Home namma chikmagalur chikamagalur ದಲಿತ ಜನ ಸೇನದ ಹೋರಾಟಕ್ಕೆ ಸಂದ ಜಯ
chikamagalurHomeLatest Newsnamma chikmagalur

ದಲಿತ ಜನ ಸೇನದ ಹೋರಾಟಕ್ಕೆ ಸಂದ ಜಯ

Share
Share

ಚಿಕ್ಕಮಗಳೂರು:  ನಗರದ ಅಂಬೇಡ್ಕರ್ ಬೀದಿಯಲ್ಲಿರುವ ಶಾಂತಿನಗರ ಬಡಾ ವಣೆಯಲ್ಲಿ ಅಂಬೇಡ್ಕರ್ ಭವನ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ಕೊಡುವಂತೆ ಕೋರಿ ದ್ದು ಜಾಗ ಇಲ್ಲದ ಕಾರಣ ಆ ವಿಷಯ ನೆನೆಗುದಿಗೆ ಬಿದ್ದಿತ್ತು.

ಅದನ್ನು ಮನಗಂಡ ದಲಿತ ಜನಸೇನಾ ಕಾರ್ಯಕರ್ತರು ಸರ್ವೇ ನಂಬರ್ ೫೪ರ ಖಾತೆ ನಂಬರ್ ೯೯೯೯ ರಲ್ಲಿ ಖಾಸಗಿ ಕಾಫಿ ಕ್ಯೂರಿಂಗ್ ಜಾಗ ಒತ್ತುವರಿ ಮಾಡಿಕೊಂಡಿದ್ದನ್ನು ಗಮನಿಸಿ ಆ ಜಾಗದಲ್ಲಿ ಒತ್ತು ವರಿಯನ್ನು ತೆರವುಗೊಳಿಸಿ ಅಂಬೇಡ್ಕರ್ ಭವನ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ಕೊಡು ವಂತೆ ಮನವಿ ಮಾಡಿದ್ದರು

ಹಲವು ಅಡೆ ತಡೆಗಳೊಂದಿಗೆ ಜಿಲ್ಲಾಡಳಿತ ಹಾಗೂ ತಾಲೂಕು ಕಚೇರಿ ಸಿಬ್ಬಂದಿಗಳ ಶ್ರಮದಿಂದ ಒತ್ತುವರಿ ಜಾಗ ತೆರವುಗೊಳಿಸಲು ಆದೇಶಿಸಲಾಗಿತ್ತು. ಇಂದು ತಾಲೂಕು ಕಚೇರಿ ಸಿಬ್ಬಂದಿಗಳು ನಗರಸಭೆ ಸಿಬ್ಬಂದಿಗಳು ಅರಕ್ಷಕ ಇಲಾಖೆಯ ನೆರವಿನೊಂದಿಗೆ ಒತ್ತುವರಿ ಯಾಗಿದ್ದ ಜಾಗವನ್ನು ತೆರವುಗೊಳಿಸಲಾ ಯಿತು

ಕಾಫಿ ಕ್ಯೂರಿಂಗ್ ಆಡಳಿತ ಮಂಡಳಿಯವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಾವೇ ತೆರವು ಗೊಳಿಸಿ ಕೊಡುತ್ತೇವೆ ಸ್ವಲ್ಪ ಸಮಯಾವಕಾಶ ನೀಡುವಂತೆ ಕೋರಿದ್ದು ಸ್ಥಳೀಯರು ಇದಕ್ಕೆ ಆಕ್ಷೇಪಿಸಿ ಕೂಡಲೇ ಪೂರ್ಣಗೊಳಿಸುವಂತೆ ಒತ್ತಾಯಿಸಿದರು. ಇದರಿಂದ ಸ್ಥಳೀಯರಿಗೆ ಹಾಗೂ ಕಾಫಿ ಕ್ಯೂರಿಂಗ್ ಆಡಳಿತ ಮಂಡಳಿಯವರಿಗೆ ವಾಗ್ವಾದ ಉಂಟಾಗಿ ಪೊಲೀಸರು ಎರಡು ಕಡೆಯವರ ಮನವೊಲಿಸಿ ತೆರವು ಕಾರ್ಯಾ ಚರಣಕ್ಕೆ ಅವಕಾಶ ಮಾಡಿಕೊಟ್ಟರು.

ದಲಿತ ಜನ ಸೇನಾ ಮುಖಂಡರು ಹಾಗೂ ಸ್ಥಳೀಯರು ಮಾತನಾಡಿ ಹಲವು ವ?ಗಳ ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ತೀರ ಆರ್ಥಿಕವಾಗಿ ದಲಿತ ವರ್ಗದವರಾದ ನಮಗೆ ಮದುವೆ ಶುಭ ಸಮಾರಂಭಗಳಿಗೆ ಮನೆಯಲ್ಲಿ ಜಾಗವಿಲ್ಲದವರಿಂದ ಇಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಹಾಗೂ ಕುಡಿಯುವ ನೀರಿನ ಘಟಕ ನಿರ್ಮಿಸಿಕೊಟ್ಟಲ್ಲಿ ಅನುಕೂಲವಾಗುತ್ತಿದ್ದು ಕೂಡಲೇ ನಮ್ಮ ಬೇಡಿಕೆ ಈಡೇರಿಸಿ ಎಂದು ಒತ್ತಾಯಿಸಿ ಜಾಗ ತೆರವುಗೊಳಿಸಲು ಶ್ರಮಿಸಿದ ಹಿಂದಿನ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ತಹಸಿಲ್ದಾರ್ ರೇ? ಶೆಟ್ಟಿ ಅವರ ಕಾರ್ಯಕ್ಷಮತೆಯನ್ನು ಶ್ಲಾಘಿಸಿ ಅಭಿನಂದಿಸಿ ಮಾತನಾಡಿದರು.

ಜೆಸಿಬಿ ಕಾಂಪೌಂಡ್ ತೆರವುಗೊಳಿಸುವಾಗ ಸ್ಥಳೀಯರು ದಲಿತ್ ಜನ ಸೇನಾ ಜಿಲ್ಲಾಧ್ಯಕ್ಷ ಅನಿಲ್ ಆನಂದ್ ರವರ ಪರಿಶ್ರಮವನ್ನು ಸ್ಮರಿಸಿ ಪಟಾಕಿ ಸಿಡಿಸಿ ಜಯಗೋ? ಹಾಕಿ ಸಂಭ್ರಮಿಸಿದರು. ತೆರವು ಕಾರ್ಯಾಚರಣೆಯಲ್ಲಿ ತಾಲೂಕು ಕಚೇರಿ ಕಂದಾಯ ಅಧಿಕಾರಿಗಳಾದ ಸಂತೋ? ಗ್ರಾಮ ಲೆಕ್ಕೀಗರಾದ ಚೇತನ್, ದೊರೆ, ನಗರಸಭೆಯ ಮುರುಗೇಶ್, ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕದ ಅಭಯ್ ಪ್ರಕಾಶ್ ಹಾಗೂ ದಲಿತ ಜನ ಸೇನಾದ ಮುಖಂಡರು, ಸ್ಥಳೀಯರು ಹಾಜರಿದ್ದರು.

Victory for the struggle of the Dalit Jana Sena

Share

Leave a comment

Leave a Reply

Your email address will not be published. Required fields are marked *

Don't Miss

ವೃದ್ಧರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ವಂಚನೆ

ಚಿಕ್ಕಮಗಳೂರು: ಎಪಿಕೆ (APK) ಫೈಲ್ ಬಳಸಿ ವೃದ್ಧರೊಬ್ಬರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ಲಪಟಾಯಿಸಿರುವ ಗಂಭೀರ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಹೊಸಮನೆ ರಸ್ತೆಯ ನಿವಾಸಿ, ಲೋಕೋಪಯೋಗಿ ಇಲಾಖೆಯ...

ಜಿಲ್ಲಾ ಸರ್ಜನ್ ಅಮಾನತ್ತಿಗೆ ಆಗ್ರಹಿಸಿ ಬಿಜೆಪಿ ಮುಖಂಡರ ಪ್ರತಿಭಟನೆ

ಚಿಕ್ಕಮಗಳೂರು: ನಕಲಿ ಐಎಎಸ್ ಅಧಿಕಾರಿಯನ್ನು ಬೆಂಬಲಿಸಿ ಬೃಹತ್ ಮೊತ್ತದ ಹ ಣದ ವಹಿವಾಟು ನಡೆಸಿರುವ ಜಿಲ್ಲಾ ಸರ್ಜನ್‌ನನ್ನು ಕೂಡಲೇ ಅಮಾನತ್ತುಪಡಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಜಿಲ್ಲಾ ಬಿಜೆಪಿ...

Related Articles

ಅಜ್ಜಂಪುರದಲ್ಲಿ ತಡರಾತ್ರಿ ಅಂಗಡಿಗಳಿಗೆ ಬೆಂಕಿ – ಅಪಾರ ನಷ್ಟ

ಅಜ್ಜಂಪುರ : ಪಟ್ಟಣದ ಗಾಂಧಿ ಸರ್ಕಲ್ ಸಮೀಪದ ಬೀರೂರು ರಸ್ತೆಯಲ್ಲಿ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ...

ಬೌದ್ಧ ಧರ್ಮದ ವಿಧಿವಿಧಾನದಡಿ ಹತ್ತು ಜೋಡಿಗಳು ದಾಂಪತ್ಯ ಜೀವನಕ್ಕೆ

ಚಿಕ್ಕಮಗಳೂರು:  ಬೌದ್ಧ ವಿಧಿವಿಧಾನದಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಜೋಡಿ ಗಳ ಬದುಕು ಹಸನಾಗಲೀ. ದಾಂಪತ್ಯ ಎರಡು...

ಮೂಗುತಿ ಧರಿಸಿದ್ದ ನೂರಾರು ವಿದ್ಯಾರ್ಥಿನಿಯರ ಮೂಗಿನ ಮೇಲೆ ಗಮ್ ಟೇಪ್

ಚಿಕ್ಕಮಗಳೂರು: ರಾಜ್ಯಾದ್ಯಂತ ಸಿಇಟಿ ಪರೀಕ್ಷೆಗಳು ಆರಂಭವಾದ ಮೊದಲ ದಿನವೇ ವಿಚಿತ್ರ ಹಾಗೂ ವಿವಾದಾತ್ಮಕ ಘಟನೆ ಬೆಳಕಿಗೆ...

ಎಸ್‌ಎಸ್‌ಎಲ್‌ಸಿ ಪರೀಕ್ಷೆ – ಜಿಲ್ಲೆಗೆ ಶೇ 94.99ರಷ್ಟು ಫಲಿತಾಂಶ

ಚಿಕ್ಕಮಗಳೂರು: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಈ ಬಾರಿ ಜಿಲ್ಲೆ ಶೇ...