Home Latest News ಖಾಸಗಿ ಆಸ್ಪತ್ರೆ ಬಳಿ ಹೈ ಟೆನ್ಷನ್ ವಿದ್ಯುತ್ ತಂತಿ : ಜನರಿಗೆ ಟೆನ್ಷನ್ ಟೆನ್ಷನ್
Latest News

ಖಾಸಗಿ ಆಸ್ಪತ್ರೆ ಬಳಿ ಹೈ ಟೆನ್ಷನ್ ವಿದ್ಯುತ್ ತಂತಿ : ಜನರಿಗೆ ಟೆನ್ಷನ್ ಟೆನ್ಷನ್

Share
Share

ಚಿಕ್ಕಮಗಳೂರು : ಎಂತಹ,ಎಂತಹ ಜನರಿದ್ದಾರೆ ಎಂಬುದಕ್ಕೆ ಅಪ್ಪಟ ಉದಾಹರಣೆಯೆಂದರೆ ತರೀಕೆರೆಯ ಗಾಳಿಹಳ್ಳಿ ಕ್ರಾಸ್ ನಲ್ಲಿ ಕಟ್ಟಿರುವ ಸಾಯಿ ಆಸ್ಪತ್ರೆ ಕಟ್ಟಡ ನೋಡಿದರೆ ತಿಳಿಯುತ್ತದೆ.ಶರಾವತಿಯಿಂದ ಬೆಂಗಳೂರಿಗೆ 220 ವಿದ್ಯುತ್ ಹೆಚ್ ,ಟಿ (high tension) ಲೈನ್ ಎಳೆಯಲಾಗಿದೆ.ಇದರ ಅಕ್ಕಪಕ್ಕದಲ್ಲಿ 55 ಅಡಿ ಜಾಗ ಬಿಟ್ಟು ವಾಸ ಮಾಡ ಬೇಕೆಂಬ ಸ್ಪಷ್ಟವಾದ ನಿಯಮವಿದ್ದು ಇದನ್ನು ಉಲ್ಲಂಘಿಸಿ ಲೈನ್ ಪಕ್ಕದಲ್ಲಿ ಬೃಹತ್ ಕಟ್ಟಡ ಕಟ್ಟಿದ್ದು ಇದರ ಬಗ್ಗೆ ಯಾವ ಇಲಾಖೆಯವರು ಕ್ರಮ ತೆಗೆದುಕೊಳ್ಳುವ ಬದಲು ಕೈ ಜೋಡಿಸಿದ್ದಾರೆ.ಅದರಲ್ಲೂ ಇಲ್ಲಿ ಆಸ್ಪತ್ರೆ ನಡೆಯುತ್ತಿರುವುದು ಸೋಜಿಗ .

ಕಟ್ಟಡದ ಮಾಲೀಕ ಕೆ.ಇ.ಬಿಯಿಂದ ವಿದ್ಯುತ್ ಪಡೆಯಲು ಹೋದಾಗ ಇದು ಕಾನೂನು ಬಾಹಿರ ಎಂದು ತಿರಸ್ಕಾರಿಸಿದ್ದಾರೆ.ಇದಕ್ಕೂ ಕೇರ್ ಮಾಡದೆ ಅನಧಿಕೃತವಾಗಿ ವಿದ್ಯುತ್ ಪಡೆದಿದ್ದು ಸ್ಕ್ವಾಡ್ನವರು ಒಮ್ಮೆ ಮಾತ್ರ ಕಾಟಚಾರಕ್ಕೆ ಕ್ರಮಕೈಗೊಂಡು ಅಗಾಗ ಭೇಟಿ ನೀಡಿ ನಗುನಗುತ್ತಾ ಹೊರಗೆ ಬರುವುದು ನೋಡಿದರೆ ಎಲ್ಲಾ ವ್ಯವಹಾರ ಖುಲ್ಲಾ,ಖುಲ್ಲ ನಡೆಯುತ್ತಿದೆ ಎನ್ನಿಸುತ್ತದೆ.

ಆರೋಗ್ಯ ಇಲಾಖೆಯು ಕೂಡ ಇಲಾಖೆಯ ನಿಯಮಗಳನ್ನು ಬದಿಗೊತ್ತಿದೆ ಈ ಬಗ್ಗೆ ಡಿ,ಹೆಚ್,ಒ ಅಶ್ವಥ್ ಬಾಬು ವಿಚಾರಿಸಿದರೆ ರಾಜಕೀಯದವರ ತರಹ ಉತ್ತರ ಕೊಡುತ್ತಾರೆ.
ಅಕಸ್ಮಾತ್ತಾಗಿ ಏನಾದರೂ ಅನಾಹುತ ಸಂಭವಿಸಿದರೆ ಹೊಣೆ ಯಾರದ್ದು ? ಹೀಗೆ ಬಿಟ್ಟರೆ ಹೆಚ್,ಟಿ ಲೈನ್ ನ ಐದು ಅಡಿ ಪಕ್ಕದಲ್ಲಿ ಕಟ್ಟಿರುವುದನ್ನು ನೋಡಿದರೆ ಮುಂದೆ ಸಾಧ್ಯವಾದರೆ ಲೈನ್ ಮೇಲೆ ಕಟ್ಟಡ ಕಟ್ಟಿದರು ಆಶ್ಚರ್ಯವಿಲ್ಲ ಎನ್ನುತ್ತಾರೆ ಜನ.ಪುರಸಭೆಯವರು ಇದರ ಬಗ್ಗೆ ಮೌನವಹಿಸಿದ್ದಾರೆ, ಆರೋಗ್ಯ ಇಲಾಖೆಗೆ ಅನಾರೋಗ್ಯ ಬಾಧಿಸುತ್ತಿರುವಾಗ, ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳ ಬೇಕಾಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಸ್ವಚ್ಛ ಪರಿಸರ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ

ಚಿಕ್ಕಮಗಳೂರು: ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಸ್ವಚ್ಛ ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ...

ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಹಿರೇಕೊಳಲೆ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು...

ಯುವಜನತೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ...

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ...