Home Political News ಸಿ.ಟಿ ರವಿ ಡ್ರಾಮ ಮಾಸ್ಟರ್ ಹೇಳಿಕೆಗೆ ಪಲ್ಲವಿ ಸಿ.ಟಿ ರವಿ ತಿರುಗೇಟು
Political News

ಸಿ.ಟಿ ರವಿ ಡ್ರಾಮ ಮಾಸ್ಟರ್ ಹೇಳಿಕೆಗೆ ಪಲ್ಲವಿ ಸಿ.ಟಿ ರವಿ ತಿರುಗೇಟು

Share
Share

ಚಿಕ್ಕಮಗಳೂರು : ಸಿ.ಟಿ ರವಿ ಒಳ್ಳೆಯ ಡ್ರಾಮಾ ಮಾಸ್ಟರ್ ಎಂಬ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಪಲ್ಲವಿ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಹಾಳಾಗಿರಲ್ಲ. ಡೀಪಾಗಿ ಒಂದು ಹೋಲ್ ಆಗಿದೆ, ಎರಡು ದಿನ ಬ್ಯಾಂಡೇಜ್ ಆಮೇಲೆ ತಲೆಗೆ ಔಷಧಿ ಹಾಕಬೇಕು. ಕೂದಲಿನ ಮೇಲೆ ಬ್ಯಾಂಡೇಜ್ ಸ್ಟಿಕರ್ ನಿಲ್ಲಲ್ಲ ಅಂತ ಈ ರೀತಿ ಬ್ಯಾಂಡೇಜ್ ಹಾಕಿದ್ದಾರೆ ಎಂದರು.

ಗಾಯ ಆಗಿಲ್ಲ ಅಂದ್ರೆ ಎಷ್ಟು ದಿನ ಅಂತ ನಾಟಕ ಮಾಡಲು ಆಗುತ್ತೆ, ಮ್ಯಾನ್ ಹ್ಯಾಂಡ್ಲಿಂಗ್ ಮಾಡಿ ಸುತ್ತಾಡಿಸಿರುವುದರಿಂದ ಅವರಿಗೆ ಜ್ವರ ಬಂದಿದೆ. ದಿನಾ ನಾಟಕ ಮಾಡೋರು ಅದೇ ರೀತಿ ಇರ್ತಾರೆ ಹೇಳೋರಿಗೇನು ಏನು ಬೇಕಾದರೂ ಹೇಳಬಹುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ತಿರುಗೇಟು ನೀಡಿದರು.

ಇದೇ ವೇಳೆ ಮಾತನಾಡಿದ ಅವರು ಸಿ.ಟಿ ರವಿಗೆ ಸಂಸ್ಕಾರ ಇಲ್ಲ ಅಂತ ನೀವು ಹೇಳಿದ್ದೀರಾ ಅಕ್ಕ ತಂಗಿ ಅಮ್ಮ ಹೆಂಡ್ತಿ ಇಲ್ಲ ಎಂಬ ಹೆಬ್ಬಾಳ್ಕರ್ ಹೇಳಿಕೆಗೆ ಅವರು, ಎಲ್ಲರೂ ಇದ್ದಾರೆ ಅಮ್ಮ ಇಲ್ಲದಿದ್ದರೆ ಭೂಮಿಗೆ ಬರೋದಾದ್ರು ಹೇಗೆ..?. ಸಿ.ಟಿ ರವಿಗೆ ಅವರದ್ದೇ ಆದ ಸಂಸ್ಕಾರವಿದೆ ಹಾಗಾಗಿ ಹೇಳೋದು ಲಕ್ಷ್ಮಿ ಅವರಿಗೆ ಹೇಳೋದು ರೂಢಿ ಅನ್ಸುತ್ತೆ. ಹೆಬ್ಬಾಳ್ಕರ್ ಅವರಿಗೆ ಒರಟುತನದ ಮಾತು ಅಭ್ಯಾಸ ಆಗಿ ಹೋಗಿದೆ ಸದನದ ಒಳಗೆ ನಡೆದಿದ್ದನ್ನು ನಮ್ಮವರವರೆಗೂ ಏಕೆ ತಂದ್ರು ಅರ್ಥ ಆಗ್ತಿಲ್ಲ. ರಾಜಕಾರಣಿ ಹೇಗಿರಬೇಕು ಅಂದ್ರೆ ನಾನು ಸಿ.ಟಿ ರವಿ ಅವರಿಂದ ಕಲಿತಿದ್ದೇನೆ. ತುಂಬಾ ಜನಕ್ಕೆ ಹೇಳ್ತೀನಿ ಸಿ.ಟಿ ರವಿ ಅವರ ಜೊತೆ ಇದ್ದರೆ ಊಟ ತಿಂಡಿ ಸಿಗಲ್ಲ ಅಂತ. ಬಿಪಿ ಶುಗರ್ ಇರೋರು ಅವರ ಜೊತೆ ಹೋಗಬೇಡಿ ಅಂತ ನಾನೇ ಹಲವರಿಗೆ ಹೇಳಿದ್ದೇನೆ ಎಂದು ತಿಳಿಸಿದರು.

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಕೇಂದ್ರ ಸರ್ಕಾರದ ಅನುದಾನ ಹಾಗೂ ತೆರಿಗೆ ಪಾಲು ಕುರಿತು ನಮ್ಮ ಸರ್ಕಾರ ‘ಶ್ವೇತಪತ್ರ’ ಪತ್ರ

ವಿಧಾನಸಭೆ:  ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯಕ್ಕೆ ನೀಡುತ್ತಿರುವ ಅನುದಾನ ಹಾಗೂ ತೆರಿಗೆ ಪಾಲು...

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಎಂಬ ನಾಟಕ…!

ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಲು ತುದಿಗಾಲಿನಲ್ಲಿ ನಿಂತಿದ್ದವರಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಲು...

ಬಿ.ಎಲ್.ಶಂಕರ್ ರಾಜಕೀಯ ಹಿನ್ನಡೆ ಏಕೆ ?

ಚಿಕ್ಕಮಗಳೂರು: ಬಿ.ಎಲ್.ಶಂಕರ್ ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ದೊಡ್ಡ ಶಕ್ತಿಯಾಗಿದ್ದವರು ಹಿನ್ನಡೆ ಅನುಭವಿಸುತ್ತಿರುವುದು ಏಕೆ ?...

ಬಿ.ಎಲ್.ಶಂಕರ್ ಗೆ ಮತ್ತೆ ಮತ್ತೆ ಮಿಸ್…?

ಚಿಕ್ಕಮಗಳೂರು: ರಾಜ್ಯ ಸಭೆ ಅಥವಾ ವಿಧಾನ ಪರಿಷತ್ ಸ್ಥಾನಗಳಿಗೆ ಆಯ್ಕೆ ಮಾಡುವಾಗ ಬಿ.ಎಲ್.ಶಂಕರ್ ಹೆಸರು ಎವರೆಸ್ಟ್...