Home Latest News ಅಧಿಕಾರ ವಿಕೇಂದ್ರಿಕರಣ ಪಾಲನೆ ಆಗ್ತಿದೆಯಾ : ಶಾಲಾ ಕಾಲೇಜಿನಲ್ಲೂ ರಾಜಕೀಯ ನಡೀತಿದ್ಯಾ
Latest News

ಅಧಿಕಾರ ವಿಕೇಂದ್ರಿಕರಣ ಪಾಲನೆ ಆಗ್ತಿದೆಯಾ : ಶಾಲಾ ಕಾಲೇಜಿನಲ್ಲೂ ರಾಜಕೀಯ ನಡೀತಿದ್ಯಾ

Share
Share

ಚಿಕ್ಕಮಗಳೂರು : ಅಧಿಕಾರ ವಿಕೇಂದ್ರೀಕರಣ ಎಂದು ಬೊಗಳೆ ಬಿಡುವ ಜನಪ್ರತಿನಿಧಿಗಳು ಎಲ್ಲಾ ಅಧಿಕಾರಕ್ಕೆ ಕೊಡಲಿ ಏಟು ಹಾಕುವುದರಲ್ಲಿ ಎಕ್ಸ್ ಫರ್ಟ್ ಆಗಿದ್ದಾರೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ವಿಕೇಂದ್ರೀಕರಣಕ್ಕೆ ಒತ್ತು ಕೊಟ್ಟು ಸ್ಥಳೀಯ ಆಡಳಿತ ಅಂದರೆ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯಿತಿ ಮತ್ತು ಶಾಲಾ ಆಡಳಿತ ಮಂಡಳಿ ರಚನೆ ಮಾಡಿಲಾಗಿದೆ. ಆದರೆ ಐದಾರು ವರ್ಷಗಳ ಕಾಲ ಮಾತ್ರ ಯಶಸ್ವಿ ಆಡಳಿತ ನಡೆದಿದ್ದು ಬಿಟ್ಟರೆ ಸ್ಥಳೀಯ ಆಡಳಿತಕ್ಕೆ ಕತ್ತರಿ ಜೊತೆಗೆ ಕೊಡಲಿ ಪೆಟ್ಟು ಕೊಡುತ್ತಾ ಬಂದವರು ಮುಖ್ಯವಾಗಿ ಶಾಸಕರುಗಳು.

ಸ್ಥಳೀಯ ಆಡಳಿತದ ಒಂದೊಂದು ಇಲಾಖೆಯನ್ನು ತಮ್ಮ ಕೈಗೆ ಪಡೆಯುತ್ತಾ ಬಂದಿದ್ದು ಶಾಸಕರುಗಳನ್ನು ಮೆಚ್ಚಿಸಲು ಅಧಿಕಾರಿಗಳು ಸಹಕರಿಸುತ್ತಾ ಬಂದಿರುವ ಫಲವೇ ಸ್ಥಳೀಯ ಆಡಳಿತ ಕೊನೆಗಾಣಿಸುವ ಕೋಮಾ ವ್ಯವಸ್ಥೆಗೆ ಬಂದು ನಿಂತಿದೆ. ಕಳೆದ ನಾಲ್ಕು ವರ್ಷಗಳಿಂದ ಜಿ,ಪಂ. ತಾ,ಪಂ ಚುನಾವಣೆ ನಡೆಸದೆ ಕಾಲ ಮುಂದೂಡತ್ತಾ ಬಂದಿದ್ದಾರೆ.

ಚಿಕ್ಕಮಗಳೂರು ಸರ್ಕಾರಿ ಜೂನಿಯರ್ ಕಾಲೇಜ್ ನಲ್ಲಿ ಮೊನ್ನೆ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಬೇಕಾದ್ದು ಎಸ್.ಡಿ.ಎಂ.ಸಿ ಅಧ್ಯಕ್ಷರು ಆದರೆ ಶಾಸಕರನ್ನು ಮೆಚ್ಚಿಸಲು ಕಾಲೇಜು ಸಿಬ್ಬಂದಿ ವರ್ಗ ಶಾಸಕರಾದ ತಮ್ಮಯ್ಯ ರವರಿಂದ ಧ್ವಜಾರೋಹಣ ಮಾಡಿಸಿ ಅಧ್ಯಕ್ಷರನ್ನು ಕಡೆಗಾಣಿಸಿದ್ದು ಅಧಿಕಾರದ ಹಪಹಪಿ ಎಷ್ಟು ಎನ್ನುವುದಕ್ಕಿಂತ ಸ್ಥಳೀಯ ಆಡಳಿತಕ್ಕೆ ಕೊನೆಗಾಣಿಸುತ್ತಿದ್ದಾರೆ. ಆದರೆ ಕಾನೂನು ಬೇರೆ ಹೇಳುವುದೇನೆಂದರೆ ಶಿಕ್ಷಣ ಹಕ್ಕು ಕಾಯ್ದೆ 2009 ರ ಪ್ರತಿಯೊಂದು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವುದು ಹಾಗೂ ಧ್ವಜಾರೋಹಣವನ್ನು ನೆರವೇರಿಸಬೇಕು, ಯಾವುದೇ ಶಾಲೆಗಳಲ್ಲಿ ಎಸ್ ಡಿ ಎಂಸಿ ಅಧ್ಯಕ್ಷರಿಗೆ ಧ್ವಜಾರೋಹಣ ಮಾಡಲು ಅವಕಾಶ ನೀಡದೆ ಇದ್ದಲ್ಲಿ ಪ್ರತಿಯೊಬ್ಬರು ಸಮನ್ವಯ ಕೇಂದ್ರ ವೇದಿಕೆಗೆ ಮಾಹಿತಿ ನೀಡಿ,
ಅವಕಾಶ ನೀಡದ ಮುಖ್ಯ ಶಿಕ್ಷಕರ ವಿರುದ್ಧ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಶಿಕ್ಷಣ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿ ದವರ ವಿರುದ್ಧ ಸೂಕ್ತ ಕ್ರಮಕ್ಕಾಗಿ ದೂರನ್ನು ನೀಡಿ ಕಾನೂನು ಕ್ರಮಕ್ಕೆ ವೇದಿಕೆ ಕ್ರಮ ಕೈಗೊಳ್ಳಲಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಸ್ವಚ್ಛ ಪರಿಸರ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ

ಚಿಕ್ಕಮಗಳೂರು: ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಸ್ವಚ್ಛ ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ...

ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಹಿರೇಕೊಳಲೆ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು...

ಯುವಜನತೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ...

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ...