Home Latest News Sachin Meega:ಸಚ್ಚಿನ್ ಮೀಗಾ ಎಂಬ ಮಾಯಾ ಮೃಗನಿಂದ ವೃದ್ದ ದಂಪತಿಗೆ ಹಿಂಸೆ ಕಿರುಕುಳ
Latest NewsHome

Sachin Meega:ಸಚ್ಚಿನ್ ಮೀಗಾ ಎಂಬ ಮಾಯಾ ಮೃಗನಿಂದ ವೃದ್ದ ದಂಪತಿಗೆ ಹಿಂಸೆ ಕಿರುಕುಳ

Share
Share

ಚಿಕ್ಕಮಗಳೂರು: ಕಳೆದ ಹದಿನೈದು ವರ್ಷಗಳಿಂದ ಕಾಂಗ್ರೆಸ್ ರೈತ ವಿಭಾಗದ ರಾಜ್ಯದ ಅಧ್ಯಕ್ಷ. ಸಚಿನ್ ಮೀಗಾ ಎಂಬ ಮಾಯಾ ಮೃಗಾ ವೃದ್ದ ದಂಪತಿಗೆ ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡುತ್ತಿರುವ ಬಗ್ಗೆ ರಮೇಶ್ ಭಟ್ ಮತ್ತು ವಾಣಿ ದೂರಿದ್ದಾರೆ.

ಸಚಿನ್ ರೈತ ಸಂಘಟನೆ ಮಾಡಿದ್ದಕ್ಕಿಂತ ಎಲ್ಲಿ,ಎಲ್ಲಿ ಎತ್ತುವಳಿ ಮಾಡಬಹುದು ಎಂದು ಲೆಕ್ಕಾಚಾರ ಮಾಡಿದ್ದೇ ಹೆಚ್ಚು ಎಂದು ಕಾಂಗ್ರೆಸ್ ನವರ ಮಾತು.

ಸದಾಕಾಲವೂ ಬೆಂಗಳೂರಿನಲ್ಲಿ ಠೀಕಾಣಿ ಹೊಡೆದು ಡಿ.ಕೆ. ಹಿಂದೆ, ಮುಂದೆ ಸುತ್ತುವ ಈತ ಲ್ಯಾಂಡ್ ಡೀಲರ್,ಫೈನಾನ್ಸಿಯರ್,ದಲ್ಲಾಳಿಗಳಿಗೆ,ವ್ಯಾಪಾರಿಗಳಿಗೆ ಲೆಟರ್ ಹೆಡ್ ನಾಯಕರುಳನ್ನು ಹುಟ್ಟು ಹಾಕಿದ ಖಳನಾಯಕ ಎಂಬ ಅಪಕೀರ್ತಿ ಈತನ ಮೇಲಿದೆ.

ಈತನ ತಂದೆ ಮೀಗಾ ಚಂದ್ರಶೇಖರ್ ಅತ್ಯಂತ ಪ್ರಾಮಾಣಿಕ ಒಮ್ಮೆ ಜಿ,ಪಂ ಸದಸ್ಯರಾಗಿ ಹೊಲಸು ರಾಜಕೀಯ ಬೇಡ ಎಂದವರ ಮಗನಾಗಿ ಎತ್ತುವಳಿ ಎಕ್ಸ್ ಫರ್ಟ್ ಎಂದು ಕರೆಯಿಸಿ ಕೊಳ್ಳುವ ಈತಾ ರಮೇಶ್ ಭಟ್ ಮತ್ತು ವಾಣಿ ಎಂಬ ವೃದ್ದದಂಪತಿಗಳನ್ನು ಕಣ್ಣೀರಿನಲ್ಲಿ ಮುಳುಗಿಸಿದ್ದಾನೆ.

ಈತನನ್ನು ಕಾಂಗ್ರೆಸ್ ನವರು ಮಳ್ಳಿಗ ಮಸಾಲೆ ದೋಸೆ ಸಚಿನ್ ಎನ್ನುತ್ತಾರೆ ಎಂದರೆ ಯೋಚಿಸಲೇ ಬೇಕು.

ಕೊಪ್ಪ ತಾಲ್ಲೂಕು ಬೇರು ಕೂಡಿಗೆ ರಮೇಶ್ ಭಟ್ ರ ಐದು ಎಕರೆ ಇಪ್ಪತೈದು ಗುಂಟೆ ಜಮೀನು ಖರೀದಿ ಮಾಡಿದ್ದಾನೆ.

ವೃದ್ದ ದಂಪತಿಗೆ ಇನ್ನೂ ಇಪ್ಪತೈದು ಎಕರೆ ಅಡಿಕೆ ಮತ್ತು ಕಾಫಿ ತೋಟವಿದ್ದು ಇದರ ಮೇಲೆ ಕಣ್ಣು ಬಿಟ್ಟಿರುವ ಮಾಯಾ ಮೃಗ ಸಚಿನ್ ವಾಸದ ಮನೆ ಖಾಲಿ ಮಾಡಿಸಲು ತಂತ್ರ, ಕುತಂತ್ರ ಮಾಡುತ್ತಿದ್ದು ಗೇಟ್ ಮುರಿಸುವುದು,ಕರೆಂಟ್ ತೆಗೆಯುವುದು,ನೀರಿನ ಮೋಟರ್ ಕೆಡಿಸಿದ್ದು ಈ ಬಗ್ಗೆ ಇಲಾಖೆ ದೂರು ಕೊಟ್ಟರು ಪ್ರಯೋಜನವಾಗಿಲ್ಲ .

ಪೊಲೀಸ್ ರಿಗೆ ದೂರು ನೀಡಲು ಹೋದರು ದೂರು ತೆಗೆದು ಕೊಂಡಿಲ್ಲ. ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಸುರಿಸಿದ್ದಾರೆ.ಇಂತಹ ಚಿತ್ರ ವಿಚಿತ್ರ ಅನುಭವಿಸುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

ಕಳೆದ ಒಂದು ವಾರದಿಂದ ಕತ್ತಲೆಯ ಕೋಣೆಯಲ್ಲಿ ಬಂಧನಕ್ಕೆ ಒಳಗಾದ ಭೀತಿ ಇದ್ದು ಹೆಚ್ಚು ಕಡಿಮೆಯಾದರೆ ಯಾರು ಹೊಣೆ.

ನಮ್ಮ ತೋಟದ ಬೆಳೆಯನ್ನು ಕೊಯ್ಲು ಮಾಡಲು ಬಿಡುತ್ತಿಲ್ಲ.ದಬ್ಬಾಳಿಕೆ ಮೇಲೆ ಆತನೆ ಅಡಿಕೆ ಕೊಯ್ಲು ಮಾಡಿದ್ದು ಈ ಬಗ್ಗೆ ಪೊಲೀಸ್ ರು ದೂರು ಪಡೆಯುತ್ತಿಲ್ಲ.ನಮಗೆ ಆತ್ಮಹತ್ಯೆ ಬಿಟ್ಟರೆ ಬೇರೆ ದಾರಿ ಇಲ್ಲ ಎನ್ನುತ್ತಾರೆ.

ಕಾಂಗ್ರೆಸ್ ನಲ್ಲಿ ಇಂತಹ ಮಾಯಾ ಮೃಗಗಳಿಗೆ ಉಗಿದು ಬುದ್ದಿ ಹೇಳದ ಡೊಂಗಿ ನಾಯಕರುಗಳಿಗೆ ಏನು ಹೇಳಬೇಕು.

ಡಿ.ಕೆ.ಶಿವಕುಮಾರ್ ನ ಜೊತೆಗೆ ಇಂತವರೆ ಇರಬಹುದು ಇನ್ನೂ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡಗೆ ಇವತ್ತು ತಂಗುವುದು ಎಲ್ಲಿ ಎಂಬ ಚಿಂತೆ.ಬ್ರಾಹ್ಮಣ ಸಂಘದ ಮಂಜುನಾಥ್ ಜೋಷಿಗೆ ಯಾರಿಗೆ ಬಕಿಟ್ ಹಿಡಿಯಬೇಕು ಎಂಬ ಲೆಕ್ಕಾಚಾರ ವೃದ್ದ ದಂಪತಿಗಳಿಗೆ ಮಾಧ್ಯಮಗಳೇ ಕೊನೆಯ ಆಯ್ಕೆ. ಇನ್ನಾದರೂ ಪೊಲೀಸ್ ಇಲಾಖೆ ವೃದ್ದರ ನೆರವಿಗೆ ಬರಲಿ.

Sachin Meega

Share

Leave a comment

Leave a Reply

Your email address will not be published. Required fields are marked *

Don't Miss

ನಗರದಲ್ಲಿ ಎರಡು ಗುಂಪುಗಳ ನಡುವಿನ ಗಲಾಟೆ

ಚಿಕ್ಕಮಗಳೂರು : ಮಧ್ಯರಾತ್ರಿ ರಸ್ತೆಯಲ್ಲಿ ಕೆಟ್ಟ ಶಬ್ದಗಳಿಂದ ಬೈದಾಡಿಕೊಳ್ಳುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದ ಎರಡು ಗುಂಪುಗಳ ನಡುವಿನ ಗಲಾಟೆಯನ್ನು ತಡೆದ ಗಸ್ತು ಪೊಲೀಸರು ಮೂವರನ್ನು ವಶಕ್ಕೆ ಪಡೆದ ಘಟನೆ ಚಿಕ್ಕಮಗಳೂರು...

ಬಡ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು.

ಚಿಕ್ಕಮಗಳೂರು:   ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡ ಸಾಗುವಳಿ ದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿ ವರು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು...

Related Articles

ಪುಸ್ತಕ ಸಂಸ್ಕೃತಿ-ಸಾಮಾಜಿಕ ಜವಾಬ್ದಾರಿ ಬೆಳೆಸುತ್ತದೆ

ಚಿಕ್ಕಮಗಳೂರು: ಪುಸ್ತಕ ಸಂಸ್ಕೃತಿ ಸಾಮಾಜಿಕ ಜವಾಬ್ದಾರಿ ಬೆಳೆಸುತ್ತದೆ ಎಂದು ನ್ಯೂಸ್ ಕಿಂಗ್ ಆನ್ಲೈನ್ ಪತ್ರಿಕೆಯ ಸಂಪಾದಕ...

ನಿಯಂತ್ರಣ ತಪ್ಪಿ ಸೋಮಾವತಿ ನದಿಗೆ ಉರುಳಿದ ಕಾರು

ಕಳಸ: ಸೇತುವೆಗೆ ತಡೆಗೋಡೆ ಇಲ್ಲದ ಪರಿಣಾಮ ಪ್ರವಾಸಿಗರ ಕಾರೊಂದು ನಿಯಂತ್ರಣ ತಪ್ಪಿ ಸೋಮಾವತಿ ನದಿಗೆ ಉರುಳಿದ...

ಸ್ವಾತಂತ್ರ್ಯೋತ್ಸವದಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ 

ಚಿಕ್ಕಮಗಳೂರು: ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಮುಗಿದ ಬೆನ್ನಲ್ಲೇ ದಲಿತ...

‘ದೇಶ ಮೊದಲು’ ಎಂಬ ಭಾವನೆಯೊಂದಿಗೆ ಕರ್ತವ್ಯ ನಿರ್ವಹಿಸಿ

ಚಿಕ್ಕಮಗಳೂರು:  ಸ್ವಾತಂತ್ರ್ಯದ ೮೦ನೇ ವರ್ಷದ ಸಂಭ್ರಮ ಕೇವಲ ಹಬ್ಬದ ಆಚರಣೆಯಾಗದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸುವ,...