ಚಿಕ್ಕಮಗಳೂರು: ಕಳೆದ ಮೂರು ವರ್ಷಗಳ ಹಿಂದೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದ ವಿಧಾನ ಸಭೆಯ ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಸೋತ ಬಿಜೆಪಿಯ ಅಭ್ಯರ್ಥಿ ಡಿ.ಎನ್.ಜೀವರಾಜ್ ಹೈಕೋರ್ಟ್ ನಲ್ಲಿ ಆಕ್ಷೇಪ ಸಲ್ಲಿಸಿದ್ದರು.
ನ್ಯಾಯಾಲಯ ವಿಚಾರಣೆ ನಡೆಸಿ ಅಂಚೆ ಮತಗಳ ಮರು ಎಣಿಕೆ ಮಾಡಲು ಆದೇಶ ನೀಡಿದ್ದರ ಹಿನ್ನೆಲೆಯಲ್ಲಿ ಇಂದು ಮರು ಎಣಿಕೆ ಕಾರ್ಯಾ ನಡೆಯಿತು.
ಬೆಳಗ್ಗೆ 8 ಗಂಟೆಗೆ ಸ್ಟ್ರಾಂಗ್ ರೂಮ್ ತರೆದಾಗ ಇಪ್ಪತ್ತು ಬಾಕ್ಸ್ ಗಳಲ್ಲಿ ಹದಿನೈದು ಬಾಕ್ಸ್ ಚೆಲ್ಲಾಪಿಲ್ಲಿಯಾಗಿರುವುದನ್ನು ಕಂಡು ಕಾಂಗ್ರೆಸ್ನಾ ಚುನಾವಣೆ ಏಜೆಂಟ್ ಆಕ್ರೋಶ ಮತ್ತು ಆಕ್ಷೇಪ ವ್ಯಕ್ತಪಡಿಸಿ ಮತಗಳ ಎಣಿಕೆ ಮಾಡದಂತೆ ಕೋರಿದರು ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮತಗಳ ಎಣಿಕೆ ಮಾಡುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.
ಒಟ್ಟು ಚಲಾವಣೆಯಾದ ಅಂಚೆ ಮತಗಳು1,822 ತಿರಸ್ಕರಿಸಿದ ಅಂಚೆ ಮತಗಳು279 ಇವುಗಳ ಎಣಿಕೆ ಐ,ಡಿ,ಎಸ್,ಜಿ ಕಾಲೇಜ್ ನಲ್ಲಿ ನಡೆಯಿತು.ಬಹುತೇಕ ಮತಗಳ ಎಣಿಕೆ ಕಾರ್ಯ ಮುಗಿಯುತ್ತಿದ್ದು ,ಈಗಾಗಲೇ 200 ಮತಗಳ ಎಣಿಕೆ ಮುಗಿದಿದ್ದು ಮೂರು ಮತಗಳು ಮಾತ್ರ ಸಿಂಧು ಆಗಿದ್ದು ಕಾಂಗ್ರೆಸ್ ನ ಟಿ.ಡಿ.ರಾಜೇಗೌಡರು ನಗುವಿನ ಆಲೆಯಲ್ಲಿ ತೆಲುವುದು ಖಚಿತ ಎನ್ನಲಾಗಿದೆ.
ಜೀವರಾಜ್ ಹಾರಾಡಿ,ಚೀರಾಡಿದ್ದೇ ಬಾಕಿ. ಕೊತ,ಕೊತ ಕುದಿಯುತ್ತಿದ್ದ ಶೃಂಗೇರಿ ಮರು ಮತ ಎಣಿಕೆ ಎಳ್ಳು ನೀರು ಬಿಟ್ಟಂತೆ ಆಗಿದೆ. ಅನುಮಾನಕ್ಕೆ ಔಷದಿ
Rajegowda Kila-Kila-Jeevaraj Busu-Busu
Leave a comment