Home ಸಂತವೇರಿಯ ಸಂತ ವೇಲಾಯುಧನ್ ಮತ್ತೊಮ್ಮೆ ಬಿಎಸ್ಪಿ ಕಾರ್ಯದರ್ಶಿ
Home

ಸಂತವೇರಿಯ ಸಂತ ವೇಲಾಯುಧನ್ ಮತ್ತೊಮ್ಮೆ ಬಿಎಸ್ಪಿ ಕಾರ್ಯದರ್ಶಿ

Share
Share

ಚಿಕ್ಕಮಗಳೂರು : ವೇಲಾಯುಧನ್ ಹೆಸರು ಕೇಳಿದರೆ ಇದು ಯಾವ ಅಯುಧ ಎನ್ನಿಸುತ್ತದೆ. ಆದರೆ ವ್ಯಕ್ತಿ ನೋಡಿದರೆ, ಮಾತನಾಡಿಸಿದರೆ ವೇಲು ಅಲ್ವೇ ನಮ್ಮ ವೇಲು ಅಲ್ವೇ ಎನ್ನುವಂತಹ ವ್ಯಕ್ತಿತ್ವ .

ವೇಲಾಯುಧನ್ ದ್ರಾವಿಡ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ತಮಿಳು ಸಾಹಿತ್ಯ, ಸಂಸ್ಕೃತಿಯನ್ನು ಅರೆದು ಕುಡಿಯುವ ಜೊತೆಗೆ ಜಾಗತಿಕ ವಿಚಾರಗಳ ಬಗ್ಗೆ ಸ್ಪಷ್ಟತೆ ಹೊಂದಿದ್ದಾರೆ.ಕನ್ನಡದ ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಕೂಡ ವಿಶೇಷತೆ ಇದೆ.

ತರೀಕೆರೆ ತಾಲ್ಲೂಕಿನ ಸಂತವೇರಿಯವರಾದ ವೇಲಾಯುಧನ್ ಅಕ್ಷರ ಧಾರದ ಲ್ಲಿ ಇಪ್ಟಾ ಕಲಾವಿದರಾಗಿ ದಲಿತ ಚಳುವಳಿಯಲ್ಲಿ, ಶೋಷಿತರ ಪರ ಹೋರಾಟದಲ್ಲಿ ಮುಂಚೂಣಿ ನಾಯಕತ್ವ ವಹಿಸಿದವರು. ರೇಲಾ ರೇಲಾ ರೇಲಾರೆ ಎಂದು ಧ್ವನಿ ಎತ್ತಿದರೆ ಆಕಾಶಕ್ಕೆ ಕೇಳುತ್ತಿತ್ತು .ಅಷ್ಟೊಂದು ಗಟ್ಟಿ ಧ್ವನಿ, ಇಪ್ಟಾ ಕಲಾವಿದರಾಗಿ ನಾಡಿನಾದ್ಯಂತ ಸುತ್ತಾಡಿ ಜಾಗೃತಿ ಮೂಡಿಸುವಂತಹ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ವೇಲಾಯುಧನ್ ಇಂದು ಬಿಎಸ್ ಪಿ ಪಕ್ಷದ ಮುಂಚಣಿ ನಾಯಕರಾಗಿದ್ದಾರೆ. ಹಿಂದೆ ಬಿಎಸ್ಪಿ ರಾಜ್ಯ ಕಾರ್ಯದರ್ಶಿಯಾಗಿದ್ದ ವೇಲು ಮತ್ತೊಮ್ಮೆ ಕಾರ್ಯದರ್ಶಿಯಾಗಿ ಅಯ್ಕೆಯಾಗಿರುವುದಕ್ಕೆ ಖುಷಿ ಪಟ್ಟವರು ಬಲು ಜನರು ಬಹುಜನರ ಹಿತಕಾಯಲಿ ಎಂದು ಹಾರೈಸೋಣ.

ಜಿಲ್ಲೆಯ ಪ್ರವಾಸಿ ತಾಣಕ್ಕೆ ಹೇಳಿ ಮಾಡಿಸಿದಂತ ಪ್ರದೇಶ ಸಂತವೇರಿ ಕೆಮ್ಮಣ್ಣುಗುಂಡಿ, ಕಲ್ಲತ್ತಿ ಫಾಲ್ಸ್ ನ ಸಮೀಪವಿರುವುದರಿಂದ ವೇಲಾಯುಧನ್ ಸಂತನಂತೆ ಕಂಡರೂ ಶೋಷಿತರ ವಿಚಾರ ಬಂದಾಗ ಅಯುಧ ಹಿಡಿಯುವಂತಾಗುತ್ತಾರೆ. ಹೀಗಾಗಿ ಹಲವರ ಕೆಂಗಣ್ಣಿಗೆ ಗುರಿಯಾಗಿರುವುದು ಉಂಟು.ಹಲವರ ಪ್ರೀತಿ, ವಿಶ್ವಾಸ ಗಳಿಸಿರುವುದು ಉಂಟು.

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಸ್ವಚ್ಛ ಪರಿಸರ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ

ಚಿಕ್ಕಮಗಳೂರು: ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಸ್ವಚ್ಛ ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ...

ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಹಿರೇಕೊಳಲೆ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು...

ಯುವಜನತೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ...

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ...