Home Latest News ಅರಣ್ಯ ಇಲಾಖೆಯ ಬುಲ್ಡೋಜರ್ ನೀತಿ-ಸಂಕಷ್ಟದಲ್ಲಿ ರೈತರು, ಕಾರ್ಮಿಕರು, ಬೆಳೆಗಾರರು
Latest NewschikamagalurHomenamma chikmagalur

ಅರಣ್ಯ ಇಲಾಖೆಯ ಬುಲ್ಡೋಜರ್ ನೀತಿ-ಸಂಕಷ್ಟದಲ್ಲಿ ರೈತರು, ಕಾರ್ಮಿಕರು, ಬೆಳೆಗಾರರು

Share
Share

ಚಿಕ್ಕಮಗಳೂರು: ಅರಣ್ಯ ಇಲಾಖೆಯ ಬುಲ್ಡೋಜರ್ ನೀತಿಯಿಂದ ರಾಜ್ಯದ ಸಮಸ್ಯೆಯಾಗಿರುವ ಒತ್ತುವರಿ, ಫಾರಂ ನಂಬರ್ 53-57, ಸಾಗುವಳಿದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅರಣ್ಯ ಇಲಾಖೆಯವರು ಹಕ್ಕು ದಾಖಲಿಸದೆ ಕಂದಾಯ ಇಲಾಖೆಯ ಹೆಸರಿನಲ್ಲಿ ಇರುವ ಜಾಗ ನಮ್ಮ ಇಲಾಖೆಯದ್ದು ಎಂಬ ರಣ ನೀತಿಯಿಂದಾಗಿ ದಿನೇ,ದಿನೇ ಸಮಸ್ಯೆ ಉಲ್ಬಣಗೊಂಡಿದೆ.

ಈಗಾಗಲೇ ಹಲವರಿಗೆ ಮಂಜೂರು ಆಗಿರುವ ಜಾಗ ಕಂದಾಯ ಇಲಾಖೆಯ ಹೆಸರಿನಲ್ಲಿ ಇದ್ದರೂ ಅರಣ್ಯ ಇಲಾಖೆಯ ಜಾಗ ಎಂದು ತೆರವುಗೊಳಿಸಲು ಮುಂದುವರಿದಿದೆ. ಆದರೆ ಅರಣ್ಯ ಇಲಾಖೆಗೆ ಯಾವುದೇ ಹಕ್ಕು ಇರುವುದಿಲ್ಲ ಆದರೂ ದಬ್ಬಾಳಿಕೆ ಮತ್ತು ದರ್ಪದಿಂದ ವರ್ತಿಸುತ್ತಿರುವುದರ ಬಗ್ಗೆ ವ್ಯಾಪಕ ದೂರುಗಳು ಇವೆ.

ಅರಣ್ಯ ಉದ್ದೇಶಕ್ಕೆ ಸರ್ಕಾರಿ ಭೂಮಿ ಕಾಯ್ದಿರಿಸಲು ಕಂದಾಯ ಇಲಾಖೆಯ ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ.1964 ಕಲಂ71ರಲ್ಲಿ ಮತ್ತೆ ಅಧಿಕಾರ ನೀಡಲಾಗಿದೆ. ಆದಾಗ್ಯೂ ಅರಣ್ಯ ಇಲಾಖೆಯ ಬುಲ್ಡೋಜರ್ ನೀತಿಯಿಂದ ಕಂದಾಯ ಇಲಾಖೆಯೆ ಗೌಣವಾಗಿಸಿದೆ.ಜೊತೆಗೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಒಂದೇ ಉದ್ದೇಶಕ್ಕಾಗಿ 1888 ಮತ್ತು1963 ಜಾರಿಗೊಳಿಸಲು ಅವಕಾಶ ನೀಡಿರುವುದು ಅವೈಜ್ಞಾನಿಕವಾಗಿದೆ ಇದರ ದುರುಪಯೋಗ ಕೂಡ ಅಗಿದೆ ಎನ್ನುತ್ತಾರೆ ಪರಿಣಿತರು.

ಕಂದಾಯ ಮತ್ತು ಅರಣ್ಯ ಇಲಾಖೆಯ ಮಧ್ಯೆ ಸಮನ್ವಯತೆ ಇಲ್ಲದಿರುವುದು, ಕಂದಾಯ ಇಲಾಖೆಯನ್ನು ಲೆಕ್ಕಿಸದೆ ಇರುವುದರಿಂದ ಕಲಾಂ71 ರಂತೆ ಅರಣ್ಯಕ್ಕೆ ಭೂಮಿ ಕಾಯ್ದಿರಿಸುವ ಅಧಿಕಾರ ಇರುವುದರಿಂದ ಕಂದಾಯ ಇಲಾಖೆಯವರು ಕ್ರಮವಹಿಸಿದರೆ ಜನರಿಗೆ ಆಗುತ್ತಿರುವ ಹಲವು ತೊಂದರೆ ಗಳು ನಿವಾರಣೆ ಆಗುತ್ತವೆ .

ಸರ್ಕಾರಿ ಸೌಮ್ಯದ ಭೂಮಿಯ ನಿರ್ವಹಣಾ ಜವಾಬ್ದಾರಿ ಕಂದಾಯ ಇಲಾಖೆಯದ್ದು ಆದರೆ ಅರಣ್ಯ ಉದ್ದೇಶಕ್ಕೆ ಭೂಮಿ ಕಾಯ್ದಿರಿಸುವ ಪ್ರಕ್ರಿಯೆ ಯಲ್ಲಿ ಕಂದಾಯ ಇಲಾಖೆ ನಿರ್ಲಕ್ಷಿಸಿ ಹಕ್ಕು ದಾಖಲೆಗಳನ್ನು ಪರಿಶೀಲನೆ ನಡೆಸದೆ ,ಸ್ಥಳದ ವಾಸ್ತವಿಕ ಭೂ ಮಂಜೂರಿಗಳು ಮತ್ತು ಮಂಜೂರಿ ಕೋರಿಕೆಗಳ ಪರಿಶೀಲನೆ ಕೈ ಗೊಳ್ಳದೆ ಮತ್ತು ಕಂದಾಯ ಇಲಾಖೆಯ ಸರ್ವೇಯರ್ ಗಳಿಂದ ಭೌತಿಕ ಸ್ಥಿತಿಯನ್ನು ತಪಾಸಣೆ ಮಾಡದೆ ಅರಣ್ಯ ಇಲಾಖೆಯ ಏಕ ಪಕ್ಷೀಯವಾಗಿ ಅರಣ್ಯಕ್ಕೆ ಭೂಮಿ ಕಾಯ್ದಿರಿಸಿ ಕೊಂಡಿರುವುದು ಸಮಸ್ಯೆ ಉಲ್ಬಣವಾಗಲು ಕಾರಣವಾಗಿದೆ.ಇದರಿಂದಾಗಿ ಜನಸಾಮಾನ್ಯರು ಮತ್ತು ಒತ್ತುವರಿದಾರರು ಹಾಗೂ ಸಾಗುವಳಿದಾರರು ಸಂಕಷ್ಟಕ್ಕೆ ಸಿಲುಕಿ ತತ್ತರಿಸುತ್ತಿದ್ದಾರೆ.

ಅರಣ್ಯ ಭೂಮಿಯನ್ನು ಇಂಡಿಕರಿಸಿ ಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸ ಬೇಕು ದಾಖಲೆಗಳನ್ನು ಪಕ್ಕ ಮಾಡಿಕೊಳ್ಳವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಅರಣ್ಯ ಕಾಯ್ದೆಗೆ ತಿದ್ದುಪಡಿ ತರಬೇಕು ಇದರಿಂದಾಗಿ ಭೂ ಕಂದಾಯ ಕಾಯ್ದೆಯಡಿ ಅರಣ್ಯ ಭೂಮಿ ಕಾಯ್ದಿರಿಸಿದರೆ ರೈತರಿಗೆ,ಕಾರ್ಮಿಕರಿಗೆ ಮತ್ತು ಕಾಫಿ ಬೆಳೆಗಾರರು ಹಾಗು ಅಂಗಾಮಿ ಸಾಗುವಳಿದಾರರ ಸಮಸ್ಯೆ ಕಾನೂನಿನಂತೆ ಬಗೆಹರಿಸಲು ಸಾಧ್ಯ.ಇಲ್ಲದಿದ್ದರೆ ಅರಣ್ಯ ಇಲಾಖೆ ಮತ್ತು ಜನರ ಮಧ್ಯೆ ಇರುವ ಸಮಸ್ಯೆಗಳು ತೀವ್ರವಾಗುತ್ತವೆ ಎಂದು ಕಂದಾಯ ಇಲಾಖೆ ಮತ್ತು ಹೋರಾಟಗಾರರ ಅಭಿಪ್ರಾಯ ವಾಗಿದೆ.

 

Forest Department’s Bulldozer Policy

Share

Leave a comment

Leave a Reply

Your email address will not be published. Required fields are marked *

Don't Miss

ಅಂದರ್-ಬಾಹರ್ ಅಡ್ಡೆ ಮೇಲೆ ಪೊಲೀಸರ ದಾಳಿ – ಐವರ ಬಂಧನ

ಚಿಕ್ಕಮಗಳೂರು: ಹೊರವಲಯದ ಹುಕ್ಕುಂದ ಗ್ರಾಮದ ಖಾಲಿ ಜಾಗದಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಲಕ್ಷಾಂತರ ರೂಪಾಯಿ ಹಣವನ್ನು ಪಣವಾಗಿಟ್ಟುಕೊಂಡು ಅಂದರ್-ಬಾಹರ್ ಇಸ್ಪೀಟು ಜೂಜಾಟವಾಡುತ್ತಿದ್ದ ಹೈಟೆಕ್ ಅಡ್ಡೆಯ ಮೇಲೆ ಗ್ರಾಮಾಂತರ ಠಾಣೆಯ ಪಿಎಸ್‌ಐ...

30 ಲಕ್ಷ ರೂಪಾಯಿ ಹಣ ನೀಡುವಂತೆ ಬ್ಲಾಕ್‌ ಮೆಲ್

ಚಿಕ್ಕಮಗಳೂರು: ಎಡಿಟ್ ಮಾಡಿದ ಗೃಹಿಣಿಯೊಬ್ಬರ ಫೋಟೋಗಳನ್ನು ಅವರ ಮೊಬೈಲ್‌ಗೇ ಕಳುಹಿಸಿ, ಬರೋಬ್ಬರಿ 30 ಲಕ್ಷ ರೂಪಾಯಿ ಹಣ ನೀಡುವಂತೆ ಕಿಡಿಗೇಡಿಗಳು ಬೇಡಿಕೆಯಿಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ. ಒಂದು ವೇಳೆ ಹಣ ನೀಡದಿದ್ದರೆ...

Related Articles

ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

ಚಿಕ್ಕಮಗಳೂರು:  ಜಿಲ್ಲಾ ನ್ಯಾಯಾಲಯಕ್ಕೆ ಬಂದಿರುವ ಬಾಂಬ್ ಬೆದರಿಕೆ ಇ-ಮೇಲ್ ಆತಂಕಕ್ಕೆ ಕಾರಣವಾಗಿದೆ. ಮಧ್ಯಾಹ್ನ 1.30 ರಿಂದ...

5 ದಶಕದ ಬಳಿಕ ನಿಡಘಟ್ಟ ಆಂಜನೇಯಸ್ವಾಮಿ ದೇವಾಲಯಕ್ಕೆ ದಲಿತರ ಪ್ರವೇಶ

ಚಿಕ್ಕಮಗಳೂರು: ಇತಿಹಾಸ ಪ್ರಸಿದ್ಧ ಗಟಾಗಟಿ ದೇವರು ಎಂದು ಕರೆಯಲ್ಪಡುವ ಕಡೂರು ತಾಲೂಕಿನ ನಿಡಘಟ್ಟದ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ...

ದೇಶ ವ್ಯಾಪ್ತಿ ಛಾತ್ರೋನ್ ಕಿ ಗೂಂಚ್ ವಿದ್ಯಾರ್ಥಿ ಆಂದೋಲನ

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಛಾತ್ರೋನ್ ಕಿ ಗೂಂಚ್ ಎಂಬ ದೇಶ ವ್ಯಾಪಿ...

ಕುಡಿಯುವ ನೀರು-ಜಾನುವಾರು ಮೇವಿಗೆ ಕೊರತೆಯಾಗದಂತೆ ಕ್ರಮಕ್ಕೆ ಸೂಚನೆ

ಚಿಕ್ಕಮಗಳೂರು: ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳುವಂತೆ ಇಂಧನ, ಪ್ರವಾಸೋದ್ಯಮ ಹಾಗೂ ಚಿಕ್ಕಮಗಳೂರು...