Home namma chikmagalur chikamagalur 2.25 ಲಕ್ಷ ರೂ ಮಾಂಗಲ್ಯ ಸರ ಕಳ್ಳತನ
chikamagalurCrime NewsHomeLatest Newsnamma chikmagalur

2.25 ಲಕ್ಷ ರೂ ಮಾಂಗಲ್ಯ ಸರ ಕಳ್ಳತನ

Share
Share

ಚಿಕ್ಕಮಗಳೂರು:  ಚಂದ್ರನಗರ ನಿವಾಸಿ ವೃದ್ಧ ಮಹಿಳೆ ಒಬ್ಬರು ವಾಕ್ ಮಾಡುತ್ತಿದ್ದ ವೇಳೆ ಚಿನ್ನದ ಮಾಂಗಲ್ಯದ ಸರಗಳ್ಳತನ ಆಗಿರುವುದಾಗಿ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.

ಎಂದಿನಂತೆ  ಮನೆಯಿಂದ ವಾಕ್ ಹೊರಟು ಚಂದ್ರನಗರ ದಾಟಿ ಕೆಂಪನಹಳ್ಳಿ ಕಡೆ ರಸ್ತೆಯಲ್ಲಿ ವಾಕ್ ಮಾಡಿಕೊಂಡು ಬಂದು ಸಾಯಿಬಾಬ ಸಾಮೀಲ್ ದಾಟಿ ಬರುವಾಗ ಮಂಡಿ ನೋವಾಗಿದ್ದರಿಂದ ರಸ್ತೆಯ ಪಕ್ಕದಲ್ಲಿದ್ದ ಸೇತುವೆ ಮೇಲೆ ಕುಳಿತು ವಿಶ್ರಾಂತಿಯನ್ನು ಪಡೆಯುತ್ತಿದ್ದ ಸಮಯದಲ್ಲಿ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಮುಖಕ್ಕೆ ಮಾಸ್ಕ್ ಧರಿಸಿ ಸ್ಕೂಟಿಯಲ್ಲಿ ಕರ್ಕಿಪೇಟೆ ಕಡೆಯಿಂದ ಬಂದವರು ಹತ್ತಿರ ಬಂದು ಏನೋ ಮಾತನಾಡಿದ್ದು, ಅದು ನನಗೆ ಸರಿ ಕೇಳಿಸಿರುವುದಿಲ್ಲ.

ನಂತರ ಅಲ್ಲಿಂದ ಅವರು ಸ್ಕೂಟಿಯಲ್ಲಿ ಮುಂದೆ ಹೋದಂತೆ ಮಾಡಿ ಪುನಃ ಸ್ಕೂಟಿಯನ್ನು ಹಿಂದಕ್ಕೆ ತಿರುಗಿಸಿಕೊಂಡು ಬಂದಿದ್ದು ಅ?ರಲ್ಲಿ ನಾನು ಎದ್ದು, ಹೊರಟು ನಿಂತಿದ್ದಾಗ ನನ್ನನ್ನು ಅಡ್ಡಗಟ್ಟಿ ತಡೆದು ಏಕಾಏಕಿಯಾಗಿ ಸ್ಕೂಟಿಯ ಹಿಂದೆ ಕುಳಿತಿದ್ದ ಅಪರಿಚಿತ ವ್ಯಕ್ತಿಯು ನನ್ನ ಕೊರಳಿಗೆ ಕೈ ಹಾಕಿ ಕೊರಳಿನಲ್ಲಿದ್ದ ಸುಮಾರು ೪೫ ಗ್ರಾಂ ತೂಕದ ಚಿನ್ನದ ಮಾಂಗಲ್ಯದ ಸರವನ್ನು ಕಿತ್ತುಕೊಂಡಾಗ ಕೂಡಲೆ ನಾನು ಜೋರಾಗಿ ಕಿರುಚಿಕೊಳ್ಳುತ್ತಿದ್ದಂತೆ ಕಿರುಚಾಡಿದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ನನಗೆ ಜೀವ ಬೆದರಿಕೆ ಹಾಕಿ ನನ್ನ ಕುತ್ತಿಗೆ ಹಿಡಿದು ಸೇತುವೆ ಮೇಲೆ ತಳ್ಳಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ಜೊರಾಗಿ ತಳ್ಳಿದ ಪರಿಣಾಮ ನನ್ನ ಬಲ ಮೊಣಕೈಗೆ ರಕ್ತಗಾಯಗಳಾಗಿರುತ್ತದೆ.

ಎರಡು ಜನರು ಕಪ್ಪು ಬಣ್ಣದ ಜರ್ಕೀನ್ ಧರಿಸಿರುತ್ತಾರೆ. ನನ್ನ ಮಾಂಗಲ್ಯ ಚಿನ್ನದ ಸರದ ಬೆಲೆ ಅಂದಾಜು ೨,೨೫,೦೦೦/- ರೂ ಆಗಿರುತ್ತದೆ. ನನಗೆ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋದ ಅಪರಿಚಿತ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ದೂರನ್ನು ನೀಡಿದ್ದು. ದೂರನ್ನು ಸ್ವೀಕರಿಸಿಕೊಂಡು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆಭರಣ ಕಳ್ಳತನ:  ನಗರದ ಶ್ರೀ ಕತ್ರಿಮಾರಮ್ಮನ ದೇವಸ್ಥಾನದ ಹತ್ತಿರ ಇರುವ ಬಸ್ ನಿಲ್ದಾಣದಿಂದ ಮಹಿಳೆಯೊಬ್ಬರು ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಸಖರಾಯಪಟ್ಟಣಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ಆಭರಣ ಕಳ್ಳತನ.

ಫೆ. ೨೫ರ ಬುಧವಾರ ಮಧ್ಯಾಹ್ನ ಸುಮಾರು ೦೨.೪೫ ರಿಂದ ೩.೦೦ ಘಂಟೆ ಸಮಯದಲ್ಲಿ ಸಖರಾಯಪಟ್ಟಣಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಬಸ್ ಹತ್ತಿ ಬಸ್ಸಿನೊಳಗೆ ಮುಂದಕ್ಕೆ ಹೋಗಿ ನಿಂತು ಕೊಂಡು ತನ್ನ ಬ್ಯಾಗಿನ ಜಿಪ್‌ಗಳನ್ನು ತೆರೆದು ಆಭರಣಗಳ ಇರುವಿಕೆ ಕುರಿತು ಖಚಿತಪಡಿಸಿಕೊಂಡು ಎರಡು ಬ್ಯಾಗಿನ ಜಿಪ್ ಅನ್ನು ಮತ್ತೆ ಹಾಕಿ ಬ್ಯಾಗನ್ನು ನನ್ನ ತೊಡೆ ಮೇಲೆ ಇಟ್ಟು ಕೊಂಡು ಪ್ರಯಾಣ ಮಾಡುತ್ತಾರೆ.

ಸಖರಾಯಪಟ್ಟಣ ಬಂದಾಗ ಇಳಿದು ಒಂದೆರೆಡು ಹೆಜ್ಚೆ ಹಾಕುತ್ತಾ ತನ್ನ ಬ್ಯಾಗಿನ ಕಡೆ ನೋಡಿಕೊಂಡಾಗ ತನ್ನ ಬ್ಯಾಗಿನ ಜಿಪ್ ತೆರೆದು ಕೊಂಡಿದ್ದು ಕಂಡುನಂದಾಗ. ಬಸ್ ನಿಲ್ದಾಣದಲ್ಲಿ ಬ್ಯಾಗನ್ನು ಪರಿಶೀಲಿಸಲು ಹೆದರಿಕೊಂಡೆ ಕಾರಣ ಒಡವೆಗಳು ನನ್ನ ಬ್ಯಾಗಿನಲ್ಲಿ ಇದ್ದ ಕಾರಣ ಅಲ್ಲೆ ಪರಿಶೀಲಿಸದೇ ನನ್ನ ಸೊಸೆಯ ಅಕ್ಕನ ಮನೆಗೆ ಹೋಗಿ ಬ್ಯಾಗನ್ನು ಪರೀಸೀಲಿಸಿದಾಗ ಬ್ಯಾಗಿನ ಒಳಗೆ ಇನ್ನೊಂದು ಬ್ಯಾಗಿನ ಜಿಪ್ ಸಹ ತರೆದಿತ್ತು ಹಾಗೂ ಈ ಬ್ಯಾಗಿನ ಒಳಗೆ ಬಾಕ್ಸ್‌ನಲ್ಲಿ ಇಟ್ಟಿದ್ದ ಒಡವೆ ಕಳ್ಳತನವಾಗಿತ್ತು ಎಂದು ದೂರಿನಲ್ಲಿ ತಿಳಿಸಿರುತ್ತಾರೆ.

ಕಳ್ಳತನವಾದ ನನ್ನ ಒಡವೆಗಳಲ್ಲಿ ೪೦ ಗ್ರಾಂ ಎರಡು ಬಳೆಗಳು, ೩೫ಗ್ರಾಂ ಒಂದು ಜೊತೆ ಜೇಡದ ನೆಕ್ಲಸ್, ೫ ಗ್ರಾಂ ಒಂದು ಜೊತೆ ಜೇಡದ ಓಲೆಗಳು ಒಟ್ಟು ೮೦ ಗ್ರಾಂಗಳ ಒಡವೆಗಳಾಗಿರುತ್ತವೆ. ಸದರಿ ಈ ಒಡವೆಗಳ ಇಂದಿನ ಬೆಲೆ ಸುಮಾರು ೧೦,೬೪,೦೦೦/- (ರೂಪಾಯಿ ಹತ್ತು ಲಕ್ಷದ ಆರವತ್ತು ನಾಲ್ಕು ಸಾವಿರ) ಗಳಾಗಿರುತ್ತವೆ. ಕಳ್ಳತನವಾದ ಒಡವೆಗಳನ್ನು ಹುಡುಕಿ ಪತ್ತೆ ಹಚ್ಚಿ ಕೊಡಬೇಕಾಗಿ ಕೋರಿ ದೂರನ್ನು ನೀಡಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

Rs 2.25 lakh gold chain stolen

Share

Leave a comment

Leave a Reply

Your email address will not be published. Required fields are marked *

Don't Miss

ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ ರೈತರ ಸ್ಥಿತಿ ಅವಲೋಕಿಸಿದ ಸಚಿವ ಜಾರ್ಜ್

ಚಿಕ್ಕಮಗಳೂರು: ಸಕಾಲದಲ್ಲಿ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿರುವ ರೈತರು, ಒಣಗಿ ನಿಂತಿರುವ ಭೂಮಿ, ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ಬೀಜಗಳು ಮೊಳಕೆ ಒಡೆಯದೆ ಬಿಸಿಲಿನ ಝಳಕ್ಕೆ ಸಿಲುಕಿ ಸುಟ್ಟುಹೋಗಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ...

ಸಚಿವ ಕೆ.ಜೆ. ಜಾರ್ಜ್ ಬೆಂಗಾವಲು ವಾಹನ ಅಪಘಾತ

ಚಿಕ್ಕಮಗಳೂರು : ಅಜ್ಜಂಪುರ ಜಿಲ್ಲೆಯ ಬಯಲುಸೀಮೆ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ವೀಕ್ಷಣೆಗಾಗಿ ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರ ಬೆಂಗಾವಲು (Escort) ವಾಹನ ಅಪಘಾತಕ್ಕೀಡಾದ ಘಟನೆ ಅಜ್ಜಂಪುರ ಪಟ್ಟಣದಲ್ಲಿ...

Related Articles

ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ ಮಲೆನಾಡಿಗೆ ಕಂಟಕ

ಚಿಕ್ಕಮಗಳೂರು: ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯದ ೧೦ ಜಿಲ್ಲೆಗಳ ೨೦ ಸಾವಿರಕ್ಕೂ ಅಧಿಕ ಚದರ ಕಿಲೋ...

ಅಂಗಾಂಗ ದಾನ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿ

ಚಿಕ್ಕಮಗಳೂರು: ಅಂಗಾಂಗ ದಾನ ಮಾಡಿ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿಯಾಗಿದೆ ಎಂದು ನಗರಸಭೆ ಪೌರಾಯುಕ್ತ...

ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು. ಕೊಪ್ಪ...

ಫಸಲ್ ಬಿಮಾ ನೋಂದಣಿ ಹೆಚ್ಚಿಸಲು ಜಿಲ್ಲಾಧಿಕಾರಿ ನಿರ್ದೇಶನ

ಚಿಕ್ಕಮಗಳೂರು: ಫಸಲ್ ಬಿಮಾ ಯೋಜನೆಯಡಿ ನೋಂದಣಿ ಕಡಿಮೆಯಾಗಿದ್ದು, ತಕ್ಷಣ ಅಗತ್ಯ ಪ್ರಚಾರ ಕೈಗೊಂಡು ರೈತರ ಮನವೊಲಿಸಿ...