Home namma chikmagalur chikamagalur ಮಾಯಾಂಗನೆಯರ ಜಾಲ- ಮತ್ತು ಮಠ ಮಾಂತ್ರಿಕ ಕಾಟ- ಮಿಥುನ್ ವಿಲ,ವಿಲ ?
chikamagalurHomeLatest Newsnamma chikmagalur

ಮಾಯಾಂಗನೆಯರ ಜಾಲ- ಮತ್ತು ಮಠ ಮಾಂತ್ರಿಕ ಕಾಟ- ಮಿಥುನ್ ವಿಲ,ವಿಲ ?

Share
Share

ಚಿಕ್ಕಮಗಳೂರು: “ನಕಲಿ” ಐ.ಎ.ಎಸ್ ಮಿಥುನ್ ಪೊಲೀಸರ ಬಲೆಯಲ್ಲಿ ವಿಲ,ವಿಲ, ಎನ್ನಲು ಮಾಯಾಂಗನೆಯರ ಜಾಲದ ಜೊತೆಗೆ ಮಠಧೀಶರ ಕಾಟ ಕಾರಣ ಎಂದು ಬಲ್ಲ ಮೂಲಗಳು ಹೇಳುತ್ತಿವೆ.ಮೇಘನ, ಸುಮಿತ್ರಾ ಯಾರು ಎಂಬ ಪ್ರಶ್ನೆ ಜೊತೆಗೆ ಜಿಲ್ಲೆಯ ಅವಧೂತ ವಿನಯವಂತನ ಜೊತೆ ಹೆಸರಾಂತ ಮಠದ ಸ್ವಾಮೀಜಿ ಹೆಸರು ಕೇಳಿ ಬರುತ್ತಿವೆ.

ಶಾಸಕ ತಮ್ಮಯ್ಯರ ಜೊತೆಗೆ ಬೆಳಗಾವಿ ಅಧಿವೇಶನದಲ್ಲಿ ಲಾಂಜ್ ನಲ್ಲಿ ಕುಳಿತು ಊಟ ಮಾಡಿದ ಪೋಟೋ ವೈರಲ್ ಮಾಡಿ ದಂಧೆ ಆರಂಭ ಮಾಡಿದವನು ಹಲವರಿಗೆ ವಂಚಿಸಿರುವ ಮಾಹಿತಿಗಳು ದಿನ ನಿತ್ಯ ಕೇಳಿ ಬರುತ್ತಿರುವುದು ಮಾತ್ರ ಅನುಮಾನಕ್ಕೆ ಕಾರಣವಾಗಿದೆ..

ಮಿಥುನ್ ಚಿಕ್ಕಮಗಳೂರಿನ ಮಲ್ಲೇಗೌಡ ಜನರಲ್ ಆಸ್ಪತ್ರೆಯನ್ನು ತನ್ನ ಕಾರ್ಯಸ್ಥಾನ ಮಾಡಿಕೊಂಡಿರುವುದು ಮತ್ತೆ ಅಲ್ಲಿಯೇ ಕುಳಿತು ಹಣ ಮಾಡುವುದರ ಬಗ್ಗೆ ಸ್ಕೆಚ್ ರೂಪಿಸಿರುವುದರ ಜೊತೆಗೆ ಹಲವರ ಜೊತೆಗೆ ಖಾಸಗಿ ಕ್ಷಣಗಳನ್ನು ಕಳೆದಿರುವುದು ರೋಚಕವಾಗಿದೆ ಇದು ಹಲವಾರು ಸಿಬ್ಬಂದಿಗೆ ಗೊತ್ತಿದೆ ಆದರೆ ಈ ಬಗ್ಗೆ ಮಾಹಿತಿ ಇತ್ತೀಚೆಗೆ ಹೊರಬರುತ್ತಿವೆ.ನರ್ಸ್ ಒಬ್ಬಳ ಮೂಲಕ ಆಸ್ಪತ್ರೆಗೆ ಎಂಟ್ರಿ ಕೊಟ್ಟವನು ಜಿಲ್ಲಾ ಸರ್ಜನ್ ಮೂಲಕ ಹಲವರಿಗೆ ಪರಿಚಯವಾಗಿದೆ.

ಅದರಲ್ಲೂ ಕ್ಷೇತ್ರದ ಶಾಸಕ ತಮ್ಮಯ್ಯರಿಗೆ ಪರಿಚಯವಾಗಿದ್ದು ಅವನ ಕಾರ್ಯ ಚಟುವಟಿಕೆಗಳಿಗೆ ಹಾದಿ ಮಾಡಿಕೊಟ್ಟಿದೆ. ಬಡ ಹುಡುಗನೊಬ್ಬ ಜಿಲ್ಲೆಯಲ್ಲಿ ಐ.ಎ.ಎಸ್ ಪಾಸ್ ಮಾಡಿದ್ದಾನಲ್ಲ ಎಂದು ಸ್ವಲ್ಪ ಉದಾರತೆ ತೋರಿದ್ದೇ ಈಗ ಕೈ,ಕೈ ಹಿಸುಕಿ ಕೊಳ್ಳವಂತೆ ಆಗಿದೆ ಎಂದು ಹೇಳಲಾಗುತ್ತಿದೆ.ಇದಲ್ಲದೆ ಒಮ್ಮೆ ಮೂರ ಲಕ್ಷ ಹಣ ಪಡೆದು ವಾಪಸ್ಸು ಕೊಟ್ಟಿದ್ದಾನೆ.ನೆಕ್ಸ್ಟ್ ಮತ್ತೊಮ್ಮೆ ಡಬಲ್ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ .

ಇದರ ಜೊತೆಗೆ ಪಟ್ಟಣ ಸಹಕಾರ ಬ್ಯಾಂಕ್ ನಲ್ಲಿ ಹತ್ತು ಲಕ್ಷ ವೈಯಕ್ತಿಕ ಸಾಲ ಮಂಜೂರು ಮಾಡಿಸಲು ಬ್ಯಾಂಕ್ ಗೆ ಹೋಗಿ ಬಂದಿದ್ದಾನೆ. ನಂತರ ಹತ್ತಿರದ ಸಂಬಂಧಿಗೆ ಶಾಸಕರ ಮೂಲಕ ಹದಿನೈದು ಲಕ್ಷಕ್ಕೂ ಹೆಚ್ಚು ಸಾಲ ಮಂಜೂರು ಮಾಡಿಸಲಾಗಿದೆ.ಸಾಲಕ್ಕೆ ಬೇಕಾದ ದಾಖಲೆಗಳನ್ನು ಒದಗಿಸಲಾಗಿದೆ. ಮಧು,ಪಾಲಾಕ್ಷ ಮತ್ತಿತರರಿಗೆ ಮೆಡಿಕಲ್ ಸಪ್ಲೈಗೆ ಅಮಿಷ ಒಡ್ಡಿದ್ದಾನೆ.ಇವರಲ್ಲದೆ ಹಲವು ವೈದ್ಯರಿಗೆ ಗಾಳ ಹಾಕಿ ಹಣ ಕಿತ್ತುಕೊಂಡಿದ್ದಾನೆ.ಇದರ ಜೊತೆಗೆ ನನ್ನ ಬಳಿ ಕೋಟ್ಯಾಂತರ ಹಣ ಇದೆ ಅದನ್ನು ಬ್ಯಾಂಕ್ ಗೆ ವರ್ಗಾಯಿಸುತ್ತೇನೆ ಎಂದು ಸುಳ್ಳು, ಸುಳ್ಳು ಹೇಳಿರುವುದು ಕೂಡ ಹರಿದಾಡುತ್ತಿದೆ.

ಒಳ್ಳೆಯ ಕಲಾವಿದರನ್ನು ಮೀರಿಸುವ ಬುದ್ದಿವಂತಿಕೆ ವಿಲನ್ ಗಳ ರೀತಿಯಲ್ಲಿ ಸುಳ್ಳು, ಸುಳ್ಳು ಹೇಳಿ ಎತ್ತಿ ಕಟ್ಟುವುದರಲ್ಲಿ ನಿಸ್ಸೀಮನಾಗಿದ್ದ ಮಿಥುನ್ ನಡವಳಿಕೆಗಳ ಬಗ್ಗೆ ಸಾಮಾನ್ಯ ನಾಲ್ಕನೇ ದರ್ಜೆಯ ನೌಕರರಿಗೆ ಗೊತ್ತಿದ್ದರೂ ಜಿಲ್ಲಾ ಸರ್ಜನ್ ಆಗಿದ್ದ ಚಂದ್ರಶೇಖರ್ ಗಮನಕ್ಕೆ ಬಾರದಿರುವುದು ಆಶ್ಚರ್ಯ.ಮಿಥುನ್ ಗೋವ,ದೆಹಲಿ,ಮಸ್ಸೂರಿ ಯಾರ ಯರ ಜೊತೆಗೆ ಹೋಗಿದ್ದ ಅಲ್ಲಿ ನಡೆದಿರುವ ಬಾನಗಡಿ ಏನು? ಹಣ ಕಳೆದುಕೊಂಡವರು ಬಾಯಿ,ಬಾಯಿ ಬಡೆದುಕೊಂಡರೆ ಸದ್ಯ ಬಚಾವ್ ಆದ್ವಲ್ಲಾ ಎಂದು ಕೆಲವರು ನಿಟ್ಟುಸಿರು ಬಿಡುತ್ತಿದ್ದಾರೆ.ಕೊಟ್ಟವನು ಕೊಡಂಗಿ ಇಸುಕೊಂಡವನು ವೀರಭದ್ರ ಎಂಬ ಗಾದೆ ನೆನಪಾಗುತ್ತಿದೆ.

ಬಿಜೆಪಿಯವರು ಬೆನ್ನುಬಿದ್ದಿದ್ದಾರೆ.ಲೀಸಾ ಫೌಂಡೇಶನ್ ನವರು ಜಾಲಾಡುತ್ತಿದ್ದಾರೆ.ಇದರ ಮಧ್ಯೆ ಬೆಂಗಳೂರಿನಲ್ಲಿ ದೂರು ದಾಖಲಾಗಿರುವುದು ಏಕೆ. ಕೊಡುವುದು ,ತೆಗೆದು ಕೊಂಡಿರುವುದು ಚಿಕ್ಕಮಗಳೂರಿನಲ್ಲಿ ಹೀಗಾಗಿ ಕೇಸ್ ನ ಬಗ್ಗೆ ವಕೀಲರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

Mithun, is it okay?

Share

Leave a comment

Leave a Reply

Your email address will not be published. Required fields are marked *

Don't Miss

ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರ ಸಾವು

ಚಿಕ್ಕಮಗಳೂರು: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೂಡಿಗೆರೆ ಠಾಣಾ ವ್ಯಾಪ್ತಿಯ ಕುನ್ನಳ್ಳಿ ಗ್ರಾಮದ ವಿನೋದ್ (28) ಅವರು ಕೂಲಿ...

ಕಾಂಗ್ರೆಸ್ ನಗರಸಭಾ ಸದಸ್ಯನಿಂದ ಸ್ಥಳೀಯ ನಿವಾಸಿ ಮೇಲೆ ಹಲ್ಲೆ

ಚಿಕ್ಕಮಗಳೂರು : ಕಾಫಿನಾಡಿನ ಕಾಂಗ್ರೆಸ್ ನಗರಸಭಾ ಸದಸ್ಯ ಸಾರ್ವಜನಿಕವಾಗಿ ದರ್ಪ ಮೆರೆದ ಘಟನೆ ವರದಿಯಾಗಿದೆ. ನಗರಸಭೆಯ 34ನೇ ವಾರ್ಡಿನ ಸದಸ್ಯ ಲಕ್ಷ್ಮಣ್ ಸ್ಥಳೀಯ ನಿವಾಸಿ ಚಂದ್ರಶೇಖರ್ ಎಂಬುವವರ ಮೇಲೆ ಬಡಿಗೆಯಿಂದ ಹಲ್ಲೆ...

Related Articles

ಜಾತ್ಯತೀತ ಜನತಾದಳ ಸಿದ್ದಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ

ಚಿಕ್ಕಮಗಳೂರು : ಜಾತ್ಯತೀತ ಜನತಾದಳ ಅನ್ನುವುದು ಅದರ ಘೋಷ ವಾಕ್ಯದಲ್ಲೇ ಇದೆ. ನಮ್ಮ ಸಿದ್ದಾಂತದಲ್ಲಿ ಯಾವುದೇ...

ಮೀನು ಹಿಡಿಯಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲು

ಚಿಕ್ಕಮಗಳೂರು: ಮೀನು ಹಿಡಿಯಲು ಹೋಗಿದ್ದ ಇಬ್ಬರು ಯುವಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಚಿಕ್ಕಮಗಳೂರು ತಾಲೂಕಿನ...

ಅಜ್ಜಂಪುರ ತಾಲೂಕಿನ ಆಸಂಧಿ ಗ್ರಾಮದಲ್ಲಿ ರೈತರೊಬ್ಬರ ಎತ್ತಿನ ಗಾಡಿ ಕಳ್ಳತನ

ಅಜ್ಜಂಪುರ: ರೈತರೊಬ್ಬರ ಎತ್ತಿನ ಗಾಡಿ ಕಳ್ಳತನವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಆಸಂಧಿ ಗ್ರಾಮದಲ್ಲಿ...

ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ

ಶೃಂಗೇರಿ: ತಾಲೂಕಿನ ಕಿಗ್ಗಾ ಸಮೀಪದ ಯಡದಳ್ಳಿ ಗ್ರಾಮದ ಕೊಚ್ಚಾರಿನಲ್ಲಿರುವ ಐತಿಹಾಸಿಕ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ...