಂಪುರ ತಾಲ್ಲೂಕಿನ ಕಸಬಾ ಹೋಬಳಿ ಶಿವನಿ ಹೋಬಳಿ ಹಾಗು ಅಮೃತಾಪುರ ಹೋಬಳಿಯ ಕೆಲ ಗ್ರಾಮಗಳಲ್ಲಿ ಮತ್ತು ಕಡೂರು ತಾಲ್ಲೂಕಿನ ಚೌಳ ಹಿರಿಯೂರು ಹಾಗು ಹಿರೇನಲ್ಲೂರು ಮತ್ತು ಕಸಬಾ ಹೋಬಳಿಯ ಕೆಲ ಹಳ್ಳಿಗಳಲ್ಲಿ ರೈತರಿಗೆ ವಾಣಿಜ್ಯ ಬೆಳೆಯುವ ಮುಂಗಾರು ಈರುಳ್ಳಿ ಬಂಪರ್ ಬೆಲೆ ತಂದರೆ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗುತ್ತದೆ ಇಲ್ಲದಿದ್ದರೆ ಮುಖ ನೋಡಲು ದುಗುಡ ಉಂಟಾಗುತ್ತದೆ.
ಜಿಲ್ಲೆಯಲ್ಲಿ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆಯುವ ಈರುಳ್ಳಿ ಈ ವರ್ಷ ಮುಂಗಾರು ಮಳೆ ಬಾರದಿರುವುದು ರೈತರಿಗೆ ಸಂಕಷ್ಟ ತಂದಿಟ್ಟಿದೆ.ರೈತರು ದುಃಖ_ದುಮ್ಮಾನದ ನಡುವೆ ಸಾಲ ಮಾಡಿ ಉಳುಮೆ ಜೊತೆಗೆ ಬಿತ್ತನೆ ಮಾಡಿದ್ದಾರೆ. ಮಳೆ ಕೈ ಕೊಟ್ಟಿರುವುದರಿಂದ ಕೈ,ಕೈ ಹಿಸುಕಿ ಕೊಳ್ಳುತ್ತಿದ್ದಾರೆ.
ಮತ್ತೆ, ಮತ್ತೆ ಪ್ರಯತ್ನ ಎಂಬಂತೆ ಬಿತ್ತನೆ ಮಾಡಲು ಮುಂದಾಗಿದ್ದಾರೆ.ಮಳೆ ಬಾರದೆ ನಷ್ಟ ಅನುಭವಿಸಿ ಸೋತಿರುವ ರೈತರು ತಮ್ಮ ಹಣೆಬರಹ ” ಪರೀಕ್ಷೆ “ಗೆ ತಯಾರಿ ಮಾಡಿದ್ದಾರೆ. ಉತ್ತಮ ಬೆಳೆ ಮತ್ತು ಉತ್ತಮ ಬೆಲೆ ಬಂದರೆ ಮಾತ್ರ ಸಂಕಷ್ಟದಿಂದ ಪರಾಗುತ್ತಾನೆ ಇಲ್ಲದಿದ್ದರೆ ಮತ್ತಷ್ಟು ಸಾಲ ಮಾಡಿ ಕೊಳ್ಳುತ್ತಾನೆ. ರೈತರನ್ನು ಸಂಕಷ್ಟಕ್ಕೆ ಸಿಲುಕದಂತಹ ಮಳೆ ಹಾಗು ಬೆಳೆ ಮತ್ತು ಮಳೆ ಬರಲಿ.
Bayala Bangara’s “onion” is far far away
Leave a comment