Home namma chikmagalur chikamagalur ರೈತರ ಒಪ್ಪಿಗೆಯಿಲ್ಲದೇ ಭೂಪ್ರದೇಶ ಕಬಳಿಕೆ ವಿರುದ್ಧ ಕ್ರಮಕ್ಕೆ ಮನವಿ
chikamagalurHomeLatest Newsnamma chikmagalur

ರೈತರ ಒಪ್ಪಿಗೆಯಿಲ್ಲದೇ ಭೂಪ್ರದೇಶ ಕಬಳಿಕೆ ವಿರುದ್ಧ ಕ್ರಮಕ್ಕೆ ಮನವಿ

Share
Share

ಚಿಕ್ಕಮಗಳೂರು: ರೈತರ ಒಪ್ಪಿಗೆ ಇಲ್ಲದೇ ಜಮೀನಿನಲ್ಲಿ ವಸತಿ ಬಡಾವಣೆಗೆ ಕೃಷಿ ಭೂ ಮಿಯನ್ನು ಆಕ್ರಮಿಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡಬೇಕು ಎಂದು ಇಂದಾವರ ಗ್ರಾಮಸ್ಥರು ಗುರುವಾರ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರಿಗೆ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಗ್ರಾಮದ ಮುಖಂಡ ಐ.ಎಸ್.ಯತೀಶ್ ಕಸಾಬ ಹೋಬಳಿ ಇಂದಾವರ ಗ್ರಾಮದ ರೈತರು ಸಿಡಿಎಕ್ಕೆ ಈಗಾಗಲೇ ೧೯೩ ಎಕರೆ ಜಮೀನನ್ನು ಎಬಿ ವಾಜಪೇಯಿ ವಸತಿ ಬಡಾವಣೆ, ೨೦೮ ಎಕರೆ ಜಮೀನು ಇಂದಾವರ ವಸತಿ ಬಡಾವಣೆ ನೀಡಿದ್ದು ಬಡಾವಣೆಯನ್ನು ನಿರ್ಮಿಸಲಾಗಿದೆ ಎಂದರು.

ಪ್ರಸ್ತುತ ನಿರ್ಮಿಸಿರುವ ಬಡಾವಣೆಯಲ್ಲಿ ರೈತರಿಗೆ ಯಾವುದೇ ನಿವೇಶನಗಳನ್ನು ಹಂಚಿಕೆ ಮಾಡಿಲ್ಲ. ವಾಜಪೇಯಿ ವಸತಿ ಬಡಾವಣೆಗೆ ನೀರಿನ ಸೌಕರ್ಯವಿಲ್ಲ, ತಾತ್ಕಾಲಿಕ ವಿದ್ಯುತ್ ಪೂರೈಕೆ ಮಾಡಲಾಗಿದೆ. ಇಂದಾವರ ಬಡಾವಣೆಯ ಕೆಲಸವು ಆಮೆಗತಿಯಲ್ಲಿ ಸಾಗಿದ್ದು ಈಗಾಗಲೇ ಎರಡು ಕಡೆ ಭೂಮಿಯನ್ನು ಸಿಡಿಎ ಅಭಿವೃದ್ದಿಗಾಗಿ ನೀಡಲಾಗಿದೆ ಎಂದು ಹೇಳಿದರು.

ಮಲ್ಲಂದೂರು ಮುಖ್ಯರಸ್ತೆಯಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಇಂದಾವರ ವಸತಿ ಬಡಾವ ಣೆಯ ಎ.ಬಿವಾಜಪೇಯಿ ಬಡಾವಣೆಗೆ ಹೊಂದಿಕೊಂಡಿರುವ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ ೧೫೦ ಎಕರೆ ಪ್ರದೇಶದಲ್ಲಿ ರೈತರ ಸಹಭಾಗಿತ್ವದಲ್ಲಿ ಶೇ.೫೦:೫೦ ರ ಅನುಪಾತ ಎಂದು ನಮೂದಿಸಿದ್ದು ರೈತರು ಒಪ್ಪ ದಿದ್ದಲ್ಲಿ ಭೂಸ್ವಾಧೀನದಡಿ ಹೆಚ್ಚುವರಿ ವಸತಿ ಯೋಜನೆಯ ರೂಪಿಸುವುದಾಗಿ ಆತಂಕವೊಡ್ಡುತ್ತಿದ್ದಾರೆ ಎಂ ದರು

ಈಗಾಗಲೇ ಸಿಡಿಎ ಹಲವಾರು ವಸತಿ ಬಡಾವಣೆಗಳನ್ನು ನಿರ್ಮಾಣ ಮಾಡಿದ್ದು, ಪ್ರಾಧಿಕಾರದ ಆ ಯುಕ್ತರು, ಗುತ್ತಿಗೆದಾರರು ನೀಡುವ ಹಣದ ಆಮಿಷದೊಂದಿಗೆ ರೈತರಿಗೆ ನೋಟೀಸ್ ನೀಡಿ ಬೆದರಿಕೆ ಒಡ್ಡು ವ ಮೂಲಕ ಹೆಚ್ಚುವರಿ ವಸತಿ ಬಡಾವಣೆ ನಿರ್ಮಾಣ ಮಾಡಲು ಮುಂದಾಗಿರುವುದು ವಿಷಾಧಕರ ಸಂಗತಿ ಎಂದರು.

ಈ ಪ್ರದೇಶದಲ್ಲಿ ಕಾಫಿ, ಅಡಿಕೆ, ಸಿಲ್ವರ್, ತೆಂಗು, ಬಾಳೆ, ಕಾಳುಮೆಣಸು ಮತ್ತು ಮಾಸಿಕ ಬೆಳೆಗಳಾದ ತರಿಕಾರಿ ಇತ್ಯಾದಿಗಳನ್ನು ಬೆಳೆದು, ಹಸಿರು ವಲಯದಲ್ಲಿದ್ದರೂ ಸಹ ವಸತಿ ಬಡಾವಣೆ ನಿರ್ಮಿಸಲು ಹೊರ ಟಿರುವುದು ಬೇಸರದ ಸಂಗತಿ, ಹೀಗಾಗಿ ಇಂದಾವರ ಗ್ರಾಮಸ್ಥರಿಗೆ ಜೀವನ ಸಾಗಿಸಲು ಕೃಷಿ ಭೂಮಿಯ ಅವಶ್ಯಕತೆಯಿರುವ ಕಾರಣ ಭೂಮಿ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಇಂದಾವರ ಗ್ರಾ.ಪಂ. ಮಾಜಿ ಅಧ್ಯಕ್ಷ ಸುಭಾಶ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹಿರಿಯಣ್ಣಗೌಡ, ಗ್ರಾಮಸ್ಥರಾದ ಚೇತನ್, ಸೋಮೇಗೌಡ, ಗುರುಶಾಂತಪ್ಪ ಉಪಸ್ಥಿತರಿದ್ದರು.

Appeal for action against land grabbing without farmers’ consent

Share

Leave a comment

Leave a Reply

Your email address will not be published. Required fields are marked *

Don't Miss

ದನದ ಮಾಂಸ ಮಾರಾಟದಲ್ಲಿ 40 ಕೆ.ಜಿ ಮಾಂಸ, ಕತ್ತಿ–ಚಾಕುಗಳು ಜಪ್ತಿ

ಚಿಕ್ಕಮಗಳೂರು: ನಗರದ ಅಯ್ಯಪ್ಪನಗರದ ಸಮೀಪದ ಶೆಡ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ.9ರಂದು ಮಧ್ಯಾಹ್ನ...

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ ಸಾಧನೆ ಯೋಗ ಮಾಡುವವರಿಗೆ ಒಂದು ಪ್ರೇರಣೆ ಕೊಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ...

Related Articles

ಕೇಬಲ್ ಕಳ್ಳರೆಂದು ಶಂಕಿಸಿ ಮೂವರ ಮೇಲೆ ಹಲ್ಲೆ

ಕಡೂರು: ಪಂಪ್‌ಸೆಟ್‌ ಮೋಟಾರ್‌ ಕೇಬಲ್‌ ಕಳ್ಳರೆಂದು ಅನುಮಾನಿಸಿ ಮೂವರು ಯುವಕರ ಮೇಲೆ ಗುಂಪೊಂದು ಗಂಭೀರವಾಗಿ ಹಲ್ಲೆ...

₹5 ಲಕ್ಷ ಮೌಲ್ಯದ ಶ್ರೀಗಂಧದ ಮರಗಳ ಕಳವು

ತರೀಕೆರೆ: ಕೃಷಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 15 ಶ್ರೀಗಂಧದ ಮರಗಳನ್ನು ಕಡಿದು ಕಳವು ಮಾಡಿಕೊಂಡು...

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು...

ಧ್ವಜಾರೋಹಣದ ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದ ರಾಷ್ಟ್ರಧ್ವಜ …?

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ...