ಮೂಡಿಗೆರೆ : ಕಾಫಿನಾಡಿನ ಟಿಪ್ಪು ಕಟೌಟ್ಗೆ ಪಾಕಿಸ್ತಾನ ಪರ ಹಾಡು ಹಾಕಿ ವೈರಲ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತೀವು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಡಿಗೆರೆಯಲ್ಲಿ ಮಾತನಾಡಿದ ಅವರು, ಈ ಘಟನೆಯನ್ನು ಬಲವಾಗಿ ಖಂಡಿಸಿ ಕಟು ಶಬ್ದಗಳಿಂದ ವಾಗ್ದಾಳಿ ನಡೆಸಿದ್ದಾರೆ. ಇಲ್ಲಿಯೇ ಹುಟ್ಟಿ, ಇಲ್ಲಿಯ ಅನ್ನ ತಿಂದು, ದೇಶದ ಎಲ್ಲಾ ನಾಗರಿಕ ಸೌಲಭ್ಯಗಳನ್ನು ಅನುಭವಿಸುತ್ತಿರುವ ಕೆಲವರು ಪಾಕಿಸ್ತಾನದ ಪರವಾಗಿ ಒಲವು ತೋರಿಸುತ್ತಿರುವುದು ಅತ್ಯಂತ ನಾಚಿಕೆಗೇಡು ಎಂದು ಅವರು ಕಿಡಿಕಾರಿದ್ದಾರೆ.
ಇಂದು ಪಾಕಿಸ್ತಾನದಲ್ಲಿ ಅನ್ನವೂ ಇಲ್ಲದೆ, ಉದ್ಯೋಗವೂ ಸಿಗದೆ ಇಡೀ ದೇಶವೇ ಆರ್ಥಿಕವಾಗಿ ಕಂಗಾಲಾಗಿ ಬಿಕಾರಿಯಾಗಿದೆ. ಅಂತಹ ದೇಶದ ಪರವಾಗಿ ಜಿಂದಾಬಾದ್ ಕೂಗುವುದು ಅಥವಾ ಹಾಡುಗಳನ್ನು ಹಾಕುವುದು ಆ ದೇಶದ ಮೇಲಿನ ಪ್ರೀತಿಯಿಂದಲ್ಲ, ಅದರ ಹಿಂದೆ ಬೇರೆಯದೇ ದುರುದ್ದೇಶವಿದೆ ಎಂದು ಅವರು ಆರೋಪಿಸಿದ್ದಾರೆ.
ಪಾಕಿಸ್ತಾನ ಪರ ಘೋಷಣೆಗಳು ಕೇವಲ ನೆಪ ಮಾತ್ರವಾಗಿದ್ದು, ಇದರ ಹಿಂದಿರುವ ನಿಜವಾದ ಅಜೆಂಡಾ ಇಡೀ ದೇಶವನ್ನು ಇಸ್ಲಾಮೀಕರಣ ಮಾಡುವುದೇ ಆಗಿದೆ ಎಂದು ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ. ದೇಶದ ನೆಲದಲ್ಲೇ ಇದ್ದು ಇಂತಹ ದೇಶವಿರೋಧಿ ಮನಸ್ಥಿತಿ ಪ್ರದರ್ಶಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.
Strict action is needed against anti-national sentiment
Leave a comment