Home Political News ಉಸ್ತುವಾರಿ ಸಚಿವ ಜಾರ್ಜ್ ಕಾಣೆ : ಬಿಜೆಪಿಗರು ಹೊಡೆದಿದ್ದಾರೆ ಗೋತ
Political News

ಉಸ್ತುವಾರಿ ಸಚಿವ ಜಾರ್ಜ್ ಕಾಣೆ : ಬಿಜೆಪಿಗರು ಹೊಡೆದಿದ್ದಾರೆ ಗೋತ

Share
Share

ಚಿಕ್ಕಮಗಳೂರು : 2004 ರಿಂದ 2024 ರವರೆಗೆ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಬೇರೆ ಜಿಲ್ಲೆಯವರು ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಬಂದು ಹೋಗುತ್ತಿದ್ದಾರೆ.
1998 ರಿಂದ2004 ರವರೆಗೆ ಡಿ.ಬಿ.ಚಂದ್ರೇಗೌಡರು ಉಸ್ತುವಾರಿ ಸಚಿವರಾದ ನಂತರ ಜಿಲ್ಲೆಯ ಜೀವರಾಜ್ ಮತ್ತು ಸಿ.ಟಿ.ರವಿ ತಿಂಗಳುಗಳ ಲೆಕ್ಕದಲ್ಲಿ ಉಸ್ತುವಾರಿಯಾಗಿದ್ದರು.

2004ರಲ್ಲಿ ಹಾಸನ ಜಿಲ್ಲೆಯ ಗಂಡಸಿ ಶಿವರಾಂ ಜಿಲ್ಲಾಉಸ್ತುವಾರಿ ಸಚಿವರದಾಗಿನಿಂದ ಇಲ್ಲಿಯವರೆಗೆ ಬೇರೆ ಜಿಲ್ಲೆಯವರು ಸಚಿವರಾಗಿ ನೆಂಟರು ಹಬ್ಬಕ್ಕೆ ಬಂದು ಹೋದಂತೆ ಬರುತ್ತಾರೆ ಹೋಗುತ್ತಾರೆ.

ಕಳೆದ ಒಂದುವರೆ ವರ್ಷದಿಂದ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆ.ಜೆ.ಜಾರ್ಜ್ ಬಂದು ಹೋಗುತ್ತಿದ್ದಾರೆ.ಕಳೆದ ಸ್ವಾತಂತ್ರ್ಯ ದಿನಾಚರಣೆ ಬಾವುಟ ಹಾರಿಸಿ ಹೋದವರು ಕನ್ನಡ ರಾಜ್ಯೋತ್ಸವದ ಬಾವುಟ ಹಾರಿಸಲು ಬರುತ್ತಿದ್ದಾರೆ ಎಂಬ ಮಾಹಿತಿ ಇದೆ.

ಕಾಟಚಾರಕ್ಕೆನಡೆಯುವ ಕೆಡಿಪಿ ಸಭೆ ಬಿಟ್ಟರೆ ಬೇರೇನೂ ಕೆಳ ಬೇಡಿ ಜಿಲ್ಲೆಯಲ್ಲಿ ಸಮಸ್ಯೆ ಗಳ ಸರಮಾಲೆಗಳಿದ್ದು ಭೂಕುಸಿತ, ಒತ್ತುವರಿ ಸಮಸ್ಯೆ, ಕಸ್ತೂರಿ ರಂಗನ್ ವರದಿ ಎಂಬ ಭೂತ ಕಾಡುತ್ತಿದೆ,ಕಾಫಿ ಬೆಳೆಗಾರರ ಸಂಕಷ್ಟ, ಅಡಿಕೆ,ತೆಂಗಿಗೆ ಇರುವ ರೋಗಬಾದೆ,ನಿವೇಶನ ರಹಿತರ ಅಳಲು ನಿನ್ನೆ ಮೊನ್ನೆಯದಲ್ಲ ಈ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ.

ಶ್ರೀಮಂತ ರಾಜಕಾರಣಿ ಯಾಗಿರುವ ಜಾರ್ಜ್ ಜಿಲ್ಲೆಯಲ್ಲಿ ಐದಾರು ಸಾವಿರ ಕಾಫಿ ತೋಟ ಹೊಂದಿದ್ದವು ಜಿಲ್ಲೆಗೆ ಬರಬೇಕಾದರೆ ಹೆಲಿಕ್ಯಾಪ್ಟರ್ ನಲ್ಲಿ ಬಂದು ಒಂದೆರಡು ಗಂಟೆಗಳ ಕಾಲ ಸಭೆಯಲ್ಲಿ ಇದ್ದರೆ ಹೆಚ್ಚು.

ಜನರ ಸಮಸ್ಯೆಗಳನ್ನು ಕೇಳಲು ಸಮಯದ ಅಭಾವ ವಯಸ್ಸಿನ ಕಾರಣವು ಇರಬಹುದು. ಇಲ್ಲಿನ ಶಾಸಕರು ಜೈ,ಜೈ ಎನ್ನುವುದು ನೋಡಿ ಕಾಂಗ್ರೆಸ್ ಮುಖಂಡರು ಕೈ,ಕೈ ಹಿಚುಕಿಕೊಂಡು ನಿಲ್ಲುತ್ತಾರೆ.ಹೀಗಾಗಿ ಜಾರ್ಜ್ ರಿಂದ ಜಿಲ್ಲೆಗೆ ರೌಂಡಪ್ (ಕಳೆನಾಶಕ) ಅಗಿ ಹೋಗುತ್ತಿದ್ದಾರೆ.ಇನ್ನಾದರೂ ಶಾಸಕರುಗಳು ಮತ್ತು ಮುಖಂಡರು ಗಟ್ಟಿ ಮನಸ್ಸು ಮಾಡಿ ಜಿಲ್ಲೆಯ ಸಮಸ್ಯೆಗಳನ್ನು ಪರಿಹರಿಸಲು ಒತ್ತಡ ತರುವ ಜವಾಬ್ದಾರಿ ಇದೆ.ಇಲ್ಲದಿದ್ದರೆ ಬಂದ ಪುಟ್ಟ ,ಹೋದ ಪುಟ್ಟ ಆಟ ಮುಂದುವರೆಯುತ್ತದೆ.

ವಿರೋಧ ಪಕ್ಷದವರು ಮೌನ ಕೂಡ ಕಾರಣವಾಗಿದೆ.ಸಿ.ಟಿ.ರವಿ ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬರಿಸುತ್ತಾರೆ ಜಿಲ್ಲೆಗೆ ಬಂದ ತಕ್ಷಣವೇ ಧ್ವನಿ ಮೆತ್ತಗಾಗುವ ಮರ್ಮ ಗೊತ್ತಾಗುತ್ತಿಲ್ಲ ಇದು ಆಡಳಿತ ಪಕ್ಷದವರಿಗೆ ವರದಾನವಾಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ವೈದ್ಯರ ಬೇಜವಾಬ್ದಾರಿತನಕ್ಕೆ ಮೂರು ತಿಂಗಳ ಹಸುಗೂಸು ಸಾವು

ಚಿಕ್ಕಮಗಳೂರು: ವೈದ್ಯರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ಆರೋಪಕ್ಕೆ ಮೂರು ತಿಂಗಳ ಹಸುಗೂಸೊಂದು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಸರ್ಕಾರಿ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದೆ...

ಜಿಲ್ಲೆಯಾದ್ಯಂತ ಮೊಹರಂ ಹಬ್ಬ ಆಚರಣೆ

ಚಿಕ್ಕಮಗಳೂರು: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಮುಸ್ಲಿಮರು ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ದಾಭಕ್ತಿಯಿಂದ ಆಚರಿಸಿದರು. ಕಳೆದ ಎರಡು ದಿನಗಳಿಂದ ಉಪವಾಸವಿದ್ದ ಭಕ್ತರು ನಗರದ ಬಡಾವಣೆಗಳ ವಿವಿಧ ಮಸೀದಿಗಳಿಗೆ ಬೆಳಿಗ್ಗೆಯೇ ತೆರಳಿ...

Related Articles

ರಾಜಕಾರಣದಲ್ಲಿ ಮಠಗಳ, ಸಂಘಟನೆಗಳ “ಆರ್ಭಟ”

ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಠಗಳ ಪ್ರಭಾವ ಮತ್ತು ಸಂಘಟನೆಗಳು ಆರ್ಭಟ ಮಾಡುತ್ತಿರುವುದು ನೋಡಿದರೆ ಎತ್ತ...

ಜಿಲ್ಲೆಯಲ್ಲಿ ಗೂಟದ ಕಾರಿಗಾಗಿ “ಕೈ ಪಡೆ” ಯ ಕಸರತ್ತು !

ಚಿಕ್ಕಮಗಳೂರು: ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರಿಂದ ಉಳಿದ ಎರಡು ವರ್ಷಗಳ ಅವಧಿಗೆ ಡಿ.ಕೆ.ಮುಖ್ಯಮಂತ್ರಿಯಾಗಿ ದೇವಸ್ಥಾನ,...

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದ 13 ಸಚಿವರಿಗೆ ಖಾತೆ ಹಂಚಿಕೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಅವರು ತಮ್ಮ ಸಂಪುಟದ (Cabinet) ಮೊದಲ 13 ಸಚಿವರಿಗೆ ಖಾತೆಯನ್ನು...

ಡಿ.ಕೆ.ಗೆ ಪ್ರಾರಂಭದಲ್ಲಿ ಡಿಚ್ಚಿ ! ಹರಿ ಬ್ರೇಕ್, ಸಿದ್ದು ಸ್ಟೀರಿಂಗ್ ಯಾವ ಕಡೆ ತಿರುಗುತ್ತದೆ

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಯಾರನ್ನು ನಂಬಿದ್ದರು ಅವರೇ ಕೈ ಕೊಡುವ ಸೂಚನೆ ಅರಿತು ರಾಹುಲ್...