Home namma chikmagalur ಠೇವಣಿ-ಉಳಿತಾಯ ಖಾತೆ ಹಣ ಬಡ್ಡಿ ಸಹಿತ ನೀಡಲು ಆದೇಶ
namma chikmagalurchikamagalurHomeLatest News

ಠೇವಣಿ-ಉಳಿತಾಯ ಖಾತೆ ಹಣ ಬಡ್ಡಿ ಸಹಿತ ನೀಡಲು ಆದೇಶ

Share
Share

ಚಿಕ್ಕಮಗಳೂರು: ಠೇವಣಿ ಇರಿಸಿದ ಹಣವನ್ನು ವಾಪಸು ನೀಡದೆ ಸೇವಾ ನ್ಯೂನತೆ ಎಸಗಿದ ಆರೋಪದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವೊಂದರ ವಿರುದ್ಧ ತೀರ್ಪು ನೀಡಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಠೇವಣಿ ಹಣ ಮತ್ತು ಉಳಿತಾಯ ಖಾತೆಯಲ್ಲಿರುವ ಹಣವನ್ನು ಬಡ್ಡಿ ಸಹಿತ ವಾಪಸು ನೀಡುವಂತೆ, ಜೊತೆಗೆ ಪರಿಹಾರ ಮತ್ತು ಪ್ರಕರಣದ ಖರ್ಚು-ವೆಚ್ಚವನ್ನು ಠೇವಣಿದಾರರಿಗೆ ನೀಡುವಂತೆ ಸಂಘಕ್ಕೆ ಆದೇಶ ನೀಡಿದೆ.

ಚಿಕ್ಕಮಗಳೂರು ತಾಲ್ಲೂಕು ಬಿಳೇಕಲ್ಲು ನಿವಾಸಿ ಬಿ.ಆರ್.ಶಿವಶಂಕರ್ ಎಂಬುವವರು ಹಿರೇಮಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೫ ಲಕ್ಷ ರೂ.ಗಳನ್ನು ಠೇವಣಿಯನ್ನು ಇರಿಸಿದ್ದರು. ಜೊತೆಗೆ ಉಳಿತಾಯ ಖಾತೆಯಲ್ಲೂ ಹಣವಿತ್ತು. ಈ ಹಣವನ್ನು ವಾಪಸು ನೀಡುವಂತೆ ಕೋರಿದ್ದರೂ ಸಂಘವು ನೀಡಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಿವಶಂಕರ್ ಸಂಘದ ವ್ಯವಸ್ಥಾಪಕರ ವಿರುದ್ಧ ಸೇವಾ ನ್ಯೂನತೆ ಎಸಗಿದ ಆರೋಪದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗವು ಅಕ್ಟೋಬರ್ ೧೦ ರಂದು ತೀರ್ಪು ನೀಡಿದ್ದು, ಶಿವಶಂಕರ್ ಅವರು ಇರಿಸಿದ ಠೇವಣಿ ಮೊತ್ತ ೬ ಲಕ್ಷ ರೂ.ಗಳನ್ನು ೨೦೧೯ರ ಮಾರ್ಚ್ ೮ ರಿಂದ ಸಂಪೂರ್ಣ ಪಾವತಿಸುವವರೆಗೂ ಶೇ.೮.೫ರ ವಾರ್ಷಿಕ ಬಡ್ಡಿ ಸಹಿತ, ಉಳಿತಾಯ ಖಾತೆಯಲ್ಲಿರುವ ಮೊತ್ತ ೪,೭೫,೮೫೨ ರೂ.ಗಳನ್ನು ೨೦೧೯ರ ಅಕ್ಟೋಬರ್ ೧೦ ರಿಂದ ಸಂಪೂರ್ಣ ಪಾವತಿಸುವವರೆಗೆ ಶೇ.೬ರ ಬಡ್ಡಿ ಸಹಿತ ಹಾಗೂ ಪರಿಹಾರವಾಗಿ ೩೦ ಸಾವಿರ ರೂ. ಮತ್ತು ಖರ್ಚು-ವೆಚ್ಚವೆಂದು ೧೦ ಸಾವಿರ ರೂ.ಗಳನ್ನು ಶಿವಶಂಕರ್ ಅವರಿಗೆ ನೀಡುವಂತೆ ಸಂಘಕ್ಕೆ ಆದೇಶಿಸಿದೆ.

ಆಯೋಗದ ಅಧ್ಯಕ್ಷರಾದ ಎನ್.ಆರ್.ಚೆನ್ನಕೇಶವ, ಸದಸ್ಯರಾದ ಈ.ಪ್ರೇಮಾ ಮತ್ತು ಡಾ.ಮಂಜುನಾಥ ಬಮ್ಮನಕಟ್ಟಿ ಇವರುಗಳು ಈ ಆದೇಶವನ್ನು ನೀಡುವ ಮೂಲಕ ಇನ್ಶೂರೆನ್ಸ್ ಕಂಪನಿಯು ಸೇವಾ ನ್ಯೂನತೆ ಎಸಗಿರುವುದನ್ನು ಎತ್ತಿಹಿಡಿದು ಗ್ರಾಹಕರ ಹಿತರಕ್ಷಣೆ ಮಾಡಿದೆ. ಪ್ರಕರಣದಲ್ಲಿ ದೂರುದಾರರ ಪರವಾಗಿ ವಕೀಲರಾದ ಕ.ವಿ.ಮಹಾಬಲ ಅವರು ವಾದ ಮಂಡಿಸಿದ್ದರು.

Order to pay deposit-savings account money with interest

Share

Leave a comment

Leave a Reply

Your email address will not be published. Required fields are marked *

Don't Miss

ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ ರೈತರ ಸ್ಥಿತಿ ಅವಲೋಕಿಸಿದ ಸಚಿವ ಜಾರ್ಜ್

ಚಿಕ್ಕಮಗಳೂರು: ಸಕಾಲದಲ್ಲಿ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿರುವ ರೈತರು, ಒಣಗಿ ನಿಂತಿರುವ ಭೂಮಿ, ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ಬೀಜಗಳು ಮೊಳಕೆ ಒಡೆಯದೆ ಬಿಸಿಲಿನ ಝಳಕ್ಕೆ ಸಿಲುಕಿ ಸುಟ್ಟುಹೋಗಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ...

ಸಚಿವ ಕೆ.ಜೆ. ಜಾರ್ಜ್ ಬೆಂಗಾವಲು ವಾಹನ ಅಪಘಾತ

ಚಿಕ್ಕಮಗಳೂರು : ಅಜ್ಜಂಪುರ ಜಿಲ್ಲೆಯ ಬಯಲುಸೀಮೆ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ವೀಕ್ಷಣೆಗಾಗಿ ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರ ಬೆಂಗಾವಲು (Escort) ವಾಹನ ಅಪಘಾತಕ್ಕೀಡಾದ ಘಟನೆ ಅಜ್ಜಂಪುರ ಪಟ್ಟಣದಲ್ಲಿ...

Related Articles

ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ ಮಲೆನಾಡಿಗೆ ಕಂಟಕ

ಚಿಕ್ಕಮಗಳೂರು: ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯದ ೧೦ ಜಿಲ್ಲೆಗಳ ೨೦ ಸಾವಿರಕ್ಕೂ ಅಧಿಕ ಚದರ ಕಿಲೋ...

ಅಂಗಾಂಗ ದಾನ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿ

ಚಿಕ್ಕಮಗಳೂರು: ಅಂಗಾಂಗ ದಾನ ಮಾಡಿ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿಯಾಗಿದೆ ಎಂದು ನಗರಸಭೆ ಪೌರಾಯುಕ್ತ...

ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು. ಕೊಪ್ಪ...

ಫಸಲ್ ಬಿಮಾ ನೋಂದಣಿ ಹೆಚ್ಚಿಸಲು ಜಿಲ್ಲಾಧಿಕಾರಿ ನಿರ್ದೇಶನ

ಚಿಕ್ಕಮಗಳೂರು: ಫಸಲ್ ಬಿಮಾ ಯೋಜನೆಯಡಿ ನೋಂದಣಿ ಕಡಿಮೆಯಾಗಿದ್ದು, ತಕ್ಷಣ ಅಗತ್ಯ ಪ್ರಚಾರ ಕೈಗೊಂಡು ರೈತರ ಮನವೊಲಿಸಿ...