Home namma chikmagalur chikamagalur ವಿಧಾನ ಸಭಾ ಚುನಾವಣೆಗೆ ಟಿ.ಜಿ.ಗೋಪಿಕುಮಾರ್ ಸ್ಪರ್ಧೆ
chikamagalurHomeLatest Newsnamma chikmagalur

ವಿಧಾನ ಸಭಾ ಚುನಾವಣೆಗೆ ಟಿ.ಜಿ.ಗೋಪಿಕುಮಾರ್ ಸ್ಪರ್ಧೆ

Share
Share

ತರೀಕೆರೆ: ವಿಧಾನ ಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ.ಆದರೆ ತರೀಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಶುರುವಾಗಿದೆ. ಹಾಲಿ ಶಾಸಕ ಜಿ.ಹೆಚ್.ಶ್ರೀನಿವಾಸ್ ಗೆ ಸೆಡ್ಡು ಹೊಡೆಯಲು ಹಲವರು ಲೆಕ್ಕಾಚಾರ ಮಾಡುತ್ತಿದ್ದಾರೆ.

ಭರತ್ ಅಂಚೆ ಅಲ್ಲಲ್ಲಿ ಸುತ್ತಿ ಕ್ಷೇತ್ರಕ್ಕೆ ಬಂದು ಹೋಗುತ್ತಿದ್ದಾರೆ.ಅಜ್ಜಂಪುರದ ಕೃಷ್ಣಮೂರ್ತಿ ನಾನು ಒಂದು ಕೈ ನೋಡುವೆ ಎನ್ನುತ್ತಿದ್ದಾರೆ. ಇದರ ಜೊತೆಗೆ ಟಿ.ಜಿ.ಗೋಪಿಕುಮಾರ್ ಈಗಾಗಲೇ ಹಳ್ಳಿ, ಹಳ್ಳಿ ಸುತ್ತಿ ವಿಧಾನ ಸಭಾ ಅಖಾಡಕ್ಕೆ ಧುಮುಕುವ ತಯಾರಿ ನಡೆಸಿದ್ದಾರೆ.ಕುಟುಂಬ ರಾಜಕಾರಣಕ್ಕೆ ತಿಲಾಂಜಲಿ ನೀಡುತ್ತೇನೆ ಎನ್ನುತ್ತಿದ್ದಾರೆ.

ಟಿ.ಜಿ.ಗೋಪಿಕುಮಾರ್ ಮಾಜಿ ಪರಸಭಾ ಅಧ್ಯಕ್ಷ ಮತ್ತು ಪರ್ಮೆನಂಟ್ ಆಟೋಚಾಲಕ ಮಾಲೀಕರ ಸಂಘದ ಅಧ್ಯಕ್ಷ ಜೊತೆಗೆ ಹಲವು ಸಂಘ,ಸಂಸ್ಥೆಗಳಲ್ಲಿ ಸಕ್ರಿಯ ಇವರ ತಂದೆ ಜ್ಞಾನದೇವ ರಾವ್ ಕೂಡ ಹಲವು ವರ್ಷಗಳ ಪುರಸಭಾ ಸದಸ್ಯರಾಗಿ ಅಧ್ಯಕ್ಷರಾಗಿ ಹಲವರನ್ನು ಶಾಸಕರನ್ನಾಗಿಸಲು ದುಡಿದವರು ಹೀಗಾಗಿ ರಾಜಕೀಯ ಹಿನ್ನೆಲೆ ಕ್ಷೇತ್ರದಲ್ಲಿ ಚಿರಪರಿಚಿತನಾಗಿರುವುದು ಹೊಡೆತ ಖಚಿತ.ನನ್ನ ಮುಂದೆ ಯಾರು ಇಲ್ಲ ಎಂದು ಹೇಳಿಕೊಳ್ಳುತ್ತಿರುವವರು ಮುಟ್ಟಿ ನೋಡಿಕೊಳ್ಳುವ ಪರಿಸ್ಥಿತಿ ಬಂದಿದೆ.

ಈಗಾಗಲೇ ಚಿಕ್ಕಾವನಂಗಲದ ರಾಜಪ್ಪರ ಹೆಸರು ಹರಿದಾಡುತ್ತಿದ್ದು ಇದರ ಜೊತೆಯಲ್ಲಿ ಹಲವರು ತೆರೆಮರೆಯಲ್ಲಿ ಪ್ರಯತ್ನ ನಡೆಸಿರುವ ಮಾಹಿತಿಗಳು ಹರಿದಾಡುತ್ತಿವೆ.ಆರ್,ಎಸ್,ಎಸ್.ತನ್ನದೇ ಮೂಲದಲ್ಲಿ ಅಭ್ಯರ್ಥಿ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ವಿಜೇಯೆಂದ್ರ ಅಧ್ಯಕ್ಷರಾಗಿ ಮುಂದುವರೆದರೆ ಸುರೇಶ್ ಟಿಕೆಟ್ ಖಚಿತ. ಇಲ್ಲದಿದ್ದರೆ ಹೊಸ ಮುಖ ಖಚಿತ ಎಂದು ಹೇಳಲಾಗುತ್ತಿದೆ.

ವಿಧಾನ ಸಭಾ ಚುನಾವಣೆ ಯ ನಂತರ ಕಣ್ಮರೆಯಾದ ಗೋಪಿಕೃಷ್ಣ ಕಾಂಗ್ರೆಸ್ ಸೇರಿ ಕಾಂಗ್ರೆಸ್ ಟಿಕೆಟ್ ಪಡೆದೇ ಬರುತ್ತೇನೆ ಎಂದು ಅವರ ಶಿಷ್ಯ ಬಳಗದಲ್ಲಿ ಹೇಳುತ್ತಿದ್ದಾರೆ ಎನ್ನಲಾಗುತ್ತಿದೆ. ಭಾರತೀಯ ಜನತಾ ಪಕ್ಷದ ಲ್ಲೂ ಮಾಜಿ ಶಾಸಕ ಡಿ.ಎಸ್.ಸುರೇಶ್ ಗೆ ಠಕ್ಕರ್ ಕೊಡಲು ಹಲವರು ಪ್ರಯತ್ನ ನಡೆಸಿರುವ ಬೆಳವಣಿಗೆಗಳು ನಡೆಯುತ್ತಿವೆ.

ತರೀಕೆರೆಯ ರಂಗು ರಂಗಿನ ರಾಜಕೀಯ 1952 ರಿಂದಲೂ ಹೊಸಹೊಸ ವರಸೆಗಳಿಗೆ ಹೆಸರಾಗಿದೆ.ಮೊದಲ ವಿಧಾನ ಸಭಾ ಚುನಾವಣೆಯಲ್ಲಿ ಸುಪ್ರೀಂ ಕೋರ್ಟ್ ಗೆ ಹೋಗಿ ಗೆದ್ದ ಅಭ್ಯರ್ಥಿ ನಾಗಪ್ಪರ ವಿರುದ್ದ ಟಿ.ಸಿ.ಬಸಪ್ಪ ಶಾಸಕರಾಗಿದ್ದು ಅವರ ನಿಧನರಾದ ನಂತರ ಉಪಚುನಾವಣೆ ನಡೆದು ಟಿ.ಸಿ.ಶಾಂತಪ್ಪ ವಿಧಾನ ಸಭೆ ಪ್ರವೇಶ ಮಾಡಿ ಐದು ವರ್ಷಗಳಲ್ಲಿ ಮೂರು ಜನ ಶಾಸಕರಾಗಿರುವ ದಾಖಲೆ ಹೊಂದಿದೆ.

ಇದೇ ರೀತಿ 1972 ರಿಂದ ಗೆದ್ದ ಅಭ್ಯರ್ಥಿಗಳು ಮತ್ತೆ ಆಯ್ಕೆಯಾಗಿಲ್ಲ. ಟಿಕೆಟ್ ಕೂಡ ಮತ್ತೆ, ಮತ್ತೆ ಪಡೆಯಲಾಗಿಲ್ಲ ಇಂತಹ ಕ್ಷೇತ್ರ ಮತ್ತು ಮತದಾರನ ಚಿತ್ತ ಹೊಸ ದಾಖಲೆ ಬರೆಯುವುದು ಖಚಿತ ಎಂದು ಹಿರಿಯ ಮುಖಂಡರ ಅಭಿಪ್ರಾಯವಾಗಿದೆ.

TG Gopikumar contest for Vidhan Sabha elections

Share

Leave a comment

Leave a Reply

Your email address will not be published. Required fields are marked *

Don't Miss

ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿ ದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಭದ್ರಾ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ದೈತ್ಯಾಕಾರದ ಹುಲಿಯೊಂದು ದರ್ಶನ ನೀಡುವ ಮೂಲಕ ಅಚ್ಚರಿ ಮತ್ತು ಸಂತಸ ಮೂಡಿಸಿದೆ. ಕೆಮ್ಮಣ್ಣುಗುಂಡಿಯ ಪ್ರಸಿದ್ದ ಹೆಬ್ಬೆ ಫಾಲ್ಸ್ ರಸ್ತೆಯಲ್ಲಿ ಈ ಹುಲಿ...

ಇಟ್ಟುಕೊಂಡವರು ಮತ್ತು ಕಟ್ಟಿಕೊಂಡವರ ಕಾದಾಟ ! – ವೀರಶೈವ ಲಿಂಗಾಯತ ಸಂಘ ಬೀದಿಗೆ ತಂದಿರುವುದೇಕೆ ?

ಚಿಕ್ಕಮಗಳೂರು: ಪ್ರಪಂಚದಲ್ಲಿ ಯಾರು ಸಾಧನೆ ಮಾಡದ ಕೆಲಸ ಮಾಡಿದ್ದೇವೆ ಎಂಬ ಭ್ರಮೆಯಲ್ಲಿ ತೆಲುತ್ತಿರುವವರು ಪದಾಧಿಕಾರಿಗಳ ಎಡವಟ್ಟಿನಿಂದಾಗಿ ಡಬಲ್,ಡಬಲ್ ಆಹ್ವಾನ ಪತ್ರಿಕೆ ಮುದ್ರಣವಾಗಿದೆ.ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ,ವಿರೋಧ ಚರ್ಚೆ ಕೂಡ ನಡೆದು...

Related Articles

ಜಿಲ್ಲೆಯ ವಿದ್ಯಾರ್ಥಿನಿ ಬೃಂದಾ ರಾಜ್ಯ ಮಟ್ಟದಲ್ಲಿ ಅಗ್ರಸ್ಥಾನ

ಚಿಕ್ಕಮಗಳೂರು: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿರುವ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯ ವಿದ್ಯಾರ್ಥಿನಿ ಬೃಂದಾ ಅಪೂರ್ವ...

ಕಾಡಾನೆ ದಾಳಿಗೆ ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಗಾಯ

ಮೂಡಿಗೆರೆ:  ಇಲ್ಲಿನ ಕಾಡು ಪ್ರದೇಶದಲ್ಲಿ ಇಂದು ಬೆಳಗ್ಗೆ ಸುಮಾರು 9 ಗಂಟೆ ವೇಳೆ ಕಾಡಾನೆ ದಾಳಿ...

ಅರಣ್ಯ ಸಮಸ್ಯೆ ಬಗ್ಗೆ ಏ.28ಕ್ಕೆ ಪ್ರವಾಸಿಮಂದಿರದಲ್ಲಿ ಚರ್ಚೆ

ಚಿಕ್ಕಮಗಳೂರು: ಡೀಮ್ಡ್ ಫಾರೆಸ್ಟ್ ಮತ್ತು ಅರಣ್ಯ ಸಮಸ್ಯೆಗಳನ್ನು ನಿವಾರಿಸಲು ಎಸ್‌ಐಟಿ ರಚಿಸಿ ಸರ್ವೆ ಆರಂಭಿಸಿದೆ. ಈ...

ಷೇರುದಾರರಿಗೆ ಅನುಕೂಲಕ್ಕೆ ಆಡಳಿತ ವ್ಯವಸ್ಥೆ ಡಿಜಿಟಲೀಕರಣ

ಚಿಕ್ಕಮಗಳೂರು: ಚಿಕ್ಕಮಗಳೂರು ಟೌನ್ ಕೋ-ಆಪರೇಟಿವ್ ಸೊಸೈಟಿಯ ಆಡಳಿತ ವ್ಯವಸ್ಥೆಯನ್ನು ಷೇರುದಾರರಿಗೆ ಅನುಕೂಲ ಆಗುವಂತೆ ಡಿಜಿಟಲೀಕರಣಗೊಳಿಸಲಾಗಿದೆ ಎಂದು...