Home namma chikmagalur chikamagalur ಮಂತ್ರ ಮಾಂಗಲ್ಯದಲ್ಲಿ 10 ಜೋಡಿಗಳ ಸರಳ ಸಾಮೂಹಿಕ ವಿವಾಹ
chikamagalurHomeLatest Newsnamma chikmagalur

ಮಂತ್ರ ಮಾಂಗಲ್ಯದಲ್ಲಿ 10 ಜೋಡಿಗಳ ಸರಳ ಸಾಮೂಹಿಕ ವಿವಾಹ

Share
Share

ಮೂಡಿಗೆರೆ: ಈ ಜಗತ್ತಿನ ಸೃಷ್ಟಿ ಸರಿಯಾಗಿಯೇ ಇದೆ. ಆದರೆ ನಾವು ನೋಡುವ ದೃಷ್ಟಿ ಸರಿಯಾಗಿಲ್ಲ. ಇದರಿಂದ ಸಮಾಜದಲ್ಲಿ ಸಾಮರಸ್ಯ ಸಾಧ್ಯವಾಗದಂತಾಗಿದೆ ಎಂದು ಗೌರಿಗದ್ದೆ ಆಶ್ರಮದ ಅವದೂತ ವಿನಯ್ ಗುರೂಜಿ ಹೇಳಿದರು.

ಅವರು ಗುರುವಾರ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಸಮಿತಿ ಹಾಗೂ ಸರಳ ಸಾಮೂಹಿಕ ವಿವಾಹ ಸಮಿತಿ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ೧೦ ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಧರ್ಮ, ದೇವಸ್ಥಾನಗಳು ಮಾನವನ ಕಣ್ಣೊರಿಸುವ ತಾಣವಾಗಬೇಕು. ದಯೆಯ ಮರ್ಮವನ್ನರಿತು ಬದುಕುವುದೇ ನಿಜವಾದ ಧರ್ಮ. ಪ್ರತಿಯೊಬ್ಬರೂ ಜ್ಞಾನದಿಂದ ಗಟ್ಟಿಯಾದಾಗ ಮಾತ್ರ ಅಂಬೇಡ್ಕರ್ ಅವರ ಆಶಯಕ್ಕೆ ಬೆಲೆ ಸಿಗುತ್ತದೆ. ಭಗವದ್ಗೀತೆ ಬರೆದ ಕೃಷ್ಣ ಎಷ್ಟು ಶ್ರೇಷ್ಟನೋ ಅದೇ ರೀತಿ ಈ ದೇಶದಲ್ಲಿ ಪ್ರತಿಯೊಬ್ಬರೂ ಸಮಾಜವಾಗಿ ಬದುಕು ಕಟ್ಟಿಕೊಳ್ಳುವಂತೆ ಸಂವಿಧಾನ ಬರೆದ ಅಂಬೇಡ್ಕರ್ ಕೂಡ ಶ್ರೇಷ್ಟ ವ್ಯಕ್ತಿ ಎಂದು ಹೇಳಿದರು.

ಮೋಟಮ್ಮ ಅವರು ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಕಳೆದ ೨೪ ವರ್ಷದಿಂದ ಮಾಡಿಕೊಂಡು ಬರುತ್ತಿದ್ದು, ಅಂದಿನಿಂದಲೂ ಹೆಣ್ಣು ಹೆತ್ತವರ ಸಾಲದ ಕಣ್ಣೀರು ಹೊರೆಸುವ ಕಾರ್ಯ ಮಾಡಿದ್ದಾರೆ. ಈ ರೀತಿ ಎಲ್ಲಾ ಕಡೆ ಕನಿಷ್ಟ ೧೦ ಜೋಡಿಗಳ ಸರಳ ವಿವಾಹ ನಡೆದರೆ ಅಷ್ಟೂ ಕುಟುಂಬ ಸಾಲದ ಹೊರೆಯಿಂದ ಹೊರ ಬರುತ್ತದೆ ಎಂದ ಅವರು, ಶಾಸಕಿ ನಯನಾ ಮೋಟಮ್ಮ ಅವರು ಉದ್ಯೋಗ ಮೇಳ ನಡೆಸಿ ನಿರುದ್ಯೋಗಿಗಳ ನೆರವಿಗೆ ಬರಬೇಕೆಂದು ಸಲಹೆ ನೀಡಿದರು.

ಶಾಸಕಿ ನಯನಾ ಮೋಟಮ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತನ್ನ ಕ್ಷೇತ್ರದಲ್ಲಿರುವ ೧೦೨೦ ಹಳ್ಳಿಗಳಲ್ಲಿ ಪ್ರತಿ ವರ್ಷ ಕನಿಷ್ಟ ಇಬ್ಬರು ಹಿಂದುಳಿದ ವರ್ಗದವರು ಆರ್ಥಿಕವಾಗಿ ಮುಂದೆ ಬರಬೇಕು. ಜತೆಗೆ ನೆರೆಹೊರೆಯವರೂ ಕೂಡ ಆರ್ಥಿಕವಾಗಿ ಮುಂದೆ ಬರಲು ಶ್ರಮಿಸಬೇಕು. ಆಗ ನಿಜವಾಗಿಯೂ ಅಂಬೇಡ್ಕರ್ ಆಶಯ ಮತ್ತು ಹೋರಾಟಕ್ಕೆ ಅರ್ಥ ಸಿಗುತ್ತದೆ ಎಂದು ಹೇಳಿದರು.

ಮಾಜಿ ಸಚಿವೆ ಮೋಟಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಜೀವನ ತಿಳಿದುಕೊಂಡು ಅವರು ಹಾಕಿಕೊಟ್ಟ ದಾರಿಯಲ್ಲೇ ನಡೆಯತ್ತೇವೆ. ದುಶ್ಚಟ್ಕಕೆ ಬಲಿಯಾಗದೇ ಉತ್ತಮ ಜೀವನ ನಡೆಸುವ ಮೂಲಕ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಶ್ರೀಮಂತರನ್ನಾಗಿ ಮಾಡುತ್ತೇವೆಂದು ನವ ದಂಪತಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. .

ದಲಿತ ಪುರೊಹಿತರ ಕನ್ನಡ ಮಂತ್ರ: ಸಕ್ಕಳಿ ಸಕ್ಕಳಿ ಸಾಸಂಭ ಗಲಿಗಲಿ, ಬಾರ ಬಾರ ಮದವಣ್ಣ ಬಲಗಾಲ ಮುಂದಿಟ್ಟು ಬಲಕೇನು ಕಂಡೆ? ಬಾಳೆ ತೋಟ ಕಂಡೆ. ಎಡಕ್ಕೇನು ಕಂಡ? ಎಲೆ ತೋಟ ಕಂಡೆ. ಮುಂದೇನು ಕಂಡೆ? ಕಟ್ಟೇಯ ಕಂಡೆ. ಕಟ್ಟೇಯ ಮುಂದೆ ತಕ್ಕೇಯ ಎತ್ತು, ತವರೆಯ ಹೂವ, ಬೆಳ್ಳಿಕೋಲು ಹಿಡಿಕೊಂಡು ಬೆಳಕಾಗಿ ಬರುವಾಗ ಯಾರ್‍ಯಾರ ಕಂಡ? ಭೂಮಿತಾಯಿ ಕಂಡೆ. ಬಸವೇಶ್ವರನ ಕಂಡೆ. ಹಳ್ಳಿದೇವನ ಕಂಡೆ. ಬೆಳ್ಳಿ ದೇವನ ಕಂಡೆ. ಶುಕ್ರನ ಕಂಡೆ. ಸೂರ್ಯ ದೇವನ ಕಂಡೆ. ವಾಯು ದೇವರ ಕಂಡೆ. ವರುಣ ದೇವನ ಕಂಡೆ. ಅಗ್ನಿ ದೇವರ ಕಂಡೆ. ಮಹೋರ್ತವೇ ಸಾವುದಾನ. ಸುಲಗ್ನ ಸಾವುದಾನ ಎಂಬ ಕನ್ನಡ ಮಂತ್ರವನ್ನು ದಲಿತ ಪುರೋಹಿತರಾದ ಎಚ್.ಡಿ.ಸುಬ್ರಹ್ಮಣ್ಯ, ಕೆ.ಎಲ್.ಸಾಗರ್, ಜಿ.ಎಚ್.ಕೋಮರಾಜ್, ದೇವರಾಜ್ ಸಬ್ಲಿ, ಡಿ.ಬಿ.ರಾಮಯ್ಯ, ರಮೇಶ್ ಪಠಿಸಿದರು.

ಮದುವೆ ದಾರೆ ಕಾರ್ಯವನ್ನು ಕೆಂಚಯ್ಯ ಮತ್ತು ಜಯಂತಿ ದಂಪತಿಗಳು ನೆರವೇರಿಸಿದರು. ಮಂಗಳೂರು ವಿ.ವಿ.ಕಾಲೇಜಿನ ಅಸಿಸ್ಟೆಂಟ್ ಪ್ರೋಪೇಸರ್ ಸಭಿತಾ ಗುಣ್ಮಿ, ಚಲನಚಿತ್ರ ನಿರ್ದೇಶಕ ಸುಧೀರ್ ಅತ್ತಾವರ ಮಾತನಾಡಿದರು.

ಕಸಾಪ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಮಂಚೇಗೌಡ, ಕಾಂಗ್ರೆಸ್ ಗೋಣಿಬೀಡು ಹೋಬಳಿ ಅಧ್ಯಕ್ಷ ಸುಬ್ರಾಯಗೌಡ, ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ರೇಶ್ಮಾ ಬೆಂಗಳೂರು, ಪೂರ್ಣೇಶ್ ಜಿ.ಹೊಸಳ್ಳಿ, ಎಸ್.ವೆಂಕಟರಾಮ್, ದೀಪಕ್ ಕಡಿದಾಳ್, ಅಶ್ವಥ್ ಮಾಕೋನಹಳ್ಳಿ, ಡಿ.ಎಸ್.ರಘು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದು, ನವ ದಂಪತಿಗಳಿಗೆ ಶುಭ ಹಾರೈಸಿದರು.

Simple mass wedding of 10 couples at Mantra Mangalya

Share

Leave a comment

Leave a Reply

Your email address will not be published. Required fields are marked *

Don't Miss

ನಾಗರಿಕ ವೇದಿಕೆಯಿಂದ ಪ್ರತಿಭಟನೆ ಖಂಡನೆ

ತರೀಕೆರೆ: ಸಂವಿಧಾನ ಸಾರ್ವಜನಿಕರು ಆರೋಗ್ಯಕರವಾಗಿ ಪ್ರತಿಭಟಿಸಲು ಅವಕಾಶ ಕಲ್ಪಿಸಿದೆ. ಆದರೆ ಅದನ್ನು ದುರ್ಬಳಕೆ ಮಾಡಿಕೊಂಡು ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ಯವರು ನಾಗರೀಕ ವೇದಿಕೆ ಅಡಿಯಲ್ಲಿ ಶಾಸಕ ಜಿ.ಎಚ್. ಶ್ರೀನಿವಾಸ್...

ಅಂಬೇಡ್ಕರ್ ಜಯಂತಿಗೆ ಅಡ್ಡಿ : ಆರೋಪಿಗಳ ಬಂಧನಕ್ಕೆ ಪ್ರತಿಭಟನೆ

ಚಿಕ್ಕಮಗಳೂರು:  ಅಂಬೇಡ್ಕರ್ ಜಯಂತಿಗೆ ಅಡ್ಡಿಪಡಿಸಿರುವ ಆರೋಪಿಗಳನ್ನು ಬಂಧನಕ್ಕೆ ಒಳಪಡಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರುಗಳು ನಗರದ ಆಜಾ ದ್‌ಪಾರ್ಕ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಈ...

Related Articles

ಮಕ್ಕಳಿಗೆ ಶಿಕ್ಷಣ ನೀಡಿ ಬದುಕನ್ನು ಹಸನಾಗಿಸಬೇಕು

ಚಿಕ್ಕಮಗಳೂರು : ಕೃಷಿಕರು, ಮಕ್ಕಳಿಗೆ ಶಿಕ್ಷಣ ನೀಡಿ ಅವರ ಬದುಕನ್ನು ಹಸನಾಗಿಸಬೇಕು ಎಂದು ಶಾಸಕ ಹೆಚ್.ಡಿ....

ಸೇವಾ ನ್ಯೂನತೆ ದುರಸ್ತಿಪಡಿಸುವಂತೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ತೀರ್ಪು

ಚಿಕ್ಕಮಗಳೂರು: ಆಸ್ಪತ್ರೆಗೆ ರೋಗಿಗಳ ಅನುಕೂಲಕ್ಕಾಗಿ ಸಂಸ್ಥೆಯೊಂದರಿಂದ ಖರೀದಿಸಿದ ನೀರು ಪೂರೈಕೆಯ ಯಂತ್ರ ಕೈಕೊಟ್ಟಾಗ ದುರಸ್ತಿಗೆ ಮುಂದಾಗದೆ...

ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕೋಟ್ಯಂತರ ರೂಪಾಯಿ ವಂಚನೆ

ಚಿಕ್ಕಮಗಳೂರು: ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೋಟ್ಯಂತರ ರೂಪಾಯಿ ವಂಚನೆ ನಡೆದಿರುವ ಬಗ್ಗೆ ನಗರ ಪೊಲೀಸ್...

ನಕಲಿ ಐಎಎಸ್ ಅಧಿಕಾರಿ ಮಿಥುನ್ ನಿಂದ ವಕೀಲರಿಗೆ ವಂಚನೆ

ಚಿಕ್ಕಮಗಳೂರು: ಕಾಫಿನಾಡಿನ ಮೆಡಿಕಲ್ ಮಾಲೀಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ನಕಲಿ ಐಎಎಸ್ ಅಧಿಕಾರಿ ಮಿಥುನ್ ವಂಚನೆಯ...