Home namma chikmagalur chikamagalur ಇಂದಿನಿಂದ ನಗರದಲ್ಲಿ ಹಿಂದೂ ಸಮಾಜೋತ್ಸವ ಆಚರಣೆ
chikamagalurHomeLatest Newsnamma chikmagalur

ಇಂದಿನಿಂದ ನಗರದಲ್ಲಿ ಹಿಂದೂ ಸಮಾಜೋತ್ಸವ ಆಚರಣೆ

Share
Share

ಚಿಕ್ಕಮಗಳೂರು: ನಗರದ ೧೨ ಬಡಾವಣೆಗಳಲ್ಲಿ ಹಿಂದೂ ಸಮಾಜೋತ್ಸವವನ್ನು ಜ. ೧೮ ರಿಂದ ೩೦ರವರೆಗೆ ನಡೆಸಲು ಹಿಂದೂ ಸಮಾಜೋತ್ಸವ ಆಯೋಜನ ಸಮಿತಿ ನಿರ್ಧರಿಸಿದೆ ಎಂದು ಸಮಿತಿ ಅಧ್ಯಕ್ಷ ಡಾ. ಜೆ.ಪಿ ಕೃಷ್ಣೇಗೌಡ ತಿಳಿಸಿದರು.

ಅವರು ಇಂದು ಪತ್ರಕಾಗೋಷ್ಠಿಯಲ್ಲಿ ಮಾತನಾಡಿ ಹಿಂದೂ ಸಮಾಜೋತ್ಸವ ಮೊದಲ ಕಾರ್ಯಕ್ರಮ ಜ. ೧೮ ರಂದು ಕೆಂಪನಹಳ್ಳಿ ಬಡಾವಣೆಯ ಗಾಯಿತ್ರಿ ದೇವಿ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಆರಂಭವಾಗಲಿದ್ದು, ಉತ್ಸವದ ಬಗ್ಗೆ ಚಿತ್ರದುರ್ಗದ ಸಾಮಾಜಿಕ ಕಾರ್ಯಕರ್ತ ಪ್ರಭಂಜನ್ ಸೂರ್ಯ ಹಾಗೂ ರುಕ್ಮಿಣಿ ಮಾತನಾಡಲಿದ್ದಾರೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಚಂದ್ರನಗರ, ಶನೇಶ್ವರ ದೇವಸ್ಥಾನದಿಂದ ಶೋಭಾಯಾತ್ರೆ ಪ್ರಾರಂಭವಾಗಿ ಕಲ್ಯಾಣ ಮಂಟಪ ತಲುಪಲಿದೆ. ಉಳಿದಂತೆ ಸಮಾಜೋತ್ಸವ ಕಾರ್ಯಕ್ರಮ ಶಾಂತಿ ನಗರ, ವಿಜಯಪುರ, ಬಸವನಹಳ್ಳಿ, ಮಧುವನ ಬಡಾವಣೆ, ಜಯನಗರ, ಕೋಟೆ, ನರಿಗುಡ್ಡನಹಳ್ಳಿ, ಶಂಕರಪುರ, ಗೃಹಮಂಡಳಿ, ಹಿರೇಮಗಳೂರು, ಗವನಹಳ್ಳಿ ಸೇರಿದಂತೆ ೧೧ ಸ್ಥಳಗಳಲ್ಲಿ ಜ. ೩೦ರ ವರೆಗೆ ನೆಡೆಯಲಿದೆ ಎಂದು ಮಾಹಿತಿ ನೀಡಿದರು.

ನಗರದ ಪ್ರತಿ ಬಡಾವಣೆಯಲ್ಲಿ ಹಿಂದೂ ಸಜ್ಜನ ಶಕ್ತಿಯನ್ನು ಸಕ್ರಿಯಗೊಳಿಸಿ ಅವುಗಳ ನಡುವೆ ಸಮನ್ವಯ ಸಾಧಿಸುವುದು ಮತ್ತು ಹಿಂದೂ ಸಮಾಜದ ಸಮಸ್ಯೆಗಳು ಹಾಗೂ ಸಮಾಲುಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅವುಗಳ ನಿವಾರಣೆ ಕುರಿತು ಒಟ್ಟಾಗಿ ಕೆಲಸ ಮಾಡುವ ವಾತಾವರಣವನ್ನು ಸೃಷ್ಠಿಸುವುದು ಈ ಸಮಾಜೋತ್ಸವದ ಉದ್ದೇಶವಾಗಿದೆ ಎಂದು ಹೇಳಿದರು.

ಹಿಂದೂ ಧರ್ಮ, ಸಂಸ್ಕೃತಿ ಸಮಾಜಕ್ಕೆ ಪೂರಕವಾದ ವಿಷಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದ್ದು, ಸಮಾಜದಲ್ಲಿ ಹಿಂದುತ್ವದ ಭಾವನೆಯನ್ನು ಸ್ಪಷ್ಟಗೊಳಿಸಿ ಬಲಪಡಿಸುವ ಚಿಂತನೆ ಹೊಂದಲಾಗಿದೆ ಎಂದು ತಿಳಿಸಿದರು,

ಹಿಂದೂ ದೇವಾಲಯಗಳು ಭಕ್ತಿ ಹಾಗೂ ಪೂಜಾ ಪದ್ಧತಿಯ ಜೊತೆಗೆ ಜಾಗೃತಿಯ ಕೇಂದ್ರಗಳಾಗಬೇಕು, ವ್ಯಕ್ತಿ, ಕುಟುಂಬ ಸಮಾಜದ ನಡೆವಳಿಕೆಯಲ್ಲಿ ಪರಿವರ್ತನೆಗಳಾದ ಕುಟುಂಬ ಪ್ರಭೋದನ, ಸಾಮರಸ್ಯ, ಪರಿಸರ ಸಂರಕ್ಷಣೆ, ಸ್ವದೇಶಿ ಚಿಂತನೆ, ನಾಗರೀಕ ಶಿಷ್ಟಾಚಾರ ಜೀವನದಲ್ಲಿ ನಿತ್ಯ ಅಳವಡಿಸಿಕೊಳ್ಳುವ ಕುರಿತು ಅರಿವು ಮೂಡಿಸಲು ಸಮಾಜೋತ್ಸವದ ಗುರಿ ಆಗಿದೆ ಎಂದು ಹೇಳಿದರು.

ಮಾತೃಶಕ್ತಿ ಜಾಗರಣ ಹಿನ್ನಲೆಯಲ್ಲಿ ಪ್ರತಿ ಉತ್ಸವದಲ್ಲಿ ಮಹಿಳೆಯೊಬ್ಬರಿಗೆ ಉದ್ದೇಶ ಕುರಿತು ಮಾತನಾಡಲು ಅವಕಾಶ ಕಲ್ಪಿಸಲಾಗಿದೆ, ಜ. ೩೦ ರಂದು ಬಸವನಹಳ್ಳಿಯಲ್ಲಿ ಸಮಾರೋಪ, ಸಮಾರಂಭ ಸಂಜೆ ೫ ಗಂಟೆಗೆ ನೆಡೆಯಲಿದ್ದು. ಸ್ವಯಂ ಸೇವಕ ಸಂಘದ ಸಹಕಾರ್ಯವಾಹಕರಾದ ಮುಕುಂದ ರವರು ಭಾಗವಹಿಸಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು.

ಉತ್ಸವದ ಪ್ರತಿ ಕಾರ್ಯಕ್ರಮದಲ್ಲೂ ವಿವಿಧ ಸಮುದಾಯದ ಪ್ರಮುಖರು ಭಾಗವಹಿಸುವರು, ಪ್ರತಿ ಉತ್ಸವದಲ್ಲೂ ಕನಿಷ್ಠ ೫೦೦ ರಿಂದ ೬೦೦ ಕಾರ್ಯಕರ್ತರು ಭಾಗವಹಿಸಲಿದ್ದು ಸರ್ವರೂ ಹೆಚ್ಚಿ ಸಂಖ್ಯೆಯಲ್ಲಿ ಭಾಗವಹಿಸಿ ಸಮಾಜೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಸಮಾಜೋತ್ಸವ ಆಯೋಜನ ಸಮಿತಿ ಸಂಚಾಲಕ ರುದ್ರೇಶ್ ಕಡೂರು, ಉಪಾಧ್ಯಕ್ಷ ಹೆಚ್.ಎನ್ ನಂಜೇಗೌಡ, ಸಹಸಂಚಾಲಕ ರಂಗನಾಥ್ ಉಪಸ್ಥಿತರಿದ್ದರು.

Hindu Samajotsava celebrations in the city from today

Share

Leave a comment

Leave a Reply

Your email address will not be published. Required fields are marked *

Don't Miss

ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ ರೈತರ ಸ್ಥಿತಿ ಅವಲೋಕಿಸಿದ ಸಚಿವ ಜಾರ್ಜ್

ಚಿಕ್ಕಮಗಳೂರು: ಸಕಾಲದಲ್ಲಿ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿರುವ ರೈತರು, ಒಣಗಿ ನಿಂತಿರುವ ಭೂಮಿ, ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ಬೀಜಗಳು ಮೊಳಕೆ ಒಡೆಯದೆ ಬಿಸಿಲಿನ ಝಳಕ್ಕೆ ಸಿಲುಕಿ ಸುಟ್ಟುಹೋಗಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ...

ಸಚಿವ ಕೆ.ಜೆ. ಜಾರ್ಜ್ ಬೆಂಗಾವಲು ವಾಹನ ಅಪಘಾತ

ಚಿಕ್ಕಮಗಳೂರು : ಅಜ್ಜಂಪುರ ಜಿಲ್ಲೆಯ ಬಯಲುಸೀಮೆ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ವೀಕ್ಷಣೆಗಾಗಿ ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರ ಬೆಂಗಾವಲು (Escort) ವಾಹನ ಅಪಘಾತಕ್ಕೀಡಾದ ಘಟನೆ ಅಜ್ಜಂಪುರ ಪಟ್ಟಣದಲ್ಲಿ...

Related Articles

ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ ಮಲೆನಾಡಿಗೆ ಕಂಟಕ

ಚಿಕ್ಕಮಗಳೂರು: ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯದ ೧೦ ಜಿಲ್ಲೆಗಳ ೨೦ ಸಾವಿರಕ್ಕೂ ಅಧಿಕ ಚದರ ಕಿಲೋ...

ಅಂಗಾಂಗ ದಾನ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿ

ಚಿಕ್ಕಮಗಳೂರು: ಅಂಗಾಂಗ ದಾನ ಮಾಡಿ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿಯಾಗಿದೆ ಎಂದು ನಗರಸಭೆ ಪೌರಾಯುಕ್ತ...

ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು. ಕೊಪ್ಪ...

ಫಸಲ್ ಬಿಮಾ ನೋಂದಣಿ ಹೆಚ್ಚಿಸಲು ಜಿಲ್ಲಾಧಿಕಾರಿ ನಿರ್ದೇಶನ

ಚಿಕ್ಕಮಗಳೂರು: ಫಸಲ್ ಬಿಮಾ ಯೋಜನೆಯಡಿ ನೋಂದಣಿ ಕಡಿಮೆಯಾಗಿದ್ದು, ತಕ್ಷಣ ಅಗತ್ಯ ಪ್ರಚಾರ ಕೈಗೊಂಡು ರೈತರ ಮನವೊಲಿಸಿ...