Home namma chikmagalur chikamagalur ಇಟ್ಟುಕೊಂಡವರು ಮತ್ತು ಕಟ್ಟಿಕೊಂಡವರ ಕಾದಾಟ ! – ವೀರಶೈವ ಲಿಂಗಾಯತ ಸಂಘ ಬೀದಿಗೆ ತಂದಿರುವುದೇಕೆ ?
chikamagalurHomeLatest Newsnamma chikmagalur

ಇಟ್ಟುಕೊಂಡವರು ಮತ್ತು ಕಟ್ಟಿಕೊಂಡವರ ಕಾದಾಟ ! – ವೀರಶೈವ ಲಿಂಗಾಯತ ಸಂಘ ಬೀದಿಗೆ ತಂದಿರುವುದೇಕೆ ?

Share
Share

ಚಿಕ್ಕಮಗಳೂರು: ಪ್ರಪಂಚದಲ್ಲಿ ಯಾರು ಸಾಧನೆ ಮಾಡದ ಕೆಲಸ ಮಾಡಿದ್ದೇವೆ ಎಂಬ ಭ್ರಮೆಯಲ್ಲಿ ತೆಲುತ್ತಿರುವವರು ಪದಾಧಿಕಾರಿಗಳ ಎಡವಟ್ಟಿನಿಂದಾಗಿ ಡಬಲ್,ಡಬಲ್ ಆಹ್ವಾನ ಪತ್ರಿಕೆ ಮುದ್ರಣವಾಗಿದೆ.ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ,ವಿರೋಧ ಚರ್ಚೆ ಕೂಡ ನಡೆದು ಸಂಘವನ್ನು ಬೀದಿಗೆ ತಂದಿದ್ದಾರೆ ಎಂಬ ಆಕ್ರೋಶವಿದೆ.

ಬಿದ್ದರು ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಮೊದಲು ಮಾಡಿಸಿದ ಆಹ್ವಾನ ಪತ್ರಿಕೆ ಹಂಚಲಾಗಿದೆ. ಸಂಘ,ಸಂಸ್ಥೆಗಳ ಕಾರ್ಯಕ್ರಮಕ್ಕೆ ಪ್ರೊಟೊ ಕಾಲ್ ಬರಲ್ಲ ನಿಜ ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ಎಲ್.ಬೋಜೇಗೌಡ, ಸಿ.ಟಿ.ರವಿ ಮತ್ತು ಪ್ರಾಣೇಶ್ ಹಾಗೂ ಲೋಕಸಭಾ ಸದಸ್ಯ ಶ್ರೀನಿವಾಸ್ ಪೂಜಾರಿ ಬಿಟ್ಟು ಉಳಿದವರನ್ನು ಕರೆದು ಮೆರೆಯಲು ಹೊರಟವರು ಯಾವ ಸಂಘಸಂಸ್ಥೆಗಳಿಗೆ ಶೋಭೆ ತರುವುದಿಲ್ಲ ಎಂಬ ಸಾಮಾನ್ಯ ಜ್ಞಾನ ಇಲ್ಲದಿರುವುದು ಏಕೆ.ಬೇರೆ ಸಮಾಜದವರು ಯಾವ ರೀತಿಯಲ್ಲಿ ಯೋಚಿಸಬಹದು.

ಈಗಾಗಲೇ ಬಡವರು ಇಲ್ಲಿ ಇರಬಾರದು ಎಂದು ಐದು ಸಾವಿರ ಕೊಟ್ಟವರಿಗೆ ಸದಸ್ಯತ್ವ ಎಂದು ತೀರ್ಮಾನ ತೆಗೆದುಕೊಂಡು ಮೀಸೆ ತಿರುವುತ್ತಿರುವ ಪದಾಧಿಕಾರಿಗಳು ದೇಣಿಗೆ ಕೊಟ್ಟವರನ್ನು ಮಾತ್ರ ಕರೆಯುತ್ತೇವೆ ಎಂಬ ನಿಯಮ ಮಾಡಿಕೊಂಡು ಓಡಾಡುವ ಆರಾಧ್ಯ ಅಂಡ್ ಟೀಮ್ ಯಡಿಯೂರಪ್ಪರ ಮುಂದೆ ಕುಂಡಿ ಊರಿ ಕುಳಿತುಕೊಂಡಿರುವುದು ನಗೆಪಾಟಲಿಗೆ ಸಿಕ್ಕಿದೆ.ಎಲ್ಲರಿಗೂ ಸಂಘ ಬೇಕು ಆದರೆ ಮುಖವಾಡ ಧರಿಸಿಕೊಂಡವರ ಕೈಗೆ ಸಿಕ್ಕರೆ ರಾಜಕೀಯ ಪುಡಾರಿಗಳಿಗಾಗಿ ಪುಡಾರಿಗಳು ಏಪ್ರಿಲ್ 18 ರಂದು ಉದ್ಘಾಟನೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಏಕೆಂದರೆ ಸಮಾಜದ ಯಾವ ಸ್ವಾಮೀಜಿ ಗಳನ್ನು ಕರೆಯದೆ ಮತ್ತೊಂದು ದಿನ ಕರೆದು ಸಭೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಅದರಲ್ಲೂ ಅರಡಿ_ಮೂರಡಿ ಕುರ್ಚಿಗಾಗಿ ಮತ್ತೆ ಕಾದಾಟ ನಡೆಯುವುದಿಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿ ಇದೆ.ಸಂಘ ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ ಆದರೆ ಬೀದಿಗೆ ತರಬೇಡಿ.ಸಂಘದ ಘನತೆ ಹಾಳಾಗದಂತೆ ಸಂಘಕ್ಕೆ ಆಸ್ತಿ ಮಾಡಿಕೊಟ್ಟಿರುವ ಬಸವೇಗೌಡರು ಮತ್ತು ಗೌರಮ್ಮ ಬಸವೇಗೌಡರ ದೂರ ದೃಷ್ಟಿ ಮರೆಯಬೇಡಿ ಎಂದು ಸಮಾಜದ ಹಲವರು ಹೇಳುತ್ತಿದ್ದಾರೆ.

ಸಂಘ ಕಟ್ಟಿ ಬೆಳೆಸಿದರೆ ಯಾರ ತಕರಾರು ಇಲ್ಲ ಬೀದಿಗೆ ತಂದು ಯಾರನ್ನಾದರೂ ವಿಲನ್ ಮಾಡಲು ಹೋಗಿ ನೀವೆ ವಿಲನ್ ಗಳ ಪೋಷಕರಾಗುವುದು ಯಾವ ಸಮಾಜಕ್ಕೂ ಒಳ್ಳೆಯದಲ್ಲ.ಹಲವು ಸಂಘ ಕಟ್ಟಿ ಮುರಿದಿರುವ ಆರಾಧ್ಯ, ನಂಜೇಗೌಡರು,ಗ್ಯಾರಂಟಿ ಪಾರ್ಟಿ ಶಿವಾನಂದ ಸ್ವಾಮಿ ಅಧ್ಯಕ್ಷ ಶಿವಶಂಕರ್ ಎಚ್ಚರಿಕೆ ವಹಿಸಿದ್ದರೆ ಒಳ್ಳೆಯದಿತ್ತು.ಮತ್ತೆ,ಮತ್ತೆ ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ ಎಲ್ಲಾ ಪಕ್ಷದವರಿಗೂ ಎಲ್ಲಾ ಜನಾಂಗದ ಹಿಂಬಾಲಕರು ಇರುತ್ತಾರೆ.ಸಂಘದಿಂದಲೇ ರಾಜಕೀಯ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅಧಿಕಾರದ ಲಾಲಸೆ,ಸ್ವಾರ್ಥದಿಂದ ಸಂಘ ಸದೃಢವಾಗಲು ಸಾಧ್ಯವೇ ಎಂಬ ಪ್ರಶ್ನೆ ಕಾಡುತ್ತಿರುವುದು ಮಾತ್ರ ಸತ್ಯ.

Why has the Veerashaiva Lingayat Sangha taken to the streets?

Share

Leave a comment

Leave a Reply

Your email address will not be published. Required fields are marked *

Don't Miss

ಡಾ.ಮಂಜುನಾಥ್ ಚಿಕ್ಕ‌ಮಗಳೂರು ಡಿಎಚ್ಒ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕ‌ಮಗಳೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಡಾ.ಎಚ್.ಕೆ.ಮಂಜುನಾಥ್ ನೇಮಕಗೊಂಡಿದ್ದಾರೆ. ಈ ಹಿಂದೆ ಡಿಎಚ್ ಒ ಆಗಿದ್ದ ಅಶ್ವಥ್ ಬಾಬು ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಜಿಲ್ಲಾ ಸಂತಾನೋತ್ಪತ್ತಿ...

ಹಸಿರು ಚಾದರ್ ಅರ್ಪಿಸುವುದು ಹೊಸದಾಗಿ ಸೃಷ್ಟಿಸಿದ ಆಚರಣೆಯಲ್ಲ

ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಪೀಠ ಬಾಬಾ ಬುಡನ್ ದರ್ಗಾದ ಐತಿಹಾಸಿಕ ಸ್ವರೂಪ, ಧಾರ್ಮಿಕ ಆಚರಣೆಗಳು ಹಾಗೂ ಭಕ್ತರ ಹಕ್ಕುಗಳ ಕುರಿತು ಸಯ್ಯದ್ ಬುಡನ್ ಶಾ ಖಾದ್ರಿ ವಂಶಸ್ಥರು ಸ್ಪಷ್ಟನೆಯನ್ನು ನೀಡಿದ್ದಾರೆ. ಇತ್ತೀಚೆಗೆ...

Related Articles

ಕಳಸದಲ್ಲಿ ಕಾಡುಕೋಣ ದಾಳಿಗೆ ಮಹಿಳೆ ಬಲಿ

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಬಿಳಗುಳಿ ಗ್ರಾಮದ ಸಮೀಪ ಕಾಡುಕೋಣ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆ...

ರೈತ ಸಂಘ-ಹಸಿರು ಸೇನೆ ಸಂಘಟನೆಗೆ ನೂತನ ಪದಾಧಿಕಾರಿಗಳ ನೇಮಕ

ಚಿಕ್ಕಮಗಳೂರು: ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗೆ ನೂತನ...

ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆಯ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮುಂಗಾರು ಮಳೆ ತಡವಾಗಿ ಆರಂಭಗೊಂಡಿದ್ದರೂ ಇದೀಗ ಭರ್ಜರಿಯಾಗಿ ಸುರಿಯುತ್ತಿದ್ದು, ಮಲೆನಾಡು ಭಾಗದಲ್ಲಿ ಭಾರೀ...

ಕಳಸದಲ್ಲಿ ಬೃಹತ್ ಮರ ಬಿದ್ದು ಆಟೋರಿಕ್ಷಾ ಜಖಂ

ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗುಡ್ಡೆಮಕ್ಕಿ ಗ್ರಾಮದಲ್ಲಿ ಭಾರಿ ಗಾಳಿ-ಮಳೆಯ ಆರ್ಭಟಕ್ಕೆ ಸುಧೀರ್ ಆಚಾರ್...