Home Political News ಭದ್ರತೆ ನೆಪದಲ್ಲಿ ಸಿ.ಟಿ ರವಿಗೆ ಡಬಲ್ ಎಸ್ಕಾರ್ಟ್ : ಪೊಲೀಸರ ಎಡವಟ್ಟು
Political News

ಭದ್ರತೆ ನೆಪದಲ್ಲಿ ಸಿ.ಟಿ ರವಿಗೆ ಡಬಲ್ ಎಸ್ಕಾರ್ಟ್ : ಪೊಲೀಸರ ಎಡವಟ್ಟು

Share
Share

ಚಿಕ್ಕಮಗಳೂರು : ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯೆ ನಡೆದ ಜಾಟಪಟಿಯಲ್ಲಿ ಅಶ್ಲೀಲ ಪದ ಪ್ರಯೋಗ ನಂತರ ನಡೆದ ನಾಟಕೀಯ ಬೆಳವಣಿಗೆಗಳು ಆರೋಪ ಪ್ರತ್ಯಾರೋಪಗಳ ಮಧ್ಯೆ ಸಿ.ಟಿ.ರವಿಯವರಿಗೆ ಪೊಲೀಸ್ ಭದ್ರತೆ ನೀಡಿರುವುದು, ಸೈರನ್ ಮೂಲಕ ಎಸ್ಕಾರ್ಟ್ ಅನ್ನು ಒದಗಿಸಿರುವುದಕ್ಕೆ ತೀವ್ರ ಚರ್ಚೆ ಆರಂಭವಾಗಿದೆ.

ಸಿ.ಟಿ.ರವಿ ಸೋಲಿಸಿದ ತಮ್ಮಯ್ಯ ವಾಹನ ಸಂಚರಿಸುವ ವೇಳೆ ಸಿ.ಟಿ. ರವಿ ಕಾರಿನ ಹಿಂದೆ ಮುಂದೆ ಪೊಲೀಸ್ ಜೀಪ್ ಜೊತೆಗೆ ಸೈರನ್ ಸೌಂಡ್ ಕೇಳಿ ಕೆರಳಿದ ಕಾಂಗ್ರೆಸ್ ಮುಖಂಡರು ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ ಈ. ವೇಳೆ ಮೇಲಾಧಿಕಾರಿಗಳ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಉತ್ತರ ಬಂದಿದೆ.

ಸಿ.ಟಿ.ರವಿ ಕುಳಿತರು ಸುದ್ದಿ ನಿಂತರು ಸುದ್ದಿ ಇನ್ನೂ ಸೈರನ್ ಸೌಂಡ್ ಹಾಕಿಕೊಂಡು ಓಡಾಡಿದರೆ ಸುದ್ದಿ ಆಗಲ್ವಾ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕಳೆದ ಎಂಟು ದಿನಗಳಿಂದ ಎಡಬಿಡದೆ ಎಲ್ಲೆಲ್ಲೂ ಸುದ್ದಿಯಾಗುತ್ತಿರುವಾಗ ಎಸ್ಕಾರ್ಟ್ ಬಗ್ಗೆ ಕಾಂಗ್ರೆಸ್ ನ ಶಾಸಕರಿಗೂ ಎಸ್ಕಾರ್ಟ್ ಜೊತೆಗೆ ಸೈರನ್ ಗ್ಯಾರಂಟಿ ಒದಗಿಸಿ ಎಂದು ಆಗ್ರಹಿಸಿದರು ಆಶ್ಚರ್ಯವಿಲ್ಲ.

ಅಭಿವೃದ್ಧಿ ದೃಷ್ಟಿಯಿಂದ ನಾವೆಲ್ಲರೂ ಒಂದಾಗಿದ್ದೇವೆ ಎಂದು ಹೇಳಿದ್ದ ಶಾಸಕ ತಮ್ಮಯ್ಯ ಈಗ ಸೈರನ್ ಸೌಂಡ್ ಗೆ ತಿರುಗಿ ಬಿದ್ದಿರುವುದು ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರದಲ್ಲಿ ಖಾರವಾಗಿ ಟೀಕಿಸಿರುವುದು ಎಲ್ಲವೂ ಸರಿಯಿಲ್ಲ ಎನ್ನುತ್ತಲೇ ಸರ್ಕಾರಿ ನೌಕರರ ಸಂಘದ ದೇವೇಂದ್ರ ಪರ ನಿಂತು ಬೋಜೇಗೌಡರ ವಿರುದ್ದ ಹೆಜ್ಜೆ ಇಟ್ಟಿರುವುದು ನೋಡಿದರೆ ಒಗ್ಗಟ್ಟಿನಲ್ಲಿ ಒಡುಕು ಉಂಟಾಗಿದೆ. ಅಭಿವೃದ್ಧಿ ವಿಚಾರಕ್ಕಿಂತ ಅಸ್ತಿತ್ವದ ವಿಚಾರ ಬಂದಾಗ ಎದುರಾಳಿಗಳ ಬಾಯಿ ಮುಚ್ಚಿಸುತ್ತಾರೆ ಎಂಬುದು ಸತ್ಯವಾದಂತಿದೆ

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಕೇಂದ್ರ ಸರ್ಕಾರದ ಅನುದಾನ ಹಾಗೂ ತೆರಿಗೆ ಪಾಲು ಕುರಿತು ನಮ್ಮ ಸರ್ಕಾರ ‘ಶ್ವೇತಪತ್ರ’ ಪತ್ರ

ವಿಧಾನಸಭೆ:  ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯಕ್ಕೆ ನೀಡುತ್ತಿರುವ ಅನುದಾನ ಹಾಗೂ ತೆರಿಗೆ ಪಾಲು...

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಎಂಬ ನಾಟಕ…!

ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಲು ತುದಿಗಾಲಿನಲ್ಲಿ ನಿಂತಿದ್ದವರಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಲು...

ಬಿ.ಎಲ್.ಶಂಕರ್ ರಾಜಕೀಯ ಹಿನ್ನಡೆ ಏಕೆ ?

ಚಿಕ್ಕಮಗಳೂರು: ಬಿ.ಎಲ್.ಶಂಕರ್ ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ದೊಡ್ಡ ಶಕ್ತಿಯಾಗಿದ್ದವರು ಹಿನ್ನಡೆ ಅನುಭವಿಸುತ್ತಿರುವುದು ಏಕೆ ?...

ಬಿ.ಎಲ್.ಶಂಕರ್ ಗೆ ಮತ್ತೆ ಮತ್ತೆ ಮಿಸ್…?

ಚಿಕ್ಕಮಗಳೂರು: ರಾಜ್ಯ ಸಭೆ ಅಥವಾ ವಿಧಾನ ಪರಿಷತ್ ಸ್ಥಾನಗಳಿಗೆ ಆಯ್ಕೆ ಮಾಡುವಾಗ ಬಿ.ಎಲ್.ಶಂಕರ್ ಹೆಸರು ಎವರೆಸ್ಟ್...