ಚಿಕ್ಕಮಗಳೂರು: ಬೇಲೂರಿನಲ್ಲಿ ಗಣಪತಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದವರು ಯಾವುದೇ ಧರ್ಮ ಜಾತಿಯವರಾದರು ಅವರ ಮನೆಯನ್ನು ಬುಲ್ಡೋಜರ್ ಬಳಸಿ ದ್ವಂಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೊಲೀಸರು ಸಿಸಿ ಕ್ಯಾಮೆರಾ ಗಳನ್ನು ಆಧರಿಸಿ ಕೂಡಲೇ ತಪ್ಪಿತಸ್ಥರನ್ನು ಗುರುತಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಜೊತೆಗೆ ಬುಲ್ಡೋಜರ್ ಬಳಸಿ ಅಂಥವರ ಮನೆ ದ್ವಂಸ ಮಾಡಬೇಕು. ತಪ್ಪಿತಸ್ಥರನ್ನು ರಕ್ಷಿಸಲು ಮುಂದಾದರೆ ಸಮಾಜವೇ ಬುಲ್ಡೋಜರ್ ತೆಗೆದುಕೊಂಡು ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಾರ ಹಾಕಿರುವ ಅನುಮಾನವಿದೆ. ಮದ್ದೂರಿನಲ್ಲಿ ಕಲ್ಲುತೂರಾಟ ನಡೆಸಿದರು. ರಾಜ್ಯದಲ್ಲಿ ಪದೇಪದೇ ಈ ರೀತಿಯ ಘಟನೆಗಳು ಮರುಕಳಿಸುತ್ತಿವೆ. ಈ ಮೂಲಕ ನಮ್ಮ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ. ಜನರಿಗೆ ಸಿಟ್ಟು ಬಂದರೆ ದುರ್ಜನರು ಯಾರು ಉಳಿಯುವುದಿಲ್ಲ ಎಂದು ಕಿರಿಕಾರಿದರು.
ಸಿಎಂ ಸಿದ್ದರಾಮಯ್ಯ ಅವರಿಗಿಂತಲೂ ಔರಂಗಜೇಬನೇ 100 ಪಟ್ಟು ಹೆಚ್ಚು ಉತ್ತಮ. ಔರಂಗಜೇಬ ಹಿಂದುಗಳಿಗೆ ಮಾತ್ರ ತೆರಿಗೆ ವಿಧಿಸಿದ್ದ. ಆದರೆ ಸಿಎಂ ಸಿದ್ದರಾಮಯ್ಯ ದೇವಾಲಯಗಳ ಪೂಜೆ ವೆಚ್ಚವನ್ನು ಹೆಚ್ಚಿಸಿದ್ದಾರೆ. ಈ ಮೂಲಕ ಜನ ದೇವಸ್ಥಾನಕ್ಕೆ ಬರುವುದನ್ನು ತಡೆದು ಮತಾಂತರಕ್ಕೆ ಷಡ್ಯಂತ್ರ ನಡೆಸುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ದೂರಿದರು.
ದಸರಾ ಜನಸಾಮಾನ್ಯರ ಹಾಗೂ ಹಿಂದುಗಳ ಹಬ್ಬ. ದುಷ್ಟ ಶಕ್ತಿಗಳ ವಿರುದ್ಧ ಸಜ್ಜನ ಶಕ್ತಿಗಳು ವಿಜಯವಾದ ಆಚರಣೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ದಸರಾವನ್ನು ಶ್ರೀಮಂತರ ಹಬ್ಬ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ದಸರಾದ ಒಂದೊಂದು ಆಚರಣೆಗಳನ್ನು ನೋಡಲು ಪ್ರವೇಶಕ್ಕೆ ದುಬಾರಿ ವೆಚ್ಚದ ಟಿಕೆಟ್ ಮಾಡಲಾಗಿದೆ. ಈ ಮೂಲಕ ಬಡವರನ್ನು ದಸರಾದಿಂದ ದೂರ ಇಡುವ ಹುನ್ನಾರ ನಡೆದಿದೆ. ಇದೆಲ್ಲವನ್ನು ನೋಡಿದಾಗ ಸಿದ್ದರಾಮಯ್ಯ ಅವರಿಗಿಂತ ಔರಂಗಜೇಬನೆ ಉತ್ತಮ ಎನಿಸುತ್ತದೆ ಎಂದರು.
The house should be demolished using a bulldozer.
Leave a comment