Home namma chikmagalur ನಯನ ಕಮಲಮ್ಮನ ಘಾಟ್ ಪ್ರಗತಿಪರರ ಚಾಟಿ ಏಟು ?
namma chikmagalurchikamagalurHomeLatest News

ನಯನ ಕಮಲಮ್ಮನ ಘಾಟ್ ಪ್ರಗತಿಪರರ ಚಾಟಿ ಏಟು ?

Share
Share

ಚಿಕ್ಕಮಗಳೂರು: ನಯನಮೋಟಮ್ಮ ನಯನ ಕಮಲಮ್ಮ ಆಗುವುದು ಬಹುತೇಕ ಖಚಿತ ಎನ್ನುವಂತೆ ಮಾತನಾಡುತ್ತಿದ್ದಾರೆ.ಬದಲಾವಣೆ ಆಗುವ ಸಮಯ ಬಂದಾಗ ನೋಡುವ ಎಂದರೆ ತಾಯಿ ಮೋಟಮ್ಮ ಕಾಂಗ್ರೆಸ್ ಬಿಡ ಬೇಡ ಎನ್ನುತ್ತಿದ್ದಾರೆ ಎಂದರೆ ಏನೋ ಗುಸು,ಗುಸು ನಡೆಯುತ್ತಿದೆ ಎಂದು ಅಂದಾಜಿಸಲಾಗಿದೆ. ಗುರುವಿನ ತಂತ್ರ ಪ್ರಯೋಗ ಮಾಡುತ್ತಿರಬಹುದು ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ.

ಪ್ರಗತಿಪರರು ಸಿಡಿದು ಬೀಳುತ್ತಿದ್ದಾರೆ .ಗಾಂಧಿ ಪ್ರತಿಮೆ ಮುಂದೆ ಪಶ್ಚಾತ್ತಾಪ ಪ್ರತಿಭಟನೆ ನಡೆಸಿ ಕೆಂಡ ಕಾರಿದ್ದಾರೆ. ರೈತ ಸಂಘ,ದಲಿತ ಸಂಘಟನೆಗಳು, ಎಸ್.ಡಿ.ಪಿ.ಐ. ಮತ್ತು ಕಾಂಗ್ರೆಸ್ ಕೆಲವು ಮುಖಂಡರು ಭಾಗವಹಿಸಿದ್ದರು.

ಕ್ರಿಮಿನಲ್ ಪ್ರಮೋದ್ ಮುತಾಲಿಕ್ ಜೊತೆಗೆ ವೇದಿಕೆ ಹಂಚಿಕೊಂಡ ಬಗ್ಗೆ ನಯನ ನಡೆ ಜೊತೆಗೆ ಅವರ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ನ ವಕ್ತಾರ ದೇವರಾಜ್, ಮರಗುಂದ ಪ್ರಸನ್ನ ಭರತ್ ರೈತ ಸಂಘದ ಗುರುಶಾಂತಪ್ಪ ಮತ್ತು ಜಿಲ್ಲಾ ಅಧ್ಯಕ್ಷ ಮಹೇಶ್ ಗುಡುಗಿದರು.ಮರ್ಲೆ ಅಣ್ಣಯ್ಯ,ಸಿ.ಪಿ.ಎಂ.ಎಲ್.ರುದ್ರಯ್ಯ .ಎಸ್.ಡಿ.ಪಿ.ಐ ಅಂಗಡಿ ಚಂದ್ರು ನಯನ ನಡೆಯನ್ನು ಜಾಲಾಡಿದರು ಬಿಜೆಪಿ ಉಗ್ರ ಹಿಂದುತ್ವ ಕಾಂಗ್ರೆಸ್ ಸಾಮಾನ್ಯ ಹಿಂದುತ್ವದ ದಾರಿಯಲ್ಲಿ ನಡೆಯುತ್ತಿವೆ.ಇವುಗಳನ್ನು ಬಗ್ಗು ಬಡೆಯದಿದ್ದರೆ ಮುಂದೆ ಅನಾಹುತ ಖಚಿತ.

ಪಶ್ಚಾತ್ತಾಪ ಸಾಲದು ಹೋರಾಟ ರೂಪಿಸಲು ಕರೆ ನೀಡಿದರು ಇದರಿಂದಾಗಿ ಸದ್ಯಕ್ಕೆ ಈ ರಗಳೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ನಯನ ಕಮಲಮ್ಮ ನಡೆ ಮಾತ್ರ ಕಮಲದ ಕಡೆ ಇರುವುದು ನಿಗೂಢವಾಗಿದೆ ಎಂದು ಹೋರಾಟಗಾರರ ಅನಿಸಿಕೆ ಮುಂದೆ ದಾರಿ ಯಾವುದಯ್ಯಾ ಎಂದು ಕಾರ್ಯಕರ್ತರ ಅಳಲು.

Nayana Kamalamma’s Ghat a whipping by progressives?

Share

Leave a comment

Leave a Reply

Your email address will not be published. Required fields are marked *

Don't Miss

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು ಜಾನುವಾರುಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಘಟನೆ ನರಸಿಂಹರಾಜಪುರ ತಾಲೂಕಿನ ಗದ್ದೆಮನೆ ಕಾನೂರು ಗ್ರಾಮದಲ್ಲಿ ನಡೆದಿದೆ....

ಜಿಲ್ಲೆಯಲ್ಲಿ ಮಂತ್ರಿಯಾಗಲಿಲ್ಲ ರಗಳೆ ಬಿಟ್ಟಿಲ್ಲ

ಚಿಕ್ಕಮಗಳೂರು; ಮದುವೆ ಆಗಲಿಲ್ಲ, ಹುಚ್ಚು ಬಿಡಲಿಲ್ಲ ಎಂಬ ಸ್ಥಿತಿ ಮಂತ್ರಿ ಆಗಲಿಲ್ಲ, ಓಡಾಡುವುದು ತಪ್ಪಲಿಲ್ಲ.ಎಂಬ ದುಸ್ಥಿತಿ ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳದ್ದು. ಜಿಲ್ಲೆಗೆ ಯಾವುದೇ ಕಾರಣಕ್ಕೂ ಮಂತ್ರಿಗಿರಿ ಸಿಗುವುದಿಲ್ಲ ಎಂಬುದಕ್ಕೆ ಕಾರಣ ನೀಡಿ...

Related Articles

ಪ್ರತ್ಯೇಕ ಭೀಕರ ರಸ್ತೆ ಅಪಘಾತ-9 ಕ್ಕೂ ಹೆಚ್ಚು ಮಂದಿ ಗಾಯ

ಚಿಕ್ಕಮಗಳೂರು:  ಜಿಲ್ಲೆಯ ವಿವಿಧೆಡೆ ಸಂಭವಿಸಿದ ಮೂರು ಪ್ರತ್ಯೇಕ ಭೀಕರ ರಸ್ತೆ ಅಪಘಾತಗಳಲ್ಲಿ ಶಾಲಾ ವಿದ್ಯಾರ್ಥಿನಿ ಹಾಗೂ...

ಆಗಸ್ಟ್ 21ರಿಂದ 25ರವರೆಗೆ ವಿಶ್ವ ಬಂಧುತ್ವದ ರಕ್ತದಾನ ಮಹಾ ಅಭಿಯಾನ

ಚಿಕ್ಕಮಗಳೂರು: ಬ್ರಹ್ಮಾಕುಮಾರೀಸ್ ಸಂಸ್ಥೆಯ ಪೂರ್ವ ಮುಖ್ಯ ಆಡಳಿತಾಧಿಕಾರಿಣಿ ರಾಜಯೋಗಿನಿ ಡಾ. ದಾದೀ ಪ್ರಕಾಶಮಣೀಜೀಯವರ 19ನೇ ಪುಣ್ಯಸ್ಮೃತಿ...

ಆಗಸ್ಟ್ 25ರಂದು ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಚಿಕ್ಕಮಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 25ರಂದು ರಾಜ್ಯದ...

ಸೆಪ್ಟೆಂಬರ್ 10ಕ್ಕೆ ಟಿ.ಡಿ. ರಾಜೇಗೌಡ-ಡಿ.ಎನ್. ಜೀವರಾಜ್ ಅಂತಿಮ ವಿಚಾರಣೆ

ಚಿಕ್ಕಮಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ...