Home Latest News ನೌಕರರ ಸಂಘದಲ್ಲಿ ಗೆದ್ದು ಬೀಗಿದ ದೇವೆಂದ್ರ ಮಂಗಮಾಯ
Latest News

ನೌಕರರ ಸಂಘದಲ್ಲಿ ಗೆದ್ದು ಬೀಗಿದ ದೇವೆಂದ್ರ ಮಂಗಮಾಯ

Share
Share

ಚಿಕ್ಕಮಗಳೂರು : ರಾಜ್ಯ ಸರ್ಕಾರಿ ನೌಕರರ ಚುನಾವಣೆ ನಡೆದು ಹದಿನೇಳು ದಿನಗಳು ಕಳೆದಿವೆ. ನೌಕರರ ಸಂಘದ ಪದಾಧಿಕಾರಿಗಳು ನಾಪತ್ತೆಯಾಗಿರುವುದು ಮಾತ್ರ ಆಶ್ಚರ್ಯ ಉಂಟುಮಾಡಿದೆ.

ಯಾವ ರಾಜಕೀಯ ಪುಡಾರಿಗಳಿಗೂ ಕಡಿಮೆ ಇಲ್ಲದಂತ ಪೈಪೋಟಿ ,ಜಿದ್ದಾಜಿದ್ದಿ ,ಹಣಬಲ,ತೋಳ್ ಬಲ, ಪ್ರತಿರೋಧವಿದ್ದರು ಭರ್ಜರಿ ಜಯ ಸಾಧಿಸಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾಗಿ ದೇವೇಂದ್ರ ಅಯ್ಕೆ ಆಗಿದ್ದು ಬಿಟ್ಟರೆ ಆದನ್ನು ಸಂಭ್ರಮಿಸುವುದಿರಲಿ ಅರಗಿಸಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ.ಎಂ,ಎಲ್,ಸಿ, ಬೋಜೇಗೌಡರ ವಿರುದ್ಧ ಆರೋಪ ಮಾಡಿದ್ದರ ಹಿನ್ನೆಲೆಯಲ್ಲಿ ದೇವೇಂದ್ರರನ್ನು ಅಮಾನತು ಮಾಡಿ ಕುಂದಾಪುರಕ್ಕೆ ಸ್ಥಳ ನಿಯುಕ್ತಿ ಮಾಡಲಾಗಿದ್ದು ಅಂದಿನಿಂದ ಚಿಕ್ಕಮಗಳೂರು ತೊರೆದಿರುವ ದೇವೇಂದ್ರ ಆಂಡ್ ಗ್ಯಾಂಗ್ ಬೆಂಗಳೂರು ಟೂ ಬೆಳಗಾವಿಗೆ ಅಪ್ ಆಂಡ್ ಡೌನ್ ಮಾಡುತ್ತಿದೆ ಎಂದು ಅವರ ವಿರೋಧಿ ಗ್ಯಾಂಗ್ ಹೇಳುತ್ತಿದೆ.

ಬೆಂಗಳೂರಿನಲ್ಲಿ ರಾಜ್ಯ ಅಧ್ಯಕ್ಷ ರಾಗಿ ಮತ್ತೊಮ್ಮೆ ಅಯ್ಕೆ ಬಯಸಿರುವ ಷಡಕ್ಷರಿ ಟೀಮ್ ಜೊತೆಗೆ ಶಾಲು ಹೊದಿಸಿಕೊಂಡು ಖುಷಿ,ಖುಷಿಯಿಂದ ಸ್ಥಳ ಮಾರ್ಪಾಡು ಮಾಡಿಸಿಕೊಳ್ಳಲು ಹರಸಾಹಸ ಪಡುತ್ತಿರುವ ದೇವೇಂದ್ರ ಯಾವುದಕ್ಕೂ ಕಮ್ಮಿ ಇಲ್ಲ ಎಂದು ಸೆಡ್ಡು ಹೊಡೆಯುತ್ತಿದ್ದು ಇದಕ್ಕೆ ಭೋಜೇಗೌಡ ಮತ್ತು ಗಾಯತ್ರಿ ಶಾಂತೇಗೌಡ ಸುಮ್ಮನೆ ಬಿಡುವುದು ಕಷ್ಟ, ಕಷ್ಟ ಆದರೂ ಅಂತಿಮವಾಗಿ ನ್ಯಾಯಾಲಯ ದಲ್ಲಿ ಬಗೆಹರಿಸಿಕೊಳ್ಳುವುದು ಅನಿವಾರ್ಯ ಎನ್ನುತ್ತಾರೆ. ಹಣ ಖರ್ಚು ಮಾಡಿ ಸೋತಿರುವ ಹೇಮಂತ್ ಕುಮಾರ್ ಇದು ಬೇಕಿತ್ತಾ ಎಂದರೆ ಗೆದ್ದರೂ ತಪ್ಪಲಿಲ್ಲಾ ಸಂಕಷ್ಟ ಎಂದು ದೇವೇಂದ್ರ ಗೋಳಾಡುತ್ತಿರುವುದು ಮಾತ್ರ ಸತ್ಯ. ಈ ನಡುವೆ ಭೋಜೇಗೌಡ ಭೇಟಿ ಮಾಡಿ ಮಾಫಿ ಕೇಳಲು ಯತ್ನಿಸಿದರು ಯಾವುದೇ ಪ್ರಯೋಜವಾಗಿಲ್ಲ ಎಂದು ತಿಳಿದು ಬಂದಿದೆ

Share

Leave a comment

Leave a Reply

Your email address will not be published. Required fields are marked *

Don't Miss

30 ಲಕ್ಷ ರೂಪಾಯಿ ಹಣ ನೀಡುವಂತೆ ಬ್ಲಾಕ್‌ ಮೆಲ್

ಚಿಕ್ಕಮಗಳೂರು: ಎಡಿಟ್ ಮಾಡಿದ ಗೃಹಿಣಿಯೊಬ್ಬರ ಫೋಟೋಗಳನ್ನು ಅವರ ಮೊಬೈಲ್‌ಗೇ ಕಳುಹಿಸಿ, ಬರೋಬ್ಬರಿ 30 ಲಕ್ಷ ರೂಪಾಯಿ ಹಣ ನೀಡುವಂತೆ ಕಿಡಿಗೇಡಿಗಳು ಬೇಡಿಕೆಯಿಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ. ಒಂದು ವೇಳೆ ಹಣ ನೀಡದಿದ್ದರೆ...

ವಿವಾಹಿತ ಮಹಿಳೆಗಾಗಿ ನಡೆದ ಜಗಳದಲ್ಲಿ ಕೈ ಕಟ್

ಎನ್.ಆ‌ರ್.ಪುರ: ವಿವಾಹಿತ ಮಹಿಳೆಯೊಬ್ಬರಿಗಾಗಿ ಇಬ್ಬರು ವ್ಯಕ್ತಿಗಳು ಲಾಂಗು ಮಚ್ಚಿನಿಂದ ಬಡಿದಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆ‌ರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ನಡೆದಿದೆ. ಗಂಡನಿಂದ ದೂರವಿದ್ದ ಮಹಿಳೆಯೊಬ್ಬರ ವಿಚಾರವಾಗಿ ಶೇಷಗಿರಿ...

Related Articles

5 ದಶಕದ ಬಳಿಕ ನಿಡಘಟ್ಟ ಆಂಜನೇಯಸ್ವಾಮಿ ದೇವಾಲಯಕ್ಕೆ ದಲಿತರ ಪ್ರವೇಶ

ಚಿಕ್ಕಮಗಳೂರು: ಇತಿಹಾಸ ಪ್ರಸಿದ್ಧ ಗಟಾಗಟಿ ದೇವರು ಎಂದು ಕರೆಯಲ್ಪಡುವ ಕಡೂರು ತಾಲೂಕಿನ ನಿಡಘಟ್ಟದ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ...

ದೇಶ ವ್ಯಾಪ್ತಿ ಛಾತ್ರೋನ್ ಕಿ ಗೂಂಚ್ ವಿದ್ಯಾರ್ಥಿ ಆಂದೋಲನ

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಛಾತ್ರೋನ್ ಕಿ ಗೂಂಚ್ ಎಂಬ ದೇಶ ವ್ಯಾಪಿ...

ಕುಡಿಯುವ ನೀರು-ಜಾನುವಾರು ಮೇವಿಗೆ ಕೊರತೆಯಾಗದಂತೆ ಕ್ರಮಕ್ಕೆ ಸೂಚನೆ

ಚಿಕ್ಕಮಗಳೂರು: ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳುವಂತೆ ಇಂಧನ, ಪ್ರವಾಸೋದ್ಯಮ ಹಾಗೂ ಚಿಕ್ಕಮಗಳೂರು...

ಗೃಹಜ್ಯೋತಿ ಯೋಜನೆ ಅರ್ಹ ಗುರುತಿಸುವ ಉದ್ದೇಶದಿಂದ ಪರಿಷ್ಕರಣೆ

ಚಿಕ್ಕಮಗಳೂರು: ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ಸಾರಾಸಗಟಾಗಿ ಪರಿಷ್ಕರಿಸುವ ಅಥವಾ ಕಡಿತಗೊಳಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು...