Home namma chikmagalur chikamagalur ನಕಲಿ ಐಎಎಸ್ ಅಧಿಕಾರಿ ಮಿಥುನ್ ನಿಂದ ವಕೀಲರಿಗೆ ವಂಚನೆ
chikamagalurHomeLatest Newsnamma chikmagalur

ನಕಲಿ ಐಎಎಸ್ ಅಧಿಕಾರಿ ಮಿಥುನ್ ನಿಂದ ವಕೀಲರಿಗೆ ವಂಚನೆ

Share
Share

ಚಿಕ್ಕಮಗಳೂರು: ಕಾಫಿನಾಡಿನ ಮೆಡಿಕಲ್ ಮಾಲೀಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ನಕಲಿ ಐಎಎಸ್ ಅಧಿಕಾರಿ ಮಿಥುನ್ ವಂಚನೆಯ ಒಂದೊಂದೇ ಕರಾಳ ಮುಖಗಳು ಈಗ ಬಯಲಾಗುತ್ತಿವೆ. ಕೇವಲ ಉದ್ಯಮಿಗಳನ್ನಷ್ಟೇ ಅಲ್ಲದೆ, ಕಾನೂನು ಅರಿವಿರುವ ವಕೀಲರನ್ನೂ ಈತ ತನ್ನ ಮಾತುಗಳಿಂದ ಬುಟ್ಟಿಗೆ ಹಾಕಿಕೊಂಡಿರುವುದು ಈಗ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಿವಾಸಿ ಹಾಗೂ ಹಿರಿಯ ವಕೀಲ ಸುನಿಲ್ ಕುಮಾರ್ ಅವರಿಗೆ ಐದು ತಿಂಗಳ ಹಿಂದೆ ಮೇಘನ ಎಂಬಾಕೆ ಪರಿಚಯವಾಗಿದ್ದರು. ಸಿವಿಲ್ ಪ್ರಕರಣವೊಂದರ ಸಂಬಂಧ ವಕೀಲರ ಕಚೇರಿಗೆ ಬಂದಿದ್ದ ಮೇಘನ, ತನ್ನ ಜೊತೆಯಲ್ಲಿ ಮಿಥುನ್ ಸಿ.ಆರ್. ಎಂಬಾತನನ್ನು ಕರೆತಂದಿದ್ದರು. ಈತ ಐಎಎಸ್ ಅಧಿಕಾರಿಯಾಗಿ ನೇಮಕಗೊಂಡಿದ್ದಾನೆ ಎಂದು ಸುಳ್ಳು ಹೇಳಿ ಪರಿಚಯಿಸಿದ್ದರು.

ತಾನು ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ನಂಬಿಸಲು ಮಿಥುನ್ ಅತ್ಯಂತ ಚಾಣಾಕ್ಷತನ ಪ್ರದರ್ಶಿಸಿದ್ದ. ವಕೀಲರ ಮುಂದೆ ನಕಲಿ ಐಡಿ ಕಾರ್ಡ್‌ಗಳು, ಸುಳ್ಳು ಸ್ಯಾಲರಿ ಸರ್ಟಿಫಿಕೇಟ್‌ಗಳು ಹಾಗೂ ತರಬೇತಿಗೆ ಹಾಜರಾಗುವಂತೆ ಸರ್ಕಾರದಿಂದ ಬಂದಿರುವಂತೆ ಸೃಷ್ಟಿಸಲಾಗಿದ್ದ ನಕಲಿ ಪತ್ರಗಳನ್ನು ತೋರಿಸಿ ವಿಶ್ವಾಸ ಗಳಿಸಿದ್ದ.

ಇದನ್ನೇ ಬಂಡವಾಳ ಮಾಡಿಕೊಂಡು ಮನೆ ಕಟ್ಟುವ ನೆಪ ಹಾಗೂ ತುರ್ತು ಆರ್ಥಿಕ ಅಗತ್ಯಗಳ ಹೆಸರಿನಲ್ಲಿ ಮಿಥುನ್ ಮತ್ತು ಮೇಘನ ಜೋಡಿ ವಕೀಲ ಸುನಿಲ್ ಕುಮಾರ್ ಅವರಿಂದ ಹಂತ ಹಂತವಾಗಿ 3,35,000 ರೂಪಾಯಿ ಹಣ ಪಡೆದಿದ್ದರು.

ಅಷ್ಟೇ ಅಲ್ಲದೆ, ವಕೀಲರ ಮೂಲಕ ಅವರ ಸ್ನೇಹಿತರಿಂದಲೂ ಸುಮಾರು 65 ಸಾವಿರ ರೂಪಾಯಿಗಳನ್ನು ಕೊಡಿಸಿ ವಂಚಿಸಿದ್ದರು. ಕಳೆದ ತಿಂಗಳು ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಥುನ್ ನಕಲಿ ಐಎಎಸ್ ಅಧಿಕಾರಿ ಎಂಬ ಕಾರಣಕ್ಕೆ ಸಿಕ್ಕಿಬಿದ್ದಾಗ ಆತನ ಅಸಲಿ ಬಣ್ಣ ಬಯಲಾಗಿದೆ.

ಸದ್ಯ ವಕೀಲರ ದೂರಿನ ಮೇರೆಗೆ ಮೇಘನ ಹಾಗೂ ಮಿಥುನ್ ಸಿ.ಆರ್ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Lawyers cheated by fake IAS officer Mithun Chakraborty

Share

Leave a comment

Leave a Reply

Your email address will not be published. Required fields are marked *

Don't Miss

ನಾಗರಿಕ ವೇದಿಕೆಯಿಂದ ಪ್ರತಿಭಟನೆ ಖಂಡನೆ

ತರೀಕೆರೆ: ಸಂವಿಧಾನ ಸಾರ್ವಜನಿಕರು ಆರೋಗ್ಯಕರವಾಗಿ ಪ್ರತಿಭಟಿಸಲು ಅವಕಾಶ ಕಲ್ಪಿಸಿದೆ. ಆದರೆ ಅದನ್ನು ದುರ್ಬಳಕೆ ಮಾಡಿಕೊಂಡು ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ಯವರು ನಾಗರೀಕ ವೇದಿಕೆ ಅಡಿಯಲ್ಲಿ ಶಾಸಕ ಜಿ.ಎಚ್. ಶ್ರೀನಿವಾಸ್...

ಅಂಬೇಡ್ಕರ್ ಜಯಂತಿಗೆ ಅಡ್ಡಿ : ಆರೋಪಿಗಳ ಬಂಧನಕ್ಕೆ ಪ್ರತಿಭಟನೆ

ಚಿಕ್ಕಮಗಳೂರು:  ಅಂಬೇಡ್ಕರ್ ಜಯಂತಿಗೆ ಅಡ್ಡಿಪಡಿಸಿರುವ ಆರೋಪಿಗಳನ್ನು ಬಂಧನಕ್ಕೆ ಒಳಪಡಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರುಗಳು ನಗರದ ಆಜಾ ದ್‌ಪಾರ್ಕ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಈ...

Related Articles

ಮಕ್ಕಳಿಗೆ ಶಿಕ್ಷಣ ನೀಡಿ ಬದುಕನ್ನು ಹಸನಾಗಿಸಬೇಕು

ಚಿಕ್ಕಮಗಳೂರು : ಕೃಷಿಕರು, ಮಕ್ಕಳಿಗೆ ಶಿಕ್ಷಣ ನೀಡಿ ಅವರ ಬದುಕನ್ನು ಹಸನಾಗಿಸಬೇಕು ಎಂದು ಶಾಸಕ ಹೆಚ್.ಡಿ....

ಮಂತ್ರ ಮಾಂಗಲ್ಯದಲ್ಲಿ 10 ಜೋಡಿಗಳ ಸರಳ ಸಾಮೂಹಿಕ ವಿವಾಹ

ಮೂಡಿಗೆರೆ: ಈ ಜಗತ್ತಿನ ಸೃಷ್ಟಿ ಸರಿಯಾಗಿಯೇ ಇದೆ. ಆದರೆ ನಾವು ನೋಡುವ ದೃಷ್ಟಿ ಸರಿಯಾಗಿಲ್ಲ. ಇದರಿಂದ...

ಸೇವಾ ನ್ಯೂನತೆ ದುರಸ್ತಿಪಡಿಸುವಂತೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ತೀರ್ಪು

ಚಿಕ್ಕಮಗಳೂರು: ಆಸ್ಪತ್ರೆಗೆ ರೋಗಿಗಳ ಅನುಕೂಲಕ್ಕಾಗಿ ಸಂಸ್ಥೆಯೊಂದರಿಂದ ಖರೀದಿಸಿದ ನೀರು ಪೂರೈಕೆಯ ಯಂತ್ರ ಕೈಕೊಟ್ಟಾಗ ದುರಸ್ತಿಗೆ ಮುಂದಾಗದೆ...

ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕೋಟ್ಯಂತರ ರೂಪಾಯಿ ವಂಚನೆ

ಚಿಕ್ಕಮಗಳೂರು: ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೋಟ್ಯಂತರ ರೂಪಾಯಿ ವಂಚನೆ ನಡೆದಿರುವ ಬಗ್ಗೆ ನಗರ ಪೊಲೀಸ್...