Home namma chikmagalur chikamagalur ಆಲಿಕಲ್ಲು ಮಳೆಯಿಂದ ರೈತರು ಕಂಗಾಲು
chikamagalurHomeLatest Newsnamma chikmagalur

ಆಲಿಕಲ್ಲು ಮಳೆಯಿಂದ ರೈತರು ಕಂಗಾಲು

Share
Share

ಚಿಕ್ಕಮಗಳೂರು:  ಉಗಾದಿ ಹಬ್ಬದ ಹಿಂದೆ_ಮುಂದೆ ಮಳೆ ಬರುತ್ತದೆ. ಆದರೆ ಈ ವರ್ಷ ಆರಂಭವಾದ ಮಳೆಯಲ್ಲಿ ರಾಶಿ,ರಾಶಿ ಆಲಿಕಲ್ಲು ಮಳೆ ಬರುತ್ತಿರುವುದು ನೋಡಿ ರೈತರು ,ಬೆಳೆಗಾರರು ಕಂಗಲಾಗಿದ್ದಾರೆ ಮುಂದೆ ಏನು ಎಂಬ ಚಿಂತೆ ಉಂಟಾಗಿದೆ.

ಹವಮಾನ ವೈಪರೀತ್ಯಗಳಿಂದ ದಪ್ಪ, ದಪ್ಪ ಆಲಿಕಲ್ಲು ಬೀಳುತ್ತಿವೆ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಎರಡು ಬಾರಿ ಆಲಿಕಲ್ಲು ಮಳೆ ಬಂದಿದೆ ಆದರೆ ನಿನ್ನೆ ಸುರಿದ ಮಳೆಯಲ್ಲಿ ರಾಶಿ,ರಾಶಿ ಮತ್ತು ನಿರೀಕ್ಷೆ ಮೀರಿದ ಚಪ್ಪಡಿ ಸೈಜಿನ ಆಲಿಕಲ್ಲು ಬಿದ್ದಿವೆ.

ಖಾಂಡ್ಯ ಹೋಬಳಿ,ಕೊಪ್ಪ , ಬಾಳೆಹೊನ್ನುರು ,ಶೃಂಗೇರಿ ಕೆಲ ಭಾಗಗಳಲ್ಲಿ ಮೂಡಿಗೆರೆ ತಾಲೂಕಿನ ಕೆಲವು ಭಾಗಗಳಲ್ಲಿ ಮತ್ತು ತರೀಕೆರೆಯ ಸುತ್ತ ಮುತ್ತ ಆಲಿಕಲ್ಲು ಮಳೆ ಅರ್ಧ ಗಂಟೆ ಸುರಿದಿರುವುದು ಜಿಲ್ಲೆಯ ಜನರಿಗೆ ಆತಂಕ ಸೃಷ್ಟಿಯಾಗಿದೆ.

ಆಲಿಕಲ್ಲು ಮಳೆಯಿಂದ ಮಲೆನಾಡಿನ ಕಾಫಿ ಮತ್ತು ಅಡಕೆ ಬೆಳೆಗಾರರು ಬಯಲು ಸೀಮೆಯ ಅಡಿಕೆ ಬೆಳೆಗಾರರ ಜೊತೆಗೆ ತರಕಾರಿ ಬೆಳೆದ ರೈತರಿಗೆ ಆತಂಕ ಉಂಟಾಗಿದೆ ಎನ್ನಲಾಗುತ್ತಿದೆ.

ಮಲೆನಾಡಿನ ಕಾಫಿ,ಕಾಳು ಮೆಣಸು,ಅಡಿಕೆ ಮತ್ತು ಕೆಲವು ತರಕಾರಿ ಬೆಳೆಗಳಾಳು ಮತ್ತು ಬಯಲುಸೀಮೆಯ ಅಡಿಕೆ ಹಾಗು ಮಾವು, ಮೆಣಸು ಮತ್ತು ತರಕಾರಿ ಬೆಳೆಗಳಾದ ಟಮೋಟ, ಮುಳುಗಾಯಿ,ಕ್ಯಾರೆಟ್, ಬೀಟ್ ರೊಟ್ ,ಸೊಪ್ಪುಗಳು ಮತ್ತಿತರ ತರಕಾರಿಗಳು ನಾಶವಾಗುತ್ತವೆ.

ಬಯಲು ಪ್ರದೇಶಗಳಲ್ಲಿ ಹೆಚ್ಚಾಗಿ ಮಾವು ಬೆಳೆಯುತ್ತಾರೆ ಮುಖ್ಯವಾಗಿ ತರೀಕೆರೆ ತಾಲ್ಲೂಕು ಅಜ್ಜಂಪುರ ತಾಲ್ಲೂಕು ಕಡೂರು ತಾಲ್ಲೂಕು ಮತ್ತು ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ,ಕಸಬಾ ಹೋಬಳಿಗಳಲ್ಲಿ ಮಾವು ಹೆಚ್ಚಾಗಿ ಬೆಳೆಯುತ್ತಾರೆ ಆಲಿಕಲ್ಲು ಮಳೆಯಿಂದ ಫಸಲಿಗೆ ಭಾರಿ ಹೊಡೆತ ಬೀಳುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಇದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಆಲಿಕಲ್ಲು ಮಳೆ ಬಂದರೆ ನಮ್ಮ ಕತೆ ಮುಗಿಯುತ್ತದೆ ಸಂಕಷ್ಟ ಕಟ್ಟಿಟ್ಟಾ ಬುಟ್ಟಿ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ.

Farmers in distress due to hailstorm

Share

Leave a comment

Leave a Reply

Your email address will not be published. Required fields are marked *

Don't Miss

ಕಳ್ಳರ ತಂಡ ಬಂಧನ-32.74 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ವಶ

ತರೀಕೆರೆ: ಸರಣಿ ಮನೆ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ತರೀಕೆರೆ ಉಪ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದು, ಅಂತರಜಿಲ್ಲಾ ಕಳ್ಳರ ತಂಡವನ್ನು ಬಂಧಿಸಿ ಸುಮಾರು 32.74 ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು...

ಕಾಡು ಹಂದಿ ದಾಳಿಗೆ ಮಹಿಳೆ ಗಂಭೀರ ಗಾಯ

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ಕಾಡಾನೆ ಮತ್ತು ಕಾಡೆಮ್ಮೆಗಳ ಬೆನ್ನಲ್ಲೇ ಇದೀಗ ಕಾಡು ಹಂದಿಗಳ ಭೀತಿ ಹೆಚ್ಚಾಗಿದೆ. ಮೂಡಿಗೆರೆ ತಾಲೂಕಿನ ಆಲೂರು ಗ್ರಾಮದಲ್ಲಿ ತೋಟದಲ್ಲಿ...

Related Articles

“ಕುರ್ಚಿ” ಮಹಾತ್ಮೆ: ಶೃಂಗೇರಿಯಲ್ಲಿ ಕಾಂಗ್ರೆಸ್ VS ಬಿಜೆಪಿ ದಂಗಲ್

ಶೃಂಗೇರಿ: ಶೃಂಗೇರಿ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮತ್ತು ಬಿಜೆಪಿಯ ಮಾಜಿ...

ಬಾಲ್ಯ ವಿವಾಹ ನಡೆದರೆ ಪೋಕ್ಸೋ ಪ್ರಕರಣ ದಾಖಲಿಸಲು ಸೂಚನೆ

ಚಿಕ್ಕಮಗಳೂರು: ಬಾಲ್ಯ ವಿವಾಹಕ್ಕೆ ನಿಷೇಧವಿದ್ದರೂ, ರಹಸ್ಯವಾಗಿ ಅಪ್ರಾಪ್ತರ ಮದುವೆ ನಡೆದರೆ ಪೋಕ್ಸೋ ಕಾಯಿದೆಯಡಿಯಲ್ಲೂ ಪ್ರಕರಣ ದಾಖಲಿಸುವಂತೆ...

ಜೀವರಾಜ್ ವಿರುದ್ಧದ FIRಗೆ ಹೈಕೋರ್ಟ್ ತಡೆ

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆ...

ನಗರಸಭೆಯ 2.60 ಕೋಟಿ ರು. ವೆಚ್ಚದ ಫುಡ್ ಕೋರ್ಟ್ ಗೆ ಚಾಲನೆ

ಚಿಕ್ಕಮಗಳೂರು: ನಗರದ ಜನರ ಹಿತದೃಷ್ಟಿಯಿಂದ ಏನು ಮಾಡುತ್ತೇವೆಯೋ, ಅದು ಶಾಶ್ವತವಾಗಿ ಇರುವಂತೆ ಕೆಲಸ ಮಾಡಬೇಕು. ಪಕ್ಷಾತೀತವಾಗಿ...