ಚಿಕ್ಕಮಗಳೂರು: ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆಯವರ ಸಾಧನೆ ಮ ಹಿಳಾ ದಿನಾಚರಣೆಗೆ ಒಂದು ಪ್ರೇರಣೆ. ಅಡುಗೆ ಮನೆಯಿಂದ ಶಾಲಾ ಕೊಠಡಿವರೆಗೆ ಹೆಣ್ಣುಮಕ್ಕಳನ್ನು ಕರೆಸಿ ವಿದ್ಯಾವಂತ ಮಾಡುವ ಮೂಲಕ ಹೆಣ್ಣಿನ ಸ್ವಾತಂತ್ರ್ಯತೆ ಕಾಪಾಡಿದವರು ಎಂದು ಬಿಎಸ್ಪಿ ರಾಜ್ಯ ಕಾರ್ಯ ದರ್ಶಿ ಕೆ.ಬಿ.ಸುಧಾ ಹೇಳಿದರು.
ನಗರದ ಜಿಲ್ಲಾ ಬಿ.ಎಸ್.ಪಿ. ಕಚೇರಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸಾವಿತ್ರಿ ಬಾಯಿ ಪುಲೆ ಅವರ ಭಾವಚಿತ್ರಕ್ಕೆ ಶನಿವಾರ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದ ಹಿಂದೆ ಹೆಣ್ಣುಮಕ್ಕಳು ಮನೆಯಿಂದ ಹೊರಬರುವುದೇ ಕಷ್ಟಸಾಧ್ಯವಿತ್ತು. ಹೆಚ್ಚಾಗಿ ಶಿಕ್ಷಣ ಎಂಬುದು ಹೆಣ್ಣಿಗೆ ಮರೀಚಿಕೆಯಾಗಿತ್ತು. ಈ ನಡುವೆ ಸಾವಿತ್ರಿಬಾಯಿ ಫುಲೆಯವರು ಹಲವಾರು ಅವ ಮಾನಗಳ ಮೂಲಕ ಹೆಣ್ಣು ಶಿಕ್ಷಣವಂತರಾಗಬೇಕೆಂಬ ದೃಷ್ಟಿಯಿಂದ ೧೮ ಶಾಲೆಗಳನ್ನು ತೆರೆದವರು ಎಂದು ತಿಳಿಸಿದರು.
ಸಾವಿತ್ರಿ ಬಾಯಿಯವರ ಶಾಲೆಯು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿರಲಿಲ್ಲ. ಸರ್ವ ಧರ್ಮದ ಹೆಣ್ಣುಮಕ್ಕಳಿಗಾಗಿ ತೆರೆದ ಅಪರೂಪದ ವ್ಯಕ್ತಿ ಸಾವಿತ್ರಿಯವರು. ಇವರ ಸಾಧನೆಯೇ ನಮ್ಮೆಗೆಲ್ಲಾ ಸ್ಪೂರ್ತಿಯಾಗಬೇಕು. ಮಹಿಳಾ ದಿನಾಚರಣೆಗೆ ಈ ಸಾಧಕಿಯೇ ಸೇವೆಯ ಪ್ರೇರಣೆ ಎಂದರು.
ಸಾವಿತ್ರಿ ಬಾಯಿಫುಲೆ ಹಾಗೂ ಡಾ|| ಬಿ.ಆರ್.ಅಂಬೇಡ್ಕರ್ ಅವರ ಹೋರಾಟದಿಂದ ಇಂದು ಮಹಿಳೆ ತನ್ನ ಹಕ್ಕು, ಸ್ವಾತಂತ್ರ್ಯವನ್ನು ಗಳಿಸಿಕೊಂಡಿದ್ದಾಳೆ. ಆಧುನಿಕ ಜಗತ್ತಿನಲ್ಲಿ ಮಹಿಳೆ ಎಲ್ಲಾ ರಂಗದಲ್ಲೂ ಅತ್ಯುತ್ತ ಮ ಸಾಧನೆ ಮಾಡುವ ಮೂಲಕ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಲು ಸಾಧ್ಯ ವಾಗಿದೆ ಎಂದು ತಿಳಿಸಿದರು.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ ದುಡಿಯವಂತ ಮಹಿಳೆ, ಹೋ ರಾಟದ ಮೂಲಕ ಹಕ್ಕು ಪಡೆದುಕೊಂಡ ದಿನವೇ ಮಹಿಳಾ ದಿನಾಚರಣೆ. ನಾವುಗಳು ಎಂದಿಗೂ ಸತ್ಯದ ಹಾದಿ, ನಿಷ್ಟೆ, ಪ್ರಾಮಾಣಿಕತೆ ಹಾಗೂ ನಿಸ್ವಾರ್ಥ ಮನೋಭಾವದಿಂದ ನಡೆದರೆ, ಯಶಸ್ಸು ಎಂಬುದು ತಾನಾ ಗಿಯೇ ಲಭ್ಯವಾಗಲಿದೆ ಎಂದರು.
ಬಿಎಸ್ಪಿ ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಅಸೆಂಬ್ಲಿ ಖಜಾಂಚಿ ರತ್ನ ಅಧ್ಯಕ್ಷತೆ ವಹಿಸಿದ್ದರು. ಈ ಸಂ ದರ್ಬದಲ್ಲಿ ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷೆ ಕೆ.ಎಸ್.ಮಂಜುಳಾ, ಅಸೆಂಬ್ಲಿ ಪ್ರಧಾನ ಕಾರ್ಯದರ್ಶಿ ವಸಂತ್, ನಗರಾಧ್ಯಕ್ಷ ವಿಜಯ್, ಮುಖಂಡರುಗಳಾದ ಗಿರೀಶ್, ಮಂಜೇಗೌಡ ಮತ್ತಿತರರು ಉಪಸ್ಥಿತರಿದ್ದರು.
Savitribai Phule inspires Women’s Day celebrations
Leave a comment