Home Political News ಸಿ.ಟಿ ರವಿ ಡ್ರಾಮ ಮಾಸ್ಟರ್ ಹೇಳಿಕೆಗೆ ಪಲ್ಲವಿ ಸಿ.ಟಿ ರವಿ ತಿರುಗೇಟು
Political News

ಸಿ.ಟಿ ರವಿ ಡ್ರಾಮ ಮಾಸ್ಟರ್ ಹೇಳಿಕೆಗೆ ಪಲ್ಲವಿ ಸಿ.ಟಿ ರವಿ ತಿರುಗೇಟು

Share
Share

ಚಿಕ್ಕಮಗಳೂರು : ಸಿ.ಟಿ ರವಿ ಒಳ್ಳೆಯ ಡ್ರಾಮಾ ಮಾಸ್ಟರ್ ಎಂಬ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಪಲ್ಲವಿ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಹಾಳಾಗಿರಲ್ಲ. ಡೀಪಾಗಿ ಒಂದು ಹೋಲ್ ಆಗಿದೆ, ಎರಡು ದಿನ ಬ್ಯಾಂಡೇಜ್ ಆಮೇಲೆ ತಲೆಗೆ ಔಷಧಿ ಹಾಕಬೇಕು. ಕೂದಲಿನ ಮೇಲೆ ಬ್ಯಾಂಡೇಜ್ ಸ್ಟಿಕರ್ ನಿಲ್ಲಲ್ಲ ಅಂತ ಈ ರೀತಿ ಬ್ಯಾಂಡೇಜ್ ಹಾಕಿದ್ದಾರೆ ಎಂದರು.

ಗಾಯ ಆಗಿಲ್ಲ ಅಂದ್ರೆ ಎಷ್ಟು ದಿನ ಅಂತ ನಾಟಕ ಮಾಡಲು ಆಗುತ್ತೆ, ಮ್ಯಾನ್ ಹ್ಯಾಂಡ್ಲಿಂಗ್ ಮಾಡಿ ಸುತ್ತಾಡಿಸಿರುವುದರಿಂದ ಅವರಿಗೆ ಜ್ವರ ಬಂದಿದೆ. ದಿನಾ ನಾಟಕ ಮಾಡೋರು ಅದೇ ರೀತಿ ಇರ್ತಾರೆ ಹೇಳೋರಿಗೇನು ಏನು ಬೇಕಾದರೂ ಹೇಳಬಹುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ತಿರುಗೇಟು ನೀಡಿದರು.

ಇದೇ ವೇಳೆ ಮಾತನಾಡಿದ ಅವರು ಸಿ.ಟಿ ರವಿಗೆ ಸಂಸ್ಕಾರ ಇಲ್ಲ ಅಂತ ನೀವು ಹೇಳಿದ್ದೀರಾ ಅಕ್ಕ ತಂಗಿ ಅಮ್ಮ ಹೆಂಡ್ತಿ ಇಲ್ಲ ಎಂಬ ಹೆಬ್ಬಾಳ್ಕರ್ ಹೇಳಿಕೆಗೆ ಅವರು, ಎಲ್ಲರೂ ಇದ್ದಾರೆ ಅಮ್ಮ ಇಲ್ಲದಿದ್ದರೆ ಭೂಮಿಗೆ ಬರೋದಾದ್ರು ಹೇಗೆ..?. ಸಿ.ಟಿ ರವಿಗೆ ಅವರದ್ದೇ ಆದ ಸಂಸ್ಕಾರವಿದೆ ಹಾಗಾಗಿ ಹೇಳೋದು ಲಕ್ಷ್ಮಿ ಅವರಿಗೆ ಹೇಳೋದು ರೂಢಿ ಅನ್ಸುತ್ತೆ. ಹೆಬ್ಬಾಳ್ಕರ್ ಅವರಿಗೆ ಒರಟುತನದ ಮಾತು ಅಭ್ಯಾಸ ಆಗಿ ಹೋಗಿದೆ ಸದನದ ಒಳಗೆ ನಡೆದಿದ್ದನ್ನು ನಮ್ಮವರವರೆಗೂ ಏಕೆ ತಂದ್ರು ಅರ್ಥ ಆಗ್ತಿಲ್ಲ. ರಾಜಕಾರಣಿ ಹೇಗಿರಬೇಕು ಅಂದ್ರೆ ನಾನು ಸಿ.ಟಿ ರವಿ ಅವರಿಂದ ಕಲಿತಿದ್ದೇನೆ. ತುಂಬಾ ಜನಕ್ಕೆ ಹೇಳ್ತೀನಿ ಸಿ.ಟಿ ರವಿ ಅವರ ಜೊತೆ ಇದ್ದರೆ ಊಟ ತಿಂಡಿ ಸಿಗಲ್ಲ ಅಂತ. ಬಿಪಿ ಶುಗರ್ ಇರೋರು ಅವರ ಜೊತೆ ಹೋಗಬೇಡಿ ಅಂತ ನಾನೇ ಹಲವರಿಗೆ ಹೇಳಿದ್ದೇನೆ ಎಂದು ತಿಳಿಸಿದರು.

Share

Leave a comment

Leave a Reply

Your email address will not be published. Required fields are marked *

Don't Miss

ನಗರದಲ್ಲಿ ಎರಡು ಗುಂಪುಗಳ ನಡುವಿನ ಗಲಾಟೆ

ಚಿಕ್ಕಮಗಳೂರು : ಮಧ್ಯರಾತ್ರಿ ರಸ್ತೆಯಲ್ಲಿ ಕೆಟ್ಟ ಶಬ್ದಗಳಿಂದ ಬೈದಾಡಿಕೊಳ್ಳುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದ ಎರಡು ಗುಂಪುಗಳ ನಡುವಿನ ಗಲಾಟೆಯನ್ನು ತಡೆದ ಗಸ್ತು ಪೊಲೀಸರು ಮೂವರನ್ನು ವಶಕ್ಕೆ ಪಡೆದ ಘಟನೆ ಚಿಕ್ಕಮಗಳೂರು...

ಬಡ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು.

ಚಿಕ್ಕಮಗಳೂರು:   ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡ ಸಾಗುವಳಿ ದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿ ವರು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು...

Related Articles

ಅರತಿಕೃಷ್ಣಗೆ ಮಂತ್ರಿ ಗ್ಯಾರಂಟಿ – ಶ್ರೀನಿವಾಸ್ ತಿರುಪತಿಗೆ ? – ನಯನ ನವ ಅವತಾರಕ್ಕೆ ಭಂಗ, ಭಂಗ

ಚಿಕ್ಕಮಗಳೂರು: ಜಿಲ್ಲೆಯ ಲ್ಲಿ ಮಂತ್ರಿಯಾಗ ಬೇಕು ಎಂದು ಪಟ್ಟು ಹಿಡಿದವರು ಪಲ್ಟಿ ಹೊಡೆದಿದ್ದಾರೆ ಆದರೆ ಅರತಿಕೃಷ್ಣ...

ಮೌಲ್ಯ – ಸೇವೆ ಮರೆತು ಹಣ ದೂಚಲು ಪ್ರಜಾಪ್ರಭುತ್ವದ ಕಗ್ಗೂಲೆ…

ಅದಲು-ಬದಲು ಯಾವ ಪಕ್ಷಗಳಿಗೆ ಸಿದ್ದಾಂತ, ನೈತಿಕತೆ ಇದೆ ಭಾರತದಲ್ಲಿ ಸಾಧ್ಯವಿಲ್ಲ. ಎಲ್ಲಾ ಪಕ್ಷಗಳು ಬೆರಿಕೆಯ ತುರಿಕೆಯಲ್ಲಿವೆ.ಅದರಲ್ಲೂ...

ರಾಜಕಾರಣದಲ್ಲಿ ಮಠಗಳ, ಸಂಘಟನೆಗಳ “ಆರ್ಭಟ”

ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಠಗಳ ಪ್ರಭಾವ ಮತ್ತು ಸಂಘಟನೆಗಳು ಆರ್ಭಟ ಮಾಡುತ್ತಿರುವುದು ನೋಡಿದರೆ ಎತ್ತ...

ಜಿಲ್ಲೆಯಲ್ಲಿ ಗೂಟದ ಕಾರಿಗಾಗಿ “ಕೈ ಪಡೆ” ಯ ಕಸರತ್ತು !

ಚಿಕ್ಕಮಗಳೂರು: ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರಿಂದ ಉಳಿದ ಎರಡು ವರ್ಷಗಳ ಅವಧಿಗೆ ಡಿ.ಕೆ.ಮುಖ್ಯಮಂತ್ರಿಯಾಗಿ ದೇವಸ್ಥಾನ,...