ಚಿಕ್ಕಮಗಳೂರು : ಗ್ರಾಮಲೆಕ್ಕಿಗರೊಬ್ಬರಿಗೆ ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡಿ ಲಾಭಮಾಡಿಕೊಡುವ ಆಮಿಷವೊಡ್ಡಿದ ಬ್ಯಾಂಕ್ ಉದ್ಯೋಗಿಯೊಬ್ಬ ೪೫.೨೦ ಲಕ್ಷ ಹಣಕ್ಕೆ ೫೦ ನಕಲಿ ಕೆ.ಜಿ. ಬೆಳ್ಳಿ ಗಟ್ಟಿ ನೀಡಿ ವಂಚಿಸಿರುವ ಬಗ್ಗೆ ಇಂದು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯಲ್ಲಿ ನಗರದ ಕಲ್ಯಾಣ ನಗರದ ನಿವಾಸಿ ವೈ.ಡಿ.ರಮೇಶ್ ಗ್ರಾಮ ಲೆಕ್ಕಿಗನಾಗಿ ಕೆಲಸ ಮಾಡುತ್ತಿದ್ದಾಗ ವೈ.ಡಿ.ರಮೇಶ್ಗೆ ಖಾಸಗಿ ಬ್ಯಾಂಕ್ ಉದ್ಯೋಗಿ ಶಿವಪ್ರಸಾದ್ ಪರಿಚಯವಾಗಿತ್ತು.
೨೦೨೪ರಲ್ಲಿ ರಮೇಶ್ ಪತ್ನಿ ಪುಷ್ಪ ಅವರಿಗೆ ಸೇರಿದ ಕಡೂರಿನ ಮನೆ ಮಾರಾಟದ ಹಣವನ್ನು ಆ ಹಣವನ್ನು ಚಿನ್ನ, ಬೆಳ್ಳಿ ಹೂಡಿಕೆ ಮಾಡಿದರೆ ಭಾರೀ ಲಾಭ ಗಳಿಸಬಹುದೆಂದು ಶಿವ ಪ್ರಸಾದ್ ಬಣಕಲ್ನ ಬ್ರಾಮರಿ ಜ್ಯುಯಲ್ಲರ್ ವರ್ಕ್ಸ್ನ ನಾಗರಾಜ್ ಎಂಬ ಅಕ್ಕಸಾಲಿಗನ ಕರೆದುಕೊಂಡು ಬಂದು ಪರಿಚಯ ಮಾಡಿಸಿದ್ದ. ೫೦.೮೩೦ ಕೆಜಿ ಬೆಳ್ಳಿಗೆ, ೪೫.೨೩ ಲಕ್ಷ ರು. ಮಾತುಕತೆ ಮಾಡಿ ಬೆಳ್ಳಿಗಟ್ಟಿ ಕೊಡುವುದಾಗಿ ನಂಬಿಸಿದ್ದಾರೆ.
ಆ ಹಿನ್ನಲೆಯಲ್ಲಿ ಹಂತ ಹಂತವಾಗಿ ೪೫.೨೩ ಲಕ್ಷ ಹಣ ನೀಡಿ ಬೆಳ್ಳಿ ಗಟ್ಟಿಗಳನ್ನುರಮೇಶ್ ಪಡೆದಿದ್ದರು.
ಹಣದ ಅವಶ್ಯಕತೆ ಬಂದ ಹಿನ್ನೆಲೆಯಲ್ಲಿ ಮತ್ತು ಬೆಳ್ಳಿಯ ಬೆಲೆ ಹಚ್ಚಾದ ಹಿನ್ನೆಲೆಯಲ್ಲಿ ೨೦೨೫ರ ಮೇ ತಿಂಗಳಿನಲ್ಲಿಯೇ ೨೦ ಕೆ.ಜಿ. ಬೆಳ್ಳಿ ಮಾರಾಟಕ್ಕೆ ಹೋದಾಗ ೧೬ ಕೆ.ಜಿ. ಬೆಳ್ಳಿ ನಕಲಿ ಎಂದು ತಿಳಿದು ಬಂದಿತ್ತು. ಈ ಬಗ್ಗೆ ಶಿವಪ್ರಸಾದ್ ಹಾಗೂ ನಾಗರಾಜ್ ವಿಚಾರಿಸಿ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದಾಗ, ಆ ಬೆಳ್ಳಿಯನ್ನು ನಾವೇ ಮಾರಾಟ ಮಾಡಿ, ನಿಮಗೆ ಹಣ ಕೊಡುತ್ತೇವೆ ಎಂದು ಹೇಳಿ ಕಳೆದ ಏಪ್ರಿಲ್ ೮ ರಂದು ಎಲ್ಲ ೫೦ ಕೆ.ಜಿ ಬೆಳ್ಳಿಯನ್ನು ತೆಗೆದುಕೊಂಡು ಹೋದವರು ಫೋನ್ ಕೂಡಾ ಎತ್ತದೆ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Village accountant cheated by giving fake kg silver bars
Leave a comment