Home Political News ಅಭಿವೃದ್ಧಿಯ ಹರಿಕಾರ ಎ.ಸಿ ಕುಮಾರಗೌಡ
Political News

ಅಭಿವೃದ್ಧಿಯ ಹರಿಕಾರ ಎ.ಸಿ ಕುಮಾರಗೌಡ

Share
Share

ಚಿಕ್ಕಮಗಳೂರು : ನಗರಸಭೆಯ ವಾರ್ಡ್‌ ನಂಬರ್ 8ರ ನಗರಸಭಾ ಸದಸ್ಯ ಎ.ಸಿ.ಕುಮಾರ್ ಅತ್ಯುತ್ತಮ ಅಭಿವೃದ್ಧಿ ಕೆಲಸದ ಜೊತೆಗೆ ಜನಸಾಮಾನ್ಯರ ಬಳಿ ಸ್ಪಂದಿಸುವ ಗುಣವನ್ನು ಎಲ್ಲರೂ ಮೆಚ್ಚುತ್ತಿದ್ದಾರೆ.
1998 ರಲ್ಲಿ ಅಸ್ತಿತ್ವಕ್ಕೆ ಬಂದ ಜಯನಗರ ವಾರ್ಡ್‌ನಲ್ಲಿ ಪ್ರಥಮ ಬಾರಿಗೆ ಎಸ್.ಎಲ್.ಬೋಜೇಗೌಡ ಅಯ್ಕೆಯಾಗಿ ಸ್ವಲ್ಪ ಅಭಿವೃದ್ಧಿ ಕೆಲಸ ಬಿಟ್ಟರೆ ಇನ್ನೂ ಉಳಿದ ಅವಧಿಯಲ್ಲಿ ನಗರಸಭಾ ಸದಸ್ಯರು ಯಾರು ಎಂಬುದು ತಿಳಿಯಲಿಲ್ಲ.
ಕುಮಾರ್ ನಗರಸಭೆಯ ಸದಸ್ಯರಾಗಿ ಮೂರು ವರ್ಷಗಳಿಂದ ನಗರದ ಸ್ವಚ್ಛತೆಗೆ ಹೆಚ್ಚಿನ ಅದ್ಯತೆಯಲ್ಲ ಸ್ವತಃ ನಿಂತು ಕೆಲಸ ಮಾಡಿಸುತ್ತಿರುವುದನ್ನು ದಿನನಿತ್ಯ ನೋಡಬಹುದು ಯಾವುದೇ ಸಮಸ್ಯೆಗಳು ಇರಲಿ ಕ್ಷಣಾರ್ಧದಲ್ಲಿ ಬಗೆಹರಿಸುತ್ತಿರುವುದು ನಿಜವಾಗಿಯೂ ಮೆಚ್ಚ ಬೇಕು.
ವ್ಯಾಟ್ಸ್ ಆಫ್ ಗ್ರೂಪ್‌ನಲ್ಲಿ ಏನು ಸಮಸ್ಯೆ ಇದ್ದರು ತಿಳಿಸಿದರೆ ಸಾಕು ಅಲ್ಲಿಗೆ ಕುಮಾರ್ ನಗರಸಭೆಯ ಕಾರ್ಮಿಕರೊಂದಿಗೆ ಆಗಮಿಸಿ ಪರಿಹರಿಸಿ ಹೋಗುವ ಅಭ್ಯಾಸ ಮಾಡಿಕೊಂಡಿದ್ದಾರೆ. ನಗರಸಭೆಯ ಕಾರ್ಮಿಕರೊಂದಿಗೆ ವಿಶ್ವಾಸ ನಿಕಟತೆಯೊಂದಿಗೆ ಇರುವುದು ಇವರ ಕೆಲಸ ಕಾರ್ಯಗಳಿಗೆ ಅನುಕೂಲವಾಗಿದೆ.
ರಸ್ತೆ, ಚರಂಡಿ, ಪಾರ್ಕ್, ಖಾಲಿ ಸೈಟ್ ಕೂಡ ಪಳ ,ಪಳ ಹೊಳೆಯುವಷ್ಟು ಕ್ಲೀನ್ ಮಾಡಲಾಗುತ್ತದೆ.ಕುಮಾರ್ ಕೆಲಸ ಮತ್ತು ಸ್ಪಂದನೆಯಿಂದಾಗಿ ಚಿಕ್ಕಮಗಳೂರು ನಗರಸಭೆಯಲ್ಲಿ ಜಯನಗರ ವಾರ್ಡ ಮೊದಲ ಸ್ಥಾನದಲ್ಲಿ ಇದೆ .

Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ಸಿ.ಟಿ.ರವಿ ಸೋಲಿನ ಹತಾಶೆಯಿಂದ ಬಾಯಿಗೆ ಬಂದಂತೆ ನಾಲಿಗೆ ಹರಿಬಿಟ್ಟಿದ್ದಾರೆ

ಚಿಕ್ಕಮಗಳೂರು: ಸಿ.ಟಿ.ರವಿ ಅವರು ಸೋಲಿನ ಹತಾಶೆಯಿಂದ ಎಚ್.ಡಿ.ತಮ್ಮಯ್ಯ ವಿರುದ್ಧ ಬಾಯಿಗೆ ಬಂದಂತೆ ನಾಲಿಗೆ ಹರಿಬಿಟ್ಟಿದ್ದಾರೆ ಎಂದು ಕಾಂಗ್ರೆಸ್‌...

20 ವರ್ಷ ಹೊರಗಿನವರೆ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿದ್ದಾರೆ

ಮೂಡಿಗೆರೆ:‘ ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ವಿರೋಧ ಪಕ್ಷಗಳು ಹತಾಶೆಯಿಂದ ಬಾಯಿ ಚಪಲಕ್ಕಾಗಿ ಮಾತನಾಡುತ್ತಿವೆ’ ಎಂದು...

ರಾಜ್ಯದಲ್ಲಿ ನವೆಂಬರ್ ಕ್ರಾಂತಿಯೋ ! ಭ್ರಾಂತಿಯೋ ?

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿ ಎರಡೂವರೆ ವರ್ಷ ಪೂರೈಸುತ್ತಿದೆ.ಸರ್ಕಾರ ರಚನೆಯಾದಾಗಿನಿಂದ ಇಲ್ಲಿಯವರೆಗೆ “ಮುಖ್ಯಮಂತ್ರಿ” ಬದಲಾಗುತ್ತಾರೆ...

ಶೃಂಗೇರಿ ಲಡಾಯಿ: ಶಾಸಕ ಟಿ.ಡಿ.ರಾಜೇಗೌಡ V/S ಜೀವರಾಜ್

ಶೃಂಗೇರಿ: ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮತ್ತು ಬಿಜೆಪಿ ಮಾಜಿ ಸಚಿವ ಶಾಸಕ ಜೀವರಾಜ್...