ಚಿಕ್ಕಮಗಳೂರು: ಪ್ರಪಂಚದಲ್ಲಿ ಯಾರು ಸಾಧನೆ ಮಾಡದ ಕೆಲಸ ಮಾಡಿದ್ದೇವೆ ಎಂಬ ಭ್ರಮೆಯಲ್ಲಿ ತೆಲುತ್ತಿರುವವರು ಪದಾಧಿಕಾರಿಗಳ ಎಡವಟ್ಟಿನಿಂದಾಗಿ ಡಬಲ್,ಡಬಲ್ ಆಹ್ವಾನ ಪತ್ರಿಕೆ ಮುದ್ರಣವಾಗಿದೆ.ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ,ವಿರೋಧ ಚರ್ಚೆ ಕೂಡ ನಡೆದು ಸಂಘವನ್ನು ಬೀದಿಗೆ ತಂದಿದ್ದಾರೆ ಎಂಬ ಆಕ್ರೋಶವಿದೆ.
ಬಿದ್ದರು ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಮೊದಲು ಮಾಡಿಸಿದ ಆಹ್ವಾನ ಪತ್ರಿಕೆ ಹಂಚಲಾಗಿದೆ. ಸಂಘ,ಸಂಸ್ಥೆಗಳ ಕಾರ್ಯಕ್ರಮಕ್ಕೆ ಪ್ರೊಟೊ ಕಾಲ್ ಬರಲ್ಲ ನಿಜ ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ಎಲ್.ಬೋಜೇಗೌಡ, ಸಿ.ಟಿ.ರವಿ ಮತ್ತು ಪ್ರಾಣೇಶ್ ಹಾಗೂ ಲೋಕಸಭಾ ಸದಸ್ಯ ಶ್ರೀನಿವಾಸ್ ಪೂಜಾರಿ ಬಿಟ್ಟು ಉಳಿದವರನ್ನು ಕರೆದು ಮೆರೆಯಲು ಹೊರಟವರು ಯಾವ ಸಂಘಸಂಸ್ಥೆಗಳಿಗೆ ಶೋಭೆ ತರುವುದಿಲ್ಲ ಎಂಬ ಸಾಮಾನ್ಯ ಜ್ಞಾನ ಇಲ್ಲದಿರುವುದು ಏಕೆ.ಬೇರೆ ಸಮಾಜದವರು ಯಾವ ರೀತಿಯಲ್ಲಿ ಯೋಚಿಸಬಹದು.
ಈಗಾಗಲೇ ಬಡವರು ಇಲ್ಲಿ ಇರಬಾರದು ಎಂದು ಐದು ಸಾವಿರ ಕೊಟ್ಟವರಿಗೆ ಸದಸ್ಯತ್ವ ಎಂದು ತೀರ್ಮಾನ ತೆಗೆದುಕೊಂಡು ಮೀಸೆ ತಿರುವುತ್ತಿರುವ ಪದಾಧಿಕಾರಿಗಳು ದೇಣಿಗೆ ಕೊಟ್ಟವರನ್ನು ಮಾತ್ರ ಕರೆಯುತ್ತೇವೆ ಎಂಬ ನಿಯಮ ಮಾಡಿಕೊಂಡು ಓಡಾಡುವ ಆರಾಧ್ಯ ಅಂಡ್ ಟೀಮ್ ಯಡಿಯೂರಪ್ಪರ ಮುಂದೆ ಕುಂಡಿ ಊರಿ ಕುಳಿತುಕೊಂಡಿರುವುದು ನಗೆಪಾಟಲಿಗೆ ಸಿಕ್ಕಿದೆ.ಎಲ್ಲರಿಗೂ ಸಂಘ ಬೇಕು ಆದರೆ ಮುಖವಾಡ ಧರಿಸಿಕೊಂಡವರ ಕೈಗೆ ಸಿಕ್ಕರೆ ರಾಜಕೀಯ ಪುಡಾರಿಗಳಿಗಾಗಿ ಪುಡಾರಿಗಳು ಏಪ್ರಿಲ್ 18 ರಂದು ಉದ್ಘಾಟನೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಏಕೆಂದರೆ ಸಮಾಜದ ಯಾವ ಸ್ವಾಮೀಜಿ ಗಳನ್ನು ಕರೆಯದೆ ಮತ್ತೊಂದು ದಿನ ಕರೆದು ಸಭೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಅದರಲ್ಲೂ ಅರಡಿ_ಮೂರಡಿ ಕುರ್ಚಿಗಾಗಿ ಮತ್ತೆ ಕಾದಾಟ ನಡೆಯುವುದಿಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿ ಇದೆ.ಸಂಘ ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ ಆದರೆ ಬೀದಿಗೆ ತರಬೇಡಿ.ಸಂಘದ ಘನತೆ ಹಾಳಾಗದಂತೆ ಸಂಘಕ್ಕೆ ಆಸ್ತಿ ಮಾಡಿಕೊಟ್ಟಿರುವ ಬಸವೇಗೌಡರು ಮತ್ತು ಗೌರಮ್ಮ ಬಸವೇಗೌಡರ ದೂರ ದೃಷ್ಟಿ ಮರೆಯಬೇಡಿ ಎಂದು ಸಮಾಜದ ಹಲವರು ಹೇಳುತ್ತಿದ್ದಾರೆ.
ಸಂಘ ಕಟ್ಟಿ ಬೆಳೆಸಿದರೆ ಯಾರ ತಕರಾರು ಇಲ್ಲ ಬೀದಿಗೆ ತಂದು ಯಾರನ್ನಾದರೂ ವಿಲನ್ ಮಾಡಲು ಹೋಗಿ ನೀವೆ ವಿಲನ್ ಗಳ ಪೋಷಕರಾಗುವುದು ಯಾವ ಸಮಾಜಕ್ಕೂ ಒಳ್ಳೆಯದಲ್ಲ.ಹಲವು ಸಂಘ ಕಟ್ಟಿ ಮುರಿದಿರುವ ಆರಾಧ್ಯ, ನಂಜೇಗೌಡರು,ಗ್ಯಾರಂಟಿ ಪಾರ್ಟಿ ಶಿವಾನಂದ ಸ್ವಾಮಿ ಅಧ್ಯಕ್ಷ ಶಿವಶಂಕರ್ ಎಚ್ಚರಿಕೆ ವಹಿಸಿದ್ದರೆ ಒಳ್ಳೆಯದಿತ್ತು.ಮತ್ತೆ,ಮತ್ತೆ ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ ಎಲ್ಲಾ ಪಕ್ಷದವರಿಗೂ ಎಲ್ಲಾ ಜನಾಂಗದ ಹಿಂಬಾಲಕರು ಇರುತ್ತಾರೆ.ಸಂಘದಿಂದಲೇ ರಾಜಕೀಯ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅಧಿಕಾರದ ಲಾಲಸೆ,ಸ್ವಾರ್ಥದಿಂದ ಸಂಘ ಸದೃಢವಾಗಲು ಸಾಧ್ಯವೇ ಎಂಬ ಪ್ರಶ್ನೆ ಕಾಡುತ್ತಿರುವುದು ಮಾತ್ರ ಸತ್ಯ.
Why has the Veerashaiva Lingayat Sangha taken to the streets?
Leave a comment