ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಿಳ್ಳೆನಹಳ್ಳಿ ಗ್ರಾಮದ ಸಾವಿರಾರು ಎಕರೆ ಜಮೀನು ತೋಟಗಳಿದ್ದು ಕಡೆ ಕಾಲುವೆ ರಸ್ತೆ ಬಳಸಿಕೊಂಡು ಹೋಗಬೇಕಾಗಿರುತ್ತದೆ.
ಈ ರಸ್ತೆಯು ಕಡೂರು ಚಿಕ್ಕಮಗಳೂರು ರಸ್ತೆ ಸೇರಿಕೊಂಡು ಶ್ರೀನಿವಾಸಪುರ ಮತ್ತು ಅಯ್ಯನಕೆರೆಗಳಿಗೆ ದಾರಿ ಆಗಿರುತ್ತದೆ ಮತ್ತು ಕುನ್ನಾಳು ಗ್ರಾಮಕ್ಕು ಸಂಪರ್ಕ ರಸ್ತೆ ಆಗಿರುತ್ತದೆ, ಈ ರಸ್ತೆಗೆ ಅಡ್ಡಲಾಗಿ ಹಾದು ಹೋಗುವ ವೇದಾ ನದಿಯ ಬಸವನಹಳ್ಳವನ್ನು ದಾಟಿ ಓಡಾಡುವುದು ತುಂಬಾ ಕಷ್ಟಕರವಾಗಿರುತ್ತದೆ.
ಏಕೆಂದರೆ ಸೆಪ್ಟಂಬರ್ ನಲ್ಲಿ ಬಿದ್ದ ಮಳೆಯಿಂದ ಹಳ್ಳದ ಮಣ್ಣು ಕೊಚ್ಚಿ ಮೊಣಕಾಲುದ್ದ ನೀರು ಹರಿದು ಹೋಗುತ್ತಿದ್ದು ಜನಜಾನುವಾರುಗಳು ದಾಟುವುದಕ್ಕೂ ಮತ್ತು ಬೈಕ್ ಮತ್ತು ಇತರ ವಾಹನಗಳು ದಾಟಿ ಹೋಗೋದು ದುಸ್ತರವಾಗಿರುತ್ತದೆ. ಹತ್ತಾರು ಬೈಕುಗಳು ವಾಹನಗಳು ಸೈಲೆನ್ಸರ್ ಮುಖಾಂತರ ನೀರು ತುಂಬಿ ಹಾಳಾಗಿ ಹೋಗಿರುತ್ತದೆ
ಸದ್ಯ ಅಡಿಕೆ ಕೊಯ್ಲು ನಡೆಯುತ್ತಿದ್ದು ರೈತಪಿಗಳು ಬಳಸಿಕೊಂಡು ಸಖರಾಯಪಟ್ಟಣ ರಸ್ತೆ ಮೂಲಕ ಜಮೀನುಗಳಿಗೆ ತೋಟಗಳಿಗೆ ಹೋಗುತ್ತಿದ್ದಾರೆ
ಆದ್ದರಿಂದ ಒಂದು ಸೇತುವೆ ಅವಶ್ಯಕತೆ ಇದ್ದು ತಕ್ಷಣ ಸಂಬಂಧಪಟ್ಟ ಇಲಾಖೆಯವರು ಕೈಗೊಳ್ಳಬೇಕೆಂದು ಆಗ್ರಹಿಸಿ ಪೇಪರ್ ದೋಣಿಯನ್ನು ತೇಲಿ ಬಿಡುವ ಮೂಲಕ ಸೇತುವೆ ಮಾಡಿ ಇಲ್ಲ ದೋಣಿ ಕೊಡಿ ಎಂಬ ಘೋಷಣೆಯೊಂದಿಗೆ ವಿನೂತನ ಪ್ರತಿಭಟನೆ ನಡೆಸಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಮತ್ತು ಅಧ್ಯಕ್ಷರುಗಳಿಗೆ ಮನವಿ ಸಲ್ಲಿಸಲಾಯಿತು
Build a bridge or leave the boat.
Leave a comment