Home Latest News ತರೀಕೆರೆ ಪಿಸಿಎಲ್.ಡಿ ಬ್ಯಾಂಕ್ ನಿರ್ದೇಶಕರ ಜಯ : ಡಿ.ಎಸ್ ಸುರೇಶ್ ಮೇಲುಗೈ
Latest News

ತರೀಕೆರೆ ಪಿಸಿಎಲ್.ಡಿ ಬ್ಯಾಂಕ್ ನಿರ್ದೇಶಕರ ಜಯ : ಡಿ.ಎಸ್ ಸುರೇಶ್ ಮೇಲುಗೈ

Share
Share

ಚಿಕ್ಕಮಗಳೂರು : ತರೀಕೆರೆ ಪಿ.ಎಲ್.ಡಿ ಬ್ಯಾಂಕ್ ಸಹಕಾರ ಭಾರತಿ ತೆಕ್ಕೆಗೆ ಬಂದಿದೆ, ತರೀಕೆರೆಯ ಭೂ ಅಭಿವೃದ್ಧಿ ಬ್ಯಾಂಕ್ ನ ಚುನಾವಣೆ ನಡೆದಿದ್ದು 2025 ರಿಂದ 2030 ವರೆಗಿನ ಅಡಳಿತ ಮಂಡಳಿಗೆ ಹನ್ನೊಂದು ಜನ ಅವಿರೋಧವಾಗಿ ಆಯ್ಕೆಯಾದರೆ ಇನ್ನುಳಿದ ಎರಡು ಸ್ಥಾನಕ್ಕೆ ಚುನಾವಣೆ ನಡೆಯಿತು.

ಲಿಂಗದಹಳ್ಳಿ ಕ್ಷೇತ್ರದಿಂದ ಪಿ.ಎಸ್. ನಂಜುಂಡಸ್ವಾಮಿ
ಉಡೇವದ ತಮ್ಮಯ್ಯ ಅಮೃತಾಪುರ ಕ್ಷೇತ್ರದಿಂದ
ಚಂದ್ರಶೇಖರಪ್ಪ ಮತ್ತು ಹೇಮಲತಾ ಲಕ್ಕವಳ್ಳಿ ಕ್ಷೇತ್ರದಿಂದ ಟಿ.ಟಿ. ಗೋವಿಂದಪ್ಪ ಮತ್ತು ಎಚ್.ಎಂ. ಕಿರಣ್ ಕುಮಾರ್, ಅಜ್ಜಂಪುರ ಕ್ಷೇತ್ರದಿಂದ ಎ.ಎಂ.ಯೋಗೀಶ್ ನಾಗರಾಜ್, ಶಿವನಿ ಕ್ಷೇತ್ರದಿಂದ ಪ್ರೀತಮ್ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಬೇಗೂರು ನಾಗರಾಜ್ ಅವಿರೋಧವಾಗಿ ಆಯ್ಕೆಯಾದರೆ, ಅಜ್ಜಂಪುರ ಬಿ ಕ್ಷೇತ್ರದಿಂದ ಹಾಲಸಿದ್ದಪ್ಪ ಶಿವನಿ ಬಿ ಕ್ಷೇತ್ರದಿಂದ ದಿವಾಕರ ಮೂರ್ತಿ ಚುನಾವಣೆಲಿ, ಜಯಗಳಿಸಿದ್ದಾರೆ. ತರೀಕೆರೆ ಮಾಜಿ ಶಾಸಕ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಿ.ಎಸ್.ಸರೇಶ್ ಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್. ರಮೇಶ್ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು,, ಕಳೆದ ಇಪ್ಪತ್ತು ವರ್ಷಗಳಿಂದ ಪೀ ಕಾರ್ಡ್ ಬ್ಯಾಂಕ್ ನಲ್ಲಿ ಹಿಡಿತ ಸಾಧಿಸಿದ್ದಾರೆ. ಆಡಳಿತ ಮಂಡಳಿ ನಿರ್ದೇಶಕರುಗಳ ಚುನಾವಣೆಯಲ್ಲಿ ಸಹಕಾರ ಭಾರತಿ ತರೀಕೆರೆ ಘಟಕ ಮತ್ತು ಡಿಎಸ್ ಸುರೇಶ್ ಮಾಜಿ ಶಾಸಕರು ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಇವರ ನೇತೃತ್ವದಲ್ಲಿ ಜಯಿಸಿದ 13 ನಿರ್ದೇಶಕರುಗಳಿಗೆ ಸಹಕಾರ ಭಾರತಿ ಚಿಕ್ಕಮಗಳೂರು ಪ್ರಧಾನ ಕಾರ್ಯದರ್ಶಿಯಾದ ಟಿ.ಎಲ್. ರಮೇಶ್ DCC ಬ್ಯಾಂಕ್ ನಿರ್ದೇಶಕರು ಅಭಿನಂದಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ನಗರದಲ್ಲಿ ಎರಡು ಗುಂಪುಗಳ ನಡುವಿನ ಗಲಾಟೆ

ಚಿಕ್ಕಮಗಳೂರು : ಮಧ್ಯರಾತ್ರಿ ರಸ್ತೆಯಲ್ಲಿ ಕೆಟ್ಟ ಶಬ್ದಗಳಿಂದ ಬೈದಾಡಿಕೊಳ್ಳುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದ ಎರಡು ಗುಂಪುಗಳ ನಡುವಿನ ಗಲಾಟೆಯನ್ನು ತಡೆದ ಗಸ್ತು ಪೊಲೀಸರು ಮೂವರನ್ನು ವಶಕ್ಕೆ ಪಡೆದ ಘಟನೆ ಚಿಕ್ಕಮಗಳೂರು...

ಬಡ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು.

ಚಿಕ್ಕಮಗಳೂರು:   ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡ ಸಾಗುವಳಿ ದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿ ವರು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು...

Related Articles

ಪುಸ್ತಕ ಸಂಸ್ಕೃತಿ-ಸಾಮಾಜಿಕ ಜವಾಬ್ದಾರಿ ಬೆಳೆಸುತ್ತದೆ

ಚಿಕ್ಕಮಗಳೂರು: ಪುಸ್ತಕ ಸಂಸ್ಕೃತಿ ಸಾಮಾಜಿಕ ಜವಾಬ್ದಾರಿ ಬೆಳೆಸುತ್ತದೆ ಎಂದು ನ್ಯೂಸ್ ಕಿಂಗ್ ಆನ್ಲೈನ್ ಪತ್ರಿಕೆಯ ಸಂಪಾದಕ...

ನಿಯಂತ್ರಣ ತಪ್ಪಿ ಸೋಮಾವತಿ ನದಿಗೆ ಉರುಳಿದ ಕಾರು

ಕಳಸ: ಸೇತುವೆಗೆ ತಡೆಗೋಡೆ ಇಲ್ಲದ ಪರಿಣಾಮ ಪ್ರವಾಸಿಗರ ಕಾರೊಂದು ನಿಯಂತ್ರಣ ತಪ್ಪಿ ಸೋಮಾವತಿ ನದಿಗೆ ಉರುಳಿದ...

ಸ್ವಾತಂತ್ರ್ಯೋತ್ಸವದಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ 

ಚಿಕ್ಕಮಗಳೂರು: ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಮುಗಿದ ಬೆನ್ನಲ್ಲೇ ದಲಿತ...

‘ದೇಶ ಮೊದಲು’ ಎಂಬ ಭಾವನೆಯೊಂದಿಗೆ ಕರ್ತವ್ಯ ನಿರ್ವಹಿಸಿ

ಚಿಕ್ಕಮಗಳೂರು:  ಸ್ವಾತಂತ್ರ್ಯದ ೮೦ನೇ ವರ್ಷದ ಸಂಭ್ರಮ ಕೇವಲ ಹಬ್ಬದ ಆಚರಣೆಯಾಗದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸುವ,...